Author: editor.udayarashmi@gmail.com

ಸಿ0ದಗಿ: ವಿಧಾನಸಭಾ ಮತಕ್ಷೇತ್ರದ ಹಾಲುಮತ ಸಮಾಜದ ಮುಖಂಡರು ಹಾಗೂ ಸಮಾಜ ಬಂಧುಗಳು ಮಾಜಿ ಮುಖ್ಯಮಂತ್ರಿ ಹಾಲುಮತ ಸಮಾಜದ ನಾಯಕ ಸಿದ್ರಾಮಯ್ಯನವರ ಕೈ ಬಲಪಡಿಸಲು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿಯವರಿಗೆ ಸೋಮವಾರ ಒಕ್ಕೋರಲಿನಿಂದ ಬೆಂಬಲ ವ್ಯಕ್ತಪಡಿಸಿದರು.ಈ ವೇಳೆ ಅನೇಕ ಮುಂಖಡರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೂಡಿ ಬಿಜೆಪಿ ಪಕ್ಷವನ್ನು ತಳÀಮಟ್ಟದಿಂದ ಕಟ್ಟಿ ಬೆಳೆಸಿದ ಕುರುಬ ಸಮಾಜದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪೂರ್ಣವಾಗಿ ಮೂಲೆ ಗುಂಪು ಮಾಡಿದ ಬಿಜೆಪಿ ಪಕ್ಷವನ್ನು ಯಾವುದೇ ಕಾರಣಕ್ಕೂ ನಮ್ಮ ಕುರುಬ ಸಮಾಜ ಬೆಂಬಲಿಸುವುದಿಲ್ಲ.ಒಬ್ಬ ಕುರುಬ ಸಮಾಜದ ವ್ಯಕ್ತಿಯನ್ನು ಈ ರಾಜ್ಯದ ಉನ್ನತ ಹುದ್ದೆಗೆ ಮುಖ್ಯಮಂತ್ರಿ ಗದ್ದುಗೆ ಏರಿಸಿ ಬೆಳೆಸಿದ ಕಾಂಗ್ರೇಸ್ ಪಕ್ಷವನ್ನು ಹಾಲುಮತ ಸಮಾಜ ಎಂದೂ ಮರೆಯುವುದಿಲ್ಲ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಬೆಂಬಲಿಸಿದರೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಸಿದ ಹಾಗೆ. ಆದ್ದರಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿಯವರಿಗೆ ನಮ್ಮ ಹಾಲು ಮತ…

Read More

ಸಿಂದಗಿ: ಪಟ್ಚಣದ ಸ್ವರ ತರಂಗ ಸಂಗೀತ ಶಾಲೆಯಲ್ಲಿ ಸೋಮವಾರ ಸಂಜೆ ಡಾ.ಗೌತಮ್ ಚೌಧರಿ ಅಭಿಮಾನಿ ಬಳಗದಿಂದ ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಅವರ ಜನುಮದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ಆಯೋಜನೆ ಮಾಡಿದ ಮುಖಂಡ ಅವಿನಾಶ ಯಂಕಂಚಿ ಮಾತನಾಡಿ, ಕೋವಿಡ್ ಸಂದರ್ಭ ಡಾ.ಗೌತಮ್ ಚೌಧರಿಯವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದಿನದ ೧೪ ಗಂಟೆ ಪಿಪಿ ಕಿಟ್ ಧರಿಸಿಕೊಂಡು ಕೋವಿಡ್ ರೋಗಿಗಳ ಶುಶ್ರೂಷೆ ಮಾಡಿ ಅನೇಕ ಜೀವಗಳನ್ನು ಉಳಿಸಲು ನೆರವಾದವರು. ಅವರು ನಮ್ಮಂಥ ಯುವಕರಿಗೆ ಮಾದರಿ. ಅವರ ಸೇವಾ ಮನೋಭಾವ, ಮಾನವೀಯ ಕಳಕಳಿ ನಮಗೆಲ್ಲ ಪ್ರೇರಣೆ ಎಂದರು.ಡಾ.ಗೌತಮ್ ಚೌಧರಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಬದುಕಿನಲ್ಲಿ ಪ್ರಾಮಾಣಿಕತೆ, ಶಿಸ್ತು, ಸಂಯಮ, ಬದ್ಧತೆ ಅಳವಡಿಸಿಕೊಂಡು ಕಾಯಕ ನಿಷ್ಠರಾಗಿ ಕುಟುಂಬಕ್ಕೆ ಬೆಳಕಾಗಬೇಕೆಂದು ಕಿವಿಮಾತು ಹೇಳಿದರು. ಬಿಜೆಪಿ ಮುಖಂಡ ಮುತ್ತು ಶಾಬಾದಿ, ನಿವೃತ್ತ ಪ್ರಾಚಾರ್ಯ ಬಿ.ಎಂ.ಬಿರಾದಾರ, ನೌಕರರ ಸಂಘದ ಮುಖಂಡ ರಾಜು ನರಗೋದಿ, ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಬ ನಾಗಾವಿ, ಭೀಮು ಅತಾಪಿ, ಯರಗಲ್ ಕೆ.ಡಿ ಗ್ರಾಮದ ಯಂಕಂಚಿ ಸಹೋದರರು ಸೇರಿದಂತೆ…

Read More

ವಿಜಯಪುರ: ಚಿತ್ತಾಪುರ(ಮೀಸಲು) ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಜನ ಬೆಂಬಲದಿAದ ಹತಾಶರಾಗಿರುವ ಬಿಜೆಪ ಅಭ್ಯರ್ಥಿ ಮಣಿಕಂಠ ರಾಠೋಡ ಇವರು ಖರ್ಗೆ ಕುಟುಂಬವನ್ನು ಮುಗಿಸುತ್ತೆನೆ ಎಂದು ನೀಡಿರುವ ಹೇಳಿಕೆ ಖಂಡನಿಯ ಹಾಗೂ ಅಮಾನವಿಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಒಕ್ಕೊರಲಿಂದ ಖಂಡಿಸಿದರು.ಸೋಮವಾರ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಮೌಲ್ಯಾಧಾರಿತ ರಾಜಕಾರಣಿಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಕಳೆದ ಸುಮಾರು ೫೦ ವರ್ಷಗಳ ಅಧಿಕ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಶಾಸಕರಾಗಿ, ಸಚಿವರಾಗಿ ಕೇಂದ್ರ ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಯಾರಿಗೂ ಅನುಚಿತವಾಗಿ ನಡೆದುಕೊಂಡಿಲ್ಲ ಎಂದರು.ಬಿಜೆಪಿ ಪಕ್ಷದವರು ದಲಿತರು, ಅಲ್ಪ ಸಂಖ್ಯಾತರು, ಬಡವರನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧ ಕೃತ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಲಿತ ಮುಖಂಡರಾದ ಡಾ. ಜೆ.ಪರಮೇಶ್ವರ ಅವರಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು, ಈಗ ಖರ್ಗೆ ಕುಟುಂಬದ ಹತ್ಯೆಗೆ ಸಂಚು, ಈ ರೀತಿಯಾಗಿ ದಲಿತರನ್ನೇ ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ ಎಂದರು.ಖರ್ಗೆಜಿಯವರ…

Read More

ಬಸವನಬಾಗೇವಾಡಿ: ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೋಮನಗೌಡ ಪಾಟೀಲ (ಮನಗೂಳಿ) ಅವರು ಸೋಮವಾರ ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ನಡೆಸಿ ಮತಯಾಚಿಸಿದರು. ಪಟ್ಟಣದ ಎಪಿಎಂಸಿ ಮುಂಭಾಗದ ಪಕ್ಷದ ಪ್ರಚಾರ ಕಚೇರಿ ಮುಂಭಾಗದಿಂದ ಆರಂಭವಾದ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿ ಮತಯಾಚಿಸಿದರು. ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಎಸ್.ಪಾಟೀಲ, ಮುಖಂಡರಾದ ಅಪ್ಸರಾಬೇಗಂ ಚಪ್ಪರಬಂದ್, ಬಿ.ಕೆ.ಕಲ್ಲೂರ, ಜಗದೀಶ ಕೊಟ್ರಶೆಟ್ಟಿ, ಎಸ್.ಎ.ಯರನಾಳ, ಉಮೇಶ ಹಾರಿವಾಳ, ಬಸವರಾಜ ಅವಟಿ, ಮಲ್ಲಿಕಾರ್ಜುನ ಅವಟಿ, ನಾಗೇಶ ಪಡಶೆಟ್ಟಿ, ಗುರುನಗೌಡ ಪಾಟೀಲ ಇದ್ದರು.

Read More

ಬಸವನಬಾಗೇವಾಡಿ: ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಅವರು ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮತಕ್ಷೇತ್ರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿದರು. ಕೊಲ್ಹಾರ ಪಟ್ಟಣದಿಂದ ಆರಂಭವಾದ ರ್ಯಾಲಿಯು ಬಳೂತಿ, ಹಣಮಾಪುರ, ಅರಸಣಗಿ, ಗಣಿ, ಆಲಮಟ್ಟಿ, ನಿಡಗುಂದಿ, ಗೊಳಸಂಗಿ, ಮುತ್ತಗಿ ಮಾರ್ಗವಾಗಿ ಬಸವನಬಾಗೇವಾಡಿ ತಲುಪಿತು ನಂತರ ಯರನಾಳ ಮಾರ್ಗವಾಗಿ ಮನಗೂಳಿ ಪಟ್ಟಣದ ವರೆಗೆ ರ್ಯಾಲಿ ನಡೆಯಿತು. ರ್ಯಾಲಿಯಲ್ಲಿ ಶಾಸಕ ಶಿವಾನಂದ ಪಾಟೀಲ, ಅವರ ಪುತ್ರರಾದ ಸತ್ಯಜೀತ, ಶ್ರೇಯಸ್, ಪುತ್ರಿಯರಾದ ಸಂಯುಕ್ತ, ಸಂಪ್ರದಾ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಮುಖಂಡ ಭರತ ಅಗರವಾಲ ಅಪಾರ ಬೆಂಬಲಿಗರೊಂದಿಗೆ ತೆರದ ವಾಹನದಲ್ಲಿ ಜನರತ್ತ ಕೈ ಮುಗಿದು ಮತ ಯಾಚಿಸಿದರು. ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಸಿಳ್ಳೆ, ಕೇಕೆ ಹಾಕುವ ಮೂಲಕ ಉತ್ಸಾಹದಿಂದ ರ್ಯಾಲಿಯಲ್ಲಿ ಪಾಲ್ಗೊಂಡರು.

Read More

ಬಸವನಬಾಗೇವಾಡಿ: ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪರ ಚುನಾವಣೆ ಪ್ರಚಾರಾರ್ಥವಾಗಿ ಭಾನುವಾರ ಸಂಜೆ ಗ್ರಾಮದಲ್ಲಿ ಬೈಕ್ ರ್ಯಾಲಿ, ಡೊಳ್ಳು ಕುಣಿತದೊಂದಿಗೆ ತೆರದ ವಾಹನದಲ್ಲಿ ಮೆರವಣಿಗೆ, ಬೃಹತ್ ರ್ಯಾಲಿ ಸೇರಿದಂತೆ ಪ್ರಚಾರ ಸಭೆ ಜರುಗಿತು. ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರು ಶಾಸಕ, ಸಚಿವರಾಗಿದ್ದ ಸಂದರ್ಭದಲ್ಲಿ ಮತಕ್ಷೇತ್ರದಲ್ಲಿ ಕೋರ್ತಿ-ಕೊಲ್ಹಾರ ಬ್ರೀಜ್, ನೀರಾವರಿ, ಕುಡಿಯುವ ನೀರು, ಬಹುಹಳ್ಳಿ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅವರಿಗೆ ಜನರ ಆಶೀರ್ವಾದವಿದೆ, ಕಾಂಗ್ರೆಸ್ ಪ್ರಣಾಳಿಕೆ ನೀವು ನೋಡಿದ್ದೀರಿ, ಆ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಎಂದು ಹೇಳಿದ್ದಾರೆ. ಮತ್ತೆ ತಗೆಯಲು ಹೊರಟಿದ್ದಾರೆ ಎಂದು ಹೇಳಿದರು. ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡ ಪರಮಾನಂದ ತನಿಖೆದಾರ ಮಾತನಾಡಿದರು. ಭೀರಪ್ಪ ಸಾಸನೂರ, ನಿಂಗನಗೌಡ ಪಾಟೀಲ, ಪರಮನಗೌಡ ಬಿರಾದಾರ, ಅಪ್ಪುಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪ್ರವೀಣ ಕಾಮಗೊಂಡ, ಸುರೇಶ ಇಟ್ಟಂಗಿಹಾಳ, , ಟಿ.ಸಿ.ಯಳಮೇಲಿ, ಚನ್ನುಗೌಡ…

Read More

ತಿಕೋಟಾ: ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಪರ ಮತಯಾಚನೆ ಕೈಗೊಂಡರು. ತಾಲ್ಲೂಕಿನ ಬಿಜ್ಜರಗಿ, ಘೋಣಸಗಿ, ಬಾಬಾನಗರ, ಕಳ್ಳಕವಟಗಿ, ಹೊನವಾಡ ಗ್ರಾಮಗಳಲ್ಲಿ ನೂರಾರು ಬೈಕ್ ಗಳ ಮೂಲಕ ಯುವಕರು ಹಾಗೂ ಕಾರ್ಯಕರ್ತರು ಸೋಮವಾರ ಮನೆ ಮನೆಗೆ ಹಾಗೂ ತೋಟದ ವಸ್ತಿಗಳಿಗೆ ತೆರಳಿ ಮತ ಯಾಚಿಸಿದರು. ಸತತ ಹದಿನೇಳು ವರ್ಷಗಳಿಂದ ಮೂರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅಧಿಕಾರದ ಅವಕಾಶ ಇಲ್ಲದಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಜನ ಸೇವೆ ಮಾಡಿದ್ದಾರೆ. ಒಂದು ಬಾರಿ ಅಧಿಕಾರ ನೀಡಿದರೆ ಮತಕ್ಷೇತ್ರದ ಅಭಿವೃದ್ಧಿ ಮಾಡುವ ಕನಸನ್ನು ಹೊಂದಿದ್ದಾರೆ ಎಂದು ಕಾರ್ಯಕರ್ತ ಕೇದಾರಿ ಗಿಡ್ನವರ ಮತದಾರರಿಗೆ ಮತ ಕೇಳುತ್ತಾ ಮಾತನಾಡಿದರು. ಪಕ್ಷದ ಹಿರಿಯ ಪೀರಗೊಂಡ ಗದ್ಯಾಳ ಮಾತನಾಡಿ ಮತಕ್ಷೇತ್ರದಲ್ಲಿ ಬಿಜೆಪಿಯ ಅಲೆ ಜೋರಾಗಿದೆ. ಬಿಜೆಪಿ ಮಾಡಿದಂತಹ ಅಭಿವೃದ್ಧಿ ಕಾರ್ಯ ಹಾಗೂ ನಮ್ಮ ಅಭ್ಯರ್ಥಿಯ ಮೂರು ಬಾರಿ ಸತತ ಸೋಲಿನ ಅನುಕಂಪದಿಂದ ಮತದಾರರು ಬಿಜೆಪಿ ಗೆಲ್ಲಿಸುವ ಸಂಕಲ್ಪ ತೊರಿದ್ದಾರೆ.…

Read More

ವಿಜಯಪುರ: ಈ ಚುನಾವಣೆ ಹಿಂದುತ್ವ, ಅಭಿವೃದ್ಧಿ, ಸ್ವಾಭಿಮಾನದ ಮೇಲೆ ನಡೆಯುತ್ತಿದೆ. ಕನಿಷ್ಠ ಶೇ 90 ರಷ್ಟು ಮತದಾನ ಮಾಡುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.ನಗರದಲ್ಲಿ ಸೋಮವಾರ ಚುನಾವಣಾ ಮತಯಾಚನೆ ಅಂಗವಾಗಿ ನಡೆದ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುತ್ವ ಸೋಲಿಸಲು ಅವರೆಲ್ಲರೂ ಒಂದಾಗಿದ್ದಾರೆ. ಆದರೆ, ಯಾವ ಕಾರಣಕ್ಕೂ ಅವರ ಉದ್ದೇಶ ಈಡೇರಲು ಸಾಧ್ಯವಿಲ್ಲ.‌ ನಮ್ಮವರು ಕೂಡ ಒಂದಾಗಿದ್ದಾರೆ ಎಂದು ತಿಳಿಸಿದರು.ಐದು ವರ್ಷ ಅಧಿಕಾರ ಕೊಟ್ಟಿದ್ದೀರಿ, ಮಹಾಮಾರಿ ಕೊರೊನಾದಿಂದ ಎರಡು ವರ್ಷ ಅಭಿವೃದ್ದಿ ಕುಂಠಿತವಾದರೂ, ಉಳಿದ ಕೇವಲ ಮೂರು ವರ್ಷದಲ್ಲಿ ನಿರೀಕ್ಷೆ ಮೀರಿ ನಗರ ಅಭಿವೃದ್ದಿ ಮಾಡುವ ಮೂಲಕ ಇತಿಹಾಸ ಬದಲಿಸಿರುವೆ. ಇದರಿಂದ ಕಾಂಗ್ರೆಸ್ ಗೆ ಮತ ಹಾಕುವಂತೆ ಹೇಳುವವರಿಗೆ ಅವರ ಪತ್ನಿಯರೇ ಈವರೆಗೆ ರಾಮನ ಮೆರವಣಿಗೆ ಮಾಡಿ, ಈಗ ಆ ಪಕ್ಷಕ್ಕೆ ಮತ ಹಾಕುತ್ತೀರಾ ಅಂತ ಛಿಮಾರಿ ಹಾಕುತ್ತಿದ್ದಾರೆ. ಅಷ್ಟೊಂದು ಅಭಿಮಾನ ಮೂಡಿದೆ ಎಂದು ಹೇಳಿದರು.ಹಣ ಪಡೆದುಕೊಳ್ಳುವವರು ಹುಷಾರ್…

Read More

ದೇವರಹಿಪ್ಪರಗಿ: ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಗೆಲುವಿಗಾಗಿ ಅಭಿಮಾನಿಗಳು ಇಂಗಳಗಿ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದಿಂದ ರಾವುತರಾಯ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸಿದರು.ಪಟ್ಟಣದಿಂದ ೪ ಕಿ.ಮೀ ದೂರದ ಇಂಗಳಗಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಹಾಗೂ ರಾಜುಗೌಡ ಪಾಟೀಲ ಅಭಿಮಾನಿಗಳಾದ ಮುತ್ತು ನಾದ, ರವಿ ಬಿರಾದಾರ, ಸಿದ್ದನಗೌಡ ಪೋಲೇಶಿ ಹಾಗೂ ಕಲ್ಮೇಶ ಇಂಡಿ ಅನ್ನುವವರು ತಮ್ಮ ಗ್ರಾಮದ ದೇವಸ್ಥಾನದಿಂದ ಪಟ್ಟಣದ ರಾವುತರಾಯ ದೇವಸ್ಥಾನದವರೆಗೆ ದಿಡನಮಸ್ಕಾರದ ಮೂಲಕ ತಮ್ಮ ಅಭಿಮಾನ ಮೆರೆದರು.ಈ ಸಂದರ್ಭದಲ್ಲಿ ಕಾಸುಗೌಡ ಜಲಕತ್ತಿ, ಗುರುರಾಜ್ ಆಕಳವಾಡಿ, ಸಂಗನಗೌಡ ಬಿರಾದಾರ (ಮುಳಸಾವಳಗಿ), ರಿಯಾಜ್ ನಾಯ್ಕೋಡಿ, ಸುಭಾಸ ಜಾಧವ, ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ, ಬಂಡೆಪ್ಪ ದಿಂಡವಾರ, ನಿಂಗು ಯಂಭತ್ನಾಳ, ಮಿಯಾಜ್ ಯಲಗಾರ, ನಾಗೇಶ ಶೆಟಗಾರ ಇದ್ದರು.

Read More