Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಶರಣರ ಸಂದೇಶಗಳಲ್ಲಿ ಜೀವನ ಮೌಲ್ಯಗಳಿರುವದರಿಂದ ೧೨ ನೇ ಶತಮಾನದ ಬಸವಾದಿ ಶರಣರ ಸಂದೇಶವನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯವನ್ನು ಇಲ್ಲಿನ ನಂದಿ ಸಾಹಿತ್ಯ ವೇದಿಕೆಯು ಮಾಡುತ್ತಿರುವುದು ಶ್ಲಾಘನೀಯ ಎಂದು ತಂಗಡಗಿಯ ಹಡಪದ ಅಪ್ಪಣ್ಣದೇವರ ಸಂಸ್ಥಾನಪೀಠದ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಾವಿದ್ಯಾಲಯದ ಸಹಯೋಗದಲ್ಲಿ ಸ್ಥಳೀಯ ನಂದಿ ಸಾಹಿತ್ಯ ವೇದಿಕೆಯು ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಎಲ್ಲೆಡೆ ವ್ಯಾಪಕವಾಗಿ ಬೆಳೆದಿದೆ. ಈ ಧರ್ಮದ ಕುರಿತು ಕೆಲವರು ತದ್ವಿರುದ್ಧ ಮಾತನಾಡಿ ಸಮಾಜ ವ್ಯವಸ್ಥೆ ಹಾಳು ಮಾಡುತ್ತಿರುವದು ವಿಷಾದನೀಯ ಸಂಗತಿ. ಬಸವಾದಿ ಶರಣರ ಸಂದೇಶಗಳು ಸಾರ್ವಕಾಲಿಕವಾಗಿ ಸತ್ಯವಾಗಿವೆ. ಇವುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದರು.ಹಡಪದ ಅಪ್ಪಣ್ಣನವರ ಜನ್ಮಸ್ಥಳ ಮಸಬಿನಾಳದಲ್ಲಿ ಸ್ಮಾರಕವಾಗಲು ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಅವರು…
ಇಂಡಿ: ಕಣ್ಣು ಕಾಣಿಸುವಷ್ಟು ದೂರಕ್ಕೆ ಕಂಗೊಳಿಸುವ ಭಗವಾಧ್ವಜಗಳು, ಕೇಸರಿಶಾಲು, ಮುಂಡಾಸು ಧರಿಸಿದ ಕಾರ್ಯಕರ್ತರು, ಸಾಲು ಸಾಲು ಪೇಟಾಧಾರಿ ಮಹಿಳೆಯರು, ಬ್ಯಾಂಡ್ ನೃತ್ಯ ತಂಡಗಳು ಇಂಡಿಯನ್ನು ಗುರುವಾರ ಕೇಸರಿಮಯಗೊಳಿಸಿದ್ದವು.ವಿಶ್ವ ಹಿಂದು ಪರಿಷತ್ತು ೬೦ ನೇ ವರ್ಷಕ್ಕೆ ಪ್ರಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಬಜರಂಗದಳ ದೇಶದಾದ್ಯಂತ ಸೆ.೩೦ ರಿಂದ ಅಕ್ಟೋಬರ್ ೧೬ ರವರೆಗೆ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಿದ್ದು, ಬುಧವಾರ ರಥಯಾತ್ರೆ ಸಂಜೆ ಇಂಡಿ ಪಟ್ಟಣಕ್ಕೆ ಆಗಮಿಸಿತು.ರಥಯಾತ್ರೆಗೆ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜೈಶ್ರೀರಾಮ್, ಜೈ ಜೈ ಶ್ರೀರಾಮ್ ಜಯಘೋಷ ಹಾಕುತ್ತ ಕಾಸುಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಿ ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಿಸಿದರು.ಮಹಾವೀರ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಪ್ರಾಂತ ಪ್ರಮುಖ ಪುಂಡಲೀಕ ದಳವಾಯಿ, ಶ್ರೀಮಂತ ದುದ್ದಗಿ, ನೇತಾಜಿ ಪವಾರ, ಸುನೀಲ ಜಮಖಂಡಿ ಮಾತನಾಡಿ, ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕದ ಪ್ರಾಂತದ ಸಾವಿರಾರು ವರ್ಷಗಳಿಂದಲೂ ದೇಶ ಪರಕೀಯರ ದಾಳಿಗಳನ್ನು ಶೌರ್ಯ, ಪರಾಕ್ರಮಗಳ ಮೂಲಕ ದಿಟ್ಟತನದಿಂದ ಸಮರ್ಪಕವಾಗಿ…
ದೇವರಹಿಪ್ಪರಗಿ: ವಿಜಯಪುರದಲ್ಲಿ ಅಗಸ್ತ್ಯ ಫೌಂಡೇಷನ್ ಹಾಗೂ ಶಾಲಾಶಿಕ್ಷಣ, ಸಾಕ್ಷರತಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಾಹಿತಿ ತಂತ್ರಜ್ಞಾನ ಕುರಿತಾದ ರಸಪ್ರಶ್ನೆ (ಐಟಿ ಕ್ವಿಜ್) ಕಾರ್ಯಕ್ರಮದಲ್ಲಿ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಹೈಸ್ಕೂಲಿನ ವಿದ್ಯಾರ್ಥಿ ಸಾತ್ವಿಕ್ ಜನಗೊಂಡ ಸ್ಪರ್ಧಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಉಪಪ್ರಾಂಶುಪಾಲ ಎಮ್.ಕೆ.ಕುಡಚಿ, ಗಣಿತ ಶಿಕ್ಷಕ ಎಮ್.ಎಚ್.ಬಗಲಿ ಸೇರಿದಂತೆ ಸಿಬ್ಬಂದಿವರ್ಗ, ಎಸ್ಡಿಎಮ್ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ರೈತರಿಗೆ ಬರಗಾಲ ಪರಿಹಾರ, ಸಾಲಮನ್ನಾ, ಬೆಳೆವಿಮೆ, ಜಾನುವಾರಗಳಿಗೆ ಮೇವು ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಉಪತಹಶೀಲ್ದಾರ ಇಂದಿರಾ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಗುರುವಾರ ಆಗಮಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ರೈತಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಹಾಗೂ ರೈತರ ಸಾಲಮನ್ನಾ ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ತಾಲ್ಲೂಕಿನ ಎಲ್ಲ ರೈತರು ಪಾದಯಾತ್ರೆಯ ಮೂಲಕ ಆಗಮಿಸಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ಮನವಿ ಸಲ್ಲಿಸಿದರು.ರೈತ ಸಂಘದ ತಾಲೂಕಾಧ್ಯಕ್ಷ ಈರಪ್ಪ ಕುಳೇಕುಮಟಗಿ, ಗೌರವಾಧ್ಯಕ್ಷ ಶಿವಾನಂದ ಹಿರೇಮಠ, ಸಂಪತ್ ಕುಮಾರ ಜಮಾದಾರ, ಸಂಗಮೇಶ ಹುಣಸಗಿ, ಗುರಣ್ಣ ಹಂಗರಗಿ, ಮಲ್ಲನಗೌಡ ಬಿರಾದಾರ, ಲಕ್ಕಪ್ಪ ಹೂಗಾರ, ಮಲ್ಲಪ್ಪ ಸುಂಬಡ, ಹಣಮಂತ್ರಾಯಗೌಡ ಪಾಟೀಲ, ಸುಭಾಸ್ ಸಜ್ಜನ, ದ್ಯಾವಪ್ಪಗೌಡ ಪಾಟೀಲ, ಅಪ್ಪಾಸಾಹೇಬ ಹರವಾಳ, ಮಲ್ಲಿಕಾರ್ಜುನ ಪಾಟೀಲ, ಸಿದ್ಧನಗೌಡ…
ಬಸವನಬಾಗೇವಾಡಿ: ಪಟ್ಟಣದ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಅಖಂಡ ಕರ್ನಾಟಕ ರೈತ ಸಂಘಟನೆಯು ಗುರುವಾರ ರೈತರ ಬಾಂಧವರ ಕೃಷಿ ಪಂಪ್ಸೆಟ್ಗಳಿಗೆ ಪ್ರತಿನಿತ್ಯ ಕನಿಷ್ಠ ಎಂಟು ಗಂಟೆ ಕಾಲ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಸುವಂತೆ ಆಗ್ರಸಿಹಿಸಿ ಮನವಿ ಸಲ್ಲಿಸಿತು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಆಗಬೇಕಾಗಿದ್ದ ಮಳೆ ಕೈಕೊಟ್ಟಿದೆ.ಇದೀಗ ಭೀಕರ ಬರಗಾಲ ಆವರಿಸಿದೆ. ರೈತರು ಇದರಿಂದಾಗಿ ಅಘಾತಕ್ಕೆ ಒಳಗಾಗಿದ್ದಾರೆ. ಬಿತ್ತನೆ ಮಾಡಿದ ಮುಂಗಾರು ಬೆಳೆ ನೀರಿಲ್ಲದೇ ನೆಲ ಕಚ್ಚಿವೆ. ಕೆಲವು ರೈತರ ಬಾಂಧವರ ಜಮೀನುಗಳಲ್ಲಿರುವ ಕೊಳವೆ ಬಾವಿ, ತೆರೆದ ಬಾವಿಯಿಂದಾಗಲಿ ಬೆಳೆಗಳಿಗೆ ನೀರು ಉಣಿಸಬೇಕಾದರೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಬೆಳೆಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕೃಷಿ ಪಂಪ್ಸೆಟ್ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಅಗತ್ಯವಿzದೆ. ಹಗಲು ಹೊತ್ತಿನಲ್ಲಿ ನಾಲ್ಕು ಗಂಟೆ. ರಾತ್ರಿ ಹೊತ್ತಿನಲ್ಲಿ ನಾಲ್ಕು ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗುತ್ತದೆ. ಹೆಸ್ಕಾಂ ಅಽಕಾರಿಗಳು ಎಂಟು ಗಂಟೆ…
ವಿಜಯಪುರ: ಹಿರಿಯ ನಾಗರಿಕರು ಉತ್ತಮ ಅಹಾರ ಪದ್ದತಿ ಅಳವಡಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಸದೃಡವಾಗಿ ಇಟ್ಟುಕೊಳ್ಳಬಹುದು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್ ಆರ್ಯುವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದ್ದಾರೆ.ಕಾಲೇಜಿನಲ್ಲಿ ಪಂಚಕರ್ಮ ವಿಭಾಗ, ಎನ್. ಎಸ್. ಎಸ್ ಘಟಕ ಹಾಗೂ ಲಯನ್ಸ್ ಕ್ಲಬ್ ಹಿರಿಯ ನಾಗರಿಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಗುರುವಾರ ವಿಶ್ವ ಸಂಧಿವಾತ ದಿನ ಮತ್ತು ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಮಂಡಿ ನೋವು ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯ ನಾಗರಿಕರು ತಾವು ಸೇವಿಸುವ ಅಹಾರದ ಬಗ್ಗೆ ಗಮನ ಹರಿಸಬೇಕು. ಹಿತವಾಗಿ ಮತ್ತು ಮಿತವಾಗಿ ಆಹಾರ ಸೇವಿಸಬೇಕು. ನಾನಾ ಕಾಯಿಲೆಗಳಿಗೆ ಆಯುರ್ವೇದ ಪದ್ದತಿಯಲ್ಲಿ ಸಾಕಷ್ಟು ಔಷಧಿ ಲಭ್ಯವಿವೆ. ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಬಳಸುವುದರಿಂದ ಆರೋಗ್ಯವನ್ನು ಸದೃಡವಾಗಿ ಇಟ್ಟುಕೊಳ್ಳಬಹುದು ಎಂದು ಅವರು ಹೇಳಿದರು.ಲಯನ್ಸ್ ಕ್ಲಬ್ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಡಾ. ಎನ್. ಬಿ.…
ಇಬ್ರಾಹಿಂಪುರ : ಗಮನ ಸೆಳೆದ ಕುಂಭಮೇಳ ವಿಜಯಪುರ: ಇಲ್ಲಿನ ಇಬ್ರಾಹಿಂಪುರದ ಐತಿಹಾಸಿಕ ಹಿರೇಬಾವಿ ಹತ್ತಿರವಿರುವ ಹಿರೇಮಠದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಲಿಂ. ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ವೈಭವದಿಂದ ನಡೆಯಿತು.ಈ ಬಾರಿ ಪುರಾಣ ಕಾರ್ಯಕ್ರಮ, ಕುಂಭ ಮೇಳವನ್ನು ಹಮ್ಮಿಕೊಳ್ಳುವ ಮೂಲಕ ಲಿಂ. ಶ್ರೀಗಳ 112 ನೇ ಪುಣ್ಯಾರಾಧನೆಯನ್ನು ವೈಶಿಷ್ಠ್ಯಪೂರ್ಣವಾಗಿ ಆಚರಿಸಲಾಯಿತು.ಬೆಳಗಾವಿ ಜಿಲ್ಲೆ ಮಾಂಜರಿ(ಕೊಕಟನೂರ) ಕಾಡಸಿದ್ಧೇಶ್ವರ ಮಠದ ಶ್ರೀ 108 ಗುರುಶಾಂತಲಿಂಗ ಶಿವಾಚಾರ್ಯರು ಐದು ದಿನಗಳವರೆಗೆ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟು ಅಷ್ಟಾವರಣಗಳ ಬಗ್ಗೆ ಭಕ್ತರಿಗೆ ಮನಮುಟ್ಟುವಂತೆ ಹೇಳಿದರು.ಪುರಾಣ ಮಂಗಲೋತ್ಸವದಂದು ಆಶೀರ್ವಚನ ನೀಡಿದ ಶ್ರೀಗಳು, ದುಶ್ಚಟಗಳನ್ನು ತೊರೆದು ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಮುಂದೆ ಇನ್ನೆಂದೂ ದುಶ್ಚಟ ಮಾಡುವುದಿಲ್ಲ ಎಂದು ಮನಸಾಕ್ಷಿಯಾಗಿ ಹೇಳಿ ಅದರಂತೆ ನಡೆದುಕೊಳ್ಳಬೇಕು ಎಂದು ಶ್ರೀಗಳು ಭಕ್ತರಲ್ಲಿ ಮನವಿ ಮಾಡಿಕೊಂಡರು.ತೆಲಸಂಗ ಹಿರೇಮಠದ ಶ್ರೀ ವೀರೇಶ ದೇವರು, ಆಶೀರ್ವಚನ ನೀಡಿ, ತಂದೆ-ತಾಯಿಗಳು ಬಾಲ್ಯದಿಂದಲೇ ಮನೆಯಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ…
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್ ಪಾಟೀಲ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಹಿನ್ನಲೆ ಪ್ರೊ. ಬಿ.ಎಸ್.ಬೆಳಗಲಿ ಅವರನ್ನು ಬುಧವಾರ ಉಪನ್ಯಾಸಕ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡ್ಡಮನಿ, ಉಪನ್ಯಾಸಕರಾದ ಎಸ್.ವೈ.ಅಂಗಡಿ, ಎಮ್.ಎಲ್.ಜಮಾದಾರ ಇದ್ದರು.
ಸತ್ತ ನಂತರದ ಪರಿಹಾರಕ್ಕಿಂತ ಜೀವ ಉಳಿಸುವ ಕ್ರಮವೇ ಸರ್ವ ಶ್ರೇಷ್ಠ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ- ವಿವೇಕಾನಂದ ಎಚ್.ಕೆ, ಬೆಂಗಳೂರು ಪಟಾಕಿ ಸ್ಪೋಟದ ಘಟನೆಗಳು ಆಕಸ್ಮಿಕವಲ್ಲ ಅವು ಖಂಡಿತ ನಿರೀಕ್ಷಿತ. ಮದ್ದು ಗುಂಡುಗಳು ಸ್ಪೋಟಿಸುವುದು ಸಹಜ ಅಲ್ಲವೇ. ಅದರಿಂದ ಆಗುವ ಹಾನಿಯೂ ಸ್ವಾಭಾವಿಕವಲ್ಲವೇ. ಹಾಗಾದರೆ ಅರಿವಿನ ಅಂಚಿನಲ್ಲಿನ ದುರಂತ ತಡೆಯುವುದು ಸರ್ಕಾರದ ಸಹಜ ಜವಾಬ್ದಾರಿಯಲ್ಲವೇ..ಬಡ ಕೂಲಿ ಕಾರ್ಮಿಕರ ಜೀವ ಉಳಿಸಲು, ಅಂಗಡಿ ಮಾಲಿಕರ ಕುಟುಂಬ ಉಳಿಸಲು, ಪರಿಸರದ ಶುದ್ಧತೆ ಮತ್ತು ಸ್ವಚ್ಚತೆ ಉಳಿಸಲು ಪಟಾಕಿ ನಿಷೇಧಿಸಲೇಬೇಕು..ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ, ಹೊಸ ವರ್ಷ ಸೇರಿ ಎಲ್ಲಾ ಹಬ್ಬಗಳಿಗೂ, ರಾಜಕೀಯ ಧಾರ್ಮಿಕ ಕಾರ್ಯಕ್ರಮಗಳಿಗೂ ಒಟ್ಟಿನಲ್ಲಿ ಪಟಾಕಿ ಉತ್ಪಾದನೆಯನ್ನೇ ನಿಲ್ಲಿಸಬೇಕು. ಅದು ಮಾಡುತ್ತಿರುವ ಹಾನಿ ತುಂಬಾ ಭಯಂಕರವಾಗಿದೆ..ಇಡೀ ಪಟಾಕಿ ಉದ್ಯಮವನ್ನೇ ನಿಷೇಧಿಸಿ ಅದರಲ್ಲಿ ತೊಡಗಿಸಿಕೊಂಡಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ರಫ್ತು ಸಹ ನಿಷೇಧ ಮಾಡಬೇಕು..ಹಿಂದೆ ಪಟಾಕಿ ಒಂದು ಉತ್ತಮ, ಮನಸ್ಸಿಗೆ ಉಲ್ಲಾಸ ನೀಡುವ ಬೆಳಕಿನ ಆಚರಣೆಯಾಗಿತ್ತು. ಆ ವಿವಿಧ…
ವಿಜಯಪರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಲೋಪವನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ವತಿಯಿಂದ ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಕಚೇರಿ, ವಿಜಯಪುರ ಇವರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಪಡಿಸಲಾಯಿತು.ರಾಜ್ಯ ಸರ್ಕಾರದ ಸಕ್ಕರೆ ಇಲಾಖೆಯು ಪ್ರಸಕ್ತ ಸಾಲಿನ ಕಬ್ಬುನುರಿಸುವ ಸಕ್ಕರೆ ಹಂಗಾಮಿನ ಹೊಸ ಎಫ್ ಆರ್ ಪಿ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ. ಯಾವ ಕಾರ್ಖಾನೆಗೆ ಎಷ್ಟು ದರ ಎಂದು ನಿಗದಿಪಡಿಸಿರುವ ಪಟ್ಟಿಯನ್ನು ನೀಡಿರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿ ಒಂಬತ್ತು ಸಕ್ಕರೆ ಕಾರ್ಖಾನೆಗಳು ಇರುತ್ತವೆ. ೧) ಇಂಡಿಯನ್ ಶುಗರ್ಸ್-೩೧೫೬, ೨) ಜಮಖಂಡಿ ಶುಗರ್ಸ್-೩೨೫೪, ೩)ಕೆಪಿಆರ್ ಶುಗರ್ಸ-೩೩೬೫, ೪) ಮನಾಲಿ ಶುಗರ್ಸ-೨೯೨೦, ೫) ನಂದಿ ಶುಗರ್ಸ-೩೪೫೪, ೬) ಸಂಗಮನಾಥ ಶುಗರ್ಸ್-೨೯೨೦, ೭) ಬಾಲಾಜಿ ಶುಗರ್-೩೩೭೪, ೮) ಬಸವೇಶ್ವರ ಶುಗರ್ಸ-೩೪೦೮ ಮತ್ತು ೯) ಭೀಮಾಶಂಕರ್ ಶುಗರ್ಸ-೩೨೨೧ ಈ ರೀತಿಯಾಗಿ ಎಪ್ ಆರ್ ಪಿ ದರವನ್ನು ನಿಗದಿಪಡಿಸಿ ರೈತಪರವಾದ ಒಳ್ಳೆಯ ಆದೇಶವನ್ನು…
