Author: editor.udayarashmi@gmail.com

ಕಲಕೇರಿ: ಕಲಬುರ್ಗಿ ನಗರದ ಕೋಟನೂರ್ ಲುಂಬುಣಿ ಉಧ್ಯಾನವನದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿರುವ ದುಷ್ಕರ್ಮಿಗಳನ್ನು ಬಂದಿಸಿ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ಸದಸ್ಯರು ಕಲಕೇರಿ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದಿಂದ ಮುಖ್ಯ ಬಜಾರ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.ಬ್ರಹತ್ ಪ್ರತಿಭಟನಾ ರ‍್ಯಾಲಿ ಮುಖಾಂತರ ಮುಖ್ಯ ಬಜಾರ ತಲುಪಿ ಅಲ್ಲಿ ಟೈರ್‌ಗೆ ಬೆಂಕಿಯನ್ನು ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾಳಿಕೋಟಿ ಕಂದಾಯ ನೀರಿಕ್ಷಕ ದುಂಡಯ್ಯ ಮಠಪತಿ ಅವರ ಮೂಲಕ ಘನವೆತ್ತ ರಾಜ್ಯಪಾಲರಿಗೆ ತಲುಪುವಂತೆ ಮನವಿಯನ್ನು ಪ್ರತಿಭಟನಾಕಾರರು ಸಲ್ಲಿಸಿದರು.ಈ ಸಂದರ್ಭದಲ್ಲಿ ಅನೇಕ ಪ್ರತಿಭಟನಾಕಾರರು ಮಾತನಾಡಿ, ಈ ಘಟನೆಗೆ ಸಂಬಂಧಿಸಿದ ಎಲ್ಲ ದುಷ್ಕರ್ಮಿಗಳನ್ನು ಬಂದಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಆಗ್ರಹಪಡಿಸಿದರು. ಇಂತಹ ದುಷ್ಕೃತ್ಯಗಳು ಮತ್ತೆ ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತಿ ಮತ್ತು ಗುಪ್ತಚರ ಇಲಾಖೆಗಳು ಕ್ರಮವಹಿಸಬೇಕೆಂದು…

Read More

ವಿಜಯಪುರ: ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪ್ರಾರಂಭಗೊಂಡ ಒಂದು ವರ್ಷದ ಅವಧಿಯಲ್ಲಿ ತನ್ನ ಅತ್ಯುತ್ತಮ ಸೇವೆಯಿಂದಾಗಿ ಜಿಲ್ಲಾದ್ಯಂತ ಗುರುತಿಸಿಕೊಂಡಿದೆ.ಲಕ್ಷಾಂತರ ರೋಗಿಗಳಿಗೆ ನೆರವಾಗುವುದರ ಮೂಲಕ ಒಂದು ವರ್ಷದ ಅವಧಿಯಲ್ಲಿ ಯಶಸ್ವಿ ಕಿಡ್ನಿ ಟ್ರಾನ್ಸ್ಪ್ಲಾಂಟ ಮಾಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಸದಾ ನಿಮ್ಮ ಸೇವೆಯಲ್ಲಿ ಎನ್ನುವ ಘೋಷವಾಖ್ಯದಡಿಯಲ್ಲಿ ಸೇವೆ ಸಲ್ಲಿಸುವ ಆಸ್ಪತ್ರೆಯು ಪ್ರಸ್ತುತ ಪ್ರಧಾನ ಮಂತ್ರಿಯವರ ಕನಸಿನ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವುದರೊಂದಿಗೆ ಅವಶ್ಯಕತೆಯುಳ್ಳ ಬಡವರಿಗೆ ನೆರವಾಗುವಲ್ಲಿ ಯಶಸ್ವಿಯಾಗಿದ್ದನ್ನು ಗಮನಿಸಿದ ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಎಂದು ಘೋಷಿಸಿ, ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದೆ.ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ೭೫ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು.ಆಸ್ಪತ್ರೆಯ ಈ ಸಾಧನೆಗೆ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ನಗರದ ವಿಧಾನಸಭಾ…

Read More

ಕೊಲ್ಹಾರ: ಪ್ರಜೆಗಳು ದೇಶದ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ದೇಶದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸ ನಡೆಯುತ್ತಿರುವದರಿಂದ ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಬರುತ್ತಿದೆ. ಶಿಕ್ಷಣ ಮುಖಾಂತರ ಶೋಷಣೆ ರಹಿತ ಸಮಾಜ ನಿರ್ಮಾಣ ಮಾಡುವದು ಸರ್ಕಾರದ ಗುರಿಯಾಗಿರುತ್ತದೆ ಎಂದು ತಹಶೀಲ್ದಾರ ಎಸ್.ಎಸ್.ನಾಯಕಲ್‌ಮಠ ಹೇಳಿದರು.ಪಟ್ಟಣದ ಕನ್ನಡ ಗಂಡು ಮಕ್ಕಳ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಮಹನೀಯರನ್ನು ಕೊಲ್ಹಾರ ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮುದ್ದೀನ, ಕೊಲ್ಹಾರ ಪಿಎಸ್‌ಆಯ್ ಪ್ರವೀಣಕುಮಾರ ಗರೇಬಾಳ, ಕೃಷಿ ಇಲಾಖೆ ಅಧಿಕಾರಿ ಪುರೋಹಿತ, ಆರೋಗ್ಯ ಇಲಾಖೆಯ ಲಕ್ಷ್ಮಿ ತೆಲ್ಲೂರ, ಉಪಖಜಾನೆ ಅಧಿಕಾರಿ ವಿನೋದಕುಮಾರ ಡೋಣೂರ, ಪಟ್ಟಣ ಪಂಚಾಯತಿಯ ಸರ್ವಸದಸ್ಯರು, ಪಟ್ಟಣದ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Read More

ಜ.೩೦ರಂದು ೩೦ ಪುಸ್ತಕಗಳ ಲೋಕಾರ್ಪಣೆ | ಬೆರಗು ಪ್ರಶಸ್ತಿ ಪ್ರದಾನ ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು ಪ್ರಕಟಿಸಿದ ೩೦ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜ್ಞಾನಯೋಗಿ ಶ್ರೀಸಿದ್ದೇಶ್ವರ ಶ್ರೀಗಳ ಸಂಸ್ಮರಣಾರ್ಥ ಜ.೩೦ ರಂದು ಕಡಣಿ ಗ್ರಾಮದ ಪಿ.ಬಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಬೆರಗು ಪ್ರಶಸ್ತಿಗಳನ್ನು ಬೆಂಗಳೂರು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರು ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದ ಡಾ.ಸಂಗಮನಾಥ ಲೋಕಾಪೂರ ಅವರಿಗೆ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ದತ್ತಿ ಪುಸ್ತಕ ಪ್ರಶಸ್ತಿ ಪಡೆದ ಕಲಬುರಗಿಯ ಡಾ. ಲಕ್ಷ್ಮಣ ಕೌಂಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಸಿಂದಗಿ ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸುವರು. ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟೊ.ಪೋತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶ್ರೀಶೈಲ ನಾಗರಾಳ ಪುಸ್ತಕ ಪರಿಚಯಿಸಲಿದ್ದಾರೆ,…

Read More

ಕೆಂಭಾವಿ: ಪಟ್ಟಣದ ಹಳೆ ಬಸ್ ಸ್ಟ್ಯಾಂಡ್ ಹತ್ತಿರ ಜ.೨೬ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೂತನ ಪುತ್ಥಳಿ ಅನಾವರಣ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಬಂತೆ ದಮ್ಮಾನಂದ ಮಾಹಾತೇರ ಬೀದರ ಇವರು ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ದನಗೌಡ ಪೋಲೀಸ್ ಪಾಟೀಲ್ ಉದ್ಘಾಟಿಸಿ, ಮಾತನಾಡಿ, ಎಲ್ಲಾ ಶೋಷಿತ ವರ್ಗದವರಿಗೆ ನ್ಯಾಯತವಾದ ಹಕ್ಕುಗಳನ್ನು ಕೊಡಿಸುವುದರಲ್ಲಿ ಅಂಬೇಡ್ಕರ್ ಅವರೇ ಮುಂಚೂಣಿ ನಾಯಕರು. ಅವರು ಸಂವಿಧಾನ ರಚನೆಗೆ ಎರಡು ವರ್ಷ 11 ತಿಂಗಳನ್ನು 18 ದಿವಸ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟವರು. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ವಾಮನರಾವ ದೇಶಪಾಂಡೆ. ಅಶೋಕ್ ಸೊನ್ನದ. ಶಿವನಗೌಡ ಮಾಲಿ ಪಾಟೀಲ್. ಸುಧಾಕರ್ ಡಿಗ್ಗಾವಿ. ಕೃಷ್ಣಯ್ಯ ಗುತ್ತೇದಾರ್. ರೈಮನ್ ಪಟೇಲ್ ಯಲ್ಗೋಡ. ಲಕ್ಷ್ಮೀಬಾಯಿ ಕಂಬಾರ. ಮಲ್ಲಿಕಾರ್ಜುನ್ ಪಾಟೀಲ್, ಉಪ ತಹಶೀಲ್ದಾರ್ ಲಾಲಪ್ಪ ಹೊಸ್ಮನಿ. ಬಸವರಾಜ್ ಮಲ್ಲೆ, ಮಲ್ಲಿಕಾರ್ಜುನ ಕಡಕಲ, ಶಿವಶರಣಪ್ಪ ವಾಡಿ, ಶರಣು ಹೂನಹಳ್ಳಿ, ಧರ್ಮಣ್ಣ ಬಡಿಗೇರ್ ಸೇರಿದಂತೆ ಹಲವರಿದ್ದರು.ನಿರೂಪಣೆ ಶರಣಪ್ಪ ಗಾಯಕ್ವಾಡ ಮಾಡಿದರು. ಸ್ವಾಗತವನ್ನು…

Read More

ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ೩೧ ನೇ ವರ್ಷದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಜಣೆಯಿಂದ ಜರುಗಿತು.ಬೆಳಗ್ಗೆ ದೇವಿಗೆ ಆರತಿ, ಅಲಂಕಾರ, ಪೂಜೆ, ಅಭಿಷೇಕ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಭವ್ಯ ಮೆರವಣೆಗೆ ನಡೆಯಿತು.ಡೊಳ್ಳು, ಬಾಜಾ-ಭಜಂತ್ರಿ, ಚಿಟ್ಟಲಗಿ, ಸಂಬಳ ಸಮೇತ ಆಕರ್ಷಕ ಮೆರವಣೆಗೆ ಅಲಂಕೃತ ವಾಹನದಲ್ಲಿ ದೇವಿಯ ಮೂರ್ತಿ ಮತ್ತು ಪಾಲಕಿ ಮೆರವಣೆಗೆ ನಡೆಯಿತು.ಮೆರವಣೆಗೆಯಲ್ಲಿ ಆಯಿ ರಾಧೇ ಉದೋ ಉದೋ, ಅಂಬಾಭವಾನಿ ಉಧೋ ಉಧೋ ಘೋಷಣೆ ಮೊಳಗಿದವು.ನಂತರ ನಡೆದ ಸಮಾರಂಭದಲ್ಲಿ ದಾನಿಗಳಾದ ಬಾಲಾಜಿ ಇಫ್ ಕ್ವಾಯಿಲ್ ಮತ್ತಿತರನ್ನು ಸನ್ಮಾನಿಸಲಾಯಿತು.ದೇವಸ್ಥಾನ ಸಮಿತಿ ಅಧ್ಯಕ್ಷ ಅರುಣ ಕೋಳೆಕರ, ಗಣೇಶ ಮಹೀಂದ್ರಕರ, ಬಾಪು ಮಹೀಂದ್ರಕರ, ವಿಜಯ ಪತಂಗೆ, ಸುಭಾಸ ಬಳಮಕರ, ನಾಗನಾಥ ಹಂಚಾಟೆ, ರಮಾಕಾಂತ ಕೋಳೆಕರ, ಮನೋಜ ಕೋಳೆಕರ, ಬಾಬುರಾವ ಸುಲಾಖೆ, ರಮೇಶ ಸುಲಾಖೆ, ನಂದು ಸುಲಾಖೆ, ಡಾ|| ರಾಜೇಶ ಕೋಳೆಕರ, ಕಿರಣ ಬಳಮಕರ, ಶಿವಾಜಿ ಕೋಳೆಕರ, ರಮೇಶ ಹಂಚಾಟೆ, ಶಶಿಕಾಂತ ಮಹಿಂದ್ರಕರ, ಅಂಬಾದಾಸ ಮಿರಜಕರ, ಇಂಜಿಯರಿಂಗ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಧರ ಕೋಳೆಕರ…

Read More

ಸಿಂದಗಿ: ಆಧುನಿಕ ಭಗೀರಥ, ಶಿಕ್ಷಣ ಪ್ರೇಮಿ, ಮಾಜಿ ಸಚಿವ ದಿ.ಎಂ.ಸಿ ಮನಗೂಳಿ ಅವರ ೩ನೆಯ ಪುಣ್ಯಸ್ಮರಣೆಯನ್ನು ಪಟ್ಟಣದ ಎಚ್.ಜಿ.ಹೈಸ್ಕೂಲ್ ಆವರಣದಲ್ಲಿ ಜ.೨೮ ಭಾನುವಾರದಂದು ಬೆಳಿಗ್ಗೆ ೧೦ಗಂಟೆಗೆ ನಮ್ಮ ಕುಟುಂಬದವರು ಆಯೋಜನೆ ಮಾಡಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಜನತೆ ಹಾಗೂ ದಿ.ಎಂ.ಸಿ ಮನಗೂಳಿ ಅವರ ಅಭಿಮಾನಿ ಬಳಗ, ಪಕ್ಷದ ಕಾರ್ಯಕರ್ತರು, ಮುಖಂಡರು, ರೈತರು, ಮಹಿಳೆಯರು, ವಿವಿಧ ಸಂಘಡನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು, ಯುವಕರು ದಿ.ಎಂ.ಸಿ ಮನಗೂಳಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಕೊರಬೇಕೆಂದು ಶಾಸಕ ಅಶೋಕ ಮನಗೂಳಿ ಮತಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.

Read More

ಆಲಮೇಲ ತೋಟಗಾರಿಕೆ ವಿವಿ ಮಂಜೂರಿಗೆ ಸಿಎಂ ಭರವಸೆ | ಶಾಸಕ ಅಶೋಕ ಮನಗೂಳಿ ಮಾಹಿತಿ ಸಿಂದಗಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ನೀಡಿದ ೫ ಗ್ಯಾರಂಟಿಗಳನ್ನು ಈಡೇರಿಸಿ, ಕೊಟ್ಟ ಮಾತನ್ನೂ ಸರಕಾರ ಉಳಿಸಿಕೊಂಡಿದೆ. ಇದರ ಮದ್ಯೆದಲ್ಲಿ ಮತಕ್ಷೇತ್ರಕ್ಕೆ ೧೨೫ ಕೋಟಿ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಚಿವ ಸಂಪುಟ ಸಹಕಾರ ನೀಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜನತೆಯ ಪರವಾಗಿ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ೫೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಿಂದಗಿ ನಗರಕ್ಕೆ ಯೋಜನಾ ಪ್ರಾಧಿಕಾರವನ್ನು ಸರಕಾರದಿಂದ ಮಂಜೂರಾತಿ ಪಡೆಯಲಾಗಿದೆ. ತಾಲೂಕಿನ ಯರಗಲ್ ಬಿಕೆ, ಬಂದಾಳ, ಚಿಕ್ಕಸಿಂದಗಿ, ರಾಂಪೂರ ಮತ್ತು ಸೋಂಪೂರ ಗ್ರಾಮಗಳನ್ನು ಒಳಗೊಂಡು ಯೋಜನಾ ಪ್ರಾಧಿಕಾರ ರಚಿಸಲಾಗಿದೆ.ಪ್ರತಿ ಶಾಸಕರಿಗೆ ನೀಡುವ ೨೫ ಕೋಟಿ ರೂ. ಅನುದಾನದಲ್ಲಿ ಸಿಂದಗಿ ಮತಕ್ಷೇತ್ರದ ೪೯ ಹಳ್ಳಿಗಳಲ್ಲಿ ೧೪ಕೋಟಿ…

Read More

ಆಲಮೇಲ: ತಾಲೂಕಿನ ದೇವಣಗಾಂವ ಗ್ರಾಮದಮಾತೃಭೂಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಮಹಿಳಾ ಸಂಸ್ಥೆಯ ಕದಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಧ್ವಜಾರೋಹಣವನ್ನು ದೇವಣಗಾಂವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸದಸ್ಯರಾದ ಶ್ರೀ ಚಿನ್ನವ್ವ ಗುಂಡಪ್ಪ ಗಂಗನಳ್ಳಿ ನೆರವೇರಿಸಿದರು.ಹಿರಿಯರಾದ ಸಿದ್ದಯ್ಯ ಮಠಪತಿ, ಪಂಪುಸಿಂಗ್ ರಜಪುತ, ಷಣ್ಮುಖಪ್ಪ ಸೋಮನಾಯಕ, ವಿಠ್ಠಲ ಯರಗಲ್, ರಮೇಶ ಸೊಡ್ಡಿ, ಚಂದ್ರಾಮ ಸಿಂದಗಿ, ಶಂಕರಲಿಂಗ ನಡುವಿನಕೇರಿ, ಸಿದ್ದಾರ್ಥ ಮೇಲಿನಕೇರಿ, ಮಾಣಿಕ ಕಲಬಾ, ಪ್ರಕಾಶ ಗಂಗನಳ್ಳಿ, ದತ್ತಾತ್ರೇಯ ಸೊನ್ನ, ಶಿವಾನಂದ ನಾಗಾವಿ, ಶಿವು ಕಾಟಕರ ಇದ್ದರು.

Read More

ರಥಕ್ಕೆ ಪೂಜೆ ಸಲ್ಲಿಸಿ,ಆರತಿ ಬೆಳಗಿ, ಸ್ವಾಗತಿಸಿದ ದೇವಣಗಾಂವ ಗ್ರಾಮಸ್ಥರು ಆಲಮೇಲ: ತಾಲೂಕಿನ ಗಡಿಗ್ರಾಮ ದೇವಣಗಾಂವ ಭೀಮಾ ನದಿ ತೀರದ ಸೇತುವೆಯ ಮೇಲೆ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆಗೆ ಅದ್ದೂರಿ ಸ್ವಾಗತ ಮಾಡಿಕೊಳ್ಳಲಾಯಿತು.ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಿಂದ ವಿಜಯಪುರ ಜಿಲ್ಲೆಗೆ ರಥಯಾತ್ರೆ ಆಗಮಿಸಿತು. ಆಲಮೇಲ ತಹಶಿಲ್ದಾರ ಸುರೇಶ ಚಾವಲರ ಅವರ ನೇತೃತ್ವದಲ್ಲಿ ದೇವಣಗಾಂವ ಗ್ರಾಪಂ ಅಧ್ಯಕ್ಷೆ ಶ್ರೀಮತಿ ರೇಣುಕಾ ನಡುವಿನಕೇರಿ ರಥಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ, ಆರತಿ ಬೆಳಗಿ ಸ್ವಾಗತ ಮಾಡಿಕೊಂಡರು.ಶಾಲಾ ಮಕ್ಕಳ ಕೋಲಾಟ, ಜಯಘೋಷ, ಕನ್ನಡದ ಕವಿಗಳ ಭಾವಚಿತ್ರಗಳು, ಕನ್ನಡ ದ್ವಜ ಎಲ್ಲೆಡೆ ರಾರಾಜಿಸಿದವು, ಡೊಳ್ಳು ಕುಣಿತ, ಹಲಗೆಮೇಳ, ಚಿಟ್ಟಹಲಗೆ, ಮುತೈದೆಯರು ಕುಂಭ, ಆರತಿಯೊಂದಿಗೆ ರಥದ ಮುಂದೆ ಸಾಗಿದರು. ಕನ್ನಡ ಗೀತೆಗಳ ಗಾಯನಕ್ಕೆ ನೆರೆದಿದ್ದ ಯುವಕರು, ಮಕ್ಕಳು, ಹಿರಿಯರು, ಮಹಿಳೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ತಹಶಿಲ್ದಾರ ಸುರೇಶ ಚಾವಲರ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ವಿವಿಧ ಸಂಘಗಳ ಮಹಿಳೆಯರು ಕೂಡಾ ಹೆಜ್ಜೆ…

Read More