Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವೀಣಾಂತರಂಗ ಬೇಲೂರಿನ ದೇವಾಲಯದ ಒಳಾವರಣ ಮತ್ತು ಹಳೆಬೀಡಿನ ದೇವಾಲಯದ ಹೊರಾವರಣ ನೋಡಿದರೆ ಜಗತ್ತಿನ ಯಾವುದೇ ಶಿಲ್ಪ ಕಲೆಯ ಸ್ಮಾರಕವು ಇದರ ಮುಂದೆ ಸರಿದೂಗುವುದಿಲ್ಲ. ಇಡೀ ಜಗತ್ತು ಅಂಧಕಾರದಲ್ಲಿರುವಾಗ ಗುಲಾಮಗಿರಿಯ ದಾಸ್ಯದ ನೆಲೆಬೀಡಾಗಿದ್ದಾಗ ಭಾರತವು 64 ವಿದ್ಯೆಗಳಿಂದ ಪ್ರಕಾಶಿಸುತ್ತಿತ್ತು. ಕಲೆ, ಸಂಸ್ಕೃತಿ, ಸಾಹಿತ್ಯ, ಅಧ್ಯಯನ, ವೇದ, ಆಗಮ, ಪುರಾಣಗಳು ನಮ್ಮ ಜ್ಞಾನ ಸಿರಿಯನ್ನು ಹೆಚ್ಚಿಸಿದ್ದವು. ಮಾನವೀಯ ಮೌಲ್ಯಗಳು ಭಾರತಕ್ಕೆ ಕಳಶಪ್ರಾಯ ಎನಿಸಿದ್ದವು.. ಇಡೀ ಜಗತ್ತಿನ ಜನರು ಭಾರತಕ್ಕೆ ಜ್ಞಾನ, ವಿಜ್ಞಾನ, ಲಲಿತಕಲೆ ಮತ್ತು ಇತರ ವಿದ್ಯಗಳ ಜೊತೆ ಜೊತೆಗೆ ಶಾಂತಿಯನ್ನರಸಿ ಬರುತ್ತಿದ್ದರು. ವಸುದೈವ ಕುಟುಂಬಕಂ ಎಂಬ ಉಕ್ತಿಯಂತೆ ಭಾರತವು ವಿಶ್ವ ಭ್ರಾತೃತ್ವವನ್ನು ಸಾರುವ ಏಕೈಕ ದೇಶವಾಗಿತ್ತು. ಅದರಲ್ಲೂ ಹೊಯ್ಸಳ, ರಾಷ್ಟ್ರಕೂಟ, ಚಾಲುಕ್ಯ, ಪಲ್ಲವ ಮುಂತಾದ ರಾಜವಂಶಗಳು ಯುದ್ಧದಲ್ಲಿನ ತಮ್ಮ ಗೆಲುವಿನ ಸಂಭ್ರಮದ ವಿಜಯ ಸಂಕೇತಗಳಾಗಿ ದೇವಾಲಯಗಳನ್ನು ನಿರ್ಮಿಸಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಂತರು. ಈ ಎಲ್ಲ ಶಿಲ್ಪ ಕಲೆಯ ಬೀಡುಗಳಲ್ಲಿ ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳು ಮೇರು ಶಿಖರವಾಗಿ ನಿಲ್ಲುತ್ತವೆ. ಈ ಎರಡು ದೇವಾಲಯಗಳನ್ನು…
ಪ್ರತಿಭಟನೆಯಲ್ಲಿ ರೈತರೊಂದಿಗೆ ಶಾಸಕ ರಾಜುಗೌಡ ಪಾಟೀಲ ಭಾಗಿ ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ನಾಗಠಾಣ ಶಾಖಾ ಕಾಲುವೆಗಳ ಮೂಲಕ ದೇವರಹಿಪ್ಪರಗಿ ತಾಲ್ಲೂಕಿನ 7 ಕೆರೆಗಳ ಭರ್ತಿಗೆ ನೀರು ಒದಗಿಸಲು ಆಗ್ರಹಿಸಿ ಆ ಭಾಗದ ನೂರಾರು ರೈತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಚಿಮ್ಮಲಗಿ ಏತ ನೀರಾವರಿ ಯೋಜನೆಗೆ ನೀರು ಕಾಲುವೆಯ ಕೊನೆಯ ಭಾಗ 137 ಕಿ.ಮೀ ವರೆಗೆ ತಲುಪುವುದಿಲ್ಲ. ಇದರಿಂದ ಆ ಭಾಗದ ಕೆರೆಗಳ ಭರ್ತಿ ಆಗಿಯೇ ಇಲ್ಲ. ಅಲ್ಲಿ ಕುಡಿಯಲು ನೀರಿನ ಸಮಸ್ಯೆಯಿದೆ. ಕಾಲುವೆಯ ಕೊನೆ ಹಂತದವರೆಗೂ ನೀರು ಪೂರೈಕೆಯ ಬಗ್ಗೆ ಲಿಖಿತ ಭರವಸೆ ನೀಡುವವರೆಗೂ ಕದಲುವುದಿಲ್ಲ ಎಂದು ಅವರು ಹೇಳಿದರು.ಅವರ ಪ್ರತಿಭಟನೆಗೆ ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಕೂಡಾ ಸಾಥ್ ನೀಡಿದರು.ಸಭೆ: ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳು, ರೈತರ ಮಧ್ಯೆ ಸಭೆ ನಡೆದು, ಅಲ್ಲಿ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಯಿತು.ಕೊನೆಗೆ ಅ.28 ರಿಂದ ನ.4 ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ನೀರು ಸರಾಗವಾಗಿ…
ಯಡ್ರಾಮಿ ಗ್ರಾಮದೇವತೆ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಯಡ್ರಾಮಿ : ಪಟ್ಟಣದ ಶ್ರೀ ಗ್ರಾಮದೇವತೆ ದೇವಸ್ಥಾನದಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನವರಾತ್ರಿ ಉತ್ಸವ ಅದ್ಧೂರಿಯಾಗಿ ಜರುಗುತ್ತಿದೆ.ನಿತ್ಯವೂ ಗ್ರಾಮದೇವಿಗೆ ವಿಧವಿಧ ಹೂವು, ಹಣ್ಣಿನ ಅಲಂಕಾರ ಮಾಡಿ, ಭಕ್ತಸಮೂಹ ಶ್ರೀ ದೇವತೆಯನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ.ಶುಕ್ರವಾರ ಗ್ರಾಮದೇವತೆಗೆ ಮಹಾ ರುದ್ರಾಭಿಷೇಕ ನೆರವೇರಿದ ನಂತರ ಸಿಂದಗಿಯ ರಾಮಚಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಗಾಯತ್ರಿ ಹೋಮ ನಡೆಯಿತು. ಬಳಿಕ ಹರಿನೀತಾ ಡಂಬಳ ಹಾಗೂ ಸಂಗಡಿಗರಿಂದ ನಡೆದ ಕೋಲಾಟ ಕಾರ್ಯಕ್ರಮ ಭಕ್ತರನ್ನು ಆಕರ್ಷಿಸಿತು. ಕೊನೆಗೆ ಗ್ರಾಮದೇವತಾ ಟ್ರಸ್ಟ್ ವತಿಯಿಂದ ಮಹಾಪ್ರಸಾದ ಜರುಗಿತು.ಈ ಸಂದರ್ಭದಲ್ಲಿ ಸಿದ್ಧನಗೌಡ ಮಾಲಿಪಾಟೀಲ, ಶಿವಶರಣಯ್ಯ ಪುರಾಣಿಕ, ವಿಠ್ಠಲ ಸಾಹು ಪತ್ತಾರ, ಲಕ್ಷ್ಮಿಕಾಂತ ಸೋನಾರ, ಆನಂದ ಯತ್ನಾಳ, ಚಂದ್ರಶೇಖರ ಬಂಡೆಪ್ಪಗೋಳ, ಸಂತೋಷ ಲಗಳಿ, ಸಂತೋಷ ಪಡಶೆಟ್ಟಿ, ಈರಣ್ಣ ಅಂಕಲಕೋಟಿ, ರಾಘವೇಂದ್ರ ಕುಲಕರ್ಣಿ, ಬಸಯ್ಯ ಹೊರಗಿನಮಠ, ಅರ್ಚಕ ಕಾಳು ಬಡಿಗೇರ, ಪಟ್ಟಣದ ಭಕ್ತರಿದ್ದರು.
ವಿಜಯಪುರ: ಅ.೨೧ ರಂದು ಬೆಳಿಗ್ಗೆ ೮ ಗಂಟೆಗೆ ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ವಿಜಯಪುರ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಚರಿಸಲಾಗುವುದು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಹಾಗೂ ವಿಶೇಷ ಅತಿಥಿಗಳಾಗಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಭಾಗವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಸೋನಾವಣೆ ಉಪಸ್ಥಿತರಿರುವರು
ವಿಜಯಪುರ: ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸುವ ಮತ್ತು ಅವರಿಗೆ ಉದ್ಯೋಗ ಖಾತರಿ ನೀಡುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಅಕುಶಲ ಕೆಲಸ ಒದಗಿಸುವುದರ ಜತೆಗೆ ಅವರ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೆ ನೀಡುತ್ತಿದ್ದ ರೂ. ೨.೫೦ ಲಕ್ಷ ಮೊತ್ತವನ್ನು ೫ ಲಕ್ಷ ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗೆ ಅಕುಶಲ ಕೆಲಸ ಒದಗಿಸುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ಎರೆ ಹುಳು ತೊಟ್ಟಿ ಹಾಗೂ ಇತರೆ ನಿರ್ಮಾಣ ಒಳಗೊಂಡಂತೆ ಇತ್ಯಾದಿ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ…
ವಿಜಯಪುರ: ಅಪರಿಚಿತ ಗಂಡು ಶವ ಪತ್ತೆಯಾಗಿರುವ ಕುರಿತು ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಅಪರಿಚಿತ ಗಂಡು ಶವ ವಾರಸುದಾರರ ಪತ್ತೆಗೆ ಗೋಲಗುಮ್ಮಜ ಪೊಲೀಸ್ ಠಾಣೆಯ ಎಎಸ್ಐ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಅಪರಿಚಿತ ಮೃತ ವ್ಯಕ್ತಿಯ ವಯಸ್ಸು ಅಂದಾಜು ೩೫-೪೦ ಇದ್ದು, ೫.೬ ಅಡಿ ಎತ್ತರ, ಕೋಲು ಮುಖ, ಗೋಧಿಗೆಂಪು ಮೈಬಣ್ಣ, ನೆಟ್ಟನೆಯ ಮೂಗು, ಸಾಧಾರಣ ಮೈಕಟ್ಟು,ಕರಿ-ಬಿಳಿ ಕೂದಲು, ಚಾಕಲೇಟ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರಿದ್ದಲ್ಲಿ ಅಥವಾ ಸಾರ್ವಜನಿಕರಿಗೆ ಯಾವುದೇ ಮಾಹಿತಿ ದೊರೆತಲ್ಲಿ ನಗರದ ಗೋಲಗುಮ್ಮಜ ಪೊಲೀಸ್ ಠಾಣೆಯ ದೂ. ೦೮೩೫೨-೨೫೦೨೧೪ / ೯೪೮೦೮೦೪೨೫೧, ಗೋಳಗುಮ್ಮಜ ವೃತ್ತ ನಿರೀಕ್ಷಕರ ಕಚೇರಿ ದೂ: ೦೮೩೫೨-೨೫೦೨೫೨/೯೪೮೦೮೦೪೨೩೨ ಹಾಗೂ ವಿಜಯಪುರದ ಕಂಟ್ರೋಲ್ ರೂಂ ಸಂಖ್ಯೆ ೦೮೩೫೨-೨೫೦೭೫೧ ಮಾಹಿತಿ ನೀಡುವಂತೆ ಗೋಲಗುಮ್ಮಜ ಪೊಲೀಸ್ ಠಾಣೆ ಎ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಪರಿಶುದ್ಧ ಪರಿಸರ ಹೊಂದುವುದು ಇಂದಿನ ಅಗತ್ಯವಾಗಿದ್ದು, ಪರಿಶುದ್ಧ ಪರಿಸರವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಐ.ಜೆ.ಮ್ಯಾಗೇರಿ ಅವರು ತಿಳಿಸಿದರು.ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಕಾರಾಗೃಹದ ಬಂದಿಗಳು ಹಾಗೂ ಸಿಬ್ಬಂದಿಗಳು ಜೊತೆಗೂಡಿ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾರಾಗೃಹದ ಬಂದಿಗಳಿಗೆ ಸ್ವಚ್ಚತೆ ಮತು ಆರೋಗ್ಯದ ಬಗ್ಗೆ ತಿಳಿಸಿದರು. ಐಕ್ಯತೆ, ಒಗ್ಗಟ್ಟು, ಮಾನವ ಸಂಬಂಧಗಳ ಮೌಲ್ಯಗಳ ಬಗ್ಗೆ ಮಾತನಾಡಿದರು. ಸಹಕಾರ ಮತ್ತು ಒಗ್ಗಟ್ಟಿನ ತತ್ವದ ಮೂಲಕ ಎಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಬಹುದು. ಸ್ವಚ್ಛ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಈ ಶ್ರಮದಾನದಲ್ಲಿ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ.ಮ್ಯಾಗೇರಿ, ಸಹಾಯಕ ಅಧೀಕ್ಷಕ ಹೆಚ್.ಜಿ.ಮಂಜುನಾಥ, ಸಹಾಯಕ ಆಡಳಿತಾಧಿಕಾರಿ ರವಿ ಲಮಾಣಿ, ಕಚೇರಿ ಅಧೀಕ್ಷಕ ಧಾವಜಿ ರಾಠೋಡ, ಜೈಲರ್ಗಳಾದ ಗೋಪಾಲಕೃಷ್ಣ ಕುಲಕರ್ಣಿ, ಐ.ಎಸ್.ಹಿರೇಮಠ ಹಾಗೂ ಕುಮಾರಿ ಚೇತನಾ ಎನ್.ಆರ್, ಶಿಕ್ಷಕರಾದ ಡಿ.ಎಸ್.ದೀಕ್ಷಿತ್ ಎಲ್ಲ ಸಹಾಯಕ ಜೈಲರ್ಗಳು ಆಸ್ಪತ್ರೆ ಸಿಬ್ಬಂದಿ, ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯಪುರ: ತಾಲೂಕು ಪಂಚಾಯತ, ನೆಹರು ಯುವ ಕೇಂದ್ರ, ಕೇಂದ್ರ ಸಂವಹನ ಇಲಾಖೆ, ಅಂಚೆ ಇಲಾಖೆ, ಭಾರತೀಯ ಸೇವಾದಳ, ಜಿಲ್ಲಾ ಎನ್.ಎಸ್.ಎಸ್ ಘಟಕ, ಸರಕಾರದ ವಿವಿಧ ಇಲಾಖೆಗಳು ಮತ್ತು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಅಮೃತ ಕಳಶ ಯಾತ್ರಾ ಕಾರ್ಯಕ್ರಮಕ್ಕೆ ವಿಜಯಪುರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯ ಚಾಲನೆ ನೀಡಿ ಮಾತನಾಡಿದರು.ಮಣ್ಣು ನಮ್ಮ ದೈನಂದಿನ ಬದುಕಿಗೆ ಬೇಕಾಗುವ ಎಲ್ಲವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ. ಸಕಲ ಜೀವಿಗಳಿಗೆ ಅನ್ನ ನೀಡುವುದು ಮಣ್ಣು. ಯೋಧರ ಗೌರವಾರ್ಥವಾಗಿ ಮಣ್ಣನ್ನು ಸಂಗ್ರಹಿಸಿ ಕಳುಹಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ ಮಾತನಾಡಿದರು.ಅಮೃತ ಕಳಶ ಯಾತ್ರೆವಿಜಯಪುರ ತಾಲೂಕು ಪಂಚಾಯತ ಕಚೇರಿಯಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದವರೆಗೆ ಸಂಚರಿಸಿ, ನೆಹರು ಯುವ ಕೇಂದ್ರ ಕಚೇರಿಯಲ್ಲಿ ಸಮಾಪ್ತಿಗೊಂಡಿತು. ಕಳಶಗಳನ್ನು ತಾಲೂಕು ಪಂಚಾಯತ ಅಧಿಕಾರಿಗಳು ನೆಹರು ಯುವ ಕೇಂದ್ರದ ಚಾಂಪಿಯನ್ಗಳಿಗೆ ಹಸ್ತಾಂತರಿಸಿದರು. ಕೇಂದ್ರ ಸಂವಹನ ಇಲಾಖೆಯ ಸಿ.ಕೆ…
ದೇವರಹಿಪ್ಪರಗಿ: ತಾಲ್ಲೂಕಿನ ಡೋಣಿ ನದಿ ಪಕ್ಕದ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ನದಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ರೈತರು ಸರಕಾರವನ್ನು ಆಗ್ರಹಿಸಿದ್ದಾರೆ.ತಾಲ್ಲೂಕಿನ ಡೋಣಿ ತೀರದಲ್ಲಿ ಈ ಬಾರಿ ಮಳೆಯಿಲ್ಲದ ಕಾರಣ ಮುಂಗಾರಿನ ಬೆಳೆಗಳಾದ ತೊಗರಿ, ಹತ್ತಿ, ಮೆಣಸಿನ ಬೆಳೆ ನಾಟಿ ಮಾಡಿದ ರೈತರು ಈಗ ಮಳೆ ಇಲ್ಲದೆ ಪರದಾಡುವಂತಾಗಿದೆ. ಈಗ ಕಾಲುವೆ ಹಾಗೂ ನೀರಾವರಿ ಯೋಜನೆಗಳಿಂದ ಹೆಚ್ಚುವರಿ ನೀರು ದೋಣಿ ನದಿಗೆ ಸೇರುವ ಕಾರಣ ಉಪ್ಪಾಗಿದ್ದ ಡೋಣಿ ನದಿಯ ನೀರು ಸಿಹಿಗೊಂಡು ಬೆಳೆಗಳಿಗೆ ನೀರು ಹಾಯಿಸಲು ಯೋಗ್ಯವಾಗಿದೆ.ಡೋಣಿ ನದಿಯ ತೀರದ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಯಾಳವಾರ, ಕೊಂಡಗೂಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನೀರು ಬಿಡಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಆಯಿಲ್ ಇಂಜೀನಗಳನ್ನು ಬಳಸಿ ನೀರು ಹರಿಸಲಾಗುತ್ತಿದೆ.ರೈತರು ಇಂಜಿನ್ ಪೈಪ್ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರತಿನಿತ್ಯ ೬ ರಿಂದ ೮ ಸಾವಿರ ಹಣ ವ್ಯಯಿಸುತ್ತಿದ್ದಾರೆ. ಕಳೆದ ವರ್ಷ ಬೆಳೆಗಳು ಹಾಳಾಗಿದ್ದು ವಿಮಾಹಣ…
ಇಂಡಿ: ಲಿಂಬೆ ನಾಡಿನ ಹಲವು ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ ಭೂಬಾಲನ್ ಶುಕ್ರವಾರ ಅನಿರೀಕ್ಷಿತ ಬೇಟಿ ನೀಡಿ ಪರಿಶೀಲನೆ ಮಾಡಿದರು.ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನಗೆ ಬೇಟಿ ನೀಡಿ ಆಹಾರದ ಗುಣಮಟ್ಟ ಮತ್ತು ಮೇಗಾ ಮಾರುಕಟ್ಟೆ ಕಾಮಗಾರಿ ಪರಿಶೀಲನೆ ಮಾಡಿದರು. ಹಾಗೂ ಪುರಸಭೆ ಕಾರ್ಯಾಲಯಕ್ಕೆ ಹಾಗೂ ತಾಲೂಕು ಆಡಳಿತ ಸೌಧಕ್ಕೆ ತೆರಳಿ, ಸಂಪೂರ್ಣ ಕಛೇರಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು. ತದನಂತರ ತಹಶಿಲ್ದಾರ ಕಾರ್ಯಾಲಯದಲ್ಲಿ ಸಂಬಂಧಿಸಿದ ನೌಕರಸ್ಥರು ಮತ್ತು ಸಿಬ್ಬಂದಿ ವರ್ಗದವರ ಜೊತೆ ಅಲ್ಲಿರುವ ಸಮಸ್ಯೆ ಮತ್ತು ಇಲಾಖೆಯ ಪ್ರಗತಿಯ ಬೆಳವಣಿಗೆ ಬಗ್ಗೆ ಗಮನ ಹರಿಸಿದರು.ಇನ್ನು ಇದೇ ಸಂದರ್ಭದಲ್ಲಿ ತಾಲೂಕು ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಹಾಗೂ ಕರವೇ ಅಧ್ಯಕ್ಷ ಶೀವುಲಕಗೊಂಡ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ಡಿಲೆವರಿಗೆ ಬರುವ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅದಲ್ಲದೇ ರೇವಪ್ಪ ಮಡ್ಡಿ ರಸ್ತೆ, ಚರಂಡಿ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಅಲ್ಲಿ ಯಾರೂ…
