Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ವಿದ್ಯುತ್ ಕಳ್ಳತನ ಮಹಾ ಅಪರಾಧ ಎಂದು ಅನೇಕ ಬಾರಿ ಜನರಲ್ಲಿ ಅರಿವು ಮೂಡಿಸಿದರೂ ಸಹ ನೇರವಾಗಿ ಎಲ್ಟಿ ಲೈನ್ಗೆ ನಗರ ಪ್ರದೇಶದಲ್ಲೂ ಹುಕ್ಕು ಹಾಕಿಕೊಂಡ ಮಾಹಿತಿ ಕೇಳಿ ಬಂದಿತ್ತು. ಈ ರೀತಿಯ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಖಾಧಿಕಾರಿ ಶಾಂತೂ ಬಿರಾದಾರ ಹೇಳಿದರು.ಶುಕ್ರವಾರದಂದು ನಗರದ ವಿವಿಧ ಪ್ರದೇಶಗಳಲ್ಲಿ ಅನಧಿಕೃತವಾಗಿ ವಿದ್ಯುತ್ನ್ನು ಬಳುಸುತ್ತಿರುವವರ ಕಾರ್ಯಾಚರಣೆಯಲ್ಲಿ ವೈಯರ್ಗಳನ್ನು ವಶಪಡಿಸಿಕೊಂಡು ಮಾತನಾಡಿದ ಅವರು, ವಿದ್ಯುತ್ನ್ನು ಸಾರ್ವಜನಿಕರು ಯಾವಾಗಲೂ ಮಿತವಾಗಿ ಬಳಸಬೇಕು. ಮೆನ್ಲೈನ್ ಅಥವಾ ಎಲ್ಟಿ ಲೈನ್ ತಂತಿಗಳ ಹತ್ತಿರ ಗಿಡ ಮರಗಳನ್ನು ಹಚ್ಚಬಾರದು. ವೈಯರ್ಮೆನ್ಗಳ ಜೊತೆ ಸಹಕಾರದಿಂದ ನಡೆದುಕೊಳ್ಳಿ. ತಮ್ಮ ಮನೆಯ ಮುಂಭಾಗ ಇರುವ ವಿದ್ಯುತ್ ಕಂಬಗಳಿಗೆ ಹಚ್ಚಿ ವಾಹನಗಳನ್ನು ನಿಲ್ಲಿಸಬಾರದು. ಹಾಗೂ ಮಕ್ಕಳನ್ನು ಕಂಬದ ಅಕ್ಕ ಪಕ್ಕ ಆಟವಾಡಲು ಬಿಡಬಾರದು ಎಂದು ಸಲಹೆ ನೀಡಿದರು.ಈ ವೇಳೆ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿರುವ ಮನೆ ಮತ್ತು ಪಂಪಸೆಟ್ ಹಾಗೂ ವಿದ್ಯುತ್ ಬಾಕಿಯಿರುವ ವಾಯರಗಳನ್ನು ವಶಪಡಿಸಿಕೊಂಡರು.ಈ ಕಾರ್ಯಾಚರಣೆಯಲ್ಲಿ ಲೈನ್ ಮ್ಯಾನಗಳಾದ ಪ್ರವೀಣ…
ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದ ವತಿಯಿಂದ ಲಿಂ.ರುದ್ರಮುನಿ ಶಿವಾಚಾರ್ಯರ ೪೬ ನೆಯ ಪುಣ್ಯಾರಾಧನೆಯ ನಿಮಿತ್ಯವಾಗಿ ಶ್ರೀ ಅಮೋಘಸಿದ್ದೇಶ್ವರ ಪುರಾಣ ಕಾರ್ಯಕ್ರಮ ಡಿ.೦೯-೨೦ರವೆರೆಗೆ ಪ್ರತಿದಿನ ರಾತ್ರಿ ೮ಗಂಟೆಗೆ ಯಂಕಂಚಿಯ ಕುಂಟೋಜಿ ಹಿರೇಮಠದಲ್ಲಿ ಜರುಗಲಿದೆ ಎಂದು ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.ಡಿ.೦೯ ರಂದು ಪುರಾಣ ಉದ್ಘಾಟನೆ ನಡೆಯಲಿದೆ. ಪ್ರವಚನಕಾರರಾಗಿ ಯಂಕಂಚಿಯ ಪಂಡಿತ ವೀರಭದ್ರಯ್ಯ ಶಾಸ್ತ್ರಿ ಆಗಮಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಮುದೋಳ (ಬಿ)ಯ ಗಂಜಿಗಟ್ಟಿ ಮಠದ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯರು, ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ರೋಡಗಿ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ತಾಳಿಕೋಟೆಯ ಸಿದ್ದಲಿಂಗದೇವರು, ಡೋಣಿ ಕಡಕೋಳ ಮಠದ ರಾಜಗುರು ಮಹಾಲಿಂದ ಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಸಮ್ಮುಖವನ್ನು ಕೋರವಾರ ಶ್ರೀಮಠದ ಮುರಘೇಂದ್ರ ಶ್ರೀಗಳು, ನಾಲತವಾಡದ ಗುರುಸ್ವಾಮಿಗಳು ರಾಮಗಿರಿ ಹಿರೇಮಠ, ಚಬನೂರದ ಜೋತಿಷ್ಯರತ್ನ ರಾಮಲಿಂಗ ಶ್ರೀಗಳು, ಖಾನಾಪೂರದ ಕಲ್ಯಾಣದಯ್ಯ ಶ್ರೀಗಳು, ಹೊನ್ನಳ್ಳಿ ವೀರಘಂಟೇಶ್ವರ ಮಠದ ಗುರಲಿಂಗಯ್ಯ ಶ್ರಿಗಳು, ಅಲ್ಲಾಪೂರ ಕಲ್ಯಾಣ ಮಠದ ಮಲ್ಲಯ್ಯ ಸ್ವಾಮಿಗಳು, ಯಂಕಂಚಿಯ ಹೌದಸಿದ್ದ ಒಡೆಯರು ವಹಿಸುವರು.…
ಇಂಡಿ: ತಾಲೂಕಿನ ಹಂಜಗಿ ಗ್ರಾಮದ ಸುಮಾರು ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸುಮಾರು ೬ ಕಿ.ಮಿ ಪಾದಯಾತ್ರೆ ಮೂಲಕ ಇಂಡಿ ಕರ್ನಾಟಕ ರಸ್ತೆ ಸಾರಿಗೆ ಘಟಕದ ಮುಂದೆ ಒಂದು ಗಂಟೆ ಕಾಲ ಮುಷ್ಕರ ಮಾಡಿ ಘಟಕ ವ್ಯವಸ್ಥಾಪಕ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಮಾತನಾಡಿ, ಹಂಜಗಿ,ನಿಂಬಾಳ, ಕೊಳುರಗಿ ಮಾರ್ಗದ ಬಸ್ ಸರಿಯಾಗಿ ಸಮಯಕ್ಕೆ ಬರುವದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಸ್ ಗಾಗಿ ಕಾಲಹರಣ ಮಾಡುವ ಪರಿಸ್ಥಿತಿ ಪ್ರತಿನಿತ್ಯ ಇದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಬಸ್ ಸರಿಯಾಗಿ ಓಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.ಎಮ್.ಕೆ.ಶೇಖ, ರಮೇಶ ರಾಠೋಡ, ಇಸ್ಮಾಯಿಲ್ ಕುಣಬಿ, ಮಾಳಪ್ಪ ಪೂಜಾರಿ, ಕಿಸೀಮ ವಾಲಿಕಾರ, ವಿನೋದ ಕಾಳೆ, ನಿಂಗಪ್ಪ ಹಿರೇಕುರಬರ ಮುಂತಾದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಶಾಸಕರ ಪ್ರಶ್ನೆ ಇಂಡಿ: ರಾಜ್ಯದ ೩೧ ಜಿಲ್ಲೆಗಳ ಪೈಕಿ ೨೯ ಜಿಲ್ಲೆಗಳಲ್ಲಿ ಜಿ.ಟಿ.ಸಿ.ಸಿ ಕೇಂದ್ರಗಳಿವೆ. ಆದರೆ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಇಲ್ಲ. ಹೀಗಾಗಿ ವಿಜಯಪುರ ಜಿಲ್ಲೆಯ ಜಿ.ಟಿ.ಸಿ.ಸಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ( ಗವರಮೆಂಟ್ ಕಮ್ಯುನಿಟಿ ಟೆಕ್ನಿಕಲ್ ಸೆಂಟರ್) ಇಂಡಿಯಲ್ಲಿ ಪ್ರಾರಂಭಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಪ್ರಶ್ನೆ ಕೇಳಿದರು.ಜಿ.ಟಿ.ಸಿ.ಸಿ ಕೇಂದ್ರ ಮಂಜೂರು ಮಾಡಲು ಅನುಸರಿಸಬೇಕಾದ ಮಾನದಂಡಗಳು ಇಂಡಿ ತಾಲೂಕಿನಲ್ಲಿವೆ.ಇಂಡಿ ತಾಲೂಕು ಕಂದಾಯ ಉಪವಿಭಾಗಾಧಿಕಾರಿ ಕೇಂದ್ರವಾಗಿದೆ. ಮತ್ತು ಇಂಡಿ ಪಟ್ಟಣದ ವಸಂತನಗರದಲ್ಲಿ ರಿ.ಸ.ನಂ ೭೩೮ ರಲ್ಲಿ ಯೋಜನೆಗೆ ಅವಶ್ಯವಿರುವ ೧೯ ಎಕರೆ ಜಮೀನು ಇದೆ. ಹಾಗೂ ಮೂಲಭೂತ ಸೌಕರ್ಯಗಳಿವೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆಯಲ್ಲಿ ಕೂಡ ತಿಳಿಸಲಾಗಿದೆ. ಸಂಬಂದಿತ ಕಡತ ಲಗತ್ತಿಸಿದೆ. ಅದಲ್ಲದೆ ಎ.ಐ.ಸಿ.ಟಿ.ಈ ಅಖಿಲ ಭಾರತ ತಾಂತ್ರಿಕ ಮಹಾವಿದ್ಯಾಲಯಗಳ ಒಕ್ಕೂಟದ ಮಾರ್ಗ ಸೂಚಿಯಂತೆ…
ದೇವರಹಿಪ್ಪರಗಿ: ಮಕ್ಕಳು ಸುಶಿಕ್ಷಿತ, ಸಂಸ್ಕಾರವಂತರಾಗಿ ರೂಪುಗೊಳ್ಳಲು ಮನೆಯ ಪರಿಸರ ಉತ್ತಮವಾಗಿರಬೇಕು ಎಂದು ಸದಯ್ಯನಮಠದ ವೀರಗಂಗಾಧರಶ್ರೀಗಳು ಹೇಳಿದರು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ೧೧ ನೇ ಕಾರ್ತಿಕೋತ್ಸವ ನಿಮಿತ್ಯ ಆರಂಭಗೊಂಡ ಗುಡ್ಡಾಪೂರ ದಾನಮ್ಮದೇವಿ ಪುರಾಣದಲ್ಲಿ ದಾನಮ್ಮ ಹಾಗೂ ಸೋಮೇಶ್ವರ ಮದುವೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಬದಲಾಗುತ್ತಿರುವ ಜಗತ್ತಿನಲ್ಲಿ ವೈಜ್ಞಾನಿಕ, ತಾಂತ್ರಿಕ ಅವಿಷ್ಕಾರಗಳು ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರಲ್ಲಿ ಪರಿಣಾಮ ಉಂಟು ಮಾಡುತ್ತಿವೆ. ಈ ನಿಟ್ಟಿನಲ್ಲಿ ನಾವು ಬೆಳೆದು ಬಂದ ಪ್ರಕೃತಿ, ಪರಿಸರವನ್ನು ಮರೆಯಬಾರದು. ಇಂದಿನ ಮೊಬೈಲ್ ಯುಗದಲ್ಲಿ ಪಾಲಕರು, ಶಿಕ್ಷಕರು ಮಕ್ಕಳಿಗೆ ಉತ್ತಮವಾದ ನೈಜ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಧಾರ್ಮಿಕ ರೀತಿ ನೀತಿಗಳನ್ನು ತಿಳಿಸಿಕೊಡುವುದು ಅಗತ್ಯವಾಗಿದೆ ಎಂದರು.ಜಡಿಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಪುರಾಣ ನೆರವೇರಿಸಿ, ಆಶೀರ್ವಚನ ನೀಡುತ್ತಾ, ಪಟ್ಟಣದ ಭಕ್ತರ ತನು, ಮನ, ಧನಗಳ ಮೂಲಕ ಕಳೆದ ೧೦ ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬಂದ ಕಾರ್ತಿಕೋತ್ಸವ ಹಾಗೂ ಪುರಾಣ ಕಾರ್ಯಕ್ರಮಗಳು ಮುಂದೆಯೂ ಹೀಗೆ ಸಾಗಲಿ. ಭಗವಂತ ಎಲ್ಲರಿಗೂ ಹೆಚ್ಚಿನ ಶಕ್ತಿ ನೀಡಲಿ ಎಂದರು.ಸಿ.ಕೆ.ಕುದರಿ, ಪ್ರಭುದೇವ ಹಿರೇಮಠ, ಸೋಮು ಹಿರೇಮಠ,…
Udayarashmi kannada daily newspaper
ಬೆಂಗಳೂರು: ರಾಜ್ಯಾದ್ಯಂತ ಜೆಡಿಎಸ್ ಪಕ್ಷ ನಡೆಸಿದ್ದ ಬರ ಅಧ್ಯಯನ ವರದಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿದ್ದಾರೆ.ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರದಿಂದ ಅನುದಾನ ಕೊಡಿಸಲು ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.ಈ ವೇಳೆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯಪಾಲರು, ನಿಮ್ಮ ಅಹವಾಲನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ರಾಜ್ಯ ಎದುರಿಸುತ್ತಿರುವ ತೀವ್ರ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರುವುದಾಗಿ ತಿಳಿಸಿದರು.ಮಾನ್ಸೂನ್ ವೈಫಲ್ಯದಿಂದ ರಾಜ್ಯದಲ್ಲಿ ಒಟ್ಟು 48.15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 46.09 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ರಾಜ್ಯ ಸರಕಾರವೇ ಅಂದಾಜು ಮಾಡಿರುವಂತೆ ರಾಜ್ಯದಲ್ಲಿ ಒಟ್ಟು 35.162.02 ಕೋಟಿ ರೂಪಾಯಿಯಷ್ಟು ಬೆಳೆ ಹಾನಿ ಆಗಿದ್ದು, ಎನ್ ಸಿಆರ್ ಎಫ್ ಮಾನದಂಡದ ಅಡಿಯಲ್ಲಿ ಕೇಂದ್ರ ಸರಕಾರದಿಂದ 18,171.44 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರಕಾರ…
ವಿದೇಶಗಳಿಗೆ ಮೋದಿ ನೆರವು | ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಅಸಡ್ಡೆ | ಸಿಎಂ ಸಿದ್ದರಾಮಯ್ಯ ಕಳವಳ ಬೆಂಗಳೂರು: ಕರ್ನಾಟಕ ತೀವ್ರ ಬರದಿಂದ ತತ್ತರಿಸುತ್ತಿದ್ದು ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮುಂದೆ ಹಲವು ಬಾರಿ ಅಲವತ್ತುಕೊಂಡರೂ ರಾಜ್ಯದ ರೈತರ ಸಂಕಷ್ಟದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ನೆರವಿಗೆ ಧಾವಿಸುವ ರೀತಿಯ ಕಾಳಜಿಯನ್ನು ಏಕೆ ತೋರಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.ಜ್ವಾಲಾಮುಖಿ ಸ್ಫೋಟದ ನಂತರ ಭಾರತ ಸರ್ಕಾರವು ಪಪುವಾ ನ್ಯೂಗಿನಿಯಾಕ್ಕೆ 1 ಮಿಲಿಯನ್ ಡಾಲರ್ ನೆರವು ಮತ್ತು ಕೀನ್ಯಾಕ್ಕೆ ಕೃಷಿಯನ್ನು ಮೇಲ್ದರ್ಜೆಗೆ ಏರಿಸಲು 250 ಮಿಲಿಯನ್ ಅಮೆರಿಕ ಡಾಲರ್ ನೆರವನ್ನು ಘೋಷಿಸಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೌನವಾಗಿರುವುದೇಕೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ನಾಗರಿಕರನ್ನು ಸಮಾನವಾಗಿ ಯಾಕೆ ಪರಿಗಣಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಇತರ ದೇಶಗಳಿಗೆ ಪ್ರಧಾನಿ ಮೋದಿ ಅವರು ನೆರವಿನ ಹಸ್ತವನ್ನು ವಿಸ್ತರಿಸುವುದಕ್ಕೆ ನಮಗೆ ಯಾವುದೇ ವಿರೋಧವಿಲ್ಲ. ಭಾರತದ…
ಮೌಲ್ವಿ ತನ್ವೀರ್ ಪೀರಾ ಅವರಿಗೆ ಐಸಿಸ್ ಜೊತೆ ಸಂಪರ್ಕ ಆರೋಪ | ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿ ವಿಜಯಪುರ: ನಗರದ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಅವರಿಗೆ ಐಸಿಸ್ ಉಗ್ರ ಸಂಘಟನೆಯೊದಿಗೆ ಸಂಪರ್ಕ ಇದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅದನ್ನು ಸಾಬೀತು ಮಾಡದಿದ್ದರೆ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಆಗ್ರಹಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲ ಸಮುದಾಯಗಳ ಮುಖ್ಯಮಂತ್ರಿ, ಹುಬ್ಬಳ್ಳಿಯಲ್ಲಿ ನಡೆದಿರುವ ಮೌಲ್ವಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಮೌಲ್ವಿ ತನ್ವೀರ್ ಪೀರಾ ಹಾಸ್ಮಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಒಬ್ಬ ಧರ್ಮ ಗುರು, ಮೌಲ್ವಿಗಳನ್ನು ಉಗ್ರ ಸಂಘಟನೆಯೊಂದಿಗೆ ಹೋಲಿಕೆ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಯತ್ನಾಳ ಅವರು ತಮ್ಮ ಬಳಿ ಯಾವುದಾದರೂ ದಾಖಲೆಗಳಿದ್ದರೆ, ಆರೋಪವನ್ನು ಸಾಬೀತು ಮಾಡಿದರೆ ನಾನು ದೇಶವನ್ನು ಬಿಡುತ್ತೇನೆ ಎಂದು ತನ್ವೀರ್ ಪೀರಾ ಹಾಸ್ಮಿ ಅವರು…
ವಿಜಯಪುರ: ರಾಜ್ಯದಲ್ಲಿ ಕೇವಲ ಮಳೆಯ ಬರ ಬಿದ್ದಿಲ್ಲ, ಅಭಿವೃದ್ಧಿಯ ಬರವೂ ಸಿದ್ದರಾಮಯ್ಯ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪೂರ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅನುದಾನಿತ ಈಗಾಗಲೇ ಕೆಲಸ ಮಾಡುತ್ತಿರುವ ಅನುದಾನಿತ ಪದವಿ ಪೂರ್ವ ಉಪನ್ಯಾಸಕರುಗಳು ಕಡ್ಡಾಯವಾಗಿ ೨೦ ಗಂಟೆಗಳ ಕಾರ್ಯಭಾರ ನಿರ್ವಹಿಸಬೇಕು. ಸಮೀಪದ ಇನ್ನೊಂದು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದ್ದಲ್ಲಿ ಅಲ್ಲಿ ಹೋಗಿ ಕಾರ್ಯ ನಿರ್ವಹಿಸಬೇಕು ಎಂಬ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿರುವುದು ತುಘಲಕ್ ಆಡಳಿತ ಮಾದರಿ ಆದೇಶ ಎಂದು ಕಿಡಿಕಾರಿದರು.ಉಪನ್ಯಾಸಕರು ತಾವು ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯಿಂದ ಮತ್ತೊಂದು ಶಿಕ್ಷಣ ಸಂಸ್ಥೆಗೆ ಹೋಗಿ ಕೆಲಸ ಮಾಡುವುದು ಅಸಾಧ್ಯವಾದ ಕೆಲಸ. ಸರ್ಕಾರ ಏಕಾಏಕಿ ಈ ರೀತಿಯ ಆದೇಶದಿಂದ ಮುಂದಿನ ತಿಂಗಳು ನಮ್ಮ ಸಂಬಳ ಬರುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿ ಉಪನ್ಯಾಸಕರು ಕಾರ್ಯನಿರ್ವಹಿಸಬೇಕಾಗಿ ಬಂದಿದೆ. ವರ್ಷದಲ್ಲಿ ೩ ಬಾರಿ ಪರೀಕ್ಷೆ ನಡೆಸಬೇಕು ಎಂದು ಆದೇಶ ಮಾಡಿದೆ. ಕರ್ನಾಟಕದಲ್ಲಿ ಪದವಿ ಪೂರ್ವ ಶಿಕ್ಷಣ…
