Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅಭಿಪ್ರಾಯಿಸಿದರು.ನಗರದ ಗೆಲಾಕ್ಸಿ ಹೊಟೇಲಿನಲ್ಲಿ ’ಬಿಜಾಪುರ ಬೆಸ್ಟೀ ಫ್ರೆಂಡ್ಸ್ ’ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ಕುಟುಂಬದಲ್ಲಿಯೂ ಹೆಣ್ಣುಮಗಳು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಹೀಗೆ ಎಲ್ಲ ರೀತಿಯ ರೂಪಗಳಲ್ಲಿ ತನ್ನ ಕುಟುಂಬವನ್ನು ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜೀವನವನ್ನು ಮುನ್ನಡೆಸುತ್ತಿದ್ದಾಳೆ. ಅವಳ ದುಡಿಮೆಗೆ, ಅವಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಶ್ಲಾಘಿಸಿದರು.ಶಿಕ್ಷಕಿ ಶ್ರೀಮತಿ ಸುಮಂಗಲಾ ಬಿರಾದಾರ (ಕೋಳೂರ) ಮಾತನಾಡಿ, ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು. ಸ್ವಾವಲಂಬಿ ಜೀವನ ನಡೆಸಲು ಶಕ್ತಳಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಹೇಳಿದರು.ಸೌಂದರ್ಯ ತಜ್ಞೆ ಶ್ರೀಮತಿ ರೇಖಾ…
ಉದಯರಶ್ಮಿ ದಿನಪತ್ರಿಕೆ ದಾವಣಗೆರೆ: ‘ಪದ್ಮಭೂಣ’ ಡಾ. ಪಂ. ಪುಟ್ಟರಾಜರ ಜೀವನ ಅದು ಸಂಗೀತದ ಶ್ರೀಗಂಧವಾಗಿತ್ತು. ಶ್ರೀಗಂಧವು ತೇಯಿದಾಗ ಹೇಗೆ ಪರಿಮಳ ಬೀರಿ ಪರಿಸರವನ್ನು ಆಹ್ಲಾದಕರವಾಗಿ ಮಾಡುತ್ತದೆಯೋ ಹಾಗೆ ಪುಟ್ಟರಾಜ ಗುರುವರ್ಯರು, ತಮ್ಮ ಜೀವನವನ್ನು ಸಂಗೀತಕ್ಕೆ ತೆಯಿದು, ಸಂಗೀತದ ಪರಿಮಳವನ್ನು ತಮ್ಮ ಶಿಷ್ಯ ಪ್ರಶಿಷ್ಯರಿಂದ ವಿಶ್ವದ ತುಂಬೆಲ್ಲಾ ಪಸರಿಸಿದರು. ಸಂಗೀತದ ಮೂಲಕ ಶಿವಯೋಗವನ್ನು ಸಾಧಿಸಿ ಶಿವಯೋಗಿಯನಿಸಿದರು. ಅವರ ಲಿಂಗ ಪೂಜೆ ಸಂಗೀತಯುಕ್ತವಾಗಿರುತಿತ್ತು. ಇಂತಹ ಪೂಜ್ಯರ ಪ್ರೀತಿಗೆ ಪಾತ್ರರಾದ ದಾವಣಗೆರೆ ಭಕ್ತರೇ ಧನ್ಯರು ಎಂದು ವೇ. ಚನ್ನವೀರ ಸ್ವಾಮಿ ಹಿರೇಮಠ, (ಕಡಣಿ) ಸಂಸ್ಥಾಪಕರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಗದಗ ಇವರು ಹೇಳಿದರು.ಅವರು ದಿನಾಂಕ, ೦೮ ರಂದು ಬಾನುವಾರ ಸಂಜೆ ೬ ಗಂಟೆಗೆ, ದಾವಣಗೆರೆ ನಗರದ ಶ್ರೀಗಂಧ ರೆಸಿಡೆನ್ಸಿಯ ‘ಗಿಹನ’ ಬ್ಯಾಂಕ್ವೆಟ್ ಹಾಲಿನಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಮತ್ತು ನಗರದ ಶ್ರೀಗಂಧ ರೆಸಿಡೆನ್ಸಿ, ಸಂಯುಕ್ತವಾಗಿ ಆಯೋಜಿಸಲಾಗಿದ್ದ ಪದ್ಮಭೂಷಣ ಡಾ. ಪಂ. ಪುಟ್ಟರಾಜರ ೧೧೨ನೆಯ ಜಯಂತಿ ಹಾಗೂ ಪುಟ್ಟರಾಜರ ಮಾಸದ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದಲ್ಲಿ ಬಣ್ಣದ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವಕ ಯುವತಿಯರು, ಚಿಣ್ಣರು ಬಣ್ಣದೋಕುಳಿಯಲ್ಲಿFCC ಮಿಂದೆದ್ದಿದ್ದರು. ಹೋಳಿಯಾಟದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸೌಂಡ್ಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ.ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬಣ್ಣಗಳ ಆಟ ಶುರುವಾಗಿ, ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.ಹೋಳಿ ಹುಣ್ಣಿಮೆಯ 5ನೇ ದಿನ ರವಿವಾರದಂದು ಪಟ್ಟಣದಲ್ಲಿ ಅಲ್ಲಲ್ಲಿ ರೇನ್ ಡ್ಯಾನ್ಸ್ ಹಾಗೂ ಡಿಜೆ ಸೌಂಡ್ ಎರ್ಪಡಿಸಿದ್ದರು. ಡಿಜೆ. ಸೌಂಡ್ಗೆ ಮಹಿಳೆಯರು, ಯುವತಿಯರು, ಯುವಕರು ಹೆಜ್ಜೆ ಹಾಕಿ, ನೃತ್ಯ ಮಾಡಿ ಬಣ್ಣದ ಹಬ್ಬದ ಉತ್ಸಾಹ ಹೆಚ್ಚಿಸಿದರು. ಪಟ್ಟಣದಾದ್ಯಂತ ಹೋಳಿ ಸಂಭ್ರಮ ಜೋರಾಗಿತ್ತು. ರಂಗಿನಾಟದಲ್ಲಿ ಮಿಂದೆದ್ದ ಯುವಕ ಯುವತಿಯರು, ಪರಸ್ಪರ ಬಣ್ಣ ಎರಚಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿದ ದೃಶ್ಯ ಪಟ್ಟಣದಾದ್ಯಂತ ಕಂಡು ಬಂದಿತು.ಬಣ್ಣದಾಟದ ದಿನ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಸಿ.ಪಿ.ಐ. ಪರಶುರಾಮ ಮನಗೂಳಿ ನೇತೃತ್ವದಲ್ಲಿ ಪೊಲೀಸ್…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹೆಣ್ಣು ಮಗಳು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಎಲ್ಲಾ ನಾನಾ ರೀತಿಯ ರೂಪಗಳಲ್ಲಿ ತನ್ನ ಕುಟುಂಬವನ್ನು ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜೀವನವನ್ನು ಮುನ್ನಡೆಸುತ್ತಿದ್ದಾಳೆ ಎಂದು ನಿವೃತ್ತ ಶಿಕ್ಷಕಿ ಶೇಕವ್ವ ಶಾವೀರ್ ಹೇಳಿದರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಡಪಟ್ಟಿ ಗ್ರಾಮದ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಲ ಕಡಪಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಭಾರತೀಯ ಅನೇಕ ಮಹಿಳೆಯರು ಇತಿಹಾಸವನ್ನು ನಿರ್ಮಿಸಿದ್ದಾರೆ ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರು ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ದೇಶದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ, ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಮಹಾದೇವಿ ವಚನಗಳು ಅಜರಾಮರವಾಗಿವೆ ಇವುಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ, ನಮ್ಮ ಜೀವನದಲ್ಲಿ ಯಾವ ರೀತಿಯಾಗಿರಬೇಕೆಂದು ವಚನಗಳು ನಮಗೆ ತಿಳಿಸಿಕೊಡುತ್ತವೆ,ಈ ಎಲ್ಲ ಮಹಿಳೆಯರೂ ನಮಗೆ ಸ್ಫೂರ್ತಿ ,ಎಲ್ಲ ಕ್ಷೇತ್ರದಲ್ಲಿ ಮಹಿಳೆ ಮುಂದೆ ಬರಬೇಕೆಂದು ಹೇಳಿದರು.ಶಿಕ್ಷಕರಾದ ಬಸವರಾಜ್…
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು.ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸಿಂಧು ಪೋತದಾರ ಪಾಲ್ಗೊಂಡು ಮಾತನಾಡಿದರು.ಮಹಿಳೆಯರು ಧೈರ್ಯದಿಂದ ಮುನ್ನಡೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಹೇಳಿದ ಅವರು, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸುವ ಈ ಪ್ರಯತ್ನವನ್ನು ಪ್ರಶಂಸಿಸಿದರು.ಕಾನೂನು ಶಾಲೆಯ ಪ್ರಾಚಾರ್ಯ ಡಾ. ರಘುವೀರ ಜಿ. ಕುಲಕರ್ಣಿ ಮಾತನಾಡಿ, ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮಾಡಿರುವ ಸೇವೆಗಳನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ಮಹಿಳಾ ಸಂಘದ ಸಂಯೋಜಕಿ ಸನಾ ಕೌಸರ್ ಮೊಗಲಾಯಿ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ-574198ದೂ: 9742884160 ಉದಯರಶ್ಮಿ ದಿನಪತ್ರಿಕೆ ‘ಸ್ತ್ರೀ’ ಎಂದರೆ ಅಷ್ಟೇ ಸಾಕೆ? ಆಕೆ ಮನೆಯ ಮಗಳಾಗಿ, ಒಡತಿಯಾಗಿ, ಗರತಿ. ತಾಯಾಗಿ, ತಂಗಿಯಾಗಿ, ಮಡದಿಯಾಗಿ, ಅಕ್ಕನಾಗಿ ಗಂಡು ಹೆಣ್ಣೆಂಬ ಬೇಧವಿಲ್ಲದೇ ಎಲ್ಲರನ್ನೂ ಸಲಹುತ್ತಾಳೆ. ಇಂತಹ ಶಕ್ತಿಯನ್ನು ಕೇವಲ ‘ಸ್ತ್ರೀ’ ಎಂದು ಕರೆದರಷ್ಟೇ ಸಾಲದು. ಒಂದು ಮನೆಯ ಮಗಳಾಗಿ ಹುಟ್ಟಿ, ಮತ್ತೊಂದು ಮನೆಯನ್ನು ಸೊಸೆಯಾಗಿ ಬೆಳಗುತ್ತಾಳೆ. ತನ್ನೊಡಲಲ್ಲಿ ಒಂದು ಹೊಸ ಜೀವಕ್ಕೆ ಉಸಿರು ನೀಡಿ ಜೀವವಾಗುವವಳು. ಬದುಕಿಡೀ ತನ್ನನು ತಾನು ಗಂಧದಂತೆ ತೇಯುವಳು, ದೀಪದಂತೆ ಉರಿಯುವಳು. ಅವಳು ಬರೀ ಹೆಣ್ಣಲ್ಲ, ಜಗತ್ತಿಗೆ ಕಣ್ಣು. ಅನುದಿನವೂ ಕುಟುಂಬಕ್ಕಾಗಿ ದುಡಿಯುವ ಅವಳಿಗಾಗಿ ವರ್ಷದ ಒಂದು ದಿನವನ್ನು ಮುಡಿಪಾಗಿಡಬೇಕು. ಮಾರ್ಚ್ 8ನ್ನು ಮಹಿಳಾ ದಿನಾಚರಣೆಯಾಗಿದ್ದು, ಅಂದು ಮಹಿಳೆಯರ ಸಾಧನೆಯನ್ನು ಗೌರವಿಸುವುದರೊಂದಿಗೆ ಲಿಂಗ ಸಮಾನತೆಯ ಜಾಗೃತಿ ಮೂಡಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರ ಸಾಧನೆಯನ್ನು ನೆನೆಯಲಾಗುತ್ತದೆ. 1908ರಲ್ಲಿ ಅಮೆರಿಕದ ನ್ಯೂಯಾರ್ಕಿನಲ್ಲಿ ಸಾವಿರಾರು ಮಹಿಳೆಯರು ಉತ್ತಮ ವೇತನ, ಕಡಿಮೆ ಕೆಲಸದ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕು ಯಾವಾಗಲೂ ನಾವು ಅಂದುಕೊಂಡಂತೆಯೇ ಸಾಗುವುದಿಲ್ಲ. ಅನ್ನೋದು ಹಲವಾರು ತಿರುವುಗಳನ್ನು ಕಂಡವರಿಗೆಲ್ಲ ಅರಿವಿಗೆ ಬಂದಿರುತ್ತದೆ. ಬದುಕಿನಲ್ಲಿ ನಾವು ನಿರೀಕ್ಷಿಸಿದಂತೆ ನಡೆಯುವುದು ತುಂಬಾ ಕಡಿಮೆ. ‘ಬದುಕು ಅನಿರೀಕ್ಷಿತಗಳ ಮೊತ್ತ.’ ಎಂಬ ಮಾತು ಅಕ್ಷರಶಃ ಸತ್ಯ. ಜೀವನವು ಅನಿರೀಕ್ಷಿತ. ಅದು ಹಠಾತ್ತನೇ ಮತ್ತು ಅನೌಪಚಾರಿಕವಾಗಿ ಕೊನೆಗೊಳ್ಳಬಹುದು ಎಂಬುದು ಈಗಾಗಲೇ ವಿಪುಲ ಉದಾಹರಣೆಗಳಿಂದ ಸಾಬೀತಾಗಿದೆ. ಅಂದರೆ ಇಲ್ಲಿ ನಾನು ಹೇಳ ಹೊರಟಿರುವುದು ಅನಿರೀಕ್ಷಿತ ಘಟನೆಗಳು ನಡೆದಾಗ ದುಃಖ ನಿರಾಶೆ ಭಯ ಉಂಟಾಗುವುದು ಸಹಜ. ಆದರೆ ಅವೇ ಭಾವನೆಗಳಲ್ಲಿ ಮುಳುಗಿಹೋಗುವಷ್ಟು ಸಮಯವಿಲ್ಲ. ಅಂದರೆ ಇದರರ್ಥ ಜೀವನವು ವೇಗವಾಗಿ ಚಲಿಸುತ್ತದೆ ಮತ್ತು ಅವಕಾಶಗಳು ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದನ್ನು ಅರಿವಿನಲ್ಲಿ ಇಟ್ಟುಕೊಳ್ಳಬೇಕು. ‘ನಿಮ್ಮ ಜೀವನದಲ್ಲಿ ನಿಮ್ಮ ಛಾಪು ಮೂಡಿಸಲು ನಿಮಗೆ ಕೇವಲ ಅಲ್ಪಾವಧಿ ಮಾತ್ರ ಇದೆ.’ ಈ ಹೇಳಿಕೆಯಲ್ಲಿ ಹಾಲಿವುಡ್ ಜಾರ್ಜ್ ಕ್ಲೋನಿ ಗಮನಾರ್ಹ ಪರಿಣಾಮ ಬೀರಲು ಇರುವ ಸೀಮಿತ ಸಮಯವನ್ನು ಒತ್ತಿ ಹೇಳಿದ್ದಾರೆ. ಒಂದು ಕಲೆ‘ಸಮುದ್ರ ಶಾಂತವಿದ್ದಾಗ ಯಾರೂ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ವಿಶ್ವ ಮಹಿಳಾ ದಿನದ ಬೆನ್ನಲ್ಲೇ ಮಾರ್ಚ್ ೯ರಿಂದ ಸಂಜೆ ೬ಕ್ಕೆ ತಾಯಿ- ಮಗಳ ಭಾವುಕ ಪಯಣದ ʻರಾಣಿʼ ಶುಭಾರಂಭಪ್ರತಿ ಮನೆಯನ್ನೂ ಅರಮನೆಯಂತೆ ಬೆಳಗುವ, ಕಿರೀಟವಿಲ್ಲದೆಯೇ ಸಂಸಾರವನ್ನು ಪ್ರೀತಿಯಿಂದ ಆಳುವ ರಾಣಿಯರಿಗೆ ಕಲರ್ಸ್ ಕನ್ನಡ ವಾಹಿನಿ ಈ ಬಾರಿ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ. ನವನವೀನ ಧಾರಾವಾಹಿಗಳು ಮತ್ತು ಅರ್ಥಪೂರ್ಣ ಅಭಿಯಾನಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಲರ್ಸ್ ಕನ್ನಡ, ಸದಾ ಸಮಾಜದ ನಾಡಿಮಿಡಿತಕ್ಕೆ ಹತ್ತಿರವಾದ ಕತೆಗಳನ್ನೇ ನೀಡುತ್ತಾ ಬಂದಿದೆ. ಈ ಬಾರಿಯ ವಿಶ್ವ ಮಹಿಳಾ ದಿನವನ್ನು ಪ್ರತಿ ಮಹಿಳೆಯೂ ರಾಣಿಯೇ ಎಂಬ ಪರಿಕಲ್ಪನೆಯಡಿ ಆಚರಿಸುತ್ತಿರುವ ವಾಹಿನಿಯು, ತನ್ನ ಜನಪ್ರಿಯ ಪಾತ್ರಗಳ ಮೂಲಕವೇ ಈ ಸಂದೇಶವನ್ನು ಸಾರುತ್ತಿದೆ.ಇದು ಕೇವಲ ಒಂದು ಕಥೆಯಲ್ಲ, ಕರುನಾಡಿನ ಮನೆಮನೆಯಲ್ಲಿರುವ ನೈಜ ರಾಣಿಯರಿಗೆ, ಅಂದರೆ ಸಂಸಾರವನ್ನು ಪ್ರೀತಿ ಮತ್ತು ತ್ಯಾಗದಿಂದ ಮುನ್ನಡೆಸುವ ಪ್ರತಿಯೊಬ್ಬ ಮಹಿಳೆಗೂ ವಾಹಿನಿ ಅರ್ಪಿಸುತ್ತಿರುವ ವಿಶೇಷ ಟ್ರಿಬ್ಯೂಟ್.ಭಾಗ್ಯಾಳ ಸ್ವಾಭಿಮಾನ, ಭಾರ್ಗವಿಯ ನ್ಯಾಯ, ಪವಿತ್ರಾಳ ಧೈರ್ಯ, ವಿದ್ಯಾಳ ಮುಗ್ಧತೆ ಹಾಗೂ ಚಂದನಾಳ ಸಹನೆ, ಪ್ರೇಮಕ್ಕೆ,…
ವಿಜಯಪುರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲೆ ಎನ್ನುವುದು ದೊಡ್ಡ ಶಕ್ತಿ. ವಸತಿ ನಿಲಯದ ಮುದ್ದು ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಸರ್ವಾಂಗೀಣವಾಗಿ ಬೆಳವಣಿಗೆಯಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಡಾ. ಬಿ.ಆರ್. ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಮಾ.೬ರ ಶುಕ್ರವಾರ ಸಂಜೆ ೫:೦೦ ಗಂಟೆಗೆ ಹಮ್ಮಿಕೊಂಡಿರುವ ಕಲಾ ತರಬೇತಿ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೃತ್ಯ ಕಲೆಯನ್ನು ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರಿಗೆ ಧನ್ಯದಗಳನ್ನು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆಯ ಬಿ.ಜೆ. ಇಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೬ ತಿಂಗಳವರೆಗೆ ಮಕ್ಕಳಿಗೆ ನೃತ್ಯ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ‘ಮಕ್ಕಳು ತಮಗೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ತಂದೆ-ತಾಯಿಯರ ಗುರು-ಹಿರಿಯರ ಪಾತ್ರ ಅತ್ಯಂತ ಮುಖ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಹೇಳಿದರು.ಸಮೀಪದ ಯರಗಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ದೀಪದಾನ, ಪ್ರತಿಭಾ ಪುರಸ್ಕಾರ ಹಾಗೂ ಮಾತೃ-ಪಿತೃ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.’ವಿದ್ಯಾರ್ಥಿಗಳು ಒಳ್ಳೆಯ ಮೌಲ್ಯ ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಗುಣಾತ್ಮಕ ಹಾಗೂ ಪರಿಣಾಮಕಾರಿ ಫಲಿತಾಂಶವನ್ನು ನೀಡುವುದರ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಹೆಸರು ತರಬೇಕು’ ಎಂದರು.ವೈ.ವೈ.ಕೊಕ್ಕನವರ, ಉತ್ತಮಕುಮಾರ ಮಗದುಮ್ ಮಾತನಾಡಿದರು. ಶ್ರೀಶೈಲ ಮಠಪತಿ ಸಾನಿಧ್ಯ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷೆ ಶಾಂತವ್ವ ಕಂಕಣವಾಡಿ, ಪ್ರಭಾರಿ ಮುಖ್ಯಶಿಕ್ಷಕ ಐ.ಡಿ.ನದಾಫ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಬೆಳ್ಳನ್ನವರ ಇತರರು ಇದ್ದರು.
