Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿನ ಹನುಮಾನ ದೇವಸ್ಥಾನದಿಂದ ಬಜಾರ ನ ಹನುಮಾನ ದೇವಸ್ಥಾನದವರೆಗೆ ಡಿ.೨೩ ರಂದು ಬೆಳಿಗ್ಗೆ ೧೦ಕ್ಕೆ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.ಶ್ರೀ ರಾಮನ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ ನ ವತಿಯಿಂದ ಹಮ್ಮಿಕೊಳ್ಳಲಾದ ಈ ಮೆರವಣಿಗೆಯಲ್ಲಿ ಸಮಸ್ತ ಹಿಂದೂ ಬಾಂಧವರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ವಿಜಯಪುರ: ಅಬಕಾರಿ ಖಾತೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಅವರು ಡಿ.೨೩ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಂದು ಮಧ್ಯಾಹ್ನ ೩ ಗಂಟೆಗೆ ವಿಜಯಪುರಕ್ಕೆ ಆಗಮಿಸಿ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಪ್ರಯುಕ್ತ ಜ್ಞಾನ ಯೋಗಾಶ್ರಮದಲ್ಲಿ ನಡೆಯುವ ಜಾನಪದ ಕಲೆ ಗೋಷ್ಠಿಯಲ್ಲಿ ಭಾಗವಹಿಸಿ ಸಂಜೆ ೭ ಗಂಟೆಗೆ ವಿಜಯಪುರದಿಂದ ಜಮಖಂಡಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦/೧೧ಕೆವಿ ತಿಕೋಟ,೧೧೦/೧೧ಕೆವಿ ಹೊನವಾಡ ಹಾಗೂ ೩೩/೧೧ಕೆವಿ ಬಿಜ್ಜರಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ೧೧ ಕೆವಿ ವಿದ್ಯುತ್ ಮಾರ್ಗಗಳಿಗೆ ಡಿ.೨೭ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨:೩೦ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರದಾದ್ಯಂತ ಮಿಂಚಿನ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ವಿಜಯಪುರ ನಗರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ, ಸ್ವಚ್ಛತೆ ಹಾಗೂ ವ್ಯವಸ್ಥೆ ಸುಧಾರಣೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಕಣಕಿ ಬಜಾರ್ ಪ್ರದೇಶದಿಂದ ಸಂಚಾರ ಆರಂಭಿಸಿದ ಜಿಲ್ಲಾಧಿಕಾರಿಗಳು, ಕಣಕಿ ಬಜಾರ್ ಪ್ರದೇಶಕ್ಕೆ ಭೇಟಿ ನೀಡಿ, ಕಸ-ಕಂಟಿಗಳನ್ನು ಬೆಳೆದಿರುವ ಕುರಿತು ಗಮನಿಸಿದ ಅವರು, ಕೂಡಲೇ ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಣಕಿ ಬಜಾರ್ ಪ್ರದೇಶಲ್ಲಿ ತಾತ್ಕಾಲಿಕವಾಗಿ ವಾಹನಗಳ ನಿಲುಗಡೆ ವ್ಯವಸ್ಥೆ ಕೈಗೊಳ್ಳಲು ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ನಿಲ್ದಾಣದ ಆವರಣ ಸೇರಿದಂತೆ ಒಳಭಾಗವನ್ನು ವೀಕ್ಷಣೆ ಮಾಡಿದ ಅವರು, ಫ್ಲಾಟಫಾರಂಗಳಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿವಿಧೆಡೆಯಿಂದ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಫ್ಲಾಟ್ಫಾರಂನಲ್ಲಿಯೇ ಕೂಡಲೇ ಪ್ರತ್ಯೇಕವಾಗಿ ಕುಡಿಯುವ ನೀರಿನ ವ್ಯವಸ್ಥೆ…
ಮುದ್ದೇಬಿಹಾಳ: ಪಟ್ಟಣದ ಬಜಾರ ಮುಖ್ಯ ರಸ್ತೆಯಲ್ಲಿರುವ ಡ್ರೈನೇಜ್ ಸಂತೆಯ ದಿನವಾದ ಗುರುವಾರ ಓವರ್ ಫ್ಲೋ ಆಗಿ ದಾರಿಯುದ್ದಕ್ಕೂ ಹರಿದು ಸಾಕಷ್ಟು ತಾಪತ್ರೆಯ ತಂದೊಡ್ಡಿ ಸಂತೆಗೆ ಬಂದ ಜನ ಮೂಗು ಮುಚ್ಚಿಕೊಂಡೇ ತಿರುಗಾಡುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.ಮದ್ಯಾಹ್ನ ೩ಗಂಟೆಗೆ ಈ ಸಮಸ್ಯೆ ತಲೆದೋರಿದ್ದು ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ಧರು ತುಳಿಕೊಂಡೇ ತಿರುಗಾಡುವ ಅನಿವಾರ್ಯತೆ ಎದುರಾಗಿತ್ತು.ಈ ವೇಳೆ ಪಟ್ಟಣದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ ಮಾತನಾಡಿ, ನಮಗೆ ಈ ಸಮಸ್ಯೆ ಹೊಸದೇನೂ ಅಲ್ಲ. ಮೇಲಿಂದ ಮೇಲೆ ಮರುಕಳಿಸುತ್ತಲೇ ಇರುತ್ತೆ. ಈ ಬಗ್ಗೆ ಎಷ್ಟು ದೂರಿದರೂ ಯಾವುದೇ ಕ್ರಮವಾಗುತ್ತಿಲ್ಲ. ಒಳಚರಂಡಿ ಇಲಾಖೆಯವರಿಗೆ ದೂರಿದರೆ ಪುರಸಭೆಯವರ ಮೇಲೆ ಹಾಕುತ್ತಾರೆ. ಪುರಸಭೆಯವರಿಗೆ ತಿಳಿಸಿದರೆ ಒಳಚರಂಡಿ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಹೀಗಾದರೆ ಇದಕ್ಕೆ ಶಾಶ್ವತ ಪರಿಹಾರ ಯಾವಾಗ ಎಂಬ ಬಗ್ಗೆ ದೊಡ್ಡ ಚಿಂತೆ ನಮಗೆ ಕಾಡುತ್ತಿದೆ. ಚೇಂಬರ್ ನಿಂದ ಕೊಳಕು ನೀರು ಹೊರಬರುತ್ತಿದ್ದಂತೆಯೇ ರಸ್ತೆಯುದ್ದಕ್ಕೂ ಹರಿಯುತ್ತದೆ. ಇದರಿಂದ ಗಬ್ಬು ವಾಸನೆ ಅಲ್ಲದೇ ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಇದಕ್ಕೊಂದು…
ಮುದ್ದೇಬಿಹಾಳ: ವಿಚ್ಛೇದನಕ್ಕಾಗಿ ಕೋರ್ಟ್ ನ ಮೊರೆ ಹೋದ ವ್ಯಕ್ತಿಯನ್ನ ಮುದ್ದತಿಗೆ ಬಂದಾಗ ಪತ್ನಿಯ ಮನೆಯವರು ನ್ಯಾಯಾಲಯದ ಮುಖ್ಯದ್ವಾರದ ಹತ್ತಿರವಿರುವ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ವರದಿಯಾಗಿದೆ.ತಾಲೂಕಿನ ರೂಡಗಿ ಗ್ರಾಮದ ಮಹೇಶ ನಂದಿಹಾಳ ಹಲ್ಲೆಗೊಳಗಾದ ವ್ಯಕ್ತಿ. ಇದೇ ತಾಲೂಕಿನ ಗೋನಾಳ ಗ್ರಾಮದ ಬಸಪ್ಪ ಬಿರಾದಾರ ಇವರ ಮಗಳಾದ ಈರಮ್ಮಳ ಜೊತೆ ಕಳೆದ ಎರಡು ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿತ್ತು. ಮದುವೆಯ ನಂತರ ಗಂಡ ಹೆಂಡಿರ ಸಂಬಂಧ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಪತ್ನಿಯ ಬಗ್ಗೆ ಅನೈತಿಕ ಸಂಬಂಧದ ಸಂಶಯ ಹೊಂದಿದ್ದ ಪತಿಗೆ ಮದುವೆಯ ೨ ತಿಂಗಳಿಗೆ ಆಕೆ ೭ ತಿಂಗಳ ಗರ್ಭಿಣಿ ಎಂದು ತಿಳಿದಿದ್ದು ಆಸ್ಪತ್ರೆಯಲ್ಲಿ. ಬಳಿಕ ತಾನು ಮೋಸ ಹೋಗಿದ್ದ ಬಗ್ಗೆ ತಿಳಿದು ಆಕೆಯನ್ನ ತವರು ಮನೆಗೆ ಕಳುಹಿಸಿದ್ದ.ನಂತರ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು ಆ ಮಗು ತನ್ನದಲ್ಲ ಎಂದು ಸಾಬೀತು ಮಾಡಲು ಡಿಎನ್ಎ ಪರೀಕ್ಷೆ ನಡೆಸುವಂತೆ ಪಟ್ಟು ಹಿಡಿದಿದ್ದ. ಮುದ್ದತಿಗೆ ಬಂದಾಗಲೊಮ್ಮೆ ಪತ್ನಿಯ ಮನೆಯವರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದು…
ದೇವರಹಿಪ್ಪರಗಿ: ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಪದವಿ ಹಂತದಲ್ಲಿಯೇ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಿಂದಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಆರ್.ಬಿ.ಜಹಾಗೀರದಾರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ, ಸಂಯಮ, ಸಂಸ್ಕೃತಿ ಮೈಗೂಡಿಸಿಕೊಂಡಿರಬೇಕು. ಗುರುಹಿರಿಯರಿಗೆ ಗೌರವ ಕೊಡುವಂತವರಾಗಿರಬೇಕು ಎಂದರು.ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ್ ಜಾದವ ಪ್ರಾಸ್ತಾವಿಕವಾಗಿ ಮಾತನಾಡಿದರು.ಐಕ್ಯೂಎಸಿ ಸಂಚಾಲಕ ಶಿವಪುತ್ರ ಜಾಲವಾದಿ ವಿವಿಧ ವಿಭಾಗಗಳು ಮತ್ತು ಸಮಿತಿಗಳ ಕಾರ್ಯ ಚಟುವಟಿಕೆಗಳ ಕುರಿತು, ಮುಖ್ಯ ಅಧಿಕ್ಷಕ ಜಗನ್ನಾಥ ಸಜ್ಜನ ಕಛೇರಿ ಮತ್ರು ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು, ಡಾ. ದ್ರಾಕ್ಷಾಯಣಮ್ಮ ಎನ್.ಸಿ, ಅಕ್ರಮ ಪಾಷಾ, ಸಿಬ್ಬಂದಿ ರಾಜೇಶ್ವರಿ ಸುಗಂಧಿ, ಶಾರದಾ ಸೋಮಾಪುರ,…
ಮೋರಟಗಿ: ಸಂಗೀತದಲ್ಲಿ ಸ್ವರ್ಗ ಅಡಗಿದೆ. ಸಂಗೀತ ಬಲ್ಲವನು ಮಾನಸಿಕವಾಗಿ ಎಂದಿಗೂ ಕುಗ್ಗುವುದಿಲ್ಲ. ಸಂಗೀತ ಕೇಳುವುದರಿಂದ ದಣಿವು ಮಾಯವಾಗುತ್ತದೆ ಎಂದು ಗಣಿತ ಭೋದಕ ಪರಶುರಾಮ ದೇಸುಣಗಿ ಹೇಳಿದರು.ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಸಂಗೀತ ಸೌರಭ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಯುವಕರು ಮೊಬೈಲ್ ಎಂಬ ಗಿಳಿಯ ಹಿಂದೆ ಬಿದ್ದು ಸುಂದರವಾದ ಬದುಕನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿಕೊಟ್ಟರೆ ಸಾಲದು ಮನೆಯಲ್ಲಿ ಅನಾವಶ್ಯಕ ಮೊಬೈಲ್ ಬಳಕೆ ಮಾಡಲು ಅನುಮತಿ ನೀಡಬಾರದು. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಪಾಲಕರು ಒಂದು ವೇಳೆ ಅನಕ್ಷರಸ್ತರಾಗಿದ್ದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಖಂಡಿತ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಶ್ರೀ ಭಾಗ್ಯವಂತಿ ಸಂಸ್ಕೃತಿಕ ನಾಟ್ಯ ಕಲಾ ತಂಡ ಮೋರಟಗಿ ಇವರಿಂದ ವಿವಿಧ ರೀತಿಯ ಸಂಗೀತ ಹಾಡುವ ಮೂಲಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹುಸೇನಭಾಷಾ ಬಾಗವಾನ, ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘದ ಮಾಲಿಕ…
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆರಾದ್ಯ ದೈವ ಶ್ರೀ ಸಂಗಮೇಶ್ವರರ ಕಾರ್ತಿಕೋತ್ಸವದ ನಿಮಿತ್ಯ ಅಂದಾಜು ೪೫ಕ್ಕೂ ಹೆಚ್ಚು ಪುರವಂತರು ಕೈಗೆ, ನಾಲಿಗೆಗೆ, ಸೊಂಟಕ್ಕೆ ಶಸ್ತ್ರ ಹಾಕಿಕೊಂಡು ಪ್ರದರ್ಶನವನ್ನು ನೀಡಿದರು. ಪುರವಂತರಾದ ವೇದ ಮೂರ್ತಿ ಈರಣ್ಣ ಬಡಿಗೇರ, ದೇವಣ್ಣ ಪತ್ತಾರ(ಬಾವೂರ), ಸಂಗಣ್ಣ ಪತ್ತಾರ( ಧನ್ನೂರ), ಕಲ್ಲಯ್ಯ ಆಲೂರ, ರಂಗನಾಥ ಬಡಿಗೇರ, ಅನೀಲ ಪತ್ತಾರ, ನಾರಾಯಣ ಬಡಿಗೇರ, ಮೌನೇಶ ಬಡಿಗೇರ, ಈರಣ್ಣ ಮುದ್ದೇಬಿಹಾಳ, ಪ್ರಹ್ಲಾದ ಬಡಿಗೇರ, ಪ್ರಭು ಯರಗಲ್ಲ, ಪತ್ರಕರ್ತ ಹಾಗೂ ಪುರವಂತ ಬಸವರಾಜ ಈ ಕುಂಬಾರ(ಚವನಭಾವಿ), ಲಕ್ಷ್ಮಣ್ಣ ಕರಭಂಟನಾಳ, ಬಸಯ್ಯ ದಿಂಡವಾರ ಸೇರಿದಂತೆ ಮತ್ತೀತರರು ಇದ್ದರು.
ಬಸವನಬಾಗೇವಾಡಿ: ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ಮರಗಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಶುಕ್ರವಾರ ನೆರವೇರಿತು. ಇಂಗಳೇಶ್ವರ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮರಗಮ್ಮದೇವಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ನೂತನ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಳ್ಳಾಳ ಗ್ರಾಮ ಸಣ್ಣ ಗ್ರಾಮವಾದರೂ ಎಲ್ಲರೂ ಒಂದಾಗಿ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇದು ಜನರ ಭಕ್ತಿಯ ಪ್ರತೀಕವಾಗಿದೆ. ಸರ್ಕಾರದ ನೆರವು ಪಡೆದುಕೊಂಡಿದ್ದರೂ ಎಲ್ಲರೂ ಕೂಡಿಕೊಂಡು ಅಚ್ಚುಕಟ್ಟಾಗಿ ಈ ಕಾರ್ಯ ಮಾಡಿರುವುದು ಮೆಚ್ಚುವಂತಹದ್ದು. ಆಧ್ಯಾತ್ಮದಿಂದ ನಾವೆಲ್ಲರೂ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಪಾಟೀಲ ಮಾತನಾಡಿದರು.ಕಾರ್ಯಕ್ರಮದಲ್ಲಿ ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗೌಡ ಬಿರಾದಾರ, ಮುಖಂಡರಾದ ರಾಹುಲ ಕುಬಕಡ್ಡಿ, ರವಿ ಭಾವಿಕಟ್ಟಿ, ಸುರೇಶ ಹಾರಿವಾಳ, ಸಿದ್ದನಗೌಡ ಪಾಟೀಲ, ರಾಮನಗೌಡ ಪಾಟೀಲ, ವಸಂತ ಹಂಡಿ,ನಾಗಪ್ಪ ಕುಂಬಾರ, ಗ್ರಾಪಂ ಸದಸ್ಯರಾದ ರವಿ…
