Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ದುಂದು ವೆಚ್ಚ ಮಾಡದೇ ಪೂಜ್ಯರ, ಗಣ್ಯರ ಸಮ್ಮುಖ ನಡೆಯುವ ಮದುವೆ ಭಾಗ್ಯವಂತರ ಮದುವೆ ಎಂದು ನಾಗಣಸೂರದ ಶ್ರೀಕಂಠ ಶಿವಾಚಾರ್ಯರು ಹೇಳಿದರು.ಸೋಮವಾರ ಪಟ್ಟಣದ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ದೇವಸ್ಥಾನ ಟ್ರಸ್ ಕಮೀಟಿ ಹಾಗೂ ಶ್ರೀ ಶಾಮಥೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ, ಬಡವರ ಹಿತ ಬಯಸುವವರು ಪರಮಾತ್ಮನ ಸ್ವರೂಪಿಗಳು. ಅವರು ಸಮಾಜದ ಮಕ್ಕಳು. ಅವರು ಮಾಡುವ ಸಾಮೂಹಿಕ ಮದುವೆ ನಮ್ಮ ಧರ್ಮ, ಸಂಸ್ಕಾರ, ನೀತಿ ಬೋಧಿಸುತ್ತದೆ ಎಂದರು.ಜೈನಾಪುರದ ರೇಣುಕಾಶಿವಾಚಾರ್ಯರರು ಮಾತನಾಡಿ, ಮದುವೆ ಭಾರತೀಯ ಸಂಸ್ಕೃತಿಯಲ್ಲಿ ಶತ ಶತಮಾನದಿಂದ ಬಂದಿದ್ದು ಇತ್ತಿತ್ತಲಾಗಿ ಜನರು ಮದುವೆ ದುಂದು ವೆಚ್ಚದಿಂದ ಮಾಡುತ್ತಿದ್ದು ಸಂಸಾರಗಳಿಗೆ ಮಾರಕವಾಗುತ್ತಿದೆ ಎಂದರು.ಪ್ರವಚನಕಾರ ಗೌಡಗಾಂವದ ಶಾಂತವೀರ ಶಿವಾಚಾಯ್ರರು, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಗೋರನಾಳದ ವೀರಪಾಕ್ಷ ದೇವರು, ಸಿದ್ದು ಲಾಳಸಂಗಿ ಮಾತನಾಡಿದರು.ಈ ಬಾರಿಯ ಸಾಮೂಹಿಕ ವಿವಾಹದ…
ಇಂಡಿ: ತಾಲ್ಲೂಕಿನ ಬೋಳೇಗಾಂವ ಗ್ರಾಮದ ಬೀದಿ ನಾಟಕಗಳ ಭೀಷ್ಮ ಸೋಮಶೇಖರ ಚಾಂದಕವಠೆ ಭಾನುವಾರ ಸಾಯಂಕಾಲ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆ ಸೋಮವಾರರಂದು ಬೆಳಿಗ್ಗೆ ೧೧ ಗಂಟೆಗೆ ಅವರ ಸ್ವಗ್ರಾಮದ ತೋಟದಲ್ಲಿ ನೆರವೇರಿತು.ಸೋಮಶೇಖರ ಚಾಂದಕವಠೆ ೩ ವರ್ಷದವರಿದ್ದಾಗ ಬಣ್ಣ ಹಚ್ಚಿ ತಮ್ಮ ೭೮ ನೇ ವಯಸ್ಸಿನವರೆಗೆ ಸುಮಾರು ೨೫೦ ಬೀದಿ ನಾಟಕಗಳನ್ನು ಆಡಿದ್ದಲ್ಲದೇ ಚಲನಚಿತ್ರ, ದಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಮಾಜದ ಒಳಿತಿಗಾಗಿ ವರದಕ್ಷಿಣೆ ವಿರುದ್ದ, ಜಾತಿ ವಿರುದ್ದ, ಬಾಲ್ಯ ವಿವಾಹ, ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವದಕ್ಕಾಗಿ ಜನ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಇಲ್ಲಿಯವರೆಗೆ ಜಿಲ್ಲಾ ಪ್ರಶಸ್ತಿ, ತಾಲ್ಲೂಕು ಪ್ರಶಸ್ತಿ ಬಿಟ್ಟರೆ ಇನ್ನಾವುದೇ ಪ್ರಶಸ್ತಿಗಳು ಸಿಕ್ಕಿಲ್ಲ. ಎಲೆಮರೆಯ ಕಾಯಿಯಂತೆ ತಮ್ಮ ಜೀವನ ಸಮಾಜಕ್ಕಾಗಿ ಸವೆಸಿರುವದು ಶ್ಲಾಘನೀಯ ಸಂಗತಿ.ಸೋಮಶೇಖರ ಚಾಂದಕವಠೆ ಅವರ ಜೀವನದ ಬಗ್ಗೆ ಸಾಹಿತಿ ಸಿ.ಎಂ. ಬಂಡಗರ ಅವರು ಒಂದು ಪುಸ್ತಕ ಹೊರತಂದಿದ್ದು, ಕಳೆದ ೨ ವರ್ಷಗಳ ಹಿಂದೆ ಬಿಡುಗಡೆಯಾಗಿದೆ.…
ಬಸವನಬಾಗೇವಾಡಿ: ನಮ್ಮ ಅನ್ನದಾತರಿಗೆ ನೋವಾಗುವಂತಹ ಅಥವಾ ಅವರನ್ನು ಅಪಮಾನಿಸುವಂತಹ ಮಾತುಗಳನ್ನು ಜವಳಿ, ಕಬ್ಬು ಅಭಿವೃದ್ದಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಬಾಯಿತಪ್ಪಿಯೂ ಆಡುವುದಿಲ್ಲ. ಅವರು ರೈತರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಅವರು ಸೋಮವಾರ ದೂರವಾಣಿಯ ಮೂಲಕ ಸುದ್ದಿಗಾರರರೊಂದಿಗೆ ಮಾತನಾಡಿ, ಸಚಿವರು ಮಾತಾಡಿದ ಒಟ್ಟು ಭಾಷಣವನ್ನು ಒಮ್ಮೆ ಸರಿಯಾಗಿ ಕೇಳಿಸಿಕೊಂಡರೆ ಎಂಥವರಿಗೂ ಅದು ಅರ್ಥವಾಗುತ್ತದೆ. ಆದರೆ ವಿರೋಧ ಪಕ್ಷ ಬಿಜೆಪಿ ವಿರೋಧಿಸಲೇಬೇಕೆಂದು ಕೆಲವು ಮಾತುಗಳನ್ನಷ್ಟೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ. ಇವತ್ತು ರಾಜ್ಯದ ಬಹುತೇಕ ವಾಣಿಜ್ಯ ಬೆಳೆಗಳ ಬೆಲೆಗಳನ್ನು ಕಡಿತ ಗೊಳಿಸಲಾಗಿದೆ. ರೈತರಿಗೆ ನ್ಯಾಯವಾಗಿ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ತಮ್ಮಮೊಂಡಾಟ ಬಿಡುತ್ತಿಲ್ಲ. ಇದು ಲೋಕಸಭಾ ಚುನಾವಣೆಗಾಗಿ ಗ್ರಾಹಕರ ಕಣ್ಣೊರಿಸಿ ಅನ್ನದಾತರ ಹೊಟ್ಟೆ ಮೇಲೆ ಕಾಲಿಡುವ ತಂತ್ರ ಅಷ್ಟೇ…
ಬಸವನಬಾಗೇವಾಡಿ: ಪಟ್ಟಣದ ತಾಳಿಕೋಟಿ ರಸ್ತೆ ಮಿನಿ ವಿಧಾನಸೌಧ ಎದುರುಗಡೆ ಇರುವ ಗುರಸಂಗಪ್ಪ ಕೋಣಿನ ಅವರ ತೋಟದಲ್ಲಿರುವ ಶಿವಯೋಗೇಶ್ವರ ದೇವಸ್ಥಾನದ ಶಿವಯೋಗೇಶ್ವರ ಜಾತ್ರೆಯು ಸೋಮವಾರ ಸಡಗರ,ಸಂಭ್ರಮದಿಂದ ಜರುಗಿತು.ಬೆಳಗ್ಗೆ ಅಗ್ಗಿಪುಟು ಕಾರ್ಯಕ್ರಮ ಜರುಗಿತು. ನಂತರ ಎತ್ತಿನ ಬಂಡಿಯಲ್ಲಿ ಶಿವಪ್ಪ ಮುತ್ಯಾರವರ ಭಾವಚಿತ್ರ ಮೆರವಣಿಗೆ ಸಕಲ ವಾದ್ಯವೈಭವದೊಂದಿಗೆ ಬಸವ ತೀರ್ಥದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ಗಂಗಾಸ್ಥಳ ಮುಗಿಸಿ ಪುರವಂತರ ಸೇವೆಯೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವಾದ್ಯಮೇಳದೊಂದಿಗೆ, ಸುಮಂಗಲೆಯರ ಕುಂಭ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರಸಂಗಪ್ಪ ಕೋಣಿನ ಅವರ ತೋಟಕ್ಕೆ ಪಲ್ಲಕ್ಕಿ ಉತ್ಸವ ಮರಳಿತು.ಕತೃಗದ್ದುಗೆಗೆ ಕುಂಭಾಭಿಷೇಕ,ಮಹಾಪೂಜೆ ನೆರವೇರಿದ ನಂತರ ಶಿವಯೋಗೇಶ್ವರ ದೇವಸ್ಥಾನದ ಮುಂಭಾಗ ಭಕ್ತರು ಪಲ್ಲಕ್ಕಿಯೊಂದಿಗೆ ಅಗ್ಗಿ ಹಾಯ್ದರು. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶಿವಯೋಗೇಶ್ವರ ದೇವಸ್ಥಾನದಲ್ಲಿ ಪೂಜೆ, ಇತರೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುತ್ಯಾರವರ ದರ್ಶನ ಪಡೆದು ಕೃತಾರ್ಥರಾದರು.ರಾತ್ರಿ ನಿಡೋಣಿಯ ಬೀರಲಿಂಗೇಶ್ವರ ಡೊಳ್ಳಿನ ಹಾಡಕಿ ಸಂಘ ಹಾಗೂ ನಾಗೂರಿನ ಅಮೋಘಸಿದ್ದೇಶ್ವರ ಡೊಳ್ಳಿನ ಹಾಡಕಿ ಸಂಘದಿಂದ…
ಮುದ್ದೇಬಿಹಾಳದಲ್ಲಿ ಆಮ್ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿಕೆ ಮುದ್ದೇಬಿಹಾಳ: ದೆಹಲಿಯಲ್ಲಿ ಆಪ್ ಜಾರಿಗೊಳಿಸಲಾದ ಉಚಿತ ಯೋಜನೆಗಳನ್ನು ಕದ್ದು ಕಾಂಗ್ರೇಸ್ ಸರ್ಕಾರ ಇಲ್ಲಿ ಜಾರಿಗೊಳಿಸಿದೆ ಎಂದು ಹಿರಿಯ ನಟ, ಆಮ್ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.ಪಟ್ಟಣದ ೧೮ನೇ ವಾರ್ಡಿನ ಉಪಚುನಾವಣೆ ಹಿನ್ನೆಲೆ ಪ್ರಚಾರಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರು ಉಚಿತ ಯೋಜನೆಗಳನ್ನು ಜಾರಿ ಮಾಡಿದ್ದು ಚುನಾವಣೆಗೋಸ್ಕರ. ಈ ಹಿಂದೆ ಇವರ ಸರ್ಕಾರ ಆಡಳಿತದಲ್ಲಿದ್ದಾಗ ಸಿದ್ಧರಾಮಯ್ಯನವರೇ ಸಿಎಂ ಆಗಿದ್ರು. ಆಗ ಈ ಸಮಸ್ಯೆಗಳು ಇವರ ಗಮನಕ್ಕಿರಲಿಲ್ಲವೇ. ಇದೆಲ್ಲ ನಮ್ಮಿಂದ ಕದ್ದಿದ್ದಾರೆ.ಸಧ್ಯ ಕುಟುಂಬ ರಾಜಕಾರಣ, ಜಾತಿ, ಕೋಮುವಾದ ಹೆಚ್ಚಾಗಿರುವದರಿಂದ ಆಪ್ ಜನಸಾಮಾನ್ಯರನ್ನು ಕಣಕ್ಕಿಳಿಸುತ್ತಿದೆ. ಚುನಾವಣೆ ನಡೆಸಲು ಸಿಕ್ಕಾಪಟ್ಟೆ ಹಣ ಖರ್ಚು ಮಾಡುವ ಪಕ್ಷ ನಮ್ಮದಲ್ಲ. ಸಧ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಇಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.ಬಳಿಕ ಪಕ್ಷದ ಅಭ್ಯರ್ಥಿ ನ್ಯಾಯವಾದಿ ನೂರಅಹ್ಮದ ಶಿವಣಗಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಉಪಾಧ್ಯಕ್ಷರಾದ ವಿಜಯ್ ಶರ್ಮಾ, ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರು…
ಸಿಂದಗಿಯ ಭೀಮಾ ಸೆಂಟ್ರಲ್ ಯುನಿವರ್ಸಲ್ ಶಾಲೆಯಲ್ಲಿ ಕ್ರೀಡಾ ಮಹೋತ್ಸವಕ್ಕೆ ಚಾಲನೆ ಸಿಂದಗಿ: ಸದೃಢ ದೇಹದಲ್ಲಿ ಸದೃಢ ಮನಸ್ಸಿದೆ. ಮಕ್ಕಳು ಆಟವಾಡುವುದರ ಮೂಲಕ ದೈಹಿಕವಾಗಿ ಬಲಿಷ್ಟರಾಗುತ್ತಾರೆ. ಮತ್ತು ಯಾವುದೇ ಅನಾರೋಗ್ಯಕ್ಕೆ ಒಳಗಾಗದೇ ಮಾನಸಿಕ ವಿಕಾಸಕ್ಕೆ ಪ್ರೇರೆಪಿಸುತ್ತದೆ ಎಂದು ದೈಹಿಕ ಶಿಕ್ಷಕ ಸಂಗಮೇಶ ಮಲ್ಲೇದ ಹೇಳಿದರು.ಪಟ್ಟಣದ ಹೊರವಲಯದ ಭೀಮಾ ಸೇಂಟ್ರಲ್ ಯುನಿವರ್ಸಲ್ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮೂಹ ಆಟಗಳಾದ ಖೋಖೋ, ವಾಲಿಬಾಲ್, ಥೋಬಾಲ್, ಫುಟ್ಬಾಲ್, ಹ್ಯಾಂಡ್ಬಾಲ್ ಆಡುವುದರ ಮೂಲಕ ಮಕ್ಕಳಲ್ಲಿ ಒಗ್ಗಟ್ಟಿನ ಮನೋಭಾವದ ಜೊತೆಗೆ ದೈಹಿಕವಾಗಿ ಸಧೃಡರಾಗುತ್ತಾರೆ ಎಂದರು.ಈ ವೇಳೆ ಶಾಲೆಯ ಪ್ರಾಂಶುಪಾಲೆ ಹೀಮಾಬಿಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಡಾ.ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ್ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.
ಸಿಂದಗಿ: ತಾಲೂಕಿನ ಬೋರಗಿಯ ನಬಿರೋಶನ, ಪ್ರಕಾಶನ ವತಿಯಿಂದ ಬೆಂಗಳೂರಿನ ಕೋರಮಂಗಲ ಭವನದಲ್ಲಿ ಆರಕ್ಷಕ ಮೌಲಾಲಿ ಕೆ. ಆಲಗೂರ ಇವರ ’ನಲುಗದಿರಲಿ ಪರಿಸರ’ ಕೃತಿ ಬಿಡುಗಡೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.ಪಟ್ಟಣದ ಪ್ರವಚನಗಾರ್ತಿ, ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಇವರಿಗೆ ’ಕರುನಾಡ ಶ್ರೇಷ್ಠ ವಾಗ್ಮಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯ ಮೇಲೆ ಡಿವೈಎಸ್ಪಿ ವಿನೋದ ಕುಮಾರ, ಇನ್ಸ್ಪೆಕ್ಟರುಗಳಾದ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಎಂ.ರಮೇಶ, ಪಿಎಸ್ಐ ಟಿಪ್ಪು ನಾಯಕವಾಡಿ, ಸಾಹಿತಿ ಡಾ.ಸಮೀರ ಹಾದಿಮನಿ, ಡಾ.ರಾಜು ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿಂದಗಿ: ಸಂತೋಷದ ಸಮಯವಾಗಲಿ ಅಥವಾ ಕಷ್ಟದ ಸಮಯವಾಗಲಿ, ಒಂಟಿತನದ ಇದ್ದಾಗಲಿ ಅಥವಾ ಸ್ನೇಹಿತರೊಂದಿಗೆ ಆನಂದಿಸುವ ಸಮಯವಾಗಲಿ, ಪ್ರಯಾಣಿಸುವಾಗ ಅಥವಾ ಮನೆಯಲ್ಲಿ ಕೆಲಸ ಮಾಡುವಾಗ, ಸಂಗೀತವು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗುರುರಾಜ ನಡುವಿನಕೇರಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಅಮೋಘಸಿದ್ದೇಶ್ವರ ಸಾಂಸ್ಕೃತಿಕ ಕಲಾ ತಂಡದಿಂದ ಹಮ್ಮಿಕೊಂಡ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಗೀತ ನಮ್ಮ ಮನಸ್ಸು ಕದಡಿದಾಗ ಶಾಂತಗೊಳಿಸಲು ಅಥವಾ ಕೆಲವೊಮ್ಮೆ ಸಂತೋಷವನ್ನು ಯಾವುದೇ ಕಟ್ಟುಪಾಡಿಲ್ಲದೇ ಅನುಭವಿಸಲು ಸಾಧ್ಯ. ಯುವಕರು ಮೊಬೈಲ್ ಗೀಳಿನ ಹಿಂದೆ ಬಿದ್ದು ಸುಂದರ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಈ ವೇಳೆ ವಿವಿಧ ಕಲಾವಿದರು ಹಾಡುಗಳ ಮೂಲಕ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಪರಶುರಾಮ ದೇಸುಣಗಿ, ಮಂಜುನಾಥ ಕೆಂಭಾವಿ. ರಮೇಶ ನಾಟಿಕಾರ, ಕಲಾವಿದರಾದ ರವಿ ವಿಭೂತಿ. ಭೀಮು ಕಟ್ಟಿಮನಿ. ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.
ಸಿಂದಗಿ: ಮೈಸೂರಿನಲ್ಲಿ ನಡೆದ “ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್”(ಐಸಿಎಸ್ಇ) ವತಿಯಿಂದ “ನ್ಯಾಷನಲ್ ಕರಾಟೆ ಚಾಂಪಿಯನಶಿಪ್ನಲ್ಲಿ ಪಟ್ಟಣದ ಹೊರವಲಯದ ಮಾತಾಲಕ್ಷ್ಮೀ ಪಬ್ಲಿಕ್ ಶಾಲೆ ೯ನೇ ತರಗತಿ ವಿದ್ಯಾರ್ಥಿ ಅದಿಶ. ಆರ್.ಹೊಸಮನಿ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ಪ್ರಸನ್ನ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ ಆಯ್ ಎಸ್ ಟಕ್ಕೆ ಅಭಿನಂದಿಸಿದ್ದಾರೆ.
ಸಿಂದಗಿ: ಮೈಸೂರಿನಲ್ಲಿ ನಡೆದ “ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್” (ಐಸಿಎಸ್ಇ) ವತಿಯಿಂದ “ನ್ಯಾಷನಲ್ ಕರಾಟೆ ಚಾಂಪಿಯನಶಿಪ್ನಲ್ಲಿ ಪಟ್ಟಣದ ಹೊರವಲಯದ ಕಾವ್ಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಆಸ್ಮಾ ಬಾಬು ಮುಗುಳಿ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.ವಿದ್ಯಾರ್ಥಿನಿಯ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ ಆಯ್.ಎಸ್.ಟಕ್ಕೆ, ಸಂಸ್ಥೆಯ ಅಧ್ಯಕ್ಷೆ ಕಾಂಚನಾ ನಾಗರಬೆಟ್ಟ, ಕಾರ್ಯದರ್ಶಿ ಚಂದ್ರಶೇಖರ ನಾಗರಬೆಟ್ಟ, ಮುಖ್ಯೋಪಾಧ್ಯಾಯ ರಾಜಕುಮಾರ ಕಾಂಬಳೆ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
