ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಸಾಹಿತಿ ಭೀಮರಾಯ ಹೂಗಾರ ಅವರು ರಚಿಸಿರುವ ಸಾಹಿತ್ಯ ಸಮ್ಮೇಳನ ಹೇಗಿರಬೇಕು, ಲಕ್ಷ ನುಡಿಮುತ್ತುಗಳು ಎಂಬ ಪುಸ್ತಕಗಳು ಮಾ.೨೩ ಮತ್ತು ೨೪ ರಂದು ವಿಜಯಪುರದಲ್ಲಿ ನಡೆಯಲಿರುವ ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿವೆ. ಕಳೆದ ೨೫ ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಭೀಮರಾಯ ಹೂಗಾರ ಅವರು ೪೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಒಂದು ಲಕ್ಷ ನುಡಿಮುತ್ತುಗಳನ್ನು ಒಳಗೊಂಡ ಪುಸ್ತಕವನ್ನು ಸಾವಿರಾರು ಜನರಿಗೆ ಭೀಮರಾಯ ಹೂಗಾರ ಅವರು ಅಂಚೆಮೂಲಕ ಕಳುಹಿಸಿಕೊಟ್ಟಿದ್ದಾರೆ.
ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಸಾಹಿತ್ಯ ಸಮ್ಮೇಳನ ಹೇಗಿರಬೇಕು ಎಂಬ ವಿನೂತನ ಪುಸ್ತಕ ಬಿಡುಗಡೆ ಮಾಡಲು ಕಸಾಪ ತಾಲೂಕಾಧ್ಯಕ್ಷ, ಜಿಲ್ಲಾ ಕಸಾಪ ಅಧ್ಯಕ್ಷರು ಅವಕಾಶ ನೀಡುತ್ತಿರುವುದು ಸಂತಸ ತಂದಿದೆ ಎಂದು ಸಾಹಿತಿ ಭೀಮರಾಯ ಹೂಗಾರ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

