Author: editor.udayarashmi@gmail.com

ಆಲಮೇಲ: ತಾಲೂಕಿನ ಸುಕ್ಷೇತ್ರ ಮಂಗಳೂರು ಭೀಮಾಶಂಕರ ಮಹಾರಾಜರ ರಥೋತ್ಸವವು ಭಕ್ತರ ಜಯಘೋಷಗಳ ಮಧ್ಯ ಅದ್ದೂರಿಯಾಗಿ ಜರುಗಿತು.ಅಂದು ಬೆಳಗಿನ ಜಾವ ಕತೃ ಗದ್ದುಗೆಗೆ ಮಹಾರುದ್ದಾಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ ಜರುಗಿತು.ಗ್ರಾಮದೆಲ್ಲೆಡೆ ಪಲ್ಲಕ್ಕಿ ಮೆರವಣಿಗೆ, ಕುಂಭ ಕಳಸ ಮೆರವಣಿಗೆ ಮಹಾಪ್ರಸಾದ ವಿತರಣೆ ನಡೆಯಿತು.ಪಟಾಕಿ,ಬ್ಯಾಂಜೋ, ಚಿಟ್ಟಹಲಿಗೆ ಮೇಳ, ಪುರವಂತರ ಸೇವೆಯೊಂದಿಗೆ ರಥೋತ್ಸವವು ಅದ್ದೂರಿಯಾಗಿ ಜರುಗಿತು.ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಮ್ಮನಹಳ್ಳಿಯ ಭೀಮಾಶಂಕರ ಮಠದ ಸದ್ಗುರು ನರಸಿಂಹ ಮಹಾರಾಜರು, ವೇ:ಮಲ್ಲಯ್ಯ ಸಿ ಹಿರೇಮಠ, ಪುರಾಣಿಕರಾದ ಮಾಹಾಂತೇಶ್ ಶಾಸ್ತ್ರಿಗಳು ತದ್ದೇವಾಡಿ, ಈರಣ್ಣ ಶಾಸ್ತ್ರಿಗಳು ಚಿಕ್ಕರೂಗಿ, ವಿಠ್ಠಲ ಗು ಕೊಳ್ಳುರ ಹೈ ಕೋರ್ಟ್ ವಕೀಲರು, ಭಗವಂತ ಚ ರೇವೂರ, ಎಸ್ ಆರ್ ರೇವೂರ, ಆರ್ ಎಸ್ ಮಾವೂರ, ಎಸ್ ಎಮ್ ಮಾರ್ಯಾಳ, ಡಿ ಎಸ್ ಮಾವೂರ ಇಂಜನಿಯರ್, ವಿ ಜಿ ಸಿಂಪಿ ನಿವೃತ್ತ ಉಪನ್ಯಾಸಕರು, ಭೀಮಾಶಂಕರ ಈರಪ್ಪ ಮಾವೂರ, ಭೀಮಾಶಂಕರ ಸಿವಿಲ್ ಕಾಂಟ್ರಾಕ್ಟರ್ ಇದ್ದರು.ಸುತ್ತಮುತ್ತಲಿನ ಅನೇಕ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.

Read More

ಆಲಮಟ್ಟಿ: ಕಳೆದ ಮಂಗಳವಾರದಿಂದ ಆಲಮಟ್ಟಿ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಕಾರ್ಮಿಕರು ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಸಂಜೆ ಅಧಿಕಾರಿಗಳ ಭರವಸೆ ಮೇರೆಗೆ ಹಿಂದಕ್ಕೆ ಪಡೆಯಲಾಯಿತು.ಕಳೆದ ನಾಲ್ಕು ದಿನಗಳಿಂದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ನಡೆಸಿದರೂ ಧರಣಿ ಸ್ಥಳಕ್ಕೆ ಭೇಟಿ ನೀಡದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಕೊನೆಗೂ ಶುಕ್ರವಾರ ಸಂಜೆ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಐದು ತಿಂಗಳ ವೇತನ ಬಿಲ್ ಆಗಿದ್ದು, ಒಂದೆರೆಡು ದಿನದಲ್ಲಿ ತಮ್ಮ ಖಾತೆಗೆ ಜಮೆಯಾಗಲಿದೆ, ಇನ್ನೀತರ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ಬಗೆಹರಿಸೋಣ, ಸದ್ಯಕ್ಕೆ ಧರಣಿ ಹಿಂದಕ್ಕೆ ಪಡೆಯಲು ಕೋರಿದರು.ನಮ್ಮ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು, ಪ್ರತಿ ವರ್ಷ ಎರಡು ಜತೆ ಸಮವಸ್ತ್ರ ಒದಗಿಸಬೇಕು, ನೌಕರರಿಗೆ ಗುರುತಿನ ಚೀಟಿ ಒದಗಿಸಬೇಕು, ನೌಕರರ ಕೌಶಲ್ಯ ಹಾಗೂ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ಈಡೇರಿಸಲು ಅವರು ಮನವಿ ಮಾಡಿದರು.ಮಲ್ಲಿಕಾರ್ಜುನ ಎಚ್.ಟಿ, ದ್ಯಾಮಣ್ಣ ಬಿರಾದಾರ, ಲಕ್ಷ್ಮಣ…

Read More

ಸಿಂದಗಿ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜನರ ಜೀವನಕ್ಕೆ ಮತ್ತು ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಅವರ ಸಂದೇಶ, ಹಿತ ನುಡಿಗಳು ಎಂದೆಂದಿಗೂ ಜೀವಂತ ಎಂದು ಶಾಲೆಯ ಆಡಳಿತಾಧಿಕಾರಿ ಎಸ್.ಎಸ್. ಪಾಟೀಲ ಹೇಳಿದರು.ಪಟ್ಟಣದ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯ ಮಲ್ಲಿಕಾರ್ಜುನ ಕನ್ನಡ ಮಾಧ್ಯಮ ಮತ್ತು ಪಂಚತಂತ್ರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಶ್ರೀಗಳ ಗುರು ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ನಾಡು ಸೇರಿದಂತೆ ದೇಶ, ವಿದೇಶಗಳಲ್ಲಿ ಹಲವು ದಶಕಗಳಿಂದ ಪ್ರತಿ ನಿತ್ಯವೂ ಪ್ರವಚನವನ್ನೇ ಉಸಿರಾಗಿಸಿಕೊಂಡಿರುವ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಬದುಕು ಅತ್ಯಂತ ಸರಳವಾದುದು. ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಬಾಳಿ, ಬದುಕಿ, ಸರಳತೆಯನ್ನೇ ಬೋಧಿಸಿದವರು ಎಂದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಎನ್.ಜಿ.ಸಜ್ಜನ, ಸುಜಾತ ಪಾಟೀಲ ಸೇರಿದಂತೆ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

Read More

ಶ್ರೀ ಸಿದ್ದೇಶ್ವರರ ನೂರೆಂಟು ದಿನಗಳ ಜಪಯಜ್ಞ ಕಾರ್ಯಕ್ರಮದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಅಭಿಮತ ಇಂಡಿ: ಧರ್ಮ, ಜಾತಿಗೆ ಜಾಗವಿಲ್ಲದ ಮಾನವಕುಲಕೋಟಿಗೆ ಉದ್ದಾರ ಮಾಡುವ ಏಕೈಕ ಸಿದ್ದೇಶ್ವರ ಮಹಾಸ್ವಾಮಿಗಳ ಆಶ್ರಮ. ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕೃತಿಯಲ್ಲಿ, ಚರಾಚರ ವಸ್ತುಗಳಲ್ಲಿ ದೇವರನ್ನು ಕಂಡ ಶತಮಾನದ ಮಹಾನ್ ಸಂತರಾಗಿದ್ದರು. ಅವರು ಕೃಷಿ, ಉದ್ಯೋಗ, ಶಿಕ್ಷಣ, ನೀರಾವರಿ ಪರಿಸರದ ಬಗ್ಗೆ ತಮ್ಮ ಪ್ರವಚನ ಮೂಲಕ ಚಿಂತನೆ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿದ ಸಿದ್ಧಾಂತ ಶಿಖಾಮಣಿ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.ತಾಲ್ಲೂಕಿನ ಅಥರ್ಗಾ ಗ್ರಾಮದ ಷಣ್ಣುಖಾರೂಢ ಆಶ್ರಮದಲ್ಲಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರರ ನೂರೆಂಟು ದಿನಗಳ ಜಪಯಜ್ಞ ಹಾಗೂ ನೂರೆಂಟು ಸಾಧಕ ಶಿರೋಮಣಿಗಳಿಂದ ನುಡಿನಮನ ಮಹಾ ಮಂಗಲೋತ್ಸವದ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು.ಬಸವರಾಜಪಾಟೀಲ ಸೇಡಂ ಮಾತನಾಡಿ, ಸಿದ್ದೇಶ್ವರರರಂತಹ ಶ್ರೇಷ್ಠ ದಾರ್ಶನಿಕ, ಅಧುನಿಕ ದೇವರನ್ನೇ ಪಡೆದಿರುವ ನಿಮ್ಮ ಜಿಲ್ಲೆಯ ಜನತೆ ಧನ್ಯರು. ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ…

Read More

ಇಂಡಿ: ಇಂಡಿ ಜಿಲ್ಲೆ ಮಾಡಲು ಆಗ್ರಹಿಸಿ ಪಟ್ಟಣದ ಮತ್ತು ತಾಲೂಕಿನ ವಿವಿಧ ಮುಸ್ಲಿಂ ಧರ್ಮಗುರುಗಳು ಸಭೆ ಸೇರಿ ನಂತರ ಮಿನಿ ವಿಧಾನಸೌಧ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.ಮಿನಿ ವಿಧಾನಸೌಧದಲ್ಲಿ ಧರ್ಮ ಗುರು ಮೌಲಾನಾ ಶಾಕೀರ ಹುಸೇನ ಕಾಶ್ಮಿ ಮಾತನಾಡಿ, ಇಂಡಿ ತಾಲೂಕು ಬರಗಾಲ ತಾಲೂಕು ಎಂದು ಹಣೆ ಪಟ್ಟಿ ಇದೆ. ನಂಜುಡಪ್ಪನವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ರಾಜ್ಯದಲ್ಲಿ ಮೂರನೆಯ ಸ್ಥಾನದಲ್ಲಿದ್ದು ಜಿಲ್ಲೆಯಾದರೆ ಮಾತ್ರ ಪ್ರಗತಿ ಹೊಂದಲಿದೆ ಎಂದರು.ಧರ್ಮ ಗುರುಗಳಾದ ಮೌಲಾನಾ ಜಿಯಾ ಉಲ್ ಹಕ್ ಉಮರಿ, ಮುಫ್ತಿ ಅಬ್ದುಲ್ ರಹಿಮಾನ ಅರಬ, ಮೌಲಾನಾ ಅಲ್ಲಾಬಕ್ಷ ಉಜ್ಜನಿ, ಹಾಫೀಜ್ ಮೊಹಮ್ಮದ್ ಭಾಷಾ ಬಾಗವಾನ, ಹಾಫೀಜ್ ಫಿರೋಜ್ ಬಾಗವಾನ, ಹಾಫೀಜ್ ಅಬ್ದುಲ್ ಅಝೀಜ್ ಪೈಝಿ ಇನಾಮದಾರ, ಹಾಫೀಜ್ ಮಹಿಬೂಬ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಷನ್ ಅಧ್ಯಕ್ಷ ಮಹಮ್ಮದ ಅಸ್ಪಕ್ ಕೊಂಕಣಿ, ಕಾರ್ಯದರ್ಶಿ ಬಾದಶಹಾ ಬೋರಾಮಣಿ, ಸದಸ್ಯ ಮೈನುದ್ದೀನ್ ಶೇಖ, ಸಮಾಜ ಸೇವಕರಾದ ಹಸನ್ ಮುಜಾವರ,…

Read More

ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆಯಾಗುವಂತೆ ಮತ್ತು ಅಖಂಡ ಇಂಡಿ ಸಿಂದಗಿ ತಾಲ್ಲೂಕುಗಳನ್ನು ೩೭೧ (ಜೆ) ಗೆ ಸೇರಿಸಬೇಕು. ಮತ್ತು ಫೆಬ್ರವರಿ ತಿಂಗಳಲ್ಲಿ ಮಂಡಿಸುವ ಬಜೆಟ್‌ನಲ್ಲಿ ಈ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಒತ್ತಾಯಿಸಿ ಕರವೇ ಕಾರ‍್ಯಕರ್ತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ಕರವೇ ತಾಲೂಕಾಧ್ಯಕ್ಷ ಶಿವಾನಂದ ಮಲಕಗೊಂಡ, ಫಯಾಜ ಬಾಗವಾನ, ಸದ್ದಾಂ ಆಲಗೂರ, ಅಶೋಕ ಭೂಸನೂರ, ಬಸವರಾಜ ಮಾರಲಭಾವಿ, ಸುನಿಲ್ ಮಾಗಿ ಮಾತನಾಡಿ, ಇಂಡಿ ಕೇಂದ್ರ ಸ್ಥಾನವಾಗಿಟ್ಟುಕೊಂಡು ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಬೇಕು. ಈಗಾಗಲೆ ಇಂಡಿಯಲ್ಲಿ ಉಪವಿಭಾಗವಿದ್ದು ಬಹುತೇಕ ಜಿಲ್ಲಾ ಮಟ್ಟದ ಕಚೇರಿಗಳು ಕರ‍್ಯ ನಿರ್ವಹಿಸುತ್ತಿವೆ. ಅಲ್ಲದೆ ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣದ ವ್ಯವಸ್ಥೆ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕುಗಳ ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲ್ಲೂಕಿನವರಿಗೆ ಬಂದು ತಮ್ಮ ಕೆಲಸ ಕಾರ‍್ಯ ಮುಗಿಸಿಕೊಂಡು ಹೋಗಲು ಅನುಕೂಲವಾಗುತ್ತದೆ…

Read More

ಇಂಡಿ: ರಾಜ್ಯದಲ್ಲಾಗುವ ಪ್ರತಿಯೊಂದು ಅನ್ಯಾಯದ ಕಾರ‍್ಯಗಳಿಗೆ ಧ್ವನಿ ಎತ್ತುವ ಕಾರ‍್ಯ ಮೊದಲು ಮಾಡುವುದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ‍್ಯಕರ್ತರು ಎಂದು ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಹೇಳಿದರು.ಗುರುವಾರ ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಂಘಟನಾ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.ಕನ್ನಡ ನಾಡು-ನುಡಿಗೆ ಅನ್ಯಾಯವಾಗುತ್ತದೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ಕರವೇ ಕಾರ‍್ಯಕರ್ತರು ಆಕ್ರೋಶಗೊಂಡು ಹೋರಾಟಕ್ಕೆ ಇಳಿಯುತ್ತಾರೆ. ಹಲವು ರಾಜಕಾರಣಿಗಳು ಹೋರಾಟ ಹತ್ತಿಕ್ಕುವ ಕೆಲಸಗಳನ್ನೂ ಮಾಡುತ್ತಾರೆ. ಕರವೇ ಕಾರ‍್ಯಕರ್ತರ ಬಂಧನವೂ ಆಗುತ್ತದೆ. ಆದರೂ ಹೋರಾಟ ನಿಲ್ಲಲ್ಲ. ಈ ನಾಡು ನುಡಿಗಾಗಿ ಕರವೇ ಕಾರ‍್ಯಕರ್ತರು ಜೀವ ನೀಡಲು ಸಹ ಮುಂದಾಗುತ್ತಾರೆ ಎಂದರು.ಅನ್ಯಾಯದ ವಿರುಧ್ಧ ಹೋರಾಡಲು ಕರವೇ ಕಾರ‍್ಯಕರ್ತರು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾಗುತ್ತದೆ. ನಾರಾಯಣಗೌಡ್ರು ಹಾಗೂ ಪ್ರವೀಣಶೆಟ್ಟಿ ಅವರ ಸಂಘಟನೆಗಳು ಎರಡಿರಬಹುದು ಆದರೆ ಇಬ್ಬರ ಆಶಯ ಒಂದೇ ಆಗಿದೆ. ಆ ದಿಸೆಯಲ್ಲಿ ಮೊದಲು ನಾವೆಲ್ಲ ಸಂಘಟಿತರಾಗಬೇಕಾಗಿದೆ. ಅಕ್ರಮ ಮರಳು ಗಣಿಗಾರಿಕೆ, ನಾಡದ್ರೋಹಿ ಹೇಳಿಕೆ ಕೊಡುವವರಿಗೆ,…

Read More

ಇಂಡಿ: ವಿಶೇಷಚೇತನ ಮಕ್ಕಳು ದೈವೀಪ್ರೀಯ ಮಕ್ಕಳಾಗಿದ್ದಾರೆ. ಪಾಲಕರು ವಿಶೇಷ ಚೇತನ ಮಕ್ಕಳನ್ನು ಕಾಳಜಿಯಿಂದ ಕಾಣಬೇಕು. ಸರಕಾರ ನೀಡಿದ ಸಾಧನೆ ಸಲಕರಣೆಗಳನ್ನು ವಿಕಲಚೇತನ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಮನವಿ ಮಾಡಿದರು.ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ ೨೦೨೩-೨೪ ನೇ ಸಾಲಿನ ವಿಕಲಚೇತನ ಮಕ್ಕಳ ಸಾಧನ ಸಲಕರಣೆಗಳ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಪೋಷಕರು ತಮ್ಮ ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡಿ ಈ ಮಕ್ಕಳು ಮುಖ್ಯವಾಹಿನಿ ಬರುವಂತೆ ಮಾಡಬೇಕು. ಸರ್ಕಾರದ ವ್ಯವಸ್ಥೆ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಹಯೋಗದಿಂದ ಸಲಕರಣೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.ಬಿಇಓ ಟಿ.ಎಸ್ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಆರ್. ನಡಗಡ್ಡಿ, ವಿಕಲಚೇತನರ ಜಿಲ್ಲಾ ನೋಡೆಲ್ ಅಧಿಕಾರಿ ಸಂಭಾಜಿ, ಮಾತನಾಡಿದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವೀದ್ ಮೋಮಿನ್, ಯಮನಾಜಿ ಸಾಳುಂಕೆ, ವಿಠ್ಠಲಗೌಡ ಬಿರಾದಾರ, ಆಯ್.ಜಿ. ಆಳೂರ, ಬಿ.ಐ. ಗೊರನಾಳ ನಿರೂಪಿಸಿ, ವಂದಿಸಿದರು.

Read More

ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಶುಕ್ರವಾರ ಆಗಮಿಸಿದ ಪದಾಧಿಕಾರಿಗಳು, ದೇವರಹಿಪ್ಪರಗಿ ತಾಲ್ಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ ೩೦ ಕಿ.ಮೀಗಳ ಸನಿಹದಲ್ಲಿದೆ. ಅಲ್ಲದೇ ತಾಲ್ಲೂಕಿನ ಬಹುತೇಕ ವ್ಯಾಪಾರ, ವಹಿವಾಟು ವಿಜಯಪುರದೊಂದಿಗಿದೆ. ಈಗ ಕೆಲವು ರಾಜಕೀಯ ನಾಯಕರು, ಸಂಘಟನೆಗಳ ಪ್ರಮುಖರು ಇಂಡಿ ಜಿಲ್ಲಾ ಕೇಂದ್ರ ಸೃಜಿಸುವ ಕುರಿತು ತಮ್ಮ ಹೇಳಿಕೆಗಳನ್ನು ನೀಡುವಾಗ ದೇವರಹಿಪ್ಪರಗಿ ತಾಲ್ಲೂಕು ಸೇರಿಸುವ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದು ವಾಸ್ತವಿಕತೆಗೆ ದೂರವಾಗಿದೆ. ಸರ್ಕಾರ ಇಂಥವರ ಯಾವ ಹೇಳಿಕೆಗಳನ್ನು ಪರಿಗಣಿಸದೇ, ತಾಲ್ಲೂಕಿನ ಜನತೆಯ ಅಭಿಪ್ರಾಯ, ಭೌಗೋಳಿಕ ವಿಚಾರಗಳನ್ನು ಪರಿಗಣಿಸಿ ನಮ್ಮ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಡಿ ಮುಂದುವರೆಸಬೇಕು ಎಂದರು.ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಕಾಶೀನಾಥ ಸಾಲಕ್ಕಿ, ಕೆ.ಎಸ್.ಕೋರಿ, ಕಾಶೀನಾಥ ಕೋರಿ, ಸದಾನಂದ ಪಟ್ಟಣಶೆಟ್ಟಿ, ರಾಜು ಕೋರಿ, ಸಚೀನ್ ಕೋರಿ ಹಾಗೂ ಇತರರು ಇದ್ದರು.

Read More

ದೇವರಹಿಪ್ಪರಗಿ: ಕ್ರೀಡೆ ಹಾಗೂ ಕ್ರೀಡಾಪಟುಗಳ ಉತ್ಸಾಹದ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯಾಗಾರ ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್.ಚವ್ಹಾಣ ಹೇಳಿದರು.ಪಟ್ಟಣದ ಡಿಬಿಇ ಸಂಸ್ಥೆಯ ಸುಭಾಶ್ಚಂದ್ರ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ದೈಹಿಕ ಶಿಕ್ಷಣ ವಿಷಯ ವೇದಿಕೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಲ್ಲೂಕಿನ ದೈಹಿಕ ಶಿಕ್ಷಕರಿಗೆ ಈ ಕಾರ್ಯಾಗಾರ ನೆರವಾಗಬಲ್ಲದು. ಯಾವುದೇ ಕಾರಣಕ್ಕೂ ದೈಹಿಕ ಶಿಕ್ಷಕರು ಹಿಂಜರಿಯದೇ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ ಮುಖ್ಯಗುರು ಬಿ.ಎಸ್.ತೇಲಿ ಮಾತನಾಡುತ್ತಾ, ದೈಹಿಕ ಶಿಕ್ಷಕ ನಗುತ್ತಾ ಇದ್ದರೆ ಇಡೀ ಶಾಲೆ ನಗುತ್ತದೆ. ಆದ್ದರಿಂದ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಹುಮ್ಮಸ್ಸು, ಉಲ್ಲಾಸದಿಂದ ಪಾಲ್ಗೊಳ್ಳಲು ಕ್ರಮವಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಆಗಮಿಸಿದ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ ಬಿರಾದಾರ, ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್.ಚವ್ಹಾಣ, ಮಂಜು ಕುಂಬಾರ, ಸಂತೋಷ ಅಂಗಡಿ ಹಾಗೂ ಎಂ.ಎಸ್.ಬಿರಾದಾರ ಇವರನ್ನು ಸನ್ಮಾನಿಸಲಾಯಿತು.ವಿಷಯ ವೇದಿಕೆಯ ಅಧ್ಯಕ್ಷ ಆರ್.ಎಮ್.ಬಿರಾದಾರ, ದೈಹಿಕಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಎಮ್. ಕೆಂಭಾವಿ, ಆಯ್.ಎ.ಸಿಪಾಯಿ(ಕಲಕೇರಿ), ಆರ್.ಪಿ.ಪಡೇಕನೂರ(ತಿಳಗೂಳ), ಬಿ.ಎಸ್.ಅರಳಗುಂಡಗಿ (ಸೋಮಜ್ಯಾಳ), ಡಿ.ಬಿ.ವಡ್ಡೋಡಗಿ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.

Read More