Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕವಿಯ ಭಾಷೆಯ ಒಳಗಿನ ಪಲ್ಲಟಗಳು ಕವಿತೆಯ ರೂಪ ಮತ್ತು ವಸ್ತುವಿನಲ್ಲೂ ಹುಡುಕಾಟ, ವಿನಾಶಕಾರಿ ಕ್ರಮಗಳು, ಚಿಂತೆಗಳು, ಮಾನವ ಜನಾಂಗದ ಆರೋಗ್ಯ ಮತ್ತು ಮನಸ್ಸನ್ನು ಕೇಂದ್ರಿಕರಿಸುವ ಆಲೋಚನೆಗೆ ಲೇಖಕರು ಸಾಮಾನ್ಯ ಮೌಲ್ಯಗಳ ಅರ್ಥಪೂರ್ಣತೆಗಾಗಿ ಕವನಗಳು ಶ್ರೇಷ್ಟತೆಯನ್ನು ಪಡೆಯುತ್ತವೆ ಎಂದು ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭೀಮಣ್ಣ ಸ.ಬಜಂತ್ರಿ ಅವರ ‘ನಾನ್ಯಾರು ನನ್ನವರು ಯಾರು’? ಆಧುನಿಕ ವಚನ ಸಂಕಲನ ಕೃತಿ ಪರಿಚಯ ಮಾಡುತ್ತ ಸಂಕಲನದಲ್ಲಿ ಅಂತರಂಗದ ಶೋಧನೆ, ಮನೋವೈಜ್ಞಾನಿಕ ಚಿಂತನೆ, ಆಧ್ಯಾತ್ಮಿಕ ಚಿಂತನೆ ಬದುಕಿನ ಸಂಬಂಧ ಇವೆಲ್ಲವೂ ಬದುಕಿನ ಸಿಹಿ-ಕಹಿ ಅನುಭವಗಳನ್ನು ಪ್ರೀತಿಯಿಂದ ಎಲ್ಲವೂ ಭಾವನಾತ್ಮಕವಾಗಿ ತೆರೆದುಕೊಳ್ಳುತ್ತಿವೆ. ಸಂಕಲನ ಕನ್ನಡ ಸಾಹಿತ್ಯಕ್ಕೆ ನೆಮ್ಮದಿ ಹಾಗೂ ಭರವಸೆಯ ಕೃತಿ ಎಂದರು.ಜಿಲ್ಲಾ ಶಿಕ್ಷಣಾಧಿಕಾರಿ ಡಾ. ಎ.ಎಮ್.ಲಿಮಕರ ಮಾತನಾಡುತ್ತ, ಸಾಮಾಜಿಕ ವ್ಯವಸ್ಥೆಯ ಕರಾಳತೆಯ ಬಗ್ಗೆ ಸುತ್ತಲಿನ ಬದುಕಿನಲ್ಲಿ ನಡೆಯುವ ವಿದ್ಯಮಾನಗಳು, ಮೌಡ್ಯತೆ, ಅನಿಷ್ಟಗಳ ಬಗೆಗೆ ಅರಿವು ಮೂಡಿಸುವ ಕೃತಿ ಎಂದು ಹೇಳಿದರು. ಆರ್.ಪಿ.ಚವ್ಹಾಣ, ಅಕ್ಷಯ ನಾಗೇಶಿ ಮಾತನಾಡಿದರು.…
ಕಜಾಪ ಆಲಮೇಲ ತಾಲೂಕು ಘಟಕದ ಉದ್ಘಾಟನೆ | ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಆಗ್ರಹ ಆಲಮೇಲ: ಜಾನಪದ ಸಂಸ್ಕೃತಿಯು ಗಟ್ಟಿಯಾದ ತಳಹದಿಯಲ್ಲಿ ಹುಟ್ಟಿ ವಿಶಾಲವಾದ ಮನೋಭೂಮಿಕೆಯಲ್ಲಿ ಹರಡಿಕೊಂಡಿದೆ. ಸಾರ್ವತ್ರಿಕ ಮೌಲ್ಯಗಳಾದ ಪ್ರೀತಿ, ಕರುಣೆ, ಸಹನೆ, ಸಮಾನತೆ, ಭಾವೈಕ್ಯತೆ, ಸಹಬಾಳ್ವೆ ಮತ್ತು ಆರೋಗ್ಯಕರ ವಿಷಯಾದಿಗಳು ಜಾನಪದ ಸಂಸ್ಕೃತಿಯ ಆಶಯವಾಗಿವೆ. ಜಾನಪದ ಇಂದು ರೂಪ ಬದಲಾಯಿಸಿದರೂ ತತ್ವ -ಚಿಂತನೆಗಳು ಬದಲಾಗಿಲ್ಲ. ಅದಕ್ಕಾಗಿ ಜಾನಪದಕ್ಕೆ ಎಂದಿಗೂ ಅಳಿವಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಅಭಿಪ್ರಾಯಪಟ್ಟರು.ತಾಲೂಕಿನ ಕಡಣಿ ಗ್ರಾಮದ ಶಂಕರಲಿಂಗೇಶ್ವರ ದೇವಾಲಯದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಮಂಟಪದ ಗೀಗೀಪದಕಾರ ಕಡಣಿ ಕಲ್ಲಪ್ಪ ವೇದಿಕೆಯಲ್ಲಿ, ಕನ್ನಡ ಜಾನಪದ ಪರಿಷತ್ ಆಲಮೇಲ ತಾಲೂಕು ಘಟಕದ ಉದ್ಘಾಟನೆ ಮಾಡಿ ಮಾತನಾಡುತ್ತಾ ಹಲಸಂಗಿ ಗೆಳೆಯರ ಬಳಗದ ಜಾನಪದ ಸೇವೆ ನಾಡಿಗೆ ಅನನ್ಯವಾದುದು. ಸರಕಾರ ಹಲಸಂಗಿ ಗೆಳೆಯರ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಮಾತನಾಡಿ, ಹಳ್ಳಿಗಳು ಜಾನಪದ…
ಇಂಡಿ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೋಲಿಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಇಂಡಿಯ ಗ್ರಾಮಾಂತರ ಸಿಪಿಐ ಮಲ್ಲಿಕಾರ್ಜುನ ಎಂ. ಡಪ್ಪಿನ ಅವರು ಪ್ರಥಮ ಸ್ಥಾನ ಪಡೆದು ಆರು ಚಿನ್ನದ ಪದಕ ಪಡೆದಿದ್ದಾರೆ.ಸಾಧನೆ ಮಾಡಿದ ಡಪ್ಪಿನ ಅವರಿಗೆ ಬೆಳಗಾವಿ ಉತ್ತರ ವಲಯದ ಪೋಲಿಸ್ ಮಹಾನಿರ್ದೇಶಕ ವಿಕಾಸಕುಮಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಮಲ್ಲಿಕಾರ್ಜುನ ಡಪ್ಪಿನ ೨೦೦೫ ರಲ್ಲಿ ತರಬೇತಿ ಪಡೆದು ಬೆಳಗಾವಿಯಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಹುಬ್ಬಳ್ಳಿ ಧಾರವಾಡ ರಾಯಚೂರು, ಯಾದಗಿರಿ ಬೀದರ್, ಕಲಬುರಗಿ, ಬಳ್ಳಾರಿ, ವಿಜಯನಗರ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.ಪೋಲಿಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳ ಬೇಕಾದ ವೈಜ್ಞಾನಿಕ ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ ಬೆರಳಚ್ಚು ತನಿಖೆ, ವಿಧಿ ವಿಜ್ಞಾನ, ಪಾದದ ಮುದ್ರೆ, ಫೋಟೋ ವಿಡಿಯೋಗ್ರಫಿ, ಶ್ವಾನದಳಪೋಲಿಸ್ ವೃತ್ತಿಪರ ತನಿಖೆ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯಲ್ಲಿ ಸಿಪಿಐ ಎಂ.ಎಂ. ಡಪ್ಪಿನರವರು ಅತ್ಯುತ್ತಮ ಸಾಧನೆ ತೋರಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.ಲಖನೌದಲ್ಲಿ ೬೭ ನೇ ರಾಷ್ಟ್ರೀಯ ಕರ್ತವ್ಯ ಕೂಟ ಹಿನ್ನೆಲೆಯಲ್ಲಿ ಎಲ್ಲ ತಾಲೂಕು, ಜಿಲ್ಲಾ ಹಾಗೂ ವಲಯ…
ಇಂಡಿ: ಕುವೆಂಪುರವರ ಸಾಹಿತ್ಯ ೨೦ನೇ ಶತಮಾನದ ಸಾಕ್ಷಿಪ್ರಜ್ಞೆಯಾಗಿ, ೨೧ನೇ ಶತಮಾನದಲ್ಲೂ ಪ್ರಭಾವಿಯಾಗಿದೆ. ಶ್ರೀಸಾಮಾನ್ಯನನ್ನು ಜಗನ್ಮಾನ್ಯನೆಂದು ನಂಬಿ ಎಲ್ಲ ವಯೋಮಾನದ ಓದುಗರ ಆಸಕ್ತಿ ಅಭಿರುಚಿಗಳನ್ನು ತಣಿಸುವಂತೆ ಆಯಾ ಕಾಲ ಮತ್ತು ಸಂದರ್ಭಗಳಿಗೆ ಸ್ಪಂದಿಸುವ ಸಾಹಿತ್ಯ ಸೃಷ್ಟಿಸಿದ್ದು ಕುವೆಂಪು ಅವರ ವೈಶಿಷ್ಟ್ಯವಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶನಿವಾರ ಸಂಜೆ ಇಂಡಿಯ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ಕೇಂದ್ರದಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-೨ ರಲ್ಲಿ ಕುವೆಂಪು ಮತ್ತು ನಾಟಕಗಳು ಕುರಿತು ಅವರು ಉಪನ್ಯಾಸ ನೀಡಿದರು.ಕನ್ನಡ ರಂಗಭೂಮಿಗೆ ಕುವೆಂಪುರವರ ಕೊಡುಗೆ ಅನನ್ಯ.ಅವರು ಪಾರಂಪರಿಕ ಪುರಾಣ ಕಥೆಗಳನ್ನು ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಮರು ರೂಪಿಸಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಿದ್ದಾರೆ. ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಶ್ಮಶಾನ ಕುರುಕ್ಷೇತ್ರ, ಮಹಾರಾತ್ರಿ ಇಂಥ ನಾಟಕಗಳ ಮೂಲಕ ಪುರಾಣಗಳ ಮರು ವ್ಯಾಖ್ಯಾನ ಮಾಡಿ,ಕನ್ನಡ ಸಾಹಿತ್ಯದ ಬೃಹನ್ಮೂರ್ತಿಯಾಗಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಿರಗಿ ಪ್ರೌಢ ಶಾಲಾ ಶಿಕ್ಷಕ ವೈ.ಜಿ. ಬಿರಾದಾರ ಮಾತನಾಡಿ, ಮನುಜ ಮತ, ವಿಶ್ವಪಥ ಎಂಬ ಮಹಾನ್…
ಆಲಮಟ್ಟಿ: ಔಷಧ ವ್ಯಾಪಾರವು ಸೇವಾ ಮನೋಧರ್ಮ ವ್ಯಾಪಾರವಾಗಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಔಷಧ ವ್ಯಾಪಾರಿಗಳು ಬಹು ಎಚ್ಚರಿಕೆಯಿಂದ ವಹಿವಾಟು ನಡೆಸಬೇಕು ಎಂದು ವಿಜಯಪುರದ ಸಹಾಯಕ ಔಷಧ ನಿಯಂತ್ರಕ ಆರ್. ಪರಶುರಾಮ ಹೇಳಿದರು.ಭಾನುವಾರ, ಇಲ್ಲಿಯ ಸಮುದಾಯ ಭವನದಲ್ಲಿ ಜರುಗಿದ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಔಷಧೀಯ ಕ್ಷೇತ್ರದಲ್ಲಿ ನೂತನ ಆವಿಷ್ಕಾರದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಔಷಧ ಕ್ಷೇತ್ರದಲ್ಲಿ ನಿತ್ಯವೂ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ, ಸಾಕಷ್ಟು ಬದಲಾವಣೆಗಳು ಆಗಿರುತ್ತವೆ, ಅವುಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಿರುವುದರಿಂದ ಔಷಧ ವ್ಯಾಪಾರಸ್ಥರಿಗೆ ಪರಿಣಿತಿ ಹೊಂದಲು ಸಹಾಯವಾಗಲಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಆರ್. ಎತ್ತಿನಮನಿ ಮಾತನಾಡಿದರು.ಸಹಾಯಕ ಔಷಧ ನಿಯಂತ್ರಕಿ ಶ್ವೇತಾ ನಾಗಠಾಣ, ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ ಸಂತೋಷ ರಾಮದುರ್ಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್. ಬಿರಾದಾರ, ಔಷಧ ವ್ಯಾಪಾರಸ್ಥರ ಸಂಘದ…
ಕರಜಗಿ-ವಿಜಯಪುರರಾಷ್ಟ್ರೀಯ ಹೆದ್ದಾರಿ ನಿರ್ಮಾಣ | ಫೆಬ್ರವರಿ ಅಂತ್ಯಕ್ಕೆ ಭೂಮಿಪೂಜೆ ಇಂಡಿ: ಗಡಿಭಾಗದ ಕರಜಗಿ ಗ್ರಾಮದಿಂದ ಇಂಡಿ ಪಟ್ಟಣದ ಮಾರ್ಗವಾಗಿ ವಿಜಯಪುರಕ್ಕೆ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಭೂಸ್ವಾಧಿನ ಪ್ರಕ್ರಿಯೆ ನಡದಿದ್ದು, ಫೆಬ್ರವರಿ ಕೊನೆಯ ವಾರದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡುವ ಚಿಂತನೆ ಹೊಂದಿದ್ದೇವೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ಸಧ್ಯ ನಾಗಠಾಣ ಗ್ರಾಮದವರೆಗೆ ಬಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಗುತ್ತಿಗೆದಾರನಿಗೆ ಕಾಮಗಾರಿ ಆದೇಶ ನೀಡಲಾಗುವುದು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಚಿವರ ಗಮನ ಸೆಳೆದು ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹಮ್ಮಿಕೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ವಿಜಯಪುರ ಜಿಲ್ಲೆಯ ಅಭಿವೃದ್ದಿಗೆ ನೀಡಿರುವ ಲಕ್ಷಕೋಟಿ ಅನುಧಾನದಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತದಾರರ ಬಳಿ ಹೋಗುತ್ತೇವೆ ಎಂದ ಅವರು, ಹಿಂದೆಂದೂ ಯಾವ ಸರ್ಕಾರವೂ ನೀಡದಷ್ಟು ಅನುದಾನ…
ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಾ ಹೊನ್ನುಟಗಿ ಇತ್ತೀಚಿಗೆ ತಿಕೋಟಾದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಉರ್ದು ಮಾಧ್ಯಮದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿದ್ಯಾರ್ಥಿನಿಯ ಸಾಧನೆಗೆ ಪ್ರೌಢಶಾಲಾ ಮುಖ್ಯಗುರು, ಎಲ್ಲ ಶಿಕ್ಷಕರು ಹಾಗೂ ಎಸ್ಡಿಎಮ್ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.
ವಿಜಯಪುರ: ಎಸ್. ಎಸ್. ಎಲ್. ಸಿ. ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಹಾಗೂ ಉತ್ತಮ ಅಂಕಗಳನ್ನು ಗಳಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಾನು ಪಾಸ್ ಆಗುವೆ ಎನ್ನುವ ಶೀರ್ಷಿಕೆ ಅಡಿಯಲ್ಲಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಅನುಕೂಲವಾಗುವಂತೆ, ನಾನೇ ಓದುವೇ ಎನ್ನುವ ಶೀರ್ಷಿಕೆ ಅಡಿಯಲ್ಲಿ ವಿಜಯಪುರ ಗ್ರಾಮೀಣ ವಲಯದ ವಿಷಯ ಸಂಪನ್ಮೂಲ ಶಿಕ್ಷಕರು ಸೇರಿ ರಚಿಸಿರುವ ಪ್ರಶ್ನೆ ಕೋಟಿಯನ್ನು ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗ ಕೆ. ಹೊಂಗಯ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಅವರು ಹಾಗೂ ಸಂಪನ್ಮೂಲ ಶಿಕ್ಷಕರೊಂದಿಗೆ ಪ್ರಶ್ನೆ ಭಂಡಾರವನ್ನು ಬಿಡುಗಡೆಗೊಳಿಸಿದರು.ಈ ಪ್ರಶ್ನೆಗಳ ಸಂಗ್ರಹವನ್ನು ವಲಯದ ಎಲ್ಲಾ ಪ್ರೌಢಶಾಲೆಯ ಮುಖ್ಯ ಗುರುಗಳು ಮಕ್ಕಳಿಗೆ ತಲುಪುವಂತೆ ಕ್ರಮ ವಹಿಸಲು ಕೆ. ಹೊಂಗಯ್ಯ ಅವರು ತಿಳಿಸಿದರು.
ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕು ವಿಜಯಪುರ ಜಿಲ್ಲೆಯಲ್ಲಿಯೇ ಯಥಾಸ್ಥಿತಿಯಲ್ಲಿ ಇರಲಿ ಇಲ್ಲವೇ ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ, ಯಾವುದೇ ಕಾರಣಕ್ಕೂ ನೂತನ ಸಂಭಾವ್ಯ ಜಿಲ್ಲೆಗೆ ಬೇಡ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಂಗನಗೌಡ ಹರನಾಳ ತಿಳಿಸಿದ್ದಾರೆ.ದೇವರಹಿಪ್ಪರಗಿ ಪಟ್ಟಣವು ಭೌಗೋಳಿಕವಾಗಿ ಮದ್ಯವರ್ತಿ ಸ್ಥಳವಾಗಿದ್ದು, ಎರಡು ಹೆದ್ದಾರಿಗಳನ್ನು ಒಳಗೊಂಡಿದೆ. ಕಲಬುರಗಿ-ವಿಜಯಪುರ ಮಧ್ಯೆದ ರಾಷ್ಟ್ರೀಯ ಹೆದ್ದಾರಿ-೫೦ ಹಾಗೂ ಲಿಂಗಸಗೂರು-ಶಿರಾಡೋಣ ರಾಜ್ಯಹೆದ್ದಾರಿ-೪೧ ರ ಮೂಲಕ ಸಿಂದಗಿ ಇಂಡಿ, ವಿಜಯಪುರ ಪಟ್ಟಣಗಳೊಂದಿಗೆ ನೇರ ಸಂಪರ್ಕ ಹೊಂದಿದೆ. ಜೊತೆಗೆ ಬಸವನ ಬಾಗೇವಾಡಿ, ತಾಳಿಕೋಟೆ ತಾಲ್ಲೂಕುಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲದೇ ನೂತನ ವಿಜಯಪುರ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಸಾರ್ವಜನಿಕರ ಪ್ರಯಾಣಕ್ಕೆ ಉತ್ತಮ ರಸ್ತೆ, ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ.ರಾಜ್ಯ ಸರಕಾರ ನೂತನ ಜಿಲ್ಲಾ ಕೇಂದ್ರ ಸೃಜಿಸಲು ಮುಂದಾದರೆ ದಯವಿಟ್ಟು ದೇವರಹಿಪ್ಪರಗಿಯನ್ನು ಪರಿಗಣಿಸಬೇಕು. ಅದನ್ನು ಜಿಲ್ಲಾ ಕೇಂದ್ರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಹಾಗೂ ಇಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬಸವನಬಾಗೇವಾಡಿ: ಎಸ್ಟಿಪಿ/ಟಿಎಸ್ಪಿ ಯೋಜನೆಯಲ್ಲಿ ಬರುವ ಅನುದಾನವನ್ನು ಬಳಸಿಕೊಂಡು ಮಾದಿಗ ಸಮಾಜದ ಯುವಕರು ಉದ್ಯೋಗಸ್ಥರಾಗಿ ಸುಂದರ ಜೀವನವನ್ನು ನಡೆಸಬೇಕೆಂದು ನಿವೃತ್ತ ಪ್ರಿನ್ಸಿಪಲ್ ಭಾರತ ಸರ್ಕಾರದ ನಾಗಪುರ ವಲಯದ ಕೇಂದ್ರೀಯ ಹಣಕಾಸು ಆದಾಯ ತೆರಿಗೆ ಕಮಿಷನರ್ ಎಚ್.ಆರ್.ಭೀಮಾಶಂಕರ ಆಯ್ಆರ್ಎಸ್ ಹೇಳಿದರು.ಪಟ್ಟಣದ ಗಣೇಶ ನಗರದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಂಗಮಠದಲ್ಲಿ ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಸವನಬಾಗೆವಾಡಿ ತಾಲೂಕಾ ಘಟಕದ ನೇತೃತ್ವದಲ್ಲಿ ೨೦೨೨-೨೩ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿ.ಯು.ಸಿ, ಹಾಗೂ ೨೦೨೩-೨೪ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನೀಯರಿಂಗ್ ಕೋರ್ಸ್ಗೆ ಆಯ್ಕೆಯಾದದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಪುರಸಭೆ, ಪಪಂ,ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಹಾಗೂ ಹೊಸದಾಗಿ ಸರ್ಕಾರಿ ನೌಕರಿಗೆ ಸೇರಿದ ಹಾಗೂ ನಿವೃತ್ತಿ ಹೊಂದಿದ ಸಮಾಜದ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ನೌಕರರ ಕ್ಷೇಮಾಭಿವೃದ್ಧಿಯಿಂದ ಸಮಾಜದಲ್ಲಿರುವ ಬಡ-ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ, ನಾವು ಸ್ವಾಭಿಮಾನದಿಂದ ಬದುಕುವ ಮಂದಿ, ಸಮಾಜಕ್ಕೆ ಬಡತನವೇ ಮೂಲ ಕಾರಣವಾಗಿದೆ, ಇದನ್ನು ಮೆಟ್ಟಿನಿಂತು…
