ಮನಗೂಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ
ಬಸವನಬಾಗೇವಾಡಿ: ರಾಜ್ಯದಲ್ಲಿ ಕೆಲ ಕ್ಷೇತ್ರದಲ್ಲ ಬಿಜೆಪಿ ಪಕ್ಷವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಮಾಡುವ ಮೂಲಕ ಬಿಜೆಪಿ ಪಕ್ಷದ ಮುಖಂಡರೇ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸಕ್ಕರೆ. ಜವಳಿ. ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೋ ಇಲ್ಲವೊ ಎಂಬ ಸಂಶಯ ಬರುವಂತಾಗಿದೆ. ಚುನಾವಣೆ ಬಾಂಡನಲ್ಲಿ 6 ಸಾವಿರ ಕೋಟಿ ಹಗರಣ ಮಾಡಿದೆ ಎಂದು ಸುಪ್ರಿಂ ಕೋರ್ಟ ಹೇಳಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯ್ದರು.
2018-19ರಲ್ಲಿ ಮೋದಿ ಅವರು ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು. 2014ರಲ್ಲಿ ವರ್ಷಕ್ಕೆ 2000 ಉದ್ಯೋಗ ನೀಡುವ ಸೇರಿದಂತೆ ಹಲವಾರು ಭರವಸೆ ನೀಡಿದ್ದರು 10 ವರ್ಷವಾದರೂ ಯಾವ ಭರವಸೆಯೂ ಈಡೇರಿಲ್ಲ ಎಂದರು.
ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನ ನೀಡಿರುವುದು ಕಾಂಗ್ರೆಸ ಸರ್ಕಾರ ಪ್ರತಿಯೊಬ್ಬ ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಜೀವನ ನಡೆಸುವಂತೆ ಮಾಡಿರುವುದು ನಮ್ಮ ಕಾಂಗ್ರೆಸ ಸರ್ಕಾರ ನೂರಕ್ಕೆ 80 ರಷ್ಟು ಮಹಿಳಿಯರು ಕಾಂಗ್ರೆಸಗೆ ಮತ ನೀಡುವ ಭರವಸೆ ಇದೆ.. ದೇಶದಲ್ಲಿ ಕಾಂಗ್ರೆಸ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಯೋಜನೆಗಳನ್ನ ದೇಶದಲ್ಲಿಯೋ ಜಾರಿಗೆ ತರಲಾಗುವದು ಎಂದು ಭರವಸೆ ನೀಡಿದರು.
ಗೋಲಗುಮ್ಮಟದಲ್ಲಿ ನಿಂತು ಓ ಅಂದರೆ ಅದು ಏಳು ಸಾರಿ ಪ್ರತಿಧ್ವನಿಸುತ್ತದೆ. ಆದರೆ ನಮ್ಮ ಸಂಸದರ ಮುಂದೆ 50 ಸಾರಿ ಕೂಗಿದರೂ ಸಹ ಅವರು ತಿರುಗಿಯೂ ನೋಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜಿಪಿ ಅಭ್ಯರ್ಥಿಗಳು ಮೋದಿ ನೋಡಿ ಮತ ಹಾಕಿ ಎನ್ನುತ್ತಾರೆ. ಆ ತಪ್ಪನ್ನ ಯಾರು ಮಾಡಬೇಡಿ ನಮ್ಮ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವರಿಗೆ ಮತ ನೀಡಿ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಮೂಲಕ ಮತ ಕೇಳುವ ನ್ಯತಿಕತೆ ಹೊಂದಿದೆ ಕಾಂಗ್ರೆಸ ಪಕ್ಷದ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಸರಳ ಸಜ್ಜನಿಕೆಯ ವ್ಯಕ್ತಿ ಆಗಿದ್ದಾರೆ. ಜಿಲ್ಲೆಯ ಜನತೆ ಕಾಂಗ್ರೆಸ ಪಕ್ಷಕ್ಕೆ ಮತ ನೀಡುವ ಮೂಲ ರಾಜು ಆಲಗೂರ ಅವರನ್ನ ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿದೆ ಎಂದರು.
ಮಗಳ ಪರವಾಗಿ ಮತ ಯಾಚನೆ: ಬಾಗಲಕೋಟೆಯಲ್ಲಿ ನಿಮ್ಮ ಬಂದು ಬಳಗ ಇದ್ದರೆ ಅವರಿಗೆ ಹೇಳಿ ನನ್ನ ಮಗಳಿಗೆ ಮತ ನೀಡುವಂತೆ ಕೈ ಮುಗಿಯುವ ಮೂಲಕ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಮತ ಯಾಚನೆ ಮಾಡಿದರು.
ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಆರ್ ಎನ್ ಸೂಳಿಬಾವಿ, ರಫೀಕ ಠಪಾಲ್, ಚಂದ್ರಶೇಖರ ಪಾಟೀಲ, ಶಿವನಗೌಡ ಗುಜಗೊಂಡ, ಬಸವರಾಜ ಸೋಮಪುರ, ಎಂ. ಸಿ ಮುಲ್ಲಾ, ಬಿ ಎಲ್ ಪಾಟೀಲ, ಕಲ್ಲು ದೇಸಾಯಿ, ಸಲೀಂ ಅತ್ತಾರ, ಎಸ್ ಬಿ ಪತಂಗಿ, ಸಿ.ಎಸ್ ಗಿಡ್ಡಪ್ಪಗೋಳ, ಉಸ್ಮಾನಪಟೇಲ ಖಾನ್, ಮುಸ್ಕಾನ ಶಿರಬೂರ, ಶೇಖರಗೌಡ ಪಾಟೀಲ, ರಫೀಕ ಪಕಾಲಿ, ಸಂಗಮೇಶ ಹಾರಿವಾಳ, ರಾಜುಗೌಡ ಪಾಟೀಲ, ರವಿ ರಾಠೋಡ ಸೇರಿದಂತೆ ಹಲವರಿದ್ದರು.
ಭಾಗ್ಯರಾಜ ಸೊನ್ನದ ನಿರೂಪಿಸಿ, ವಂದಿಸಿದರು.

