Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಪ್ರತಿಯೊಂದು ಇಲಾಖೆಯ ಕಛೇರಿಗಳಲ್ಲಿ ವಿಕಲಚೇತನರ ಪ್ರತ್ಯೇಕ ಕೌಂಟರ್ ನಿರ್ಮಾಣವಾಗಬೇಕು. ತಾಲೂಕಿನಲ್ಲಿ ಅನೇಕರ ಪಿಂಚಣಿ ರದ್ದಾಗಿದ್ದು, ಅದು ಬೇಗ ಮರುಚಾಲನೆಯಾಗಬೇಕು. ಮತ್ತು ವಿಕಲಚೇತನರ ಕುಂದು-ಕೊರತೆ ಸಭೆ ತಿಂಗಳಿಗೊಮ್ಮೆಯಾದರು ಸಭೆ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿಠ್ಠಲ ಕರ್ಜಗಿ ತಹಶೀಲ್ದಾರ್ ಅವರಿಗೆ ಆಗ್ರಹಿಸಿದರು.ಪಟ್ಟಣಡ ಆಡಳಿತ ಸೌಧದಲ್ಲಿ ವಿಕಲಚೇತನರ ೨೦೧೬ರ ಅಧಿನಿಯಮದನ್ವಯ ಸರಕಾರದ ವಿವಿಧ ಇಲಾಖೆಗಳಲ್ಲಿ ಮುಕ್ತವಾದ ವಾತಾವರಣ ನಿರ್ಮಾಣ ನಿರ್ಮಿಸುವಂತೆ ಮನವಿ ಸಲ್ಲಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಮುತ್ತುರಾಜ ಸಾತಿಹಾಳ, ಬಿ.ಎನ್.ಕಲ್ಲೂರ ಯಲ್ಲಪ್ಪ ಪೂಜಾರಿ, ಸುಧೀರ ಬಜಂತ್ರಿ, ಸುರೇಶ ಜವಳಗಿ, ವಿಜಯಕುಮಾರ ಬಜಂತ್ರಿ, ಮಲ್ಲು ಕರನಾಳ,sಶಿವಾನಂದ ಆನಗೊಂಡ, ಪುಂಡಲೀಕ ಪೂಜಾರಿ, ಶಬ್ಬೀರ ಅತ್ನನೂರ ಸೇರಿದಂತೆ ಎಂ.ಆರ್.ಡಬ್ಲೂö್ಯ, ವಿ.ಆರ್.ಡಬ್ಲೂö್ಯ ಮತ್ತು ಯು.ಆರ್.ಡಬ್ಲೂö್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಸಿಂದಗಿ: ಕವಿ ಸರ್ವಜ್ಞ ತ್ರಿಪದಿಗಳ ಮೂಲಕ ಪದ್ಯವನ್ನು ರಚನೆ ಮಾಡುವುದರ ಮುಖಾಂತರ ತ್ರಪದಿ ಕವಿ ಎಂದು ಕರೆಯಲ್ಪಡುತ್ತಾರೆ ಎಂದು ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ತ್ರಿಪದಿ ಕವಿ ಸರ್ವಜ್ಞರ ಜಯಂತಿಯಲ್ಲಿ ಗ್ರೇಡ್೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸರ್ವಜ್ಞನವರು ಹಲವಾರು ಅಂಶಗಳ ಕುರಿತು ವಚನಗಳನ್ನು ರಚಿಸಿ ಒಬ್ಬ ಮೇಧಾವಿ ವಚನಕಾರರಾಗಿದ್ದಾರೆ. ಸಮಾಜದಲ್ಲಿರುವ ಅಂಕು, ಡೊಂಕು ಮೂಡನಂಬಿಕೆಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದರು.ಈ ವೇಳೆ ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಗ್ರಂಥಪಾಲಕ ಸಿದ್ದಬಸವ ಕುಂಬಾರ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲವನು ತಿಳಿದವರು. ಸಮಾಜದ ಜ್ಞಾನವನ್ನು ಅರಿತವರು. ಅವರ ತ್ರಿಪದಿಗಳಲ್ಲಿ ಒಳ ಅರಿವು ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವಂತೆ ಇರುತ್ತವೆ. ಸರ್ವಜ್ಞರ ತತ್ವಾದರ್ಶಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಕಂದಾಯ ನಿರೀಕ್ಷಕ ಐ.ಎ.ಮಕಾಂದಾರ, ಶೀರಸ್ತೇದಾರ ಜಿ.ಎಸ್.ರೋಡಗಿ, ಚೇತನ ಭಾಸಗಿ, ಕುಂಬಾರ ಸಮಾಜದ ತಾಲೂಕು ಗೌರವಾಧ್ಯಕ್ಷ ಸಿದ್ದಪ್ಪ…
ದೇವರಹಿಪ್ಪರಗಿ: ದಿ:೨೧ ರಂದು ೧೧೦/೧೧ ಕೆ.ವ್ಹಿ ಅಸ್ಕಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ಇದರ ಅಡಿಯಲ್ಲಿನ ೧೧ ಕೆ.ವ್ಹಿ ಫೀಡರ್ಗಳಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ದಿ:೨೨ ರಂದು ಬಸವನಬಾಗೇವಾಡಿ ಹಾಗೂ ಸಿಂದಗಿ ನಡುವಿನ ೨೨೦ ಕೆವ್ಹಿ ಲೈನ್ ಗೋಪುರ ನಿರ್ಮಾಣ ಕಾರ್ಯನಿಮಿತ್ತ ಸದರಿ ಪರಿವರ್ತಕದಿಂದ ಹೊರಹೊಮ್ಮುವ ದೇವರಹಿಪ್ಪರಗಿ ೧೧೦ ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದ ಅಡಿಯಲ್ಲಿನ ೧೧ ಕೆ.ವ್ಹಿ. ಫಿಡರಗಳಾದ ಕನ್ನೋಳ್ಳಿ ಆಯ್.ಪಿ. ಕನ್ನೋಳ್ಳಿ ಎನ್.ಜೆ.ವಾಯ್ ಮತ್ತು ಬಮ್ಮನಜೋಗಿ ಆಯ್.ಪಿ ಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಆ ದಿನ ಸಾಯಂಕಾಲ ೫ ಗಂಟೆಯಿಂದ ರಾತ್ರಿ ೧೨ಗಂಟೆಯವರೆಗೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಈ ಮಾರ್ಗದಲ್ಲಿ ಬರುವ ಎಲ್ಲ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಕೊಡುಗೆ ನೀಡಿದ ಸರ್ವಜ್ಞ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ವಚನಕಾರನೆನಿಸಿದ್ದಾನೆ ಎಂದು ಕುಂಬಾರ ಸಮುದಾಯದ ಮುಖಂಡ ಶಿವಾನಂದ ಕುಂಬಾರ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಕವಿ ಸರ್ವಜ್ಞನ ಜಯಂತಿ ಅಂಗವಾಗಿ ತಾಲ್ಲೂಕು ಆಡಳಿತದಿಂದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ತನ್ನ ಜೀವಿತದ ಅವಧಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ಜನರ ಆಡುಭಾಷೆಯಲ್ಲಿ ತ್ರಿಪದಿಗಳ ಮೂಲಕ ತಿಳಿಸಿ, ತಿದ್ದುವ ಮೂಲಕ ಸರ್ವಜ್ಞ ಕವಿ ಸಮಾಜ ಸುಧಾರಕರು ಹೌದು ಎಂದರು.ಶಿರಸ್ತೇದಾರ ಡಿ.ಬಿ.ಭೋವಿ, ರಮೇಶ ಕುಂಬಾರ, ಅಕ್ಷಯ ಕುಂಬಾರ, ಪಿ.ಎಸ್.ಹುಡೇದ, ಸಂತೋಷ ಹೊಟಗಾರ, ಸಿ.ಎಚ್.ಪಡೇಕನೂರ, ಶಿವಶಂಕರ ಜಾಧವ, ಕಿಶೋರಕುಮಾರ ರಾಠೋಡ, ಕುಮಾರ ಅವರಾದಿ, ಮಹಾಂತೇಶ ಮನಗೂಳಿ, ಆಕಾಶ ಮೇತ್ರಿ, ಚನ್ನಬಸು ಹೊಸಮನಿ, ಆರ್.ಎಮ್.ಕಿಣಗಿ, ಸತೀಶ ಮಂಗಳವಾಡೆ ಇದ್ದರು.
ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಂತ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ಕೆರೂರ, ಮುಖ್ಯ ಗುರು ಎಸ್.ವಿ.ಹಿರೇಮಠ, ಕೆ.ಎಸ್.ಚಟ್ಟಿ, ರೇಣುಕ್ಕವ್ವಾ ಎಸ್.ಬಿ, ತಬಸ್ಸುಮ ನಾಗರಬಾವಡಿ, ಯಾಸ್ಮೀನ ಮೊಘಲಾಯಿ, ಸಂತೋಷ ಬಿದರಿ, ಮಹಾನಂದಾ ಹತ್ತರಕಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಅಪ್ಸಾ ಬಿಜ್ಜರಗಿ ಕುರಾಣ ಪಠಿಸಿದಳು, ಸ್ವಾಲೇಹಾ ದೇಸಾಯಿ ಹಮ್ದ, ಮುಸಬ್ಬಿಯಾ ಮುರಾಳ ನಾಥ ಇದ್ದರು.
ವಿಜಯಪುರ: ನಗರದಲ್ಲಿರುವ ಐತಿಹಾಸಿಕ ಬಾವಿಯಾದ ತಾಜಬಾವಡಿ ಸ್ಮಾರಕವನ್ನು ಟಿ.ಭೂಬಾಲನ್ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ಮಾಡಿದರು. ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ/ನ್ನು ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಕಾರ್ಫರೇಟ್ ಸಾಮಾಜಿಕ ಹೊಣೆಗಾರಿಕೆ (ಅSಖ) ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.ಸದರಿ Adopt A monument ಯೋಜನೆಯಡಿ ತಾಜಬಾವಡಿ ಸ್ಮಾರಕವನ್ನು World Monument Fund India Associations Mumbai ಸಂಸ್ಥೆಯು ದತ್ತು ಪಡೆದಿದ್ದು, ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ವಿವಿಧ ಯೋಜನೆ ಹಮ್ಮಿಕೊಂಡಿರುತ್ತಾರೆ. ಸದರಿ ವಿಷಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ತಾಜಬಾವಡಿ ಸ್ಮಾರಕದ ಸುತ್ತ-ಮುತ್ತಲಿರುವ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳ ಜೊತೆ ಸಮಾಲೋಚನೆ ಮಾಡಿದರು ಹಾಗೂ ತಾಜಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸಂರಕ್ಷಿಸಲು, ಸ್ಮಾರಕ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬAಧಪಟ್ಟ ಅಧಿಕಾರಿಗಳೊಂದಿಗೆ…
ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಫೆ.೨೧, ೨೨ ಹಾಗೂ ೨೩ರಂದು ಮೂರು ದಿನಗಳವರೆಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆಯವರೆಗೆ ಸಿದ್ಧ ಉಡುಪು, ಆಹಾರ ವಸ್ತುಗಳು, ಆಯುರ್ವೇದಿಕ ವಸ್ತುಗಳು, ಅಗರಬತ್ತಿ, ಆಟಿಕೆ ವಸ್ತುಗಳ ಮಾರಾಟ ಮೇಳ ಹಾಗೂ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ಈ ಮೇಳದಲ್ಲಿ ಗ್ರಾಹಕರು ಉತ್ಪಾದಕರಿಂದ ನೇರವಾಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಉದ್ದಿಮೆ ಆರಂಭಿಸಲು ಆಸಕ್ತಿವುಳ್ಳವರಿಗೆ ಉಚಿತವಾಗಿ ಮಾಹಿತಿಯನ್ನು ಮೇಳದಲ್ಲಿ ನೀಡಲಾಗುವುದು. ಮಾರುಕಟ್ಟೆ ವೃದ್ಧಿಗಾಗಿ ನುರಿತ ಅನುಭವಿಗಳಿಂದ ಉಚಿತವಾಗಿ ಸಲಹೆ-ಸೂಚನೆ ಒದಗಿಸಲಾಗುವುದು. ಸಾರ್ವಜನಿಕರು ಮಾರಾಟ ಹಾಗೂ ವಸ್ತು ಪ್ರದರ್ಶನದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.೨೬ ಹಾಗೂ ಫೆ.೨೭ರವರಗೆ ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಲಾಗಿದೆ.ಉದ್ಯೋಗ ಮೇಳಕ್ಕೆ ಮತ್ತು ೫೦೦ಕ್ಕೂ ಹೆಚ್ಚು ವಿವಿಧ ಬೃಹತ್, ಮಧ್ಯಮ, ಸಣ್ಣ ಮತ್ತು ಇತರೆ ವಲಯದ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಸ್ನಾತಕ್ಕೋತ್ತರ ಪದವಿ, ಇಂಜನೀಯರಿಂಗ್ ಮತ್ತು ವಿವಿಧ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಿ ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು http:/skillconnect.kaushalkar.com ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಭಾಗವಹಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ದೂ: ೦೮೩೫೨-೨೯೭೦೧೯, ಸಹಾಯವಾಣಿ ಸಂಖ್ಯೆ:೧೮೦೦೫೯೯೯೯೧೮ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸರ್ವಜ್ಞ ಜನರ ಮಧ್ಯೆ ಬದುಕಿದ ಜನಸಾಮಾನ್ಯರ ಕವಿ. ಅವರು ತಮ್ಮ ತ್ರಿಪದಿಗಳ ಮೂಲಕ ಅತ್ಯಂತ ಸರಳವಾಗಿ ತತ್ವಾದರ್ಶಗಳನ್ನು ನೀಡಿದ್ದಾರೆ. ಅವರ ವಚನಗಳ ಸಾರವನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯಗಳಿಲ್ಲ. ಕೃಷಿ, ಸಂಸಾರ, ಅನಿಷ್ಠ ಪದ್ಧತಿ, ಸಮಾಜದ ಪರಿಕಲ್ಪನೆ ಹೀಗೆ ಅನೇಕ ವಿಷಯಗಳ ಮೇಲೆ ತ್ರಿಪದಿಗಳನ್ನು ರಚಿಸಿದ್ದಾರೆ. ಮೂರೇ ಸಾಲಿನಲ್ಲಿ ಅಗಾಧವಾದ ಸಂದೇಶ ಕೊಡುವ ವಚನಗಳನ್ನು ರಚಿಸಿ ಈ ನಾಡಿಗೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ.ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ ಎಂದು ಹೇಳಿದರು.ಹೊನ್ನುಟಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಕುಂಬಾರ ಅವರು ವಿಶೇಷ ಉಪನ್ಯಾಸ ನೀಡಿ, ಸರ್ವರೊಳಗೊಂದು ನುಡಿಯ ಕಲಿತು ವಿದ್ಯೆಯ ಪರ್ವತವೇ ಆದವರು ಸರ್ವಜ್ಞ. ಅವರು…
ಮರಾಠ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ | ಸರ್ವಾನುಮತದಿಂದ ಅಂಗೀಕಾರ ಮುಂಬಯಿ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಎರಡರಲ್ಲೂ ಮರಾಠ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಮರಾಠ ಮೀಸಲಾತಿ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ. ಮಹಾರಾಷ್ಟ್ರ ರಾಜ್ಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಸೂದೆ 2024, ಒಮ್ಮೆ ಜಾರಿಗೆ ಬಂದರೆ, ಒಂದು ದಶಕದ ಅನುಷ್ಠಾನದ ನಂತರ ಸಂಪೂರ್ಣ ಪರಿಶೀಲನೆಗೆ ಒಳಪಡುತ್ತದೆ.ಸುಮಾರು 2.5 ಕೋಟಿ ಕುಟುಂಬಗಳನ್ನು ಒಳಗೊಂಡ ಸಮೀಕ್ಷೆಯ ಆಧಾರದ ಮೇಲೆ ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗ ಆಯೋಗವು ಸಲ್ಲಿಸಿದ ಸಮಗ್ರ ವರದಿಯನ್ನು ಈ ನಿರ್ಧಾರ ಅನುಸರಿಸಿದೆ. ಈ ಸಮೀಕ್ಷೆಯು ರಾಜ್ಯದಲ್ಲಿ ಮರಾಠ ಸಮುದಾಯ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸೂಕ್ಷ್ಮವಾಗಿ ಪರಿಶೋಧಿಸುತ್ತದೆ.ವರದಿಯ ಪ್ರಕಾರ, ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ಮರಾಠಾ ಸಮುದಾಯವು ಗಮನಾರ್ಹ ಶೇಕಡಾ 28 ರಷ್ಟಿದೆ. ‘ಸುಮಾರು 2-2.5 ಕೋಟಿ ಜನರ ಮೇಲೆ ಸಮೀಕ್ಷೆ ನಡೆಸಲಾಗಿದೆ. ಫೆಬ್ರವರಿ 20 ರಂದು ನಾವು ವಿಧಾನಸಭೆಯ ವಿಶೇಷ ಅಧಿವೇಶನವನ್ನು…
