Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂದು (ನವ್ಹಂಬರ ೧೩) “ವಿಶ್ವ ದಯೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರ ವಚನ “ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ” ಎಂಬಂತೆ, ದಯೆ ಕೇವಲ ಮಾನವರಲ್ಲಿ ಮಾತ್ರವಲ್ಲ. ಎಲ್ಲಾ ಪ್ರಾಣಿಗಳಲ್ಲೂ ಇರಬೇಕು. ಎಲ್ಲಾ ಧರ್ಮಗಳು ದಯೆಯನ್ನು ಪ್ರತಿಪಾದಿಸುತ್ತವೆ ಮತ್ತು ದಯವೇ ಧರ್ಮದ ಮೂಲಾಂಶವಾಗಿದೆ ಎಂದು ಹೇಳಬಹುದು.ಸಮಾಜದಲ್ಲಿ ಶಾಂತಿ, ಸಾಮರಸ್ಯ, ಭಾವೈಕ್ಯತೆ ಮತ್ತು ಧರ್ಮಸಹಿಂಷ್ಣುತೆ ಮತ್ತು ಮಾನವೀಯ ಸಂಬಂಧಗಳನ್ನು ಮತ್ತು ಸಮಷ್ಠಿಭಾವದ ಪರಿಸರವನ್ನು ಬೆಳೆಸಬೇಕಾದರೆ ದಯೆ, ಕರುಣೆ, ಕೃಪೆ ಮತ್ತು ಸಹಾನುಭೂತಿಯಂತಹ ಗುಣಗಳು ಅತಿ ಮುಖ್ಯ. ಜನರಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ, ಗೌರವ ಮತ್ತು ಉತ್ತಮ ಸೌಹಾರ್ಧಯುತವಾದ ಸಂಬಂಧಗಳನ್ನು ದಯೆ ಎಂಬುದು ಉತ್ತೇಜಿಸುತ್ತದೆ. ಜೀವನದಲ್ಲಿ ದಯೆಯುಳ್ಳ ನಡತೆ ಮತ್ತು ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯಲ್ಲಿರುವ ದಯಾ ಗುಣ ಸಂತೋಷ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.ಆಚರಣೆಯ ಉದ್ಧೇಶ ಮೊಟ್ಟಮೊದಲಿಗೆ ೧೯೯೮ ರಲ್ಲಿ ಟೋಕಿಯೋ…
ಇಂದು (ನವೆಂಬರ ೧೩) ಕೆ.ಎಲ್.ಇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಶಿಲ್ಪಾ ಮೃತ್ಯುಂಜಯ. ಮಿಣಜಿಗಿಕೆ ಇ ಬೋರ್ಡ್ ಸೆಂಟ್ರಲ್ ಸ್ಕೂಲ್ಧಾರವಾಡ ಉದಯರಶ್ಮಿ ದಿನಪತ್ರಿಕೆ “ಜಗದಗಲ ಮುಗಿಲಗಲಮಿಗೆಯಗಲ ನಿಮ್ಮಗಲ”ಎನ್ನುವ ಬಸವಣ್ಣನವರ ವಚನದಂತೆ ನಮ್ಮ ಕೆ. ಎಲ್. ಇ. ಶಿಕ್ಷಣ ಸಂಸ್ಥೆಯ ಖ್ಯಾತಿ ಇದೆ. ಕೆ. ಜಿ. ಯಿಂದ ಪಿ. ಜಿ.ವರೆಗೂ ಶಿಕ್ಷಣ ನೀಡುತ್ತಿರುವ ಬೃಹತ್ ಶಿಕ್ಷಣ ಸಂಸ್ಥೆ ಇದಾಗಿದೆ. ಇದು ಏಷಿಯಾ ಖಂಡದಲ್ಲೇ ಪ್ರಖ್ಯಾತಿ ಹೊಂದಿದ ಲಿಂಗಾಯತ ಶಿಕ್ಷಣ ಸಂಸ್ಥೆಯಾಗಿದೆ ಎಂದರೆ ತಪ್ಪಾಗದು.ಏಳು ಜನ ಶಿಕ್ಷಕರ ಸಹಕಾರ ಮತ್ತು ತ್ಯಾಗದಿಂದ ಆಕಾಶದೆತ್ತರಕ್ಕೆ ಬೆಳೆದು ನಿಂತ ಈ ಶಿಕ್ಷಣ ಸಂಸ್ಥೆ ನಮ್ಮ ಸಪ್ತರ್ಶಿಗಳಾದ ಪಂಡಿತಪ್ಪ ಚಿಕ್ಕೋಡಿ, ಎಂ. ಆರ್. ಸಾಖರೆ, ಶಿ. ಶಿ. ಬಸವನಾಳ, ಎಫ್. ಎಚ್. ಕಟ್ಟಿಮನಿ, ಬಿ. ಬಿ. ಮಮದಾಪುರ, ಬಿ. ಎಸ್. ಹಂಚಿನಾಳ ಮತ್ತು ವೀರನಗೌಡ ಪಾಟೀಲ ಎಂಬ ಈ ಏಳು ಮಹಾನ್ ವ್ಯಕ್ತಿಗಳ ಅವಿರತ ದುಡಿಮೆ ಮತ್ತು ತ್ಯಾಗದ ಫಲವೇ ಕೆ. ಎಲ್. ಇ.…
ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ‘ದೀಪಾವಳಿ’ ಎಂದು ಕರೆಯುವ ಬದಲು ‘ಡಮ್ಮಾವಳಿ’ ಎಂದು ಕರೆಯಬೇಕೇನೋ.”ಪಟಾಕಿ ಹೊಡಿಬೇಡಿ.. ಹೊಡಿಬೇಡಿ, ಚೂರುಪಾರು ಉಳಿದುಕೊಂಡಿರುವ ಒಳ್ಳೆಯ ವಾತಾವರಣವನ್ನ ಹಾಳುಮಾಡಬೇಡಿ” ಎಂದು ಯಾರಿಗೆ ಎಷ್ಟು ಹೇಳಿದರೂ, ಕೇಳುವರಾರು? ಎಲ್ಲೋ ಹತ್ತಕ್ಕೊಬ್ಬರು ಅಷ್ಟೆ.ರಾತ್ರಿಪೂರಾ ಸರಪಟಾಕಿ ಪಟ ಪಟ ಎಂದು, ಅಟಂ ಬಾಂಬ್ ಡಮ್ ಡಮ್ ಹೊಡೆಯುತ್ತಲೇ ಇರುತ್ತವೆ.ಇದನ್ನು ನಿಲ್ಲಿಸಲಾಗುವುದಿಲ್ಲವೇ? ಆಗುತ್ತದೆ. ಆದರೆ ನಿಲ್ಲಿಸುವುದಿಲ್ಲ.ಸಿಗರೇಟ್ ಮೇಲೆ “ಆರೋಗ್ಯಕ್ಕೆ ಹಾನಿಕಾರಕ” ಎಂದು ಬರೆಸಿ, ಸಿಗರೇಟ್ ತಯಾರಿಕೆಗೆ ಪರವಾನಗಿ ಕೊಟ್ಟಿರುವವರು, ಇದನ್ನು ನಿಲ್ಲಿಸುವರೇ? ಪ್ಲಾಸ್ಟಿಕ್ ಕವರ್ ಬಳಸಿದರೆ ಫೈನ್ ಅಂತೆ, ಅದಕ್ಕೆ ತರಕಾರಿ ಮಾರ್ಕೆಟ್ ನಲ್ಲಿ, ಕವರ್ ಹೊರಗೆ ಕಾಣಿಸದಂತೆ ಬಚ್ಚಿಟ್ಟುಕೊಂಡು ಕೊಡುತ್ತಾರೆ.ಕವರ್ ಫ್ಯಾಕ್ಟರಿ ಬಂದ್ ಮಾಡಿಸಿದರೆ, ಫೈನ್ ಹಾಕುವ ಕೆಲಸವೂ ತಪ್ಪುತ್ತದೆ & ಪರಿಶೀಲಿಸಲು ಹೋಗುವ ಸಿಬ್ಬಂದಿಯ ಸಂಬಳವೂ ಉಳಿಯುತ್ತದೆ ಅಲ್ಲವೇ?ಸಿಗರೇಟ್ ಉತ್ಪಾದನೆ ನಿಲ್ಲಿಸಿ, ಅವಾಗ ಧೂಮಪಾನ ಆಗೋಲ್ಲ, ಸಿನಿಮಾಕ್ಕೆ ಮುಂಚೆ ಆ ಕೆಟ್ಟ ಕ್ಯಾನ್ಸರ್ ಮುಖ ನೋಡುವ ಕಷ್ಟವೇ ಇರೋಲ್ಲ.ಪ್ಲಾಸ್ಟಿಕ್ ಕವರ್ ಫ್ಯಾಕ್ಟರಿ ಬಂದ್ ಮಾಡಿಸಿ, ಕದ್ದುಮುಚ್ಚಿ…
ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಲೆಕ್ಕಶಾಸ್ತ್ರ ದಿನದ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಣಕಾಸಿನ ಎಲ್ಲ ವ್ಯವಹಾರಗಳನ್ನು ದಾಖಲೆ ರೂಪದಲ್ಲಿ ಇಡಬಲ್ಲ ಏಕೈಕ ಶಾಸ್ತ್ರವೇ ಲೆಕ್ಕಶಾಸ್ತ್ರ. ಜನರು ಮೊದಲು ತಮ್ಮ ಎಲ್ಲ ಆದಾಯ ಮತ್ತು ಖರ್ಚು-ವೆಚ್ಚದ ಬಾಬತ್ತುಗಳನ್ನು ತಿಳಿದಂತೆ ಬರೆಯುತ್ತಿದ್ದರು. ಕಂಪನಿ. ವ್ಯವಹಾರ, ಕೈಗಾರಿಕೆ, ಉದ್ದಿಮೆ ಇನ್ನಿತರ ಆರ್ಥಿಕ, ವಾಣಿಜ್ಯ ಮತ್ತು ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವ ಸಂಸ್ಥೆಗಳ ಲೆಕ್ಕಪತ್ರಗಳನ್ನು ಬರೆದಿಡುವ ಪದ್ಧತಿಯನ್ನು ಮೊಟ್ಟಮೊದಲಿಗೆ ಪರಿಚಯಿಸಿದವರು ಲುಕಾ ಫೆಸಿಲಿಯೋ. ಇಂದಿನ ಕಾರ್ಪೊರೇಟ್ ಜಗತ್ತು ಇಷ್ಟೊಂದು ಹಣಕಾಸಿನ ವ್ಯವಹಾರಗಳನ್ನು ಶಿಸ್ತುಬದ್ಧ, ತಾತ್ವಿಕ ಮತ್ತು ಸರಳ ಪದ್ಧತಿಯಲ್ಲಿ ಲೆಕ್ಕದ ಪುಸ್ತಕ ಮತ್ತು ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ ಲೆಕ್ಕಶಾಸ್ತ್ರ ಪಿತಾಮಹ ಎಂದೇ ಹೆಸರುವಾಸಿಯಾದ ಲುಕಾ ಫೆಸಿಲಿಯೋ ಅವರ ಕೊಡುಗೆ ಅನನ್ಯವಾದುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಲೆಕ್ಕಶಾಸ್ತ್ರ ದಿನದ ಆಚರಣೆ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ವಿಜಯಪುರ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಪತ್ರಕರ್ತ ಅವಿನಾಶ ಬಿದರಿ ಆಯ್ಕೆಯಾಗಿದ್ದಾರೆ.2025-28ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಅವಿನಾಶ ಬಿದರಿ ಅವರಿಗೆ ಚುನಾವಣಾಧಿಕಾರಿ ಹಾಗೂ ಹಿರಿಯ ಪತ್ರಕರ್ತರಾದ ಟಿ.ಕೆ. ಮಲಗೊಂಡ ಅವರು ರವಿವಾರ ಸಂಜೆ ಪ್ರಮಾಣ ಪತ್ರ ವಿತರಿಸಿದರು.ಇದೇ ಸಂದರ್ಭದಲ್ಲಿ ಕುಟುಂಬ ವರ್ಗದವರು, ಸ್ನೇಹಿತರು ಹಾಗೂ “ಉದಯರಶ್ಮಿ” ಪತ್ರಿಕಾ ಬಳಗ ಅವಿನಾಶ ಬಿದರಿ ಅವರಿಗೆ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ವಿಜಯಪುರ ಜಿಲ್ಲಾ ಘಟಕದ ನೂತನ ಕಾರ್ಯದರ್ಶಿಯಾಗಿ ಪತ್ರಕರ್ತ ವಿನೋದ ಸಾರವಾಡ ಆಯ್ಕೆಯಾಗಿದ್ದಾರೆ.2025-28ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ವಿನೋದ ಸಾರವಾಡ ಅವರಿಗೆ ಚುನಾವಣಾಧಿಕಾರಿ ಹಾಗೂ ಹಿರಿಯ ಪತ್ರಕರ್ತರಾದ ಟಿ.ಕೆ. ಮಲಗೊಂಡ ಅವರು ರವಿವಾರ ಸಂಜೆ ಪ್ರಮಾಣ ಪತ್ರ ವಿತರಿಸಿದರು.ಕಾನಿಪ ಸಂಘದ ನೂತನ ಕಾರ್ಯದರ್ಶಿ ಪತ್ರಕರ್ತ ವಿನೋದ ಸಾರವಾಡ ಅವರಿಗೆ “ಉದಯರಶ್ಮಿ” ಪತ್ರಿಕಾ ಬಳಗವು ಮನದುಂಬಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ವಿಜಯಪುರ ಜಿಲ್ಲಾ ಘಟಕದ ಕಾರ್ಯಕಾರಣಿ ಸಮಿತಿ ಸ್ಥಾನಕ್ಕೆ ಪತ್ರಕರ್ತ ಚಿದಂಬರ ಕುಲಕರ್ಣಿ ಆಯ್ಕೆಯಾಗಿದ್ದಾರೆ.2025-28ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಕಾರ್ಯಕಾರಣಿ ಸಮಿತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಚಿದಂಬರ ಕುಲಕರ್ಣಿ ಅವರಿಗೆ ಚುನಾವಣಾಧಿಕಾರಿ ಹಾಗೂ ಹಿರಿಯ ಪತ್ರಕರ್ತರಾದ ಟಿ.ಕೆ. ಮಲಗೊಂಡ ಅವರು ಪ್ರಮಾಣ ಪತ್ರ ವಿತರಿಸಿದರು.ಅವಿರೋಧವಾಗಿ ಆಯ್ಕೆಯಾದ ಚಿದಂಬರ ಕುಲಕರ್ಣಿ ಅವರಿಗೆ “ಉದಯರಶ್ಮಿ” ಪತ್ರಿಕೆ ಬಳಗವು ಮನದುಂಬಿ ಅಭಿನಂದನೆಗಳನ್ನು ತಿಳಿಸಿದೆ.ಚಿದಂಬರ ಕುಲಕರ್ಣಿ ಅವರ ತಂದೆ ದಿ. ಬಿ.ಸಿ.ಕುಲಕರ್ಣಿ ಅವರು ಅವರು ಈ ಹಿಂದೆ ಎರಡು ಅವಧಿಗೆ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಸಂಘದ ಬೆಳವಣಿಗೆಗೆ ಶ್ರಮಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ವಿಜಯಪುರ ಜಿಲ್ಲಾಡಳಿತದಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿತ್ರದುರ್ಗದ ಕೋಟೆಗೆ ಸಂಕಷ್ಟ ಎದುರಾಗಿದ್ದಾಗ ಯಾವುದೇ ಯುದ್ಧ ಕೌಶಲ್ಯಗಳಿಲ್ಲದಿದ್ದರೂ ಛಲದಿಂದ ಶತ್ರು ಪಡೆಯ ವಿರುದ್ಧ ಒನಕೆಯನ್ನು ಅಸ್ತçವನ್ನಾಗಿಸಿಕೊಂಡು ಹೋರಾಡಿ, ನಾಡ ರಕ್ಷಣೆ ಮಾಡಿದ ಮಹಿಳೆ ಒನಕೆ ಓಬವ್ವ ಧೀರತನ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಮಾತನಾಡಿದ ಅವರು, ಓರ್ವ ಮಹಿಳೆಯಾಗಿದ್ದರೂ ಧೈರ್ಯ, ಸಾಹಸದಿಂದ ಶತ್ರುಗಳ ದಾಳಿಗೆ ಎದೆಗುಂದದೆ ಒನಕೆ ಹಿಡಿದು ಹೋರಾಡಿದ ಓಬವ್ವ ಅವರ ಧೀರತನದ ಜೀವನ ಇಂದಿನ ಪೀಳಿಗೆ ಮಾದರಿಯಾಗಿದೆ. ಸಂಕಷ್ಟದಲ್ಲಿ ಸ್ವಯಂಪ್ರೇರಿತವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಓಬವ್ವರಂತಹ ವೀರರ ಕಥೆಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗುವುದರೊಂದಿಗೆ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದರು.ಐತಿಹಾಸಿಕ ಕೋಟೆ ಚಿತ್ರದುರ್ಗ ಎಂದರೆ ನೆನಪಾಗುವುದೇ ಒನಕೆ ಓಬವ್ವಳ…
ವಿವಿಧ ಸಾಮಾಜಿಕ ಭದ್ರತೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಅದಾಲತ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಲಾಗುತ್ತಿದ್ದು, ನವೆಂಬರ್ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ವಿವಿಧ ೧೫ ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.ವಿಜಯಪುರ ಉಪ ವಿಭಾಗಾಧಿಕಾರಿಗಳು ಕೋಲ್ಹಾರ ತಾಲೂಕಿನ ಹಿರೇ ಆಸಂಗಿ ಗ್ರಾಮದ ಶ್ರೀ ಗದಿಗೇಶ್ವರ ಮಠದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ವಿಜಯಪುರ ಗ್ರೇಡ್-೨ ತಹಶೀಲ್ದಾರ ಅವರು ಗೂಗದಡ್ಡಿ ಗ್ರಾಮದ ಲಕ್ಷೀ ದೇವಸ್ಥಾನದ ಆವರಣದಲ್ಲಿ ಹಾಗೂ ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಕಳ್ಳಕವಟಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ ಅವರು ದೇವಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಬಸವನಬಾಗೇವಾಡಿ ಗ್ರೇಡ್-೨ ತಹಶೀಲ್ದಾರ ಅವರು ಮುತ್ತಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಕಲ್ಯಾಣ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸಕ್ತ ಬೀದಿ ಬದಿ ವ್ಯಾಪಾರಸ್ಥರು ಸ್ವನಿಧಿ ಮಿತ್ರರಾಗಿ ತೊಡಗಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಸ್ವ-ನಿಧಿ ಮಿತ್ರ ಕಲ್ಪನೆಯು ನೀತಿ ಮತ್ತು ತಳಮಟ್ಟದ ಅನುಷ್ಠಾನಗಳ ಮಧ್ಯ ಸಂಪರ್ಕ ಸಾಧಿಸಲು ಮಾದರಿಯಾಗಿ ಕಾರ್ಯ ನಿರ್ವಹಿಸುವುದಾಗಿದೆ. ಸಮುದಾಯದ ಸ್ವಯಂ ಸೇವಕರನ್ನು ನಂಬಿಕೆಯ ಅರ್ಹ ಸಹಾಯಕರನ್ನಾಗಿ ತೊಡಗಿಸುವ ಮೂಲಕ ಯೋಜನೆಯ ಕಾರ್ಯ ಗತಗೊಳಿಸುವಿಕೆಯನ್ನು ಬಲಪಡಿಸುವುದು.ಬೀದಿ ಬದಿ ವ್ಯಾಪಾರಸ್ಥರು ಈಗಾಗಲೇ ೨ನೇ ಕಂತಿನ ಸಾಲ ಮರು ಪಾವತಿಸಿ ೩ನೇ ಕಂತಿಗೆ ಅರ್ಜಿ ಸಲ್ಲಿಸಿದವರಾಗಿರಬೇಕು. ಸಾಲ ಪಡೆದು ಸರ್ಕಾರದ ವಿವಿಧ ಯೋಜನೆಗಳಾದ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳ ಸದುಪಯೋಗ ಪಡೆದಿರಬೇಕು ಹಾಗೂ ಅರ್ಜಿ ಸಲ್ಲಿಸುವ ಬೀದಿ ಬದಿ ವ್ಯಾಪಾರಸ್ಥರು ಕನಿಷ್ಠ ೧೮ ರಿಂದ ೫೫ ವರ್ಷ ವಯೋಮಾನದವರಾಗಿರಬೇಕು.ಕನಿಷ್ಠ ೧೦ನೇ ತರಗತಿ ಪಾಸಾಗಿರಬೇಕು.ಈ ಯೋಜನೆಯಡಿ ಎರಡನೇ ಹಂತದ ಸಾಲವನ್ನು ಯಶಸ್ವಿಯಾಗಿ ಮರುಪಾವತಿಸಿದ ಅರ್ಹ ಬೀದಿ ಬದಿ ವ್ಯಾಪಾರಿಗಳು ಪಾಲಿಕೆಯ ಡೇ-ನಲ್ಮ್ ವಿಭಾಗದಲ್ಲಿ ಅರ್ಜಿ ನಮೂನೆ ಪಡೆದು ನವೆಂಬರ್ ೧೫ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪಾಲಿಕೆ…
