ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಮಾ.19 ರಿಂದ ಮಾ. 23 ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದ್ದು, ಜಾತ್ರೆ ಅಂಗವಾಗಿ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಾ. 19 ರಂದು ಬೆಳಗ್ಗೆ 8 ಗಂಟೆಗೆ ಜಾನುವಾರು ಜಾತ್ರೆಯನ್ನು ಬಬಲಾದಿ-ಚಮಕೇರಿ-ಕತಕನಹಳ್ಳಿಯ ಶಿವಯ್ಯ ಸ್ವಾಮೀಜಿ ಉದ್ಘಾಟಿಸುವರು. ಬೆಳಗ್ಗೆ 10.30 ಗಂಟೆಗೆ ಕೃಷಿ ಮೇಳ ಉದ್ಘಾಟನೆ, ಮಧ್ಯಾಹ್ನ 4 ಗಂಟೆಗೆ ಕೆಸರಿನಲ್ಲಿ ಮನುಷ್ಯರ ಓಟದ ಸ್ಪರ್ಧೆ ಮತ್ತು ಸಂಜೆ 7 ಗಂಟೆಗೆ ಜ್ಞಾನ ದೀಪೋತ್ಸವ ನಡೆಯಲಿದೆ.
ಮಾ. 20 ರಂದು ಬೆಳಗ್ಗೆ 8 ಗಂಟೆಗೆ ಕತೃ ಗದ್ದುಗೆಗ ರುದ್ರಾಭೀಷೇಕ, ಕುಂಭಾಭೀಷೇಕ ಜರುಗಲಿದೆ. ಬೆಳಗ್ಗೆ 10.30 ಗಂಟೆಗೆ ಚಾಣಕ್ಯ ಕರಿಯರ್ ಅಕಾಡೆಮಿ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆ, ಸಂಜೆ 7.30 ಪುರಾಣ ಪ್ರವಚನ ಮಂಗಲ ಮತ್ತು ರಾತ್ರಿ 9 ಗಂಟೆಗೆ ಭಜನಾ ಕಾರ್ಯಕ್ರಮಗಳು ಜರುಗಲಿವೆ.
ಮಾ. 21 ರಂದು ಬೆಳಗ್ಗೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, 8 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, 9.30 ಕ್ಕೆ ಕೌಡಿ ಜಾತ್ರೆ, 10 ಗಂಟೆಗೆ ಆರೋಗ್ಯ ಉಚಿತ ಮೇಳ, 10.30ಕ್ಕೆ ಆರೇತ್ತಿನ ನೇಗಿಲು ಜಗ್ಗುವ ಸ್ಪರ್ಧೆ, ಸಂಜೆ 7 ಗಂಟೆಗೆ ರಥೋತ್ಸವ ಮತ್ತು ರಾತ್ರಿ 9 ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ನಡೆಯಲಿದೆ.
ಮಾ. 22 ರಂದು 10ಕ್ಕೆ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ,ಬೆಳಗ್ಗೆ 11 ಗಂಟೆಗೆ ಸರಳ ಸಾಮೂಹಿಕ ವಿವಾಹ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ವಿತರಣೆ ಮತ್ತು ರಾತ್ರಿ 8 ಗಂಟೆಗೆ ನಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾ. 23 ರಂದು ಬೆಳಗ್ಗೆ 1 ಗಂಟೆಗೆ ಭಾರ ಎತ್ತುವ ಸ್ಪರ್ಧೆ, ಸಂಜೆ ಜಂಗಿ ಕುಸ್ತಿ, ಸಂಜೆ 7 ಗಂಟೆಗೆ ಜಾನುವಾರ ಜಾತ್ರೆಯ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ನಂತರ ರಾತ್ರಿ 8 ಗಂಟೆಗೆ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
