Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಆಧ್ಯಾತ್ಮಿಕ ಪ್ರವಚನಗಳು ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡಿ ಸಾತ್ವಿಕ ಜೀವನ ನಡೆಸಲು ಶಕ್ತಿಯನ್ನು ನೀಡುತ್ತವೆ ಎಂದು ಕಾತ್ರಾಳದ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.ಸಮೀಪದ ಜೀರಂಕಲಗಿ ಗ್ರಾಮದಲ್ಲಿ ಹತ್ತು ದಿನಗಳವರೆಗೆ ನಡೆದ ಪ್ರವಚನ ಕಾರ್ಯಕ್ರಮದ ಕೊನೆಯ ದಿನ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.ಹತ್ತು ದಿನಗಳವರೆಗೆ ಬೆಳಗ್ಗೆ 6.30 ರಿಂದ 7.30 ರ ವರೆಗೆ ಶ್ರೀಗಳು ವಿವಿಧ ಶರಣರ ವಚನಗಳನ್ನು ಮತ್ತು ಸಿದ್ದೇಶ್ವರ ಶ್ರೀಗಳ ಜೀವನ ಮತ್ತು ಪ್ರವಚನಗಳ ಕೆಲವು ಭಾಗಗಳನ್ನು ವಿಶ್ಲೇಷಣೆ ಮಾಡುತ್ತ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನವನ್ನು ಉಣಬಡಿಸಿದರು.ಕಿಸೆ ಇಲ್ಲದ ಸಂತ ನಾಡಿನಗುರು ಸಿದ್ದೇಶ್ವರ ಶ್ರೀಗಳ ಬದುಕು ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿದೆ. ನಿಸರ್ಗದಲ್ಲಿ ದೇವರನ್ನು ಕಾಣುವ ಇವರು ಅವರ ತತ್ವಾದರ್ಶ ನಮ್ಮೆಲ್ಲರಿಗೆ ಪೂರಕವಾಗಿ, ಅವರ ಪ್ರವಚನಗಳ ಧ್ವನಿ ಸುರಳಿಯನ್ನು ದಿನಂಪ್ರತಿ ಕೇಳಿ ಆನಂದಪಡೋಣ ಎಂದರು.ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅನೇಕ ಶ್ರೀಗಳು ಭಾಗವಹಿಸಿ ಪ್ರತಿದಿನ ತಮ್ಮ ಪ್ರವಚನ ನೀಡಿದರು.ಜೀರಂಕಲಗಿ ಮತ್ತು ಸುತ್ತಮುತ್ತಲಿನ ನೂರಾರು ಗ್ರಾಮಗಳ ಸಾವಿರಾರು ಭಕ್ತರು ಪ್ರತಿದಿನ ಪ್ರವಚನ ಕಾರ್ಯಕ್ರಮದಲ್ಲಿ…
ಹುಣಸಗಿ: ಪಟ್ಟಣದಲ್ಲಿ ಫೆ.27ರಂದು ಬೆಳಿಗ್ಗೆ ಸುರಪುರದ ಜನಪ್ರಿಯ ಶಾಸಕರಾದ ದಿ|| ಶ್ರೀ ರಾಜಾ ವೆಂಕಟಪ್ಪ ನಾಯಕ ಅವರ ವೃತ್ತ ಪಟ್ಟಣದ ಕಾಂಗ್ರೆಸ್ ಮುಖಂಡರು ಎಲ್ಲರೂ ಸೇರಿ ವೃತ್ತ ಉದ್ಘಾಟನೆ ಮಾಡಲಾಯಿತುಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಮಲಗಲದಿನ್ನಿ, ಕಾಂಗ್ರೆಸ್ ಯುವ ಮುಖಂಡರು ಆರ್.ಎಂ.ರೇವಡಿ, ಕರೀಂಸಾಬ ಮುನ್ಸಿ, ಬಸವರಾಜ ನೂಲಿನ್, ಸಿಧ್ಧಾರೂಡ ನೂಲಿನ್, ಖಾಸೀಂಸಾಬ ಟೊಣ್ಣೂರ, ಶಾಂತಣ್ಣ ಮಲಗಲದಿನ್ನಿ, ಮಹಾದೇವಿ ಬೇನಾಳ ಮಠ, ಖಾಜಾ ಪಟೇಲ ಹುಣಸಗಿ, ಹಾಗೂ ರವಿ ಮಲಗಲದಿನ್ನಿ, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು, ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
ರಾಜ್ಯಸಭಾ ಚುನಾವಣೆ ಫಲಿತಾಂಶ | ಕಾಂಗ್ರೆಸ್ನ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು | ಗೆದ್ದು ಬೀಗಿದ ಕೈ ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ. ಅಚ್ಚರಿಯ ಪಲಿತಾಂಶ ನಿರೀಕ್ಷಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ತಂತ್ರ ಫಲಿಸದೆ ಹೋಗಿದೆ.ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕನ್ 47, ಸೈಯ್ಯದ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ತಲಾ 46 ಮತಗಳನ್ನು ಪಡೆದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಜನಾರ್ದನ ರೆಡ್ಡಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು.ಬಿಜೆಪಿ ಅಭ್ಯರ್ಥಿ ನಾರಾಯಣಾಸಾ ಬಾಂಡಗೆ ಅವರು 47 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ನ ಕುಪೇಂದ್ರ ರೆಡ್ಡಿ ಅವರಿಗೆ ನಿರಾಸೆಯಾಗಿದೆ. ವರದಿಗಳ ಪ್ರಕಾರ, ಜೆಡಿಎಸ್ನ ಎಲ್ಲ ಶಾಸಕರು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ…
ಬ್ರಹ್ಮದೇವನಮಡು: ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು. ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ಶ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ಭಕ್ತಿಬಂಡಾರಿ ಬಸವೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀವ೯ಚನ ನೀಡಿದರು.ಹಳ್ಳಿಯ ದೇವಸ್ಥಾನಗಳಲ್ಲಿ ಜರುಗುವ ಧಾಮಿ೯ಕ ಕಾಯ೯ಕ್ರಮಗಳು ಸಾಮರಸ್ಶದ ಸಂಕೇತವಾಗಿವೆ. ಜಾತಿ ಭೇದ ಮರೆತು ಪುರಾಣ,ಪ್ರವಚನಗಳಲ್ಲಿ ಪಾಲ್ಗೊಳ್ಳುವುದರಿಂದ ಭಕ್ತಿಯ ಮನೋಭಾವ ಮನೆ ಮಾಡುತ್ತದೆ.ಮಹಾತ್ಮರ ಚರಿತ್ರೆ ಕೇಳುವುದರಿಂದ ಮನಪರಿವತ೯ನೆಯಾಗಿ ಜೀವನದಲ್ಲಿ ಧಮ೯ ಕಾಯ೯ ಮಾಡಲು ಪ್ರೇರಣೆಯಾಗುತ್ತದೆ. ಭಕ್ತರು ದಾನ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ಒತ್ತಡ, ಜಂಜಾಟ ನಿವಾರಣೆಗೆ ಧಾಮಿ೯ಕ ಕ್ಷೇತ್ರಗಳು ನೆಮ್ಮದಿಯ ತಾಣವಾಗಿವೆ ಎಂದರು.ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ಅಧ್ಶಕ್ಷತೆ ವಹಿಸಿದ್ದರು. ಖಾನಾಪೂರದ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ, ಹೊನ್ನಳ್ಳಿಯ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಸಿದ್ದಯ್ಶ ಹಿರೇಮಠ ಇದ್ದರು.ಪ್ರವಚನಕಾರ ಈರಣ್ಣ ಶಾಸ್ತ್ರಿಗಳು ಪ್ರವಚನ ನೀಡಿದರು. ಕಲ್ಲಯ್ಶ ಪಡದಳ್ಳಿ ಅವರ ಸಂಗೀತ ಸೇವೆಯೊಂದಿಗೆ ಪ್ರಾಣೇಶ ಯಡ್ರಾಮಿ…
’ಉದಯರಶ್ಮಿ’ ವರದಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯ ಉದ್ಯಾವನದ ಸ್ವಚ್ಛತೆ ಮತ್ತು ಕೆಲ ಆಟಿಕೆಗಳು ಹಾಳಾದ ಬಗ್ಗೆ ಬಿಚ್ಚಿಬಿದ್ದಿರುವ ಸಲಕರಣೆಗಳು, ಪುಂಡರ ಕಾಟ, ಪುರಸಭೆ ಕಡೆಗಣನೆ ಕುರಿತು ’ಉದಯರಶ್ಮಿ’ ಪತ್ರಿಕೆಯು ಸೋಮವಾರದ ಸಂಚಿಕೆಯಲ್ಲಿ “ಹುಡ್ಕೋ ಬಡಾವಣೆ ಉದ್ಯಾನವನ ಅದ್ವಾನ” ಎಂಬ ತಲೆಬರಹದ ಅಡಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ವರದಿಗೆ ಎಚೆತ್ತ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಹಿರಾದಾರ ಮಂಗಳವಾರ ಬೆಳಿಗ್ಗೆ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಜೋಕಾಲಿಯೊಂದಕ್ಕೆ ವೈರ್ ಬಿಗಿದಿರುವುದನ್ನು ಕೂಡಲೇ ತೆಗೆದು ಸರಿಯಾದ ಸರಪಳಿ ಅಳವಡಿಸುವಂತೆ, ಮುರಿದ ಜಾರುಬಂಡೆಯನ್ನು ದುರಸ್ತಿಗೊಳಿಸುವಂತೆ, ನಟ್ ಇಲ್ಲದ ಮೊತ್ತೊಂದು ಜೋಕಾಲಿಗೆ ನಟ್ ಫಿಟ್ ಮಾಡುವಂತೆ, ಕೂಡಲು ಆಸನಗಳಿಲ್ಲದ ಮತ್ತೊಂದು ಆಟಿಕೆಯನ್ನು ಸರಿಪಡಿಸುವಂತೆ ಮತ್ತು ಹೈ ಮಾಸ್ಕ್ ಲೈಟ್ನ್ನು ಇಂದೇ ಬೆಳಗುವಂತೆ ನೋಡಿಕೊಳ್ಳಲು ಎಸ್ಐ ಗಳಿಗೆ ಸೂಚಿದರು.ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರ ಆಸ್ತಿಯನ್ನು ಕಾಪಾಡುವುದು ನಮ್ಮ ಕಾರ್ಯ ಮಾತ್ರವಲ್ಲ. ಸಾರ್ವಜನಿಕರ ಪಾತ್ರವೂ ಸಾಕಷ್ಟಿದೆ. ಚಿಕ್ಕ ಮಕ್ಕಳು ಆಟವಾಡಬೇಕಾದ ಆಟಿಕೆಗಳಲ್ಲಿ ದೊಡ್ಡವರು ಆಟವಾಡಿದಲ್ಲಿ…
ಏಕಾಂಗಿ ಯಾತ್ರೆ ಮೂಲಕ ಬಿಜೆಪಿಗೆ ಮತಯಾಚನೆ ಮಾಡುತ್ತಿರುವ ಭರತ ಜೈನ್. ದೇವರಹಿಪ್ಪರಗಿ: ಭಾರತ ಬಚಾವ್, ಬಿಜೆಪಿಗೆ ಮತ ನೀಡಿ ಎಂಬ ಫಲಕದೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಧಾರವಾಡದ ಯುವಕನೊಬ್ಬ ಏಕಾಂಗಿ ಪ್ರಚಾರ ಕೈಗೊಂಡು ಗಮನ ಸೆಳೆದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಆಗಮಿಸಿದ ಧಾರವಾಡದ ಭರತ ಜೈನ್ ಎಂಬ ಯುವಕ ಭಾರತಮಾತೆ, ಕೃಷ್ಣಾರ್ಜುನರು, ಸ್ವಾಮಿ ವಿವೇಕಾನಂದ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಎಪಿಜೆ ಅಬ್ದುಲ್ ಕಲಂ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ, ಜೆ.ಪಿ.ನಡ್ಡಾ, ನಳೀನಕುಮಾರ ಕಟೀಲು ಅವರ ಚಿತ್ರಗಳಿರುವ ಫಲಕದೊಂದಿಗೆ ಏಕಾಂಗಿಯಾಗಿ ಇದೇ ದಿ.೧೮ ರಂದು ಧಾರವಾಡದಿಂದ ಸೈಕಲ್ ಯಾತ್ರೆ ಆರಂಭಿಸಿ ಬೆಳಗಾವಿ, ಬಾಗಲಕೋಟ, ವಿಜಯಪುರ ಮೂಲಕ ಪಟ್ಟಣಕ್ಕೆ ಆಗಮಿಸಿದ ಮಾಹಿತಿ ನೀಡಿದರು.ಭರತ ತಾವು ೧೦ಸಾವಿರ ಹಣದಲ್ಲಿ ಹೊಸದಾಗಿ ಸೈಕಲ್ ಕೊಂಡು ಯಾತ್ರೆಯ ಮೂಲಕ ಕಲಬುರಗಿ, ರಾಯಚೂರ, ಬಳ್ಳಾರಿ ಸೇರಿದಂತೆ ಕರ್ನಾಟಕದ ಹೆಚ್ಚು ಜಿಲ್ಲೆಗಳನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿ ಚುನಾವಣೆಯ ಮತದಾನದ ೧೦ ದಿನಗಳ ಮುಂಚಿತ…
ಘಾಳಪೂಜಿ ಗ್ರಾಮದಲ್ಲಿರುವ ವಸತಿ ಶಾಲೆ | ಮೂವರು ವಿದ್ಯಾರ್ಥಿಗಳಿಗೆ ಗಾಯ | ಓರ್ವನ ಸ್ಥಿತಿ ಗಂಭೀರ ಮುದ್ದೇಬಿಹಾಳ: ಏಕಾ ಏಕಿ ಹತ್ತಿದ ಬೆಂಕಿಯಿಂದಾಗಿ ವಿದ್ಯಾರ್ಥಿ ನಿಲಯದ ಕೊಠಡಿಯೊಂದು ಸಂಪೂರ್ಣ ಸುಟ್ಟು ಒಬ್ಬ ವಿದ್ಯಾರ್ಥಿಗೆ ಗಂಭೀರವಾಗಿ ಗಾಯವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿಗೆ.ತಾಲೂಕಿನ ಘಾಳಪೂಜಿ ಗ್ರಾಮದ ಮುರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆಯಲ್ಲಿ ಫೆ.೨೫ ರ ಮಧ್ಯರಾತ್ರಿ ೧೨:೩೦ ಕ್ಕೆ ದುರಂತ ಸಂಭವಿಸಿದೆ. ಒಟ್ಟು ೮ ಡಬಲ್ ಬೆಡ್ ಗಳಿರುವ ಕೊಠಡಿಯಲ್ಲಿ ೬ನೇ ತರಗತಿಯ ೧೬ ವಿದ್ಯಾರ್ಥಿಗಳು ಇದ್ದು ೫ ಬೆಡ್ಗಳಿಗೆ ಬೆಂಕಿ ಆವರಿಸುತ್ತಿದ್ದಂತೆ ಎಚ್ಚೆತ್ತು ಹೊರಗಡೆ ಓಡಿದ್ದಾರೆ. ಸಮರ್ಥ ಭಜಂತ್ರಿ ಎಂಬ ವಿದ್ಯಾರ್ಥಿ ಗೆ ಗಂಭೀರವಾಗಿ ಗಾಯವಾಗಿದ್ದು ವಿಜಯಪುರದ ಬಿಎಲ್ಡಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕಾರ್ಜುನ ಭಜಂತ್ರಿ ಮತ್ತು ಸಾಗರ ಕಡಕೋಳ ಎಂಬ ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ನಾಲತವಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ಘಟನಾ ಸ್ಥಳಕ್ಕೆ ತಹಶೀಲ್ದಾರ ಬಸವರಾಜ ನಾಗರಾಳ, ಸಮಾಜ ಕಲ್ಯಾಣ ಇಲಾಖೆಯ…
ಚಿಮ್ಮಡ: ಶೃಧ್ಧೆ ಹಾಗೂ ಒಗ್ಗಟ್ಟು ಇದ್ದರೆ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವೆಂದು ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪ್ರಭಾವಳಿ ಅರ್ಪಣಾ ಹಾಗೂ ಪ್ರಸಾದ ಪೂಜಾ ಕಾರ್ಯಕ್ರಮದ ನಂತರ ನಡೆದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯಾವುದೇ ಜಾತಿ, ಮತ, ಪಂಥಗಳನ್ನು ನೋಡದೆ ಪ್ರತಿಯೊಂದು ಸಮುದಾಯವನ್ನು ಒಟ್ಟಿಗೆ ಸೇರಿಸಿಕೊಂಡು ನಡೆಸುತ್ತಿರುವ ಇಂತಹ ಜಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಟಗಾರ ಸಮಾಜದ ಪ್ರಮುಖ ಶ್ರೀಕಾಂತ ಜಾಡಗೌಡರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಅಶೋಕ ಮೋಟಗಿ, ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪಾ ಹಳಿಂಗಳಿ, ಬಿ.ಎಸ್. ಪಾಟೀಲ, ಗುರಲಿಂಗಪ್ಪಾ ಪೂಜಾರಿ, ಗುರಪ್ಪಾ ಬಳಗಾರ, ಉಮೇಶ ಪೂಜಾರಿ, ರಾಚಯ್ಯ ಮಠಪತಿ, ಈಶ್ವರ ಬಡಿಗೇರ ಇಲಾಹಿ ಜಮಖಂಡಿ ವೇದಿಕೆಯಲ್ಲಿದ್ದರು.ಬನಶಂಕರಿದೇವಿ ಸೇವಾ ಸಮೀತಿಯ ಕಾರ್ಯದರ್ಶೀ ಅಶೋಕ ಧಡೂತಿ ಪ್ರಾಸ್ತಾವಿಕವಾಗಿ…
ವಿಜಯಪುರ: ನಗರದ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಫೆ.೨೫ ರಂದು ನಗರದ ಕಂದಗಲ್ಲ ಶ್ರೀ ಹನುಮಂತ ರಾಯ ರಂಗಮಂದಿರದಲ್ಲಿ ದಿ. ಶ್ರೀ ಭೋಜಣ್ಣ ಬಿಳಗಿಯವರ ಸ್ಮರಣಾರ್ಥ ಏರ್ಪಡಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.ದೆಹಲಿಯ ಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂ. ಹರೀಶ ತಿವಾರಿಯವರು ರಾಗ ಭಾಗೇಶ್ರೀ, ಠೂಮರಿ, ಮತ್ತು ಭೈರವಿಯಲ್ಲಿ ತಮ್ಮ ಶಾಸ್ತ್ರೀಯ ಗಾಯನದ ಜೊತೆಗೆ ಅಭಂಗ್ ಮತ್ತ ಭಜನ ಪ್ರಸ್ತುತಪಡಿಸಿ ನೆರೆದ ಸಂಗೀತಾಸ್ತರ ಮನ ತಣಿಸಿದರು. ಇವರಿಗೆ ಪಂ. ಸಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ಹಾಗೂ ಡಾ. ರವಿಕಿರಣ ನಾಕೋಡರವರು ತಬಲಾ ಸಾತ್ ಮತ್ತು ತಾನಪುರದಲ್ಲಿ ವಿಶಾಲ್ ಕಟ್ಟಿ, ಕಾಶಿನಾಥ ಭೋಸಲೆ ಸಾಥ ನೀಡಿ ಕಾರ್ಯಕ್ರಮಕ್ಕೆ ಮೆರಗುತಂದರು.ಈ ಕಾರ್ಯಕ್ರಮಲ್ಲಿ ಡಾ. ಸತೀಶ ಜಿಗಜಿನ್ನಿ, ವಿಶ್ವನಾಥ ಬೀಳಗಿ, ಅರುಣ ಸೋಲಾಪೂರಕರ್, ತ್ರೀವೇಣಿ ಬೀಳಗಿ, ಸಂಗಣ್ಣ ಪಾಟೀಲ, ರಮೇಶ ಚವ್ಹಾಣ, ಸಿಂಗ್, ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ಬಿ.ಎಸ್.ಪಾಟೀಲ, ಲಿಂಗರಾಜ ಕಾಚಾಪೂರ, ಡಾ. ಸದಾಶಿವ ಪವಾರ ಸಹಿತ ವಿಜಯಪುರದ ಎಲ್ಲ ಸಂಗೀತ…
ಇಂಡಿ: ಅನುಭವ ಮಂಟಪದಲ್ಲಿ ಅತ್ಯಂತ ಮೌಲ್ಯಯುತ ವಚನಗಳನ್ನು ರಚಿಸಿ ಇಡೀ ಸಮಾಜಕ್ಕೆ ಕಾಯಕದ ಮಹತ್ವ ಅರಿವು ಮೂಡಿಸಿದವರು ಕಿನ್ನರಿ ಬೊಮ್ಮಯ್ಯ ಎಂದು ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ ಗುರುಗಳು ಹೇಳಿದರು.ಪಟ್ಟಣದ ಹಡಪದ ಅಪ್ಪಣ್ಣ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಕಿನ್ನರಿ ಬೊಮ್ಮಯ್ಯ ನವರ ಜೀವನ ಚರಿತ್ರೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ನಿವೃತ್ತ ಪ್ರಾಚಾರ್ಯೆ ಶೈಲಜಾ ತೆಲ್ಲೂರ ಬಸವಣ್ಣನವರ ವಚನಗಳಿಂದ ಪ್ರಭಾವಿತರಾದ ಕಿನ್ನರ ಬೊಮ್ಮಾಯಿ ಕಾಯಕದ ಮಹತ್ವ ಸಾರಿ, ಸಮಾಜದ ಅಂಕು ಡೊಂಕು ತಿದ್ದಲು ಕಿನ್ನರ ಬೊಮ್ಮಾಯಿ ವಚನಗಳು ಸಹಕಾರಿಯಾಗಿವೆ ಎಂದರು.ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದರಾಯ ಅಪ್ತಾಗಿರಿ ಉದ್ಘಾಟಿಸಿದರು.ದತ್ತಿ ಸ್ಮರಣೆ ಲಿಂ ಚಂದ್ರಕಾಂತ ಗಲಗಲಿ, ಪ್ರಕಾಶ ಬಿರಾದಾರ, ಲಿಂ ಅಣ್ಣಪ್ಪ ಕುಂಬಾರ ಕುರಿತು ಗಂಗಾಬಾಯಿ ಗಲಗಲಿ ದತ್ತಿ ಸ್ಮರಣೆ ಮಾಡಿದರು.ಭವಾನಿ ಗುಳೆದಗುಡ್ಡ, ಶೈಲಜಾ ಬಿರಾದಾರ, ಸೋನಾಬಾಯಿ ಕಂಬಾರ ದತ್ತಿ ದಾನ ಮಾಡಿದರು.ಶಹಾಪುರ ಕಸಾಪ ತಾಲೂಕು ಘಟಕ ಸಮಾರಂಭಕ್ಕೆ ಗೌರವಾಧ್ಯಕ್ಷರಾದ ಡಿ.ಎನ್.ಅಕ್ಕಿ ಅವರನ್ನು ಶಸಾಪ ಮತ್ತು ಹಡಪದ ಅಪ್ಪಣ್ಣ ಸಂಸ್ಥೆಯ…
