Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸ್ಟೇಡಿಯಂನಲ್ಲಿ ಈಜುಕೊಳ ನಿರ್ಮಿಸಲು ರೂ.5 ಕೋಟಿಗೆ ಸಿಎಂಗೆ ಮನವಿ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಈಗಾಗಲೇ 5 ಕೋಟಿ ಅನುದಾನ ಬಿಡುಗಡೆ ಆಗಿದ್ದು ಒಳಾಂಗಣ ಕ್ರೀಡಾಂಗಣದಲ್ಲಿ ನಾಲ್ಕು ಶಟಲ್ ಕಾಕ್ ಕೋರ್ಟ್, ಫುಟ್ಬಾಲ್, ವಾಲಿಬಾಲ್ , ಕಬಡ್ಡಿ, ಖೋ ಖೋ ಕೋರ್ಟ್ ನಿರ್ಮಿಸಲು ಕೆಲಸ ನಡೆಯುತ್ತಿದೆ. ಜೊತೆಗೆಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಈಜು ಕೊಳ ನಿರ್ಮಿಸಲು ಮತ್ತೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಹಂತ ಹಂತವಾಗಿ ಕ್ರೀಡಾಂಗಣ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ವಿಭಾಗ ಮತ್ತು ಹಾರ್ಟ್ ಸಂಸ್ಥೆ, ಮೈಸೂರು ಸಹಯೋಗದೊಂದಿಗೆ ಆಯೋಜನೆ ಮಾಡಿರುವ ಹುಲಿಮಿತ್ರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.ಮಹನೀಯರ ಜಯಂತಿ ಹೆಸರಿನಲ್ಲಿ, ಫ್ರೆಂಡ್ಸ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತೆ. ಆದರೆ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು…
ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಶುಭ ಸಮಾಚಾರ | ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತರಲು ಹರಸಾಹಸ ನವದೆಹಲಿ: ಸಿಲಿಂಡರ್ ಗಳಿಲ್ಲದೆ ಪರದಾಡುತ್ತಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಕೇಂದ್ರ ಸರ್ಕಾರ ಶನಿವಾರ ಗುಡ್ ನ್ಯೂಸ್ ನೀಡಿದ್ದು, ವಾಣಿಜ್ಯ ಬಳಕೆ LPG ಸಿಲಿಂಡರ್ ಹಂಚಿಕೆಯನ್ನು ಶೇ. 50ಕ್ಕೆ ಹೆಚ್ಚಿಸಿದೆ.ಮನೆಗಳಿಗೆ ಅಡಿಗೆ ಅನಿಲ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತಿದೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಶೇ. 20 ರಷ್ಟು ವಾಣಿಜ್ಯ ಎಲ್ಪಿಜಿ ಹಂಚಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರೊಂದಿಗೆ ಒಟ್ಟು ಹಂಚಿಕೆಯನ್ನು ಶೇ. 50 ಕ್ಕೆ ಹೆಚ್ಚಿಸಲಾಗಿದೆ.ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಪಶ್ಚಿಮ ಏಷ್ಯಾ ಯುದ್ಧದಿಂದ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯವಾಗಿದೆ. ಇದರಿಂದಾಗಿ ಮನೆಗಳಿಗೆ ಎಲ್ ಪಿಜಿ ಸರಬರಾಜು ಮಾಡಲು ಆದ್ಯತೆ ನೀಡಲು ಹೋಟೆಲ್ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್ಪಿಜಿ ಸರಬರಾಜಿನಲ್ಲಿ ಕಡಿತ ಮಾಡಲಾಗಿತ್ತು.ಇದೀಗ ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಅನಿಲ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಿನ್ನನ್ನು ನನ್ನಿಂದ ಯಾರೂ ದೂರ ಮಾಡಲು ಸಾಧ್ಯವಿಲ್ಲ ನೀನು ಕೂಡ. ನನಗಂತಲೇ ಆ ಬ್ರಹ್ಮ ಪುರುಸೊತ್ತು ಮಾಡಿಕೊಂಡು ತಯಾರು ಮಾಡಿದ ಶಿಲಾಬಾಲಿಕೆ. ಸೋದರ ಸೊಸೆಯಾದ ನಿನ್ನನ್ನು ಹೀಗೆ ಹುಚ್ಚನ ತರಹ ಪ್ರೀತಸ್ತಿನಿ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕವರಿದ್ದಾಗ ಮನೆಯಲ್ಲಿ ಎಲ್ಲರೂ ನನಗೆ ನಿನ್ನನ್ನು ಕೊಟ್ಟು ಮದುವೆ ಮಾಡೋದು ಅಂದಾಗ ಕೋಪದಲ್ಲಿ ಅವರಿಗೆ ಬೈಯುತ್ತಿದ್ದೆ. ಆದರೆ ಈಗ ಪ್ರೀತಿಗೂ ಪ್ರೀತಿ ಬರುವ ತರಹ ಹುಚ್ಚುಚ್ಚಾಗಿ ಹೆಚ್ಚೆಚ್ಚು ನಿನ್ನನ್ನೇ ಪ್ರೀತಸ್ತಿದಿನಿ ಅನ್ನೋ ವಿಷಯ ನಿನಗೆ ತಿಳಿದಿಲ್ಲ ಅಂತೇನಿಲ್ಲ. ನಿನ್ನ ನೆನಸಿಕೊಳ್ಳುತ್ತ ಸದಾ ಸುಂದರ ಸ್ವರ್ಗ ಲೋಕದಲ್ಲಿ ತೇಲ್ತಾ ರ್ತಿನಿ. ನಿನ್ನೊಂದಿಗೆ ಕಳೆದ ಸವಿಕ್ಷಣಗಳನ್ನು ನೆನೆದರೆ ಸಾಕು ಗಾಳಿಯಲ್ಲಿ ತೇಲಿದಂತಹ ಅನುಭವ ಆಗುತ್ತದೆ. ಕಿಶೋರಾವಸ್ಥೆಯವರೆಗೂ ಹಳ್ಳಿಯಲ್ಲಿ ನಿನ್ನೊಂದಿಗಿದ್ದ ನಾನು ಕಾಲೇಜಿನ ಶಿಕ್ಷಣಕ್ಕೆಂದು ನಗರಕ್ಕೆ ಬಂದೆ. ಶಿಕ್ಷಣ ಮುಗಿಸಿಕೊಂಡು ಮರಳಿ ಬರುವಷ್ಟರಲ್ಲಿ ದೊಡ್ಡ ಅಚ್ಚರಿಯೇ ಕಾದಿತ್ತು.ಹಳ್ಳಿಗೆ ಕಾಲಿಟ್ಟಾಗ ನಿನ್ನ ಹರೆಯ ಉಕ್ಕುತ್ತಿತ್ತು. ಮೂವತ್ತಾರು ಇಪ್ಪತ್ನಾಲ್ಕು ಮೂವತ್ತಾರು…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ನೀರು ಅಮೂಲ್ಯ ಸಂಪತ್ತು, ಹಿತ-ಮಿತವಾಗಿ ಅದರ ಬಳಕೆಯಾಗಬೇಕು. ಆದ್ದರಿಂದ ನೀರು ನಮ್ಮ ಜೀವನಕ್ಕೊಂದು ಆಧಾರ ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪತ್ತು. ಅದನ್ನು ನಮಗೆ ಎಷ್ಟು ಬೇಕು ಅಷ್ಟನ್ನೇ ಬಳಸಿ-ಮುಂದಿನ ಜನಾಂಗಕ್ಕಾಗಿ ಉಳಿಸಿ-ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತರ್ವವಾಗಬೇಕು. ಈ ಭೂಮಿಯ ಜೀವಿಸುವ ಸಕಲ ಮಾನವ ಆದಿಯಾಗಿ ಸಕಲ ಚರಾಚರ ಜೀವರಾಶಿಗಳಿಗೆ ನೀರು ಬೇಕೇ ಬೇಕು. ನೀರಿಲ್ಲದೇ ಯಾವ ಪ್ರಾಣಿಯೂ ಬದುಕಲಾರದು. ಒಂದು ವೇಳೆ ನೀರು ಇಲ್ಲದೇ ಹೋದರೆ ಬದುಕೇ ಇಲ್ಲವಾಗುತ್ತದೆ. ಅದಕ್ಕಾಗಿ ನಿಸರ್ಗದ ನಾಶದಿಂದ ಮತ್ತು ಅರಣ್ಯ ಸಂಪತ್ತಿನ ನಾಶದಿಂದ ಜಗತ್ತಿನೆಲ್ಲೆಡೆಯಲ್ಲಿ ಮಳೆಯ ಪ್ರಮಾಣವು ಸಹ ಕಡಿಮೆಯಾಗುತ್ತಿದೆ. ಇದರಿಂದ ರಾಷ್ಟç-ರಾಷ್ಟçಗಳ ಮಧ್ಯೆ, ರಾಜ್ಯ-ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆಗಾಗಿ ಹಾಹಾಕಾರ, ಪ್ರತಿಭಟನೆ, ಹೋರಾಟಗಳು ಸರ್ವೇ ಸಾಮಾನ್ಯವಾಗುತ್ತಿವೆ. ಮಳೆಯ ಅಭಾವದಿಂ ಕೊರತೆಯುಂಟಾಗುತ್ತಿರುವ ನೀರು-ಜಲದ ಸಂರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ನಿಲ್ಲಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. .ಈ ದಿನದ ಆಚರಣೆಯ ಹಿನ್ನೆಲೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ನೀರಿನ…
ರಾಜ್ಯದ ೧೦ ಸಾವಿರ ಶಿಕ್ಷಕರಿಗೆ ಸರ್ಕಾರದಿಂದ ಯುಗಾದಿ ಕೊಡುಗೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಳೆದ ನಾಲ್ಕು ವರ್ಷಗಳಿಂದ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ, ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ (ಎಎಂ ಟೂ ಎಚ್ ಎಂ) ಪದೋನ್ನತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇದರಿಂದ ರಾಜ್ಯದ ೧೦ ಸಾವಿರಕ್ಕೂ ಅಧಿಕ ಸಹಶಿಕ್ಷಕರಿಗೆ ಬಡ್ತಿಭಾಗ್ಯ ಸಿಗಲಿದೆ.ಇದು ಸಂಘದ ನಿರಂತರ ಪ್ರಯತ್ನಕ್ಕೆ ಒಲಿದ ಫಲ ಹಾಗೂ ಶಿಕ್ಷಕರಿಗೆ ಯುಗಾದಿ ಹಬ್ಬಕ್ಕೆ ಸರ್ಕಾರ ನೀಡಿದ ಕೊಡುಗೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಬಣ್ಣಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಬದಲಾವಣೆಗಳು, ನಾನಾ ಕಾನೂನು ತೊಡಕುಗಳು, ನ್ಯಾಯಾಲಯದ ಪ್ರಕರಣಗಳ ಹಿನ್ನಲೆಯಲ್ಲಿ ಸಹಶಿಕ್ಷಕರು ಮುಖ್ಯ ಶಿಕ್ಷಕರ ಹುದ್ದೆಯಿಂದ ವಂಚಿತಗೊAಡಿದ್ದರು. ಹಲವಾರು ಶಿಕ್ಷಕರು ಬಡ್ತಿಯಿಲ್ಲದೇ ನಿವೃತ್ತರಾಗಿದ್ದರು.ಅದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಸಂಘ ಹೋರಾಟ ನಡೆಸಿತ್ತು. ಅದರಲ್ಲಿಯೂ ಕಳೆದ ಏಳು ತಿಂಗಳಿAದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಂಪುರ ಬೆನಕೋಟಗಿ, ಮಲಘಾಣ ಸೇರುವ ರಸ್ತೆಗೆ ರೂ.೨ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅತೀ ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು. ರಾಂಪುರ ಸಿಂದಗಿ ಪ್ರಮುಖ ರಸ್ತೆ ಸುಧಾರಣೆಗೆ ರೂ.೪ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಅಶೋಕ ಹೇಳಿದರು.ತಾಲೂಕಿನ ರಾಂಪುರ ಪಿಎ ಗ್ರಾಮದ ಆರೂಢ ಸಂಗನಬಸವೇಶ್ವರ ಮಠದಲ್ಲಿ ಸಿಂದಗಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೆಯ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೨೫ಲಕ್ಷ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ ಅದಕ್ಕೆ ಕಿವಿಗೋಡದೆ ನಾನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಾ ಹೋಗುತ್ತೇನೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಗ್ಯಾರಂಟಿಯಿಂದಾಗಿ ರಾಜ್ಯ ಸರಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುವ ವಿರೋಧ ಪಕ್ಷದವರಿಗೆ ಒಂದು ಬಾರಿ ಸಿಂದಗಿ ಸುತ್ತಿ ನೋಡಲಿ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠ…
ಉದಯರಶ್ಮಿ ದಿನಪತ್ರಿಕೆ ಹೆಚ್.ಡಿ.ಕೋಟೆ/ಸರಗೂರು: ತಾಲೂಕಿನ ಅಧಿದೇವತೆ ಶ್ರೀಚಿಕ್ಕದೇವಮ್ಮ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಜೈಕಾರದ ನಡುವೆ ಕಪಿಲಾ ನದಿ ದಡದ ಹಾಲುಗಡದಲ್ಲಿ ವಿಜೃಂಭಣೆಯಿಂದ ನಡೆಯಿತು.ಪ್ರತಿವರ್ಷ ಯುಗಾದಿ ಹಬ್ಬದ ದಿನ ಜಾತ್ರೆ ನಡೆಯುವುದು ವಿಶೇಷ. ಜಾತ್ರೆ ಹಿನ್ನೆಲೆಯಲ್ಲಿ ಒಂದು ವಾರದಿಂದ ದೇವಾಲಯವನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಳಿಸಲಾಗಿತ್ತು. ಹಲವು ಫಲಪುಷ್ಪ, ಬಾಳೆ, ಮಾವಿ ಎಲೆಗಳಿಂದ ಸಿಂಗಾರಗೊಂಡಿದ್ದ ದೇವಾಲಯದ ಒಳಾಂಗಣ ಪ್ರದೇಶವು ಅತ್ಯಂತ ಆಕರ್ಷಣೀಯವಾಗಿ ಅಲಂಕಾರ ಮಾಡಿದ್ದರಿಂದ ಭಕ್ತರು ಹಾಗೂ ನೋಡುಗರ ಮನಸೂರೆಗೊಂಡಿತ್ತು.ದೇವಾಲಯದ ಪಾರುಪತ್ತೇದಾರ್ ಮಹದೇವಸ್ವಾಮಿ ನೇತೃತ್ವದಲ್ಲಿ ಮುಂಜಾನೆ 3:30ರಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಂಪ್ರದಾಯದಂತೆ ಕಾಲ್ನಡಿಗೆಯಲ್ಲಿ ಬರುವ ಭಕ್ತರು ಕಪಿಲಾ ನದಿಯಲ್ಲಿ ಮಿಂದೆದ್ದು, ಬಾಯಿಬೀಗ ಹಾಕಿಸಿಕೊಂಡು ಬೆಟ್ಟ ಏರಿದರು. ಇಟ್ನ, ಚಾಮೇ ಗೌಡನ ಹುಂಡಿ, ಪುರದಕಟ್ಟೆ, ಶಾಂತಿಪುರ ಮತ್ತು ಕುಂದೂರ ಸೇರಿದಂತೆ ಅನೇಕ ಗ್ರಾಮಗಳ ಮಹಿಳೆಯರು ಜಾನಪದ, ಧಾರ್ಮಿಕ ಗೀತೆಗಳನ್ನು ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು.ಮಂಗಳವಾದ್ಯ, ಸತ್ತಿಗೆ, ಸೂರಿಪಾನಿ ಸಮೇತ ಅಲಂಕೃತ ಉತ್ಸವ ಮೂರ್ತಿಯನ್ನು ಹೊತ್ತ ಇಟ್ನ ಗ್ರಾಮಸ್ಥರು ದೇವಾಲಯದ ಸುತ್ತಲೂ ಪ್ರದಕ್ಷಿಣೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಕಲೆ ಮತ್ತು ಸಂಸ್ಕೃತಿಯ ತವರೂರು. ಅನೇಕತೆಯಲ್ಲಿ ಏಕತೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ರಾಷ್ಟ್ರ ನಮ್ಮದು. ಹಲವು ಸಂಸ್ಕೃತಿ, ಭಾಷೆ, ಧರ್ಮ, ವೇಷ-ಭೂಷಣ ಮತ್ತು ಜಾನಪದ ಶೈಲಿ, ಜೀವನ-ಕಸುಬು ಹೀಗೆ ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣವಾದ ಪವಿತ್ರ ಭೂಮಿ ನಮ್ಮದು. ಅದರಲ್ಲಿ ವಿಶೇಷವಾಗಿ ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆ ಹೊಂದಿದ ನಮ್ಮ ಕರ್ನಾಟಕ ರಾಜ್ಯದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ತೊಟ್ಟೀಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ವಿಶಿಷ್ಟ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಾಧ್ಯಾಪಕ ಗುರುಬಸಯ್ಯ ಹಿರೇಮಠ ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾರ ಕಾಲನಿಯ ಲಕ್ಷ್ಮಿ ದೇವಸ್ಥಾನದ ೩ ನೇಯ ವರ್ಷದ ಜಾತ್ರಾ ಮಹೋತ್ಸವದ “ಜನಪದ ಸಾಹಿತ್ಯಕ್ಕೆ ಸ್ತ್ರೀ ಕೊಡುಗೆಗಳು” ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.ತಾಯಿಯಾದವಳು ಮದುವೆಯಾಗಿ ಗಂಡನ ಮನೆ ಸೇರುತ್ತಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುವ ಮೂಲಕ ಮನೆ ಮಾತಾಗಿರುವ ಎಕ್ಸಲಂಟ್ ಸಂಸ್ಥೆಯು ೨೦೨೫-೨೬ನೇ ಸಾಲಿನ ಜವಾಹರ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ತನ್ನ ಫಲಿತಾಂಶದ ಹೆಜ್ಜೆ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ೨೯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎಕ್ಸಲಂಟ್ ತನ್ನ ಗುಣಮಟ್ಟಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.ಗಣೇಶ ಪಾಟೀಲ್(೯೮.೭೫), ಸಮರ್ಥ ಚವ್ಹಾಣ(೯೭.೫೦), ಶ್ರೀಕರ ಗಗನಮಾಳಿ(೯೭.೫೦), ಕಾರ್ತಿಕ ಸತ್ಯಪ್ಪನವರ(೯೭.೫೦), ಸೃಜನ್ ಗೊರೆ(೯೭.೫೦), ಕೃತಿಕೇಶ ಹೊಂಗಲ್(೯೭.೫೦), ಕರುಣಸಾಗರ ಬಾದವಾಡಗಿ (೯೬.೨೫), ಸಾತ್ವಿಕ್ ಕೊಟ್ಟನಳ್ಳಿ(೯೬.೨೫), ಅಕ್ಷಯ ಪೊಲೀಸ್ ಪಾಟೀಲ್(೯೬.೨೫), ವೈಭವ್ ಹಚ್ಚಡದ(೯೬.೨೫), ವೇದಾ ದಾನಮ್ಮನವರ(೯೬.೨೫), ಶ್ರೇಯಸ್ ಅಂಗಡಿ(೯೬.೨೫), ಗೌತಮ್ ಚವ್ಹಾಣ(೯೫.೦೦), ಸೃಜನ್ ನಂದರಗಿ(೯೫.೦೦), ಯಮನಪ್ಪ ಜಮ್ಮನಕಟ್ಟಿ(೯೫.೦೦), ಆಶೀಶ್ ಹತ್ತಿಕಾಳ(೯೫.೦೦), ವಭವ್ ಕಾಮಶೆಟ್ಟಿ(೯೫.೦೦), ಸ್ಮಿçತಿ ಮೂರಮಾನ(೯೫.೦೦), ಪೃಥ್ವಿರಾಜ್ ಅಂಬಿಗೇರ(೯೩.೭೫), ಪ್ರೇಮ್ ಕಾಸರ್(೯೩.೭೫), ಸನ್ನಿದಿ ಎಚ್ಚರಸ್ವಾಮಿಮಠ(೯೩.೫೦), ಭೂಮಿ ವಾಲಿ(೯೨.೫೦), ಭೂಮಿಕಾ ಕೇವಂಟಿಗಿ(೯೨.೫೦), ವೈ.ಬಿ.ಧನುಶ್(೯೨.೫೦), ವಿರಾಟ್ ಬಿ(೯೨.೫೦), ಶ್ರೇಯಸ್ ದೊಡ್ಡಮನಿ(೯೨.೫೦), ಮಹಾಂತಗೌಡ ಪಾಟೀಲ(೯೨.೫೦), ಅಪೂರ್ವ ರಾಠೋಡ(೯೧.೨೫), ಪ್ರದೀಪ್ ಡೊಕ್ಕಣ್ಣವರ(೮೫.೦೦) ಪ್ರತಿಷತ ಅಂಕಗಳನ್ನು…
ಆಲಮಟ್ಟಿಯ ಎಂಎಚ್ಎಂ ಹಿರಿಯ ಪ್ರಾಥಮಿಕ ಶಾಲೆಯ ವಾಷಿ೯ಕ ಸ್ನೇಹ ಸಮ್ಮೇಳನ ವರದಿ: ಗುಲಾಬಚಂದ ಜಾಧವ ವಿಜಯಪುರ: ಸಂಗೀತ ನಾದದ ಹಾಡುಗಳಿಗೆ ಅಲ್ಲಿ ಪುಟ್ಟ ಪುಟ್ಟ ಮಕ್ಕಳ ಸ್ಟೇಪ್ಸ್ ಲಯಬದ್ಧವಾಗಿ ಸಾಗಿತ್ತು. ಮೈಮನ ಮಿಂಚಿನಂತೆ ಅತ್ತಇತ್ತ ಸಖತ್ ಸುಳಿದಾಡುತ್ತಿತ್ತು. ಕೈ,ಕಾಲು ಶರೀರ ಲೀಲಾಜಾಲವಾಗಿ ಹೊರಳಾಡುತ್ತಿತ್ತು. ಮೊಗಭಾವಗಳಲ್ಲಿ ಡ್ಯಾನ್ಸ್ ಜೋಶ್ ದ ರಂಗು ಮಿಟುಕುತಿತ್ತು. ನೃತ್ಯ ಲೋಕದ ಉನ್ಮಾದ ಅಲೆ ತೇಲಾಡುತ್ತಿತ್ತು. ಇದನ್ನು ಏಕಚಿತ್ತವಾಗಿ ಮೈಮರೆತು ಕಣ್ತುಂಬಿಸಿಕೊಳ್ಳುತ್ತಿದ್ದ ಕಂಗಳುಗಳಲ್ಲಿ ಆನಂದ ಭಾಷ್ಪ ಸೂಸುತ್ತಿತ್ತು..!ಇಂಥದೊಂದು ಸಾಂಸ್ಕೃತಿಕ ರಂಗದ ರೋಮಾಂಚಕ ದೃಶ್ಯ ಜಿಲ್ಲೆಯ ಆಲಮಟ್ಟಿ ಎಂಎಚ್ಎಂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾಷಿ೯ಕ ಸ್ನೇಹ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯತೆಯಿಂದ ಕಂಡುಬಂತು !ಇಳೆ ಭಾವದ ಮೊಗಗಳು ಗೀತಗಾನದ ಸಂಗೀತ ಲಹರಿಯಲ್ಲಿ ಮಸ್ತ್ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ರೋಚಕತೆಯ ಮೊನಚಿನಲ್ಲಿ ಹೆಜ್ಜೆ ಹಾಕಿ ನೃತ್ಯಗಳನ್ನು ಪ್ರದಶಿ೯ಸಿ ಸ್ಪೂತಿ೯ ಮೆರೆದರು. ಚಿಣ್ಣರ ನೃತ್ಯ ರೂಪ ನೋಡುಗರ ಹೃದಯಾಂಗಳದಲ್ಲಿ ಖುಷಿ, ಸಂತಸದ ಅಲೆ ತರಂಗ ಸೃಜಿಸಿದವು!ನೃತ್ಯಕಲೆ ವ್ಯಕ್ತಿತ್ವ ವಿಕಸನಕ್ಕೆ…
