ಬನಶಂಕರಿ ಕೋ-ಆಪರೇಟಿವ್ ಸೊಸೈಟಿ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜನರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ರಂಗದ ಪಾತ್ರವು ಇದೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಜನರಿಗೆ ಪ್ರಾಮಾಣಿಕವಾದ ಸೇವೆ ಒದಗಿಸಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಚಿಕ್ಕೊಂಡ ಕಾಂಪ್ಲೇಕ್ಸನಲ್ಲಿ ನೂತನವಾಗಿ ಆರಂಭವಾದ ಬನಶಂಕರಿ ಕೋ-ಆಪರೇಟಿವ್ ಸೊಸೈಟಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನವಾಗಿ ಆರಂಭವಾದ ಈ ಸೊಸೈಟಿಯು ಜನರಿಗೆ ಉತ್ತಮ ಸೇವೆ ಸಲ್ಲಿಸುವಂತಾಗಲಿ. ಜನರು ಪಡೆದ ಸಾಲವನ್ನು ಸಕಾಲಿಕವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳಿಗೆ ಸಹಕಾರ ನೀಡಬೇಕು. ಸೊಸೈಟಿಯ ಆಡಳಿತ ಮಂಡಳಿಯುವರು ಜನರ ಉಳಿತಾಯ, ಸಾಲ ಸೌಲಭ್ಯ, ಸ್ವಾವಲಂಬನೆಗಾಗಿ ಉತ್ತಮ ವೇದಿಕೆಯನ್ನು ಒದಗಿಸುವವಂತಾಗಲೆಂದು ಶುಭ ಹಾರೈಸಿದರು.
ಸಾನ್ನಿಧ್ಯವನ್ನು ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಶಿವಾನಂದ ಈರಕಾರ ಮುತ್ಯಾ ವಹಿಸಿದ್ದರು. ಅಧ್ಯಕ್ಷತೆಯನ್ನು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವನಗೌಡ ಬಿರಾದಾರ, ಟಿ.ಎ.ಪಿ ಎಂ.ಎಸ್. ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬನಶಂಕರಿ ಕೋ-ಆಪರೇಟಿವ್ ಸೊಸೈಯ ಅಧ್ಯಕ್ಷ ಸೋಮನಾಥ (ಪಿಂಟುಗೌಡ) ಪಾಟೀಲ, ಉಪಾಧ್ಯಕ್ಷ ಮಂಜುನಾಥ ಕಡಕೋಳ(ಕುಂಬಾರ) ಮಂಡಳಿಯ ನಿರ್ದೇಶಕರಾದ ರಾಜೇಶ ತಿಪ್ಪನಗೌಡರ, ಸಿದ್ದು ಹಿರೇಮಠ, ಶ್ರೀಧರ ನಾಯಕೋಡಿ, ಸತೀಶ ಚಿಕ್ಕೊಂಡ, ಜೀವನ ಮ್ಯಾಗೇರಿ, ರಿಯಾನ ಬಾಗವಾನ, ಸಿದ್ದು ಕಡ್ಲಿಮಟ್ಟಿ, ಶಶಿಧರ ದೇಸಾಯಿ ನಿರ್ದೇಶಕಿ ಅಂಬಿಕಾ ನಾಯಕೋಡಿ, ರೋಹಿಣಿ ಡಂಬಳ, ಮುಖಂಡರಾದ ಅನಿಲ ದುಂಬಾಳಿ, ಸಂಗಮೇಶ ಓಲೇಕಾರ, ಬಸವರಾಜ ಕೋಟಿ ಇತರರು ಇದ್ದರು

