ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ಮುಸ್ಲಿಂ ಬಾಂಧವರು ಈದ್ಉಲ್ ಫಿತ್ರ ಹಬ್ಬವನ್ನು(ರಂಜಾನ್) ಸಡಗರ, ಸಂಭ್ರಮದಿಂದ ಆಚರಿಸಿದರು. ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಆಯಾ ಗ್ರಾಮಗಳಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈದುಲ್ ಫಿತರ್ ಮೂವತ್ತು ದಿನದ ಉಪವಾಸ ಮಾಡಿ ಅಲ್ಲಾಹನ ನಾಮದಿಂದ ಜಕಾತ್ ಫೀತರಾ ನೀಡಿ ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಅಲ್ಲಾಹನಿಗೆ ಪ್ರಾರ್ಥನೆಯನ್ನು ಮಾಡಲಾಯಿತು.
ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಫೀಜ್ ಅಬ್ದುಲ್ ರೆಹಮಾನ್ ಶಿವಣಗಿ ಮಾತನಾಡಿ, ಒಂದು ತಿಂಗಳ ಕಾಲ ಮುಸ್ಲಿಂ ಬಾಂಧವರು ರಂಜಾನ ಹಬ್ಬದಂಗವಾಗಿ ಉಪವಾಸ ವೃತ್ತ ಇದ್ದು. ಜಕಾತ್ ಚಿತ್ರಾ ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬವು ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ಸುಖ ನೀಡುವಂತಾಗಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ ಅವರು, ರಂಜಾನ ತಿಂಗಳಲ್ಲಿ ಉಪವಾಸವಿರುವದು ಆತ್ಮವನ್ನು ಶುದ್ಧಿ ಮಾಡಿಕೊಂಡಂತೆ. ಉಳಿದ ಅವಧಿಯಲ್ಲಿ ಎಲ್ಲ ಬಾಂಧವರು ಉತ್ತಮ ಜೀವನ ನಡೆಸುವಂತಾಗಬೇಕು. ರಂಜಾನ್ ಹಬ್ಬದ ಸಂದೇಶ ಅರಿತು ಎಲ್ಲರೂ ಸಂತಸ ಜೀವನ ತಮ್ಮದಾಗಿಸಿಕೊಳ್ಳಬೇಕು. ರಂಜಾನ ಹಬ್ಬವು ಈ ವರ್ಷ ಉತ್ತಮ ಮಳೆ-ಬೆಳೆ ತರುವಂತಾಗಲೆಂದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗುರು ಹಾಫೀಜ ಮೊಹಮ್ಮದ್ ಅಲಿ ಮಿಲಿ, ಜಾಮಿಯಾ ಮಸ್ಜಿದ ಕಮಿಟಿ ಅಧ್ಯಕ್ಷ ಶಬ್ಬೀರ್ ಅಹ್ಮದ್ ನದಾಫ, ಇಬ್ರಾಹಿಂಸಾಬ ಬೊಮ್ಮನಹಳ್ಳಿ, ಅಂಜುಮನ ಕಮಿಟಿ ಅಧ್ಯಕ್ಷ ಚಾಂದಪಾಶಾ ಕೊರಬು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮಹಿಬೂಬ ನಾಯ್ಕೋಡಿ, ಮದೀನಾ ಮಸ್ಜಿದ ಕಮಿಟಿ ಅಧ್ಯಕ್ಷ ಮಹೆಬೂಬಸಾಬ ಗಣಿ, ಒಮ್ಮೆ ಕುಲ್ಸುಮ್ ಮಜೀದ್ ಕಮಿಟಿ ಅಧ್ಯಕ್ಷ ಅಬ್ದುಲ್ ರಜಾಕ ಕೊರಬು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಡಿ.ವೈ.ಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

