Author: editor.udayarashmi@gmail.com

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ. ಬೆಂಗಳೂರು ರಾಹು ಕೇತು ರಾಶಿ ಫಲ ಶನಿ ಗುರು ಚಲನೆಗಳ ಬಗ್ಗೆ ನನಗೆ ಏನು ತಿಳಿದಿಲ್ಲ. ಆದರೆ ಈ ಪ್ರಕೃತಿಯ, ಈ ಸಮಾಜದ, ಜೀವರಾಶಿಗಳ ಚಲನೆಯನ್ನು – ವರ್ತನೆಯನ್ನು ನೋಡಿ ಅನುಭವದ ಅರಿವಿನ ಒಂದು ಸಲಹಾ ರೂಪದ ಅನಿಸಿಕೆ..ನಿಮ್ಮ ವಯಸ್ಸು 0 ರಿಂದ 1೦ ರ ವರೆಗೆ ಇದ್ದು ನೀವು ಹುಡುಗನೋ, ಹುಡುಗಿಯೋ ಏನೇ ಆಗಿರಿ ನಿಮ್ಮ ಭವಿಷ್ಯ ನಿಮ್ಮ ಹಿಡಿತದಲ್ಲಿ ಇರುವುದಿಲ್ಲ. ನಿಮ್ಮ ಪೋಷಕರ ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಪ್ರಾದೇಶಿಕ ಒಟ್ಟಾರೆ ಅವರ ಪರಿಸ್ಥಿತಿ ಅವಲಂಬಿಸಿ ಅದು ರೂಪಗೊಳ್ಳುತ್ತದೆ. ನೀವು ತಲೆಕೆಡಿಸಿಕೊಳ್ಳಬೇಡಿ ಮತ್ತು ನಿಮ್ಮ ಭವಿಷ್ಯ ಪೋಷಕರ ಒಡಲಿನಲ್ಲಿ ಜೀವ ತಳೆಯುವ ಸಮಯವದು..ನಿಮ್ಮ ವಯಸ್ಸು 1೦ ರಿಂದ 2೦ ಆಗಿದ್ದು, ನೀವು ಯುವಕರಾಗಿದ್ದರೆ ನಿಮ್ಮ ಬದುಕು ಮೊಳಕೆಯೊಡೆಯುವುದು ಈಗಲೇ..ನಿಮ್ಮ ದೇಹ ಮತ್ತು ಮನಸ್ಸು ಚಿಗುರುತ್ತಾ ಯೌವ್ವನದೆಡೆಗೆ ಕಾಲಿಡತೊಡಗುತ್ತದೆ‌. ಮೀಸೆ, ಗಡ್ಡ ಬೆಳೆದು ಧ್ವನಿ ಒಡೆದು ಬದಲಾವಣೆಯಾಗತೊಡಗುತ್ತದೆ. ಸಾಮಾನ್ಯವಾಗಿ ಹೊರ…

Read More

ಇಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ | ಸುಪ್ರೀಂಕೋರ್ಟ್ ಮೊರೆಗೆ ಮುಂದಾದ ಆಪ್ | ರೂ.600 ಕೋಟಿ ಹಗರಣದ ಪ್ರಕರಣ ದೆಹಲಿ: ಆಪಾದಿತ ಮದ್ಯ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.ಕೇಜ್ರಿವಾಲ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು, ಏಪ್ರಿಲ್ 3 ರಂದು ತೀರ್ಪನ್ನು ಕಾಯ್ದಿರಿಸಿದರು.ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಆದೇಶ ಸೇರಿದಂತೆ ವಿಚಾರಣಾ ನ್ಯಾಯಾಲಯದ ನಂತರದ ರಿಮಾಂಡ್ ಆದೇಶಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ.ಬಿಜೆಪಿಯ ನಿಯಂತ್ರಣದಲ್ಲಿರುವ ಕೇಂದ್ರ ಸರ್ಕಾರವು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕೇಜ್ರಿವಾಲ್ ಅವರ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಧೀಶರು ನಿರಾಕರಿಸಿದ್ದಾರೆ.“ನ್ಯಾಯಾಧೀಶರು ಕಾನೂನಿಗೆ ಬದ್ಧರಾಗಿರುತ್ತಾರೆಯೇ ವಿನಃ, ರಾಜಕೀಯಕ್ಕಲ್ಲ. ಕಾನೂನು ತತ್ವಗಳ…

Read More

ಮುದ್ದೇಬಿಹಾಳ: ಮಹಾಜ್ಞಾನಿಗಳೂ, ಘನವಿದ್ವಾಂಸರೂ ಆದ ವಿದ್ಯಾಭೂಷಣ ಮುನಿಮಹಾರಾಜರು ದಿಗಂಬರ ದೀಕ್ಷೆಯನ್ನು ಪಡೆದು ಎ.೧೦ ಕ್ಕೆ ೧೫ ವರ್ಷಗಳು ಪೂರ್ಣಗೊಂಡು ೧೬ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ ತಾಲೂಕಿನ ಸಮಸ್ತ ದಿಗಂಬರ ಜೈನ ಸಮಾಜ ಬಾಂಧವರು ಮತ್ತು ಪರಮಪೂಜ್ಯರ ಶಿಷ್ಯ ಬಳಗದ ವತಿಯಿಂದ ದೀಕ್ಷಾದಿನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.ಏ.೧೦ ರಂದು ಬೆಳಿಗ್ಗೆ ೯ಗಂಟೆಗೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯಭವನದ “ಶ್ರೀ ಗಣಪತ ರಾವ್ ಹಜಾರೆ ಸಭಾಮಂಟಪ” ದಲ್ಲಿ ಸಮಾರಂಭ ನಡೆಯಲಿದ್ದು, ತಾಲೂಕಿನ ಸಮಸ್ತ ದಿಗಂಬರ ಜೈನಸಮಾಜದ ಶ್ರಾವಕ ಶ್ರಾವಕಿಯರು ಹಾಗೂ ಪರಮಪೂಜ್ಯ ಶ್ರೀ ವಿದ್ಯಾಭೂಷಣ ಮುನಿಮಹಾರಾಜರ ಶಿಷ್ಯ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.

Read More

’ವಿಶೇಷ ಲೇಖನ’- ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಯಾರು ಬದುಕಿನಲ್ಲಿ ಯಾವುದೇ ವಿಷಯದ ಕುರಿತಾಗಿ ಕಠಿಣ ಪರಿಶ್ರಮವನ್ನು ಮಾಡುತ್ತಾರೋ ಅವರು ಆಯಾ ಕ್ಷೇತ್ರದಲ್ಲಿ ಸಾಧಕರಾಗಿ ಮೂಡಿ ಬರುತ್ತಾರೆ. ಯಾರು ಸೋಮಾರಿಗಳಾಗಿ ಕಾಲಹರಣ ಮಾಡುತ್ತಾರೋ ಅವರು ಸಾಧಕರ ಸಾಲಿಗೆ ಸೇರಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಯಾವುದೇ ಶ್ರಮವನ್ನು ಹಾಕದೆ ಮಹಾನ್ ಸಾಧಕರಾಗಿ ಗುರುತಿಸಿಕೊಳ್ಳಲು ಯಾವುದೇ ಸುಲಭದ ದಾರಿಗಳು (ಶಾರ್ಟ್ಕಟ್) ಇಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ.ಒಂದು ವ್ಯವಸ್ಥೆಯಲ್ಲಿ ಒಬ್ಬರು ಕಠಿಣ ಪರಿಶ್ರಮಿ ಮತ್ತು ಇನ್ನೊಬ್ಬರು ಸೋಮಾರಿ ಇದ್ದು, ಪರಿಶ್ರಮಿಯ ನಿರಂತರ ಸಾಧನೆಗಳು ಮತ್ತು ಸದಾ ಗುರುತಿಸಿಕೊಳ್ಳುವ ರೀತಿಯನ್ನು ನೋಡಿದಾಗ ಸೋಮಾರಿಗೆ ತಾನು ಸಾಧನೆಯಲ್ಲಿ ಹಿಂದೆ ಉಳಿದಿರುವುದಕ್ಕೆ ಬೇಸರ ಆಗುವುದು ಸಹಜ. ಈಗ ಸೋಮಾರಿಯು ಪರಿಶ್ರಮಿಯನ್ನು ಮೀರಿ ಸಾಧಕನಾಗಲು ಏನು ಮಾಡಬೇಕೆಂಬ ಪ್ರಶ್ನೆಯು ಸೋಮಾರಿಯ ಮನಸ್ಸಿನಲ್ಲಿ ಮೂಡುತ್ತದೆ. ಕೆಲವು ಸೋಮಾರಿಗಳು ತಮ್ಮಿಂದ ಮುಂದಿರುವ ಪರಿಶ್ರಮಿ ಸಾಧಕರಿಗಿಂತ ದೊಡ್ಡವರಾಗಿ ಗುರುತಿಸಿಕೊಳ್ಳಲು ಪರಿಶ್ರಮಿಗಳ ಸಾಧನೆಯ…

Read More

ವಿಜಯಪುರ: ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಲೋಕಸಭೆ ಚುನಾವಣೆಯನ್ನು ಯಶಸ್ವಿಗೊಳಿಸಿ ಉತ್ತಮ ಆಡಳಿತ ಪಡೆಯಲು ನಾಗರೀಕರ ಸಹಕಾರ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.ಅವರು ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಕೇಂದ್ರ ಬಸ್ ನಿಲ್ದಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಲೋಕಸಭಾ ಚುನಾವಣೆ ೨೦೨೪ ರ ಹಿನ್ನೆಲೆಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಯಾಣಿಕರೊಂದಿಗೆ ಮಾಹಿತಿ ವಿನಿಮಯ ನೀಡಿ ಮಾತನಾಡಿದರು.ಚುನಾವಣಾ ಆಯೋಗ ಗುರುತು ಮಾಡಿರುವ ದಾಖಲೆಗಳೊಂದಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಹಿರಿಯರು, ವಿಶಿಷ್ಟ ಚೇತನರಿಗೆ ಪ್ರಥಮ ಪ್ರಾಸ್ತಸ್ಯ ನೀಡಬೇಕು. ಯಾವುದೇ ಗೊಂದಲ ಉಂಟಾಗದಂತೆ ನಾಗರೀಕರು ಶಾಂತರೀತಿಯಿಂದ ಸಹಕರಿಸಿ ಜಿಲ್ಲೆಯಲ್ಲಿ ಶೇ.೧೦೦ ರಷ್ಟು ಮತದಾನ ಆಗುವಂತೆ ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ರವರು ಬಸ್ ನಿಲ್ದಾಣಗಳಲ್ಲಿ ಮತದಾನ ಜಾಗೃತಿ ಕುರಿತ ಪೋಸ್ಟರ್‌ಗಳನ್ನು ಗೋಡೆಗಳ…

Read More

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ಏಪ್ರಿಲ್ 10 ರಿಂದ ಏಪ್ರಿಲ್ 15ರ ವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಸಚಿವರು ಏಪ್ರಿಲ್ 09 ರಂದು ರಾತ್ರಿ ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.ಏಪ್ರಿಲ್ 10 ರಂದು ಬುಧವಾರ ಬೆಳಿಗ್ಗೆ 9.30ಕ್ಕೆ ವಿಜಯಪುರದಿಂದ ಹೊರಟು ಬೆ.10ಕ್ಕೆ ಕಾರಜೋಳಕ್ಕೆ ಆಗಮಿಸಲಿರುವ ಅವರು, ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಕಾರಜೋಳ ಗ್ರಾಮದ ಬಾಲಕರಾದ ಸುದೀಪ ದೊಡ್ಡಮನಿ ಹಾಗೂ ಶ್ರೀಧರ ದೊಡ್ಡಮನಿ ಇವರ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 12ಕ್ಕೆ ಚಡಚಣ ಪಟ್ಟಣಕ್ಕೆ ಆಗಮಿಸಲಿರುವ ಸಚಿವರು, ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿರುವ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಸಂಜೆ 4 ಗಂಟೆಗೆ ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಪಾಟೀಲ ಗಾರ್ಡೇನಿಯಾದಲ್ಲಿ ಆಯೋಜಿಸಲಾಗಿರುವ ನಾಗಠಾಣ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ…

Read More

“ಆರೋಗ್ಯ ಅಂಗಳ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಸುಸ್ಥಿರ ಆರೋಗ್ಯಕ್ಕೆ 8 + 8 + 8 ರೂಲ್ 19ನೇ ಶತಮಾನದ ಆದಿಯಲ್ಲಿ ರಾಬರ್ಟ್ ಓವೆನ್ ಎಂಬ ಸಾಮಾಜಿಕ ಸಮಾನತೆಯ ಅರಿವುಳ್ಳ ವ್ಯಕ್ತಿಯು ಪ್ರತಿಯೊಬ್ಬರು ವ್ಯಕ್ತಿಗೆ 10 ಗಂಟೆಗಳ ಹಗಲು ಹೊತ್ತನ್ನು ಹೊಂದಿರಬೇಕು ಎಂಬುದು ಆತನ ವಾದವಾಗಿತ್ತು. 1817ರಲ್ಲಿ ನ್ಯೂಲನಾರ್ಕ್ ನಲ್ಲಿ ನಡೆದ ಸಾಮಾಜಿಕ ಸಮಾರಂಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯು 8+8+8 ಫಾರ್ಮುಲವನ್ನು ಅಳವಡಿಸಿಕೊಳ್ಳಬೇಕು ಎಂದು ಆತ ಪ್ರತಿಪಾದಿಸಿದ ದೈಹಿಕ ಸ್ವಾಸ್ಥ ಮತ್ತು ಮಾನಸಿಕ ಸಂತುಲನವನ್ನು ಉಳಿಸಿಕೊಳ್ಳಲು 8 + 8 + 8 ರೂಲನ್ನು ಅಳವಡಿಸಿಕೊಳ್ಳಲೇಬೇಕುಹಾಗಾದರೆ ಯಾವುದು 8 + 8 + 8 ರೂಲ್ 8 ಗಂಟೆಗಳ ನಿದ್ದೆ 8 ಗಂಟೆಗಳ ಪರಿಶ್ರಮ ಮತ್ತು 8 ಗಂಟೆಗಳ ವೈವಿಧ್ಯಮಯ ಚಟುವಟಿಕೆಗಳು. 8 ಗಂಟೆಗಳ ನಿದ್ದೆ ಅತ್ಯವಶ್ಯಕವಾಗಿ ಬೇಕು. ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಯನ್ನು ನಿದ್ರೆಯಿಂದಲೇ ಪಡೆಯುತ್ತಾನೆ. ನಿದ್ರೆ ಮನುಷ್ಯನ ಬಾಹ್ಯ ಚಟುವಟಿಕೆಗಳಿಗೆ ವಿರಾಮವನ್ನು ಜೈವಿಕ ಚಟುವಟಿಕೆಗಳಿಗೆ…

Read More

ವಿಜಯಪುರ: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪರಂಪರೆಯೇ ಇದೆ. ಮೆರವಣಿಗೆಯ ಸಾಲಿನಂತೆ ಬರುವ ಈ ಹಬ್ಬಗಳಲ್ಲಿ ಮೊದಲನೇಯದೇ ಈ ಯುಗಾದಿ! ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಹ ಈ ಹಬ್ಬ ಕಳಸ-ಕನ್ನಡಿ ಹೊತ್ತು ಬರುವ ಹಿರಿಯ ಮುತ್ತೈದೆಯಂತೆ! ಯುಗಾದಿ ಹಬ್ಬ ಬದುಕಿನಲ್ಲಿ ಹೊಸತನವನ್ನು ತರುವ ಹಬ್ಬ. ಋತುಗಳ ರಾಜನ ಆಗಮನದ ಹಬ್ಬವಾದ ಈ ಯುಗಾದಿ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಹರುಷ ತರುವ ಹಬ್ಬವಾಗಿದೆ.ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ಮನುಷ್ಯನ ಬದುಕು ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರಬೇಕು. ಪ್ರಕೃತಿಯಲ್ಲಿರುವ ಸಮಯಪ್ರಜ್ಞೆಯನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವುದೇ ಈ ಹಬ್ಬದ ವಿಶೇಷ. ನಾವೆಲ್ಲರೂ ನಮ್ಮ ಬದುಕಿನಲ್ಲಿ ಸ್ವಾರ್ಥತೆಯನ್ನು ತೊರೆದು, ವಿಶಾಲಹೃದಯದ ಮನುಷ್ಯರಾದಾಗ ಮಾತ್ರ ಯುಗಾದಿ ಹಬ್ಬದ ಕಳಕಳಿ ಅರ್ಥವಾಗುತ್ತದೆ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ, ಪರಿಪಾಠವನ್ನು ಬೆಳೆಸುವದೇ ಯುಗಾದಿ ಹಬ್ಬದ ಆಚರಣೆಯ ಉದ್ದೇಶ.ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಸವಿತಾ, ಸುರೇಖಾ, ಗಾಯತ್ರಿ, ಶ್ರೇಯಾ, ಅನುಶ್ರೀ, ಶ್ರೀನಿಧಿ, ಆದೇಶ,…

Read More

೮೦೦ ಮೀಟರ್ ರನ್ನಿಂಗ್ ಮಾಡಿ ಮತದಾನ ಜಾಗೃತಿ ಮೂಡಿಸಿದ ಜಿ.ಪಂ ಸಿಇಓ ರಿಶಿ ಆನಂದ ವಿಜಯಪುರ: ಒಂದು ದೇಶದ ಶಕ್ತಿಶಾಲಿ ಸಂಪನ್ಮೂಲ ಎಂದರೆ ಅದು ಯವಶಕ್ತಿ. ದೇಶಕ್ಕೆ ಯುವಕರ ಕೊಡುಗೆ ಅತ್ಯಂತ ಮಹತ್ವದಾಗಿದೆ. ದೇಶದ ಭವಿಷ್ಯ ನಿರ್ಮಾಣ ಕಾರ್ಯಕ್ಕೆ ಎಲ್ಲಾ ಯುವಕರು ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕ ಹಾಗೂ ಮುಕ್ತವಾಗಿ ಮತದಾನ ಮಾಡುವ ಮೂಲಕ ಸದೃಡ ದೇಶ ನಿರ್ಮಾಣಕ್ಕೆ ಕಾರಣಿಭೂತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ನಗರದ ಡಾ. ಬಿ. ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮುವಾರ ಕ್ರೀಡಾ ಇಲಾಖೆಯ ಯುವ ಕ್ರೀಡಾಪಟುಗಳೊಂದಿಗೆ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆಟವನ್ನು ಗೆಲ್ಲಬೇಕಾದರೆ ಹೇಗೆ ಸತತ ಪರಿಶ್ರಮ ಪಡುತ್ತೇವೆಯೋ ಹಾಗೆ ಸ್ವಚ್ಚ ಹಾಗೂ ನ್ಯಾಯಸಮ್ಮತ ಆಡಳಿತ ನಿರ್ಮಾಣವಾಗಲು ಯೋಗ್ಯ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ಯುವಶಕ್ತಿ ಮುಂದಾಗಬೇಕು. ಅದಲ್ಲದೇ ತಮ್ಮ ಕುಟುಂಬ,…

Read More

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್.ಸಿ ಘಟಕದ ವತಿಯಿಂದ ಸನ್ಮಾನ ವಿಜಯಪುರ: ಜಿಲ್ಲಾ ಕಾಂಗ್ರೆಸ್‌ನ ನಿಕಟಪೂರ್ವ ಅಧ್ಯಕ್ಷರು ಹಾಗೂ ಲೋಕಸಭಾ ಅಭ್ಯರ್ಥಿಯಾದ ರಾಜು ಆಲಗೂರ ಅವರು ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್.ಸಿ ಘಟಕದ ವತಿಯಿಂದ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೆವಾಡ, ಸಂಘಟನಾ ಕಾರ್ಯದರ್ಶಿ ಮಹಾದೇವ ಚಲವಾದಿ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಚಲವಾದಿ ಹಾಗೂ ರಜಾಕ ಬಬಲೇಶ್ವರ ಅವರು ಸೇರಿ ಸಂವಿದಾನ ಪೀಠಿಕೆ ನೀಡುವುದರ ಮೂಲಕ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರು ಹಾಗೂ ಲೋಕಸಭಾ ಅಭ್ಯರ್ಥಿಯಾದ ರಾಜು ಆಲಗೂರ ಅವರು ಅಧಿಕಾರ ಹಸ್ತಾಂತರ ಮಾಡುವ ವೇಳೆ ‘ಬೇವು-ಬೆಲ್ಲ’ ನೀಡುವುದರೊಂದಿಗೆ ನನಗೆ ಯಾವ ರೀತಿಯಾಗಿ ಜಿಲ್ಲೆಯ ಎಲ್ಲಾ ಕಾಂಗ್ರೆಸಿನ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಿದ್ದೀರಿ, ಅದೇ ರೀತಿ ಲೋಣಿ ಅವರಿಗೂ ಬೆಂಬಲ ನೀಡುವದರೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಮನೆ ಮನೆಗೆ…

Read More