ಆಲಮಟ್ಟಿ: ಸಮೀಪದ ಹುಣಶಾಳ-ಪಿಸಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಿವೃತ್ತ ಶಿಕ್ಷಕ ಎಂ.ಬಿ.ಹೆಳವರ ೨೫ ತೆಂಗಿನ ಸಸಿಗಳನ್ನು ಭಕ್ತಿಯ ಕಾಣಿಕೆಯನ್ನಾಗಿ ನೀಡಿ ತಮಗಿದ್ದ ಪರಿಸರ ಪ್ರೇಮವನ್ನು ಸಾದರಪಡಿಸಿದ್ದಾರೆ.
ಸಸಿಗಳನ್ನು ವಿತರಿಸಿದ ಬಳಿಕ ವಂದಾಲ ಗ್ರಾಮಪಂಚಾಯ್ತಿ ಅಧ್ಯಕ್ಷ ವೀರೇಶ ಗಣಾಚಾರಿ ದೇವಸ್ಥಾನ ಆವರಣದಲ್ಲಿ ಅವುಗಳನ್ನು ನೆಟ್ಟು, ತಮ್ಮ ಶಾಲಾ ಆವರಣದಲ್ಲಿಯೇ ಸಸಿ ನೆಡಲು ಹಿಂದೇಟು ಹಾಕುವ ಅದೆಷ್ಟೋ ಜನ ಶಿಕ್ಷಕರಿಗೆ ನಿವೃತ್ತ ಶಿಕ್ಷಕ ಎಂ.ಬಿ.ಹೆಳವರ ಅವರ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಪ್ರಮುಖರಾದ ಶಂಕ್ರಯ್ಯ ವಸ್ತ್ರದ, ಗುಂಡುರಾವ್ ದೇಶಪಾಂಡೆ, ಪದ್ಮಾವತಿ ಗುಡಿ, ಚನಸಂಗಪ್ಪಗೌಡ ಪಾಟೀಲ, ಶರಣಯ್ಯ ವಸ್ತ್ರದ, ಶಿವಕುಮಾರ ವಸ್ತ್ರದ, ಸಂಗಪ್ಪ ಹೂಗಾರ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

