Author: editor.udayarashmi@gmail.com

ವಿಜಯಪುರ: ವಿಶ್ವಜ್ಞಾನಿ ಎಂದು ವಿಶ್ವ ಮಾನ್ಯತೆ ಪಡೆದ ಡಾ ಬಿ ಆರ್ ಅಂಬೇಡ್ಕರ್ ಅವರು ಯಾವುದೇ ಜಾತಿ, ಮತ ಪಂಥಗಳಿಗೆ ಸೀಮಿತವಾಗದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಎಂ ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ವತಿಯಿಂದ ವೃತ್ತಿಪರ ಬಾಲಕರ ವಸತಿ ನಿಲಯ ಸಾಯಿಪಾರ್ಕ್ ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಂಬೇಡ್ಕರ್ ಅವರು ಶೋಷಿತ ವರ್ಗದವರಿಗಾಗಿ ದೀನ ದಲಿತರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಸಮಾಜದ ಎಲ್ಲಾ ವರ್ಗಗಳ ನ್ಯಾಯಕ್ಕಾಗಿ ಶ್ರಮಿಸಿದವರು. ಶೈಕ್ಷಣಿಕ,ಆರ್ಥಿಕ, ಸಾಮಾಜಿಕವಾಗಿ, ಸಮಾನತೆಗಾಗಿ ಹೋರಾಡಿದ ಮಹಾ ನಾಯಕರು. ಮಹಿಳೆಯರ ಬಗ್ಗೆ ವಿಶೇಷವಾದಂತ ಸಾಮಾಜಿಕ ಸ್ಥಾನಮಾನಕ್ಕಾಗಿ ಹೋರಾಡಿದ ಧೀಮಂತ ನಾಯಕ ಹಿಂದುಳಿದ ವರ್ಗಗಳ ಜನರ ಏಳಿಗೆಗಾಗಿ ಶ್ರಮಿಸಿದರು ಎಂದು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಯಿ ಪಾರ್ಕ್ ವಸತಿ ನಿಲಯ ಪಾಲಕ ಸದಾನಂದ ಬಡಿಗೇರ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಾಮಾಜಿಕ ಸ್ಥಾನಮಾನ ಕಲ್ಪಿಸಿಕೊಟ್ಟರು. ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಶಾಂತಿಯುತವಾಗಿ ಬಾಳುವಂತ…

Read More

ಕೆಂಭಾವಿ: ಪಟ್ಟಣದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ರಾಯಚೂರು ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ಕುಮಾರ್ ನಾಯಕ ಚುನಾವಣೆ ಪ್ರಚಾರದ ಅಂಗವಾಗಿ ಮಂಗಳವಾರ ಶಹಾಪುರ ವಿಧಾನಸಭಾ ಕ್ಷೇತ್ರದ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಸಮೀತಿಯ ಕಾರ್ಯಕರ್ತರ ಸಭೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಜಿ ಕುಮಾರ್ ನಾಯಕ ಹಾಗೂ ಕೆಂಬಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದನಗೌಡ ಪೊಲೀಸ್ ಪಾಟೀಲ್, ನಿಂಗನಗೌಡ ಮಾಲಿಪಾಟೀಲ್, ಶರಣಬಸವ ಡಿಗ್ಗಾವಿ, ಮೈಪಾಲ್ ರೆಡ್ಡಿ ಸಾಹುಕಾರ ಡಿಗ್ಗಾವಿ, ವಾಮನರಾವ್ ದೇಶಪಾಂಡೆ, ಕಾಜಾ ಪಟೇಲ್ ಕಾಚೂರ್, ಆರಿಫ್ ಹುಸೇನ್ ಖಾಜಿ, ರಂಗಪ್ಪ ವಡ್ಡರ್, ದೇವು ಮ್ಯಾಗೇರಿ, ಸಾಹಿಬುಲಾಲ ಅಂದೇಹಲಿ, ಶಂಕರ್ ಖಾನಾಪುರ್, ಮೈನುದ್ದಿನ್ ಸಾಸನೂರ್, ಅಜಿಜ್ ಪಾಶ ಖಾಜಿ, ಇಸ್ಮೈಲ್ ಜಮಾದಾರ, ತಿಪ್ಪಣ್ಣ ಯಾಳಗಿ, ಪರಶುರಾಮ ಬಳಬಟ್ಟಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Read More

ಬ್ರಹ್ಮದೇವನಮಡು: ಡಾ.ಅಂಬೇಡ್ಕರ್ ಮತ್ತೆ ಮತ್ತೆ ಹುಟ್ಟಿ ಬರುವುದಿಲ್ಲ. ಅವರ ಚಿಂತನೆಗಳು ಮಾತ್ರ ಜೀವಂತವಾಗಿರುತ್ತವೆ ಎಂದು ಶಿಕ್ಷಕ ಎಸ್.ಐ.ಯಳಸಂಗಿ ಹೇಳಿದರು.ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೩ನೇ ಜನ್ಮದಿನಾಚರಣೆ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.ದೇಶ ಮೌಢ್ಶತೆಯಿಂದ ಹೊರ ಬರಬೇಕು. ಭಾರತವನ್ನು ಪ್ರೀತಿಸುವುದು ಎಂದರೆ ಮೌಢ್ಶವನ್ನು ವಿರೋಧಿಸಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ವಗ೯ವನ್ನು ಮೀರಿ ಸಮಾಜಕ್ಕೆ ನ್ಶಾಯ ಕೊಡಿಸಿದ್ದಾರೆ. ಅವರ ಚಿಂತನೆಗಳು ಜೀವಂತವಾಗಿರಬೇಕು ಎಂದರೆ ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.ಕಾಂಗ್ರೆಸ್ ಯುವ ಮುಖಂಡ ಕೆ.ಬಿ.ಮನಗೂಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಮಲ್ಲಿಕಾಜು೯ನ ಮನಗೂಳಿ, ಎಚ್.ಕೆ.ಸೀತನೂರ, ರೇವಣಸಿದ್ದ ಕೋರವಾರ, ಶಿವಪ್ಪ ಕರಿಕಲ್ಲ್, ಮಲ್ಲಿಕಾಜು೯ನ ಯಲಗೋಡ, ಖಾಸಿಂಸಾಬ್ ರಾಜಾಕೋಳ, ನಬಿಸಾಬ ಸೀತನೂರ, ಬಂದೇನಮಾಜ ಸೀತನೂರ, ಡಿ.ಕೆ.ಸೀತನೂರ, ಗೋಲ್ಲಾಳಪ್ಪ ಕರಿಕಲ್ಲ್, ಅಶೋಕ ಕರಿಕಲ್ಲ್, ಹಣಮಂತ ಯಂಟಮಾನ, ಶಿವು ಕೋಟಾರಗಸ್ತಿ, ನಿಂಗಪ್ಪ ಪೂಜಾರಿ, ಕಲ್ಲಪ್ಪ ತೊನಶ್ಶಾಳ, ಮನೋಹರ ದೊಡ್ಡಮನಿ, ಮಲ್ಲು ಕೆಂಭಾವಿ, ಅಮೃತ್ ದೊಡ್ಡಮನಿ, ಹುಚ್ಚಪ್ಪ ಕೆಂಭಾವಿ, ಭೀಮು ಕೆಂಭಾವಿ, ಅಶೋಕ…

Read More

೧೦೦ನೇ ರ್‍ಯಾಂಕ್ ಸಾಧನೆಗೈದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದ ಕುವರಿ ವಿಜೇತಾ ವಿಜಯಪುರ: ಯು.ಪಿ.ಎಸ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆಯ ಯುವತಿ‌ ವಿಜೇತಾ ಭೀಮಸೇನ ಹೊಸಮನಿ 100 ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ.ವಿಜೇತಾ ಅವರು ಎಲ್. ಕೆ. ಜಿ ಯಿಂದ 5ನೇ ತರಗತಿವರೆಗೆ ವಿಜೇಜಾ ಭೀಮಸೇನ ಹೊಸಮನಿ ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಸ್ಕೂಲ್ ನಲ್ಲಿ ಓದಿದ್ದಾರೆ. 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಿಯುಸಿ ಪ್ರಥಮ ವರ್ಷ ವಿಜಯಪುರ ನಗರದ ತುಂಗಳ ಕಾಲೇಜಿನಲ್ಲಿ ಹಾಗೂ ಪಿಯುಸಿ ದ್ವಿತೀಯ ದರಬಾರ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.ನಂತರ ಪ್ಲ್ಯಾಟ್ ಎಕ್ಸಾಂ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿಬಿ.ಎ ಎಲ್.ಎಲ್.ಬಿಕ್ರಿಮಿನಲ್ ಲಾ ಪದವಿಯನ್ನು ಗೋಲ್ಡ್ ಮೆಡಲ್ ನೊಂದಿಗೆ ಪೂರ್ಣಗೊಳಿಸಿದ್ದಾರೆ.2020 ರಿಂದ ಮೂರು ಬಾರಿ ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದಾರೆ. 2023ರ ಪ್ರಿಲಿನ್ಮರಿ ಎಕ್ಸಾಂ, ಮೇನ್…

Read More

ವಿಜಯಪುರ: ವಿವಿಧ ವೃತ್ತಿಪರ ಕೋರ್ಸಗಳ ಪ್ರವೇಶಾತಿಗೆ ಇದೇ ಏಪ್ರಿಲ್ ೧೮ ಹಾಗೂ ೧೯ ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು (ಸಿಇಟಿ) ವಿವಿಧ ೨೩ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದರು.ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿಜಯಪುರ ನಗರದ ೨೧ ಹಾಗೂ ಬಬಲೇಶ್ವರ ಮತ್ತು ತಿಕೋಟಾದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು ೨೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿವೆ ಎಂದು ಹೇಳಿದರು.ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಟ್ಟು ೧೧೯೬೬ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಏ.೧೮ ರಂದು ಬೆಳಿಗ್ಗೆ ೧೦-೩೦ರಿಂದ ೧೧-೫೦ರವರೆಗೆ ಜೀವಶಾಸ್ತ್ರ, ಹಾಗೂ ಮಧ್ಯಾಹ್ನ ೨-೩೦ರಿಂದ ೩-೫೦ರವರೆಗೆ ಗಣಿತ ಪರೀಕ್ಷೆಗಳು ಜರುಗಲಿವೆ. ಅದರಂತೆ ಏ.೧೯ರಂದು ಬೆಳಿಗ್ಗೆ ೧೦-೩೦ರಿಂದ ೧೧-೫೦ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ೨-೩೦ರಿಂದ೩-೫೦ರವರೆಗೆ ರಸಾಯನಶಾಸ್ತ್ರ ಪರೀಕ್ಷೆಗಳು ಜರುಗಲಿದ್ದು, ಪ್ರತಿ ೨೪…

Read More

ಇಂಡಿ: ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವ್ಯಾಪ್ತಿಯ ಮತಗಟ್ಟೆಗಳಲ್ಲಿ ವಿಶೇಷಚೇತನರ ಮತದಾನಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸುವಂತೆ ಸಹಾಯಕ ಚುನಾವಣೆ ಅಧಿಕಾರಿಗಳು ಮತ್ತು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ವಿಶೇಷಚೇತನರ ಮತದಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ಇಂಡಿ ಮತಕ್ಷೇತ್ರದಲ್ಲಿ ೩೫೦೬ ಕ್ಕೂ ಹೆಚ್ಚು ಮತದಾರರನ್ನು ಗುರುತಿಸಲಾಗಿದ್ದು ಮತಗಟ್ಟೆಗಳಲ್ಲಿ ವಿಶೇಷ ಚೇತನರಿಗೆ ಮತದಾನ ಮಾಡಲು ಅನುಕೂಲ ವಾಗುವಂತೆ ಸೌಲಭ್ಯಗಳನ್ನು ಒದಗಿಸಬೇಕು ಎಂದರು.ವಿಶೇಷ ಚೇತನರು ಮತದಾರರು ಮತದಾನದಿಂದ ವಂಚಿತರಾಗದಂತೆ ನಿಗಾ ವಹಿಸಬೇಕು, ಇದಕ್ಕಾಗಿ ಪ್ರತಿ ಗ್ರಾ.ಪಂ ವಾರು ಹಾಗೂ ಪ್ರತಿ ಮತಗಟ್ಟೆವಾರು ಎಷ್ಟು ವಿಶೇಷಚೇತನರಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಮತದಾನ ದಿನದಂದು ವಿಶೇಷಚೇತನರಿಗೆ ಮತ ಚಲಾಯಿಸಲು ಯಾವದೇ ಗೊಂದಲಕ್ಕೆ ಆಸ್ಪದವಾಗದಂತೆ ಮತದಾರರ ಚೀಟಿಯನ್ನು ಕ್ಷೇತ್ರ ಮತಗಟ್ಟೆ ಅಧಿಕಾರಿಗಳ ಮೂಲಕ ವಿತರಿಸಲಾಗಿದೆ ಎಂದು ತಿಳಿಸಿದರು.ವಿಶೇಷಚೇತನರು ಮತದಾನಕ್ಕೆ ಮತಗಟ್ಟೆಗಳಿಗೆ ಆಗಮಿಸಿದಾಗ ಇತರರೊಂದಿಗೆ ಸರತಿ ಸಾಲಿನಲ್ಲಿ ಕಾಯಿಸದೇ ಆದ್ಯತೆ ಮೇರೆಗೆ ಪ್ರತ್ಯೇಕ ವ್ಯವಸ್ಥೆ…

Read More

ಬಸವನಬಾಗೇವಾಡಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಪಕ್ಷವು ನೀಡಿರುವ ಗ್ಯಾರಂಟಿಗಳಾದ ಯುವನ್ಯಾಯ, ಮಹಿಳಾನ್ಯಾಯ, ರೈತನ್ಯಾಯ, ಶ್ರಮಿಕನ್ಯಾಯ, ಪಾಲುದಾರಿಕೆಯ ನ್ಯಾಯ ಜಾರಿಗೆ ಬರುವ ಮೂಲಕ ದೇಶದ ಪ್ರಗತಿಗೆ ನಾಂದಿಯಾಗಲಿದೆ. ಎಲ್ಲ ವರ್ಗದವರ ಹಿತರಕ್ಷಣೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರನ್ನು ವಿಜಯಪುರ ಲೋಕಸಭೆ ಕ್ಷೇತ್ರದಿಂದ ಬಹುಮತದೊಂದಿಗೆ ಮತದಾರರು ಆಯ್ಕೆ ಮಾಡಬೇಕೆಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯಪುರ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಗ್ರಾಮಗಳಲ್ಲಿರುವ ಸಾಮರಸ್ಯ ಪಟ್ಟಣಗಳಲ್ಲಿ ಇಲ್ಲ. ಸಾಮರಸ್ಯದ ಕೊರತೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬೆಂಬಲಿಸಬೇಕು. ಬಿಜೆಪಿ ಒಂದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಮೊದಲು ಮಿಲಟರಿಯಲ್ಲಿ ಜಾತ ಇರಲಿಲ್ಲ.…

Read More

ಬಸವನಬಾಗೇವಾಡಿ: ಪಟ್ಟಣದ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಮಂಗಳವಾರ ಸಂಭ್ರಮ, ಸಡಗರದಿಂದ ಜರುಗಿತು. ಜಾತ್ರೆಯಂಗವಾಗಿ ಪಲ್ಲಕ್ಕಿ ಉತ್ಸವವು ಬಸವೇಶ್ವರ ದೇವಸ್ಥಾನದ ಬಸವತೀರ್ಥಕ್ಕೆ ಗಂಗಾಸ್ಥಳಕ್ಕೆ ತೆರಳಿದ ನಂತರ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿತು. ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕೊಡೆಕಲ್ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಜಾತ್ರೆಯಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.ಭಕ್ತರು ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಭಾವ ಅನುಭವಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಲ್ಲಕ್ಕಿ ಉತ್ಸವದಲ್ಲಿ ಈರಯ್ಯ ಕೊಡೆಕಲ್ಲಮಠ ಅವರು ಕೊಡೆಕಲ್ಲ ಬಸವೇಶ್ವರ ವಿರಚಿತ ಕಾಲಜ್ಞಾನ ಮಹಾಗ್ರಂಥ ಪಾರಾಯಣ ಮಾಡಿದರು.ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಬಸವರಾಜ ಹಾರಿವಾಳ, ಚಂದ್ರಶೇಖರ ಮುರಾಳ, ಶಿವರಾಯ ರಾಯಗೊಂಡ, ಸಂಗು ಮುರಾಳ, ಮುತ್ತು ಹಾರಿವಾಳ, ಸುರೇಶ ಹಾರಿವಾಳ, ಸಂಗಪ್ಪ ರಾಯಗೊಂಡ, ಸುರೇಶ ಬಾಗೇವಾಡಿ, ಗುರಪ್ಪ ಮುರಾಳ, ಸಂಗಪ್ಪ ರಾಯಗೊಂಡ, ಪ್ರಕಾಶ ಮುರಾಳ, ಮಲ್ಲಯ್ಯ ನರಸಲಗಿಮಠ, ಮಹೇಶ ಹಾರಿವಾಳ, ಸೂರಪ್ಪ ಮುರಾಳ,ಸೋಮು ಹಾರಿವಾಳ, ವಿದ್ಯಾ ಮುರಾಳ, ಗೀತಾ…

Read More

ಇಂಡಿ: ದೇಶ ನನಗೇನು ಕೊಟ್ಟಿದೆ ಅನ್ನವುದಕ್ಕಿಂತ ದೇಶಕ್ಕೆ ನಾನೇನು ಕೊಟ್ಟೆ ಮಹತ್ವ ಎನ್ನುವ ನಾನ್ನುಡಿ ಭಾರತೀಯರಿಗೆ ಸರ್ವಕಾಲಿಕ ಸತ್ಯ ವಾಗಿರುವ ಮೌಲ್ಯದ ಮಾತು. ಈ ಮಾತಿಗೆ ಅನುಗುಣವಾಗಿ ಇಂಡಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರು ಕಾರ್ಯ ಉದಾಹರಣೆಯಾಗಿದೆ.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ, 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಏಕಗವಾಕ್ಷಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್ ಆರ್ ಮುಜಗೊಂಡ ಕಾರಣರಾಗಿದ್ದಾರೆ. ಏಕೆ ಗೊತ್ತಾ..? ಚುನಾವಣೆ ಕಾರ್ಯ ಬಂದಾಗ, ಎಷ್ಟೋ ಜನರು ದೈಹಿಕ ಮಾನಸಿಕ ಸದೃಡವಿದ್ದರೂ ವಿವಿಧ ಕಾರಣಗಳ ನೆಪವೊಡ್ಡಿ ಚುನಾವಣೆ ಕಾರ್ಯದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಾಗೆ ಶಿಕ್ಷೆಗೆ ಕೂಡಾ ಒಳಗಾಗುವುದು ಸಾಮನ್ಯ.ಆದರೆ ಇಂಡಿ ತಹಶಿಲ್ದಾರ ಕಛೇರಿಯಲ್ಲಿ ಶಿರಸ್ತೆದಾರರಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಆರ್ ಮುಜಗೊಂಡ ಅವರು ದೈಹಿಕವಾಗಿ ವಿಕಲಚೇತನ ವಿದ್ದರೂ..! ಚುನಾವಣೆ ಆಯೋಗದಿಂದ ವಿನಾಯಿತಿ ಇದ್ದರೂ..! ಸಹ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆ ಕರ್ತವ್ಯ ಹಾಗೂ ರಾಷ್ಟ್ರೀಯ ಪ್ರಜ್ಞೆಗೆ ಕೈಗನ್ನಡಿಯಾಗಿದೆ.

Read More

ಬಸವನಬಾಗೇವಾಡಿ: ಪಟ್ಟಣದ ಭೀಮ ಆರ್ಮಿ ಭಾರತ ಏಕತಾ ಮಿಷನ್ ಮಾನವ ಹಕ್ಕುಗಳ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಮುತ್ತುರಾಜ ಬಾಗೇವಾಡಿ ಅವರಿಗೆ ಚಿಮ್ಮಲಗಿ ಗ್ರಾಮದ ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗಿರಿಯಪ್ಪ ತಳವಾರ, ಮುಖಂಡರಾದ ಪರಶುರಾಮ ಚಲವಾದಿ, ವಿಜಯಕರ, ಮುದ್ದೇಬಿಹಾಳ ಇತರರು ಇದ್ದರು.

Read More