Author: editor.udayarashmi@gmail.com

ಸಿಂದಗಿ: ಬೆಂಗಳೂರಿನ ಇಸ್ಕಾನ್ ಸಂಸ್ಥೆ ಅಡಿಯಲ್ಲಿ ನಡೆದ ಭಗವದ್ಗೀತೆ ಆಧರಿಸಿದ ಮೌಲ್ಯ ಶಿಕ್ಷಣ ಸ್ಪರ್ಧೆಯಲ್ಲಿ ಪಟ್ಟಣದ ಮಾತಾ ಲಕ್ಷ್ಮೀ ಪಬ್ಲಿಕ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಋತ್ವೀಕ ಬ್ಯಾಕೋಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ಮತ್ತು ಇಸ್ರೋ ಪ್ರವಾಸಕ್ಕೂ ಆಯ್ಕೆಯಾಗಿದ್ದಾನೆ.ಈ ವೇಳೆ ಆಯ್.ಎಸ್.ಟಿ.ಆರ್.ಎ.ಸಿ ಇಸ್ರೋ ಸಹ ನೀರ್ದೇಶಕ ರಾಮಕೃಷ್ಣ ಅವರು ವಿದ್ಯಾರ್ಥಿಗೆ ಬೈಸಿಕಲ್ ಮತ್ತು ಪದಕವನ್ನು ನೀಡಿ ಗೌರವಿಸಿದರು.ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಅಧ್ಯಕ್ಷ ಸಂಜೀವ ದೇಶಪಾಂಡೆ, ಪ್ರವೀಣ ಹಾಲಹಳ್ಳಿ, ನಿರ್ದೇಶಕ ಮಂಡಳಿ, ಪ್ರಾಚಾರ್ಯ ಪ್ರಸನ್ನ ಕುಲಕರ್ಣಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ದ ಶಿವಯೋಗಿಗಳ ೭೪ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ ದ್ವಿತೀಯ ಪುಣ್ಯಾರಾಧನೆಯಂಗವಾಗಿ ಏ. ೨೭ ರಿಂದ ೩೦ ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಂದಿಮಠದ ವೀರಸಿದ್ದ ಸ್ವಾಮೀಜಿ ಹೇಳಿದರು.ಈ ಕುರಿತು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಏ.೨೭ ರಂದು ಬೆಳಗ್ಗೆ ೮ ಗಂಟೆಗೆ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಂದ ಷಟ್ಸ್ಥಲ ಧ್ವಜಾರೋಹಣದೊಂದಿಗೆ ಜಾತ್ರಾಮಹೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ ೧೦ ಗಂಟೆಗೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಸಂಗಮೇಶ್ವರ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕೆಂದರು.ಏ. ೨೮ ರಂದು ಸಂಜೆ ೭ ಗಂಟೆಗೆ ಜಾತ್ರಾಮಹೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲ ಕಾರ್ಯಕ್ರಮ ದೇವರಹಿಪ್ಪರಗಿಯ ಮಡಿವಾಳೇಶ್ವರ ಸ್ವಾಮೀಜಿ, ಸುರಪುರದ ಪ್ರಭುಲಿಂಗ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕುಂಟೋಜಿಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ವಿವಿಧ…

Read More

ಬಸವನಬಾಗೇವಾಡಿ: ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕಾರ್ಯ ಮತ್ತು ಪಾಲನೆ ಉಪವಿಭಾಗದ ಕಚೇರಿ ಮುಂಭಾಗ ರೈತ ಬಾಂಧವರಿಗೆ ಕಳಪೆ ಗುಣಮಟ್ಟದ ವಿದ್ಯುತ್ ಪರಿವರ್ತಕ(ಟಿಸಿ) ನೀಡಿದ ವಿದ್ಯುತ್ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ರೈತರು ತಂದಿದ್ದ ಕಳಪೆ ವಿದ್ಯುತ್ ಪರಿವರ್ತಕವನ್ನು ಬದಲಾಯಿಸಿ ಹೊಸ ವಿದ್ಯುತ್ ಪರಿವರ್ತಕ ರೈತರಿಗೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರೈತ ಬಾಂಧವರೊಂದಿಗೆ ಸೇರಿ ಹೆಸ್ಕಾಂ ಎಇಇ ಜಿ.ವ್ಹಿ.ಸಂಪಣ್ಣನವರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ರೈತ ಬಾಂಧವರು ಕೊಳವೆ ಬಾವಿ ಇಲ್ಲವೇ ತೆರೆದ ಬಾವಿಯಿಂದ ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ವಿದ್ಯುತ್ ಪರಿವರ್ತಕ ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಬಳಿ ತೆರಳಿ ಇದಕ್ಕೆ ಸಂಬಂಧಿಸಿದಂತೆ ಅವರು ಹೇಳಿದಷ್ಟು ಹಣ ನೀಡಿ ವಿದ್ಯುತ್ ಸಂಪರ್ಕ ಪಡೆದಕೊಳ್ಳುತ್ತಾರೆ. ಗುತ್ತಿಗೆದಾರರು ರೈತರಿಂದ ಹಣ ವಿದ್ಯುತ್ ಸಂಪರ್ಕಕ್ಕೆ…

Read More

ಸಿಂದಗಿ: ಪಟ್ಟಣದ ಡೈಮಂಡ್ ಬ್ಯಾಂಕ್ ಸಭಾಂಗಣದಲ್ಲಿ ನೂತನವಾಗಿ ಕಾಂಗ್ರೆಸ್ ಯುವ ಘಟಕದ ತಾಲೂಕಾದ್ಯಕ್ಷರಾಗಿ ಕುಮಾರ ದೇಸಾಯಿ ಹಾಗೂ ಜಿಲ್ಲಾ ಉಪಾದ್ಯಕ್ಷರಾಗಿ ಎಸ್.ಬಿ.ಪಾಟೀಲ ಆಯ್ಕೆಯಾದ ನಿಮಿತ್ಯ ಪಂಚಮಸಾಲಿ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಸೋಮನಗೌಡ ಬಿರಾದಾರ, ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮಿಸಲಾತಿ ಹೋರಾಟ ಸಮಿತಿ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಗುರು ಬಸರಕೋಡ, ಶಿವರಾಜ ಪೊಲೀಸಪಾಟೀಲ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ ಸೇರಿದಂತೆ ಅನೇಕರು ಇದ್ದರು.

Read More

ಸಿಂದಗಿ: ಅನಾಫೆಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.ಪಟ್ಟಣದ ಶ್ರೀದೇವಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸಿಂದಗಿ ತಾಲೂಕಾ ಆರೊಗ್ಯ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ಆಚರಣೆ ಮಾಡಲಾಗುತ್ತಿದೆ. ಈ ರೋಗದ ಮುಖ್ಯ ಲಕ್ಷಣ ಸಾಮಾನ್ಯವಾಗಿ ಈ ರೋಗದಿಂದ ತೀವ್ರ ಪರಿಣಾಮಗಳು ಆಗದಿದ್ದರೂ, ಫಾಲ್ಸಿಪಾರಂ ಎನ್ನುವ ಜಾತಿಯ ರೋಗಾಣುವಿನಿಂದ ಕೆಲವೊಮ್ಮೆ ವಿಶೇಷ ತೊಂದರಗಳು ಉಂಟಾಗಬಹುದು. ರೋಗ ಮೆದುಳುಗೂ ಮತ್ತು ಇತರ ಒಳ ಅಂಗಾಂಗಗಳಿಗೆ ಹರಡಿ ವ್ಯಕ್ತಿ ಸಾವು ಸಂಭವಿಸಬಹುದು ಎಂದರು.ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಮಾತನಾಡಿ, ಈ ರೋಗವನ್ನು ತಡೆಗಟ್ಟಲು ಸರಕಾರ…

Read More

ಸಿಂದಗಿ: ಇತ್ತೀಚಿನ ದಿನಮಾನಗಳಲ್ಲಿ ನಗರ ಪ್ರದೇಶದಲ್ಲಿ ಅನೇಕಕಾರಣಗಳಿಂದ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಸಾರಂಗಮಠದ ಡಾ.ಪ್ರಭಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದಲ್ಲಿ ೨೦೨೪ರ ಲೋಕಸಭಾ ಚುನಾವಣೆ ನಿಮಿತ್ಯ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ತಾಲೂಕ ಸ್ವೀಪ್ ಸಮಿತಿ ಹಾಗೂ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಮೂಡಿಸುವ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ. ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಮತ ನಮ್ಮ ಹಕ್ಕು, ಅದನ್ನು ಶ್ರದ್ಧೆಯಿಂದ ಪೂರೈಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕೈಜೋಡಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಯಲ್ಲಿ ನಿರ್ಭಿತಿಯಾಗಿ ಧರ್ಮ, ಜನಾಂಗ,…

Read More

“ವೀಣಾಂತರಂಗ” – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ನಮ್ಮ ಪ್ರಜಾತಂತ್ರ ರಾಷ್ಟ್ರ ಭಾರತದಲ್ಲಿ ಕಳೆದ ತಿಂಗಳು ಲೋಕಸಭೆಗೆ ದಿನಾಂಕಗಳು ಘೋಷಣೆಯಾಗಿವೆ. ಇದಕ್ಕೂ ಮುನ್ನವೇ ಕಳೆದ ಒಂದು ವರ್ಷದಿಂದ ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿ ತಮ್ಮ ತಮ್ಮ ಪಕ್ಷಗಳ ನಾಯಕರನ್ನು ಭೇಟಿಯಾಗುವ ಸೀಟು ಗಿಟ್ಟಿಸಲು ಹರ ಸಾಹಸ ಮಾಡುವ, ಅವರಿವರಿಂದ ವಶೀಲಿ ಹಚ್ಚುವ, ತಮ್ಮ ಶಕ್ತಿ ಪ್ರದರ್ಶನ ಮಾಡುವ ಅಭ್ಯರ್ಥಿಗಳ ದಂಡೇ ಇಲ್ಲಿದೆ. ಚುನಾವಣಾ ಕಣಕ್ಕಿಳಿಯಬಯಸುವವರು ವರ್ಷಗಟ್ಟಲೆ ಮುಂಚೆಯಿಂದಲೇ ತಯಾರಿ ಆರಂಭಿಸುತ್ತಾರೆ.ಅವರ ಹಿಂಬಾಲಕರನ್ನು ಒಳಗೊಂಡಂತೆ ಎಲ್ಲಿಯೇ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ತಾವು ಹಾಜರಿದ್ದು ಜನರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ, ತಮ್ಮ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಹೊಗಳುತ್ತಾ ಈ ಬಾರಿ ತಮಗೆ ಸೇವೆ ನೀಡುವ ಅವಕಾಶ ಮಾಡಿಕೊಡಿರಿ ಎಂದು ನಿವೇದಿಸಿಕೊಳ್ಳುತ್ತಾರೆ. ಇದೇನು ತಪ್ಪಲ್ಲ ಬಿಡಿ.ಪ್ರಶ್ನೆ ಇರುವುದು ಈ ರೀತಿಯಾಗಿಕುಟುಂಬ ರಾಜಕಾರಣವಿರಲಿ, ಸ್ಥಳೀಯ,ಜಿಲ್ಲೆ,, ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣವಿರಲಿ, ಜನಪ್ರತಿನಿಧಿಗಳಾಗುವ ಬಯಕೆಯನ್ನು ಹೊತ್ತ ಸಾವಿರಾರು ಜನರು ಅಧಿಕಾರದ ಅಪೇಕ್ಷೆಯನ್ನು ಹೊಂದಿದ್ದು…

Read More

ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಎಲ್ಲರಿಗೂ ತಮ್ಮ ಮದುವೆಯೆಂದರೆ ಒಂದೊಂದು ರೀತಿಯ ಕನಸುಗಳಿರುವುದು ಸಹಜ. ಅದೇ ರೀತಿ ಜಾಗೂರು ಎಂಬ ಊರಿನಲ್ಲಿ ತೇಜಸ್ ಎಂಬ ಯುವಕನು ತನ್ನ ಮದುವೆಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದು, ಪಕ್ಕದ ಹಳ್ಳಿಯ ಸೌಂದರ್ಯವತಿಯಾದ ರೀತಾ ಎಂಬ ಯುವತಿಯನ್ನು ಮನಮೆಚ್ಚಿ ಮದುವೆಯಾದ. ಸೌಂದರ್ಯದ ಆರಾಧಕನಾದ ತೇಜಸ್ ರೀತಾಳನ್ನು ಬಹಳ ಇಷ್ಟಪಡುತ್ತಿದ್ದ. ಆಕೆಗೆ ಯಾವುದರಲ್ಲೂ ಕೊರತೆಯಾಗದಂತೆ ಹೂವಿನಂತೆ ಜತನದಿಂದ ನೋಡಿಕೊಳ್ಳುತಿದ್ದ.ವರ್ಷಗಳು ಉರುಳುತ್ತಿದ್ದಂತೆ ಆಕೆಯ ಸೌಂದರ್ಯವು ನಿಧಾನವಾಗಿ ಕಡಿಮೆಯಾಗಲಾರಂಭಿಸಿತು. ತನ್ನ ಸೌಂದರ್ಯದ ಆರಾಧಕನಾಗಿದ್ದ ತೇಜಸ್ ತನ್ನ ಕಳೆಗುಂದಿದ ಸೌಂದರ್ಯದಿಂದ ಎಲ್ಲಿ ತನ್ನನ್ನು ಬಿಟ್ಟು ಹೋಗುತ್ತಾನೋ ಎನ್ನುವ ಭಯದಿಂದ ರೀತಾ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅತಿಯಾಗಿ ಸೌಂದರ್ಯವರ್ಧಕಗಳನ್ನು ಬಳಸಲಾರಂಭಿಸಿದಳು. ಸೌಂದರ್ಯವರ್ಧಕದ ಅತೀ ಬಳಕೆಯಿಂದ ಆಕೆಯು ಚರ್ಮರೋಗಕ್ಕೆ ತುತ್ತಾಗಿ ಮಾನಸಿಕ ಖಿನ್ನತೆಗೆ ಒಳಗಾದಳು.ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ ಅಪಘಾತವೊಂದರಲ್ಲಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ. ಹೀಗಾದರೂ ರೀತಾ ಮತ್ತು ತೇಜಸ್‌ರ ದಾಂಪತ್ಯ ಅತ್ಯಂತ…

Read More

ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಎಲ್ಲರಿಗೂ ತಮ್ಮ ಮದುವೆಯೆಂದರೆ ಒಂದೊಂದು ರೀತಿಯ ಕನಸುಗಳಿರುವುದು ಸಹಜ. ಅದೇ ರೀತಿ ಜಾಗೂರು ಎಂಬ ಊರಿನಲ್ಲಿ ತೇಜಸ್ ಎಂಬ ಯುವಕನು ತನ್ನ ಮದುವೆಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದು, ಪಕ್ಕದ ಹಳ್ಳಿಯ ಸೌಂದರ್ಯವತಿಯಾದ ರೀತಾ ಎಂಬ ಯುವತಿಯನ್ನು ಮನಮೆಚ್ಚಿ ಮದುವೆಯಾದ. ಸೌಂದರ್ಯದ ಆರಾಧಕನಾದ ತೇಜಸ್ ರೀತಾಳನ್ನು ಬಹಳ ಇಷ್ಟಪಡುತ್ತಿದ್ದ. ಆಕೆಗೆ ಯಾವುದರಲ್ಲೂ ಕೊರತೆಯಾಗದಂತೆ ಹೂವಿನಂತೆ ಜತನದಿಂದ ನೋಡಿಕೊಳ್ಳುತಿದ್ದ.ವರ್ಷಗಳು ಉರುಳುತ್ತಿದ್ದಂತೆ ಆಕೆಯ ಸೌಂದರ್ಯವು ನಿಧಾನವಾಗಿ ಕಡಿಮೆಯಾಗಲಾರಂಭಿಸಿತು. ತನ್ನ ಸೌಂದರ್ಯದ ಆರಾಧಕನಾಗಿದ್ದ ತೇಜಸ್ ತನ್ನ ಕಳೆಗುಂದಿದ ಸೌಂದರ್ಯದಿಂದ ಎಲ್ಲಿ ತನ್ನನ್ನು ಬಿಟ್ಟು ಹೋಗುತ್ತಾನೋ ಎನ್ನುವ ಭಯದಿಂದ ರೀತಾ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅತಿಯಾಗಿ ಸೌಂದರ್ಯವರ್ಧಕಗಳನ್ನು ಬಳಸಲಾರಂಭಿಸಿದಳು. ಸೌಂದರ್ಯವರ್ಧಕದ ಅತೀ ಬಳಕೆಯಿಂದ ಆಕೆಯು ಚರ್ಮರೋಗಕ್ಕೆ ತುತ್ತಾಗಿ ಮಾನಸಿಕ ಖಿನ್ನತೆಗೆ ಒಳಗಾದಳು.ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ ಅಪಘಾತವೊಂದರಲ್ಲಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ. ಹೀಗಾದರೂ ರೀತಾ ಮತ್ತು ತೇಜಸ್‌ರ ದಾಂಪತ್ಯ ಅತ್ಯಂತ…

Read More