Author: editor.udayarashmi@gmail.com

ವಿಜಯಪುರ: ೨೦೨೪ರ ಲೋಕಸಭಾ ಚುನಾವಣೆಯ ಪ್ರಯುಕ್ತ ವಿಜಯಪುರ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರಿಗೆ ಬೆಂಬಲ ಸೂಚಿಸಲು ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಬಂಜಾರಾ ಸಮುದಾಯದ ಸಭೆ ಜರುಗಿತು.ಸಭೆಯನ್ನು ಉದ್ದೇಶಿಸಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ನಾನು ಈ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಅನುದಾನ ತಂದಿರುವೆ ವಿಮಾನ ನಿಲ್ದಾಣ, ರೈಲು ಮೇಲ್ ಸೇತುವೆ ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಬಂಜಾರ ಸಮಾಜಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಕೂಡ ಮಾಡಿದ್ದೇನೆ ಎಂದರು.ಈ ಸಮಯದಲ್ಲಿ ಬಂಜಾರಾ ಸಮುದಾಯದ ಮುಖಂಡರುಗಳು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ ಕುಮಾರ್ ನಾಯಕ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಂಜಾರ ಸಮಾಜವು ಬಿಜೆಪಿ ಪರ ನಿಲ್ಲಲಿದೆ. ದೇಶ ರಕ್ಷಣೆಗೆ ಮತ್ತೆ ಮೋದಿ ಪ್ರಧಾನಿಯಾಗಲೇಬೇಕು. ರಮೇಶ ಜಿಗಜಿಣಗಿಯವರು ಈ ಬಾರಿಯೂ ಸಹ ಒಂದು ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ. ದೇಶ ರಕ್ಷಣೆಗೆ ಪ್ರಧಾನಿ ಮೋದಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ.…

Read More

ವಿಜಯಪುರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ, ಹಣಮಂತ ಮಮದಾಪೂರ, ಎಂ.ಎ. ಮಾಲಬಾವಡಿ, ಆರ್.ಡಿ. ಹಳ್ಳಿಗಳಿ (ನ್ಯಾಯವಾದಿಗಳು), ಬಿ.ವಾಯ್. ದೊಡಮನಿ ಕಾರ್ಮಿಕರ ಕುರಿತು ಮಾತನಾಡಿದರು.ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕರ ಹಬ್ಬವನ್ನಾಗಿ ಆಚರಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಕಾರ್ಮಿಕ ಹೋರಾಟಗಾರರಾದ ಸಿದ್ದು ಎಂ. ಕಲ್ಲೂರ, ಕೆ.ಕೆ. ಬನ್ನಟ್ಟಿ, ಎಂ.ಎ. ಮಾಲಬಾವಡಿ, ಬಿ.ವೈ.ದೊಡಮನಿ ಇವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾಸ್ಕರ ಮಂದಕನಳ್ಳಿ, ಸರ್ವೆಶ ಕಟ್ಟಿ, ಶಿವಾನಂದ ಮೂಡಲಗಿ, ರಮೇಶ ಮುಂಡೇವಾಡಿ ಇನ್ನಿತರರು ಭಾಗವಹಿಸಿದ್ದರು.

Read More

ಢವಳಗಿ: ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಚಂದಪ್ಪ ಜಿಗಜಿಣಿಗಿ ಅವರ ಪರವಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಭು ತಳಗೇರಿ ಅವರು ಬುಧವಾರದಂದು ತಾಲೂಕಿನ ಬಳವಾಟ, ಜೆಕ್ಕೆರಾಳ, ಜಮ್ಮಲದಿನ್ನಿ, ತಾರನಾಳ, ಢವಳಗಿ ಗ್ರಾಮದಲ್ಲಿ ರಮೇಶ ಜಿಗಜಿಣಿಗಿ ಅವರ ಪರವಾಗಿ ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಜನರಿಗೆ ತಿಳಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡರು.ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದಿಂದ ಹಿಡಿದು ಇಡಿ ವಿಶ್ವ ಮಟ್ಟದಲ್ಲಿ ಭಾರತ ದೇಶದ ಗೌರವವನ್ನು ಹೆಚ್ಚಿಸುವಂತೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆಡಳಿತಾತ್ಮಕವಾಗಿ ಇಡಿ ದೇಶದಲ್ಲಿ ಸುಶಾಸನ ಜಾರಿಗೆ ಬಂದಿದ್ದು ಮೋದಿಜೀಯವರಿಂದ. ಇಂತಹ ಸಮರ್ಥ ನೇತೃತ್ವಕ್ಕೆ ಮತ್ತೆ ದೇಶದ ಆಡಳಿತ ಸುಧಾರಣೆಗಾಗಿ ಮತ್ತೋಮ್ಮೆ ಪ್ರಧಾನಿ ಗದ್ದುಗೆ ಏರಲು ಮೋದಿಯವರನ್ನು ಗೆಲ್ಲಿಸೋಣ, ಮೋದಿ ಅವರ ಗೆಲುವಿಗೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಿಗೆ ಅವರಿಗೆ ಮತ ನೀಡಿ ಎಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಬಸರಕೋಡ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಮನಪ್ಪ…

Read More

ವಿಜಯಪುರ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಿಜಾಪುರ ಲೋಕಸಭಾ ಅಭ್ಯರ್ಥಿಯಾಗಿರುವ ಗಣಪತಿ ರಾಥೋಡ್ ಅವರ ಪರವಾಗಿ ಇಂದು ವಿಜಯಪುರ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸುಮಾರು ೬೦ ವರ್ಷಗಳ ಕಾಲ ಕೇವಲ ಕುಟುಂಬ ರಾಜಕಾರಣ ಮಾಡುತ್ತಾ ಬಂದಿದ್ದು, ಈ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ. ಕೇವಲ ಹಣ ಇದ್ದರೆ ಮಾತ್ರ ಈ ಪಕ್ಷದಲ್ಲಿ ಬೆಲೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು, ಇವರ ಮಗ, ಮಗಳು, ಹೆಂಡತಿ, ಅಳಿಯ ಇಂತಹ ವ್ಯಕ್ತಿಗಳಿಗೆ ಮಾತ್ರ ಪಕ್ಷದ ಟಿಕೆಟ್ ನೀಡಿದ್ದು, ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಿಟ್ಟಿಗೆ ಗುರಿಯಾಗಿವೆ. ಉನ್ನತ ಹುದ್ದೆಗಳನ್ನು ಪಕ್ಷದಲ್ಲಿರುವ ಸಚಿವರು, ಶಾಸಕರ ಮಕ್ಕಳಿಗೆ ಪಕ್ಷದ ಟಿಕೆಟ್ ನೀಡಿದ್ದರಿಂದ ನಿಜವಾದಿ ಪಕ್ಷದ ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ. ಅದೇ ರೀತಿ…

Read More

ಇಂಡಿ: ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ಒಬ್ಬ ಅಜಾತಶತ್ರು ಅಭಿವೃದ್ಧಿಯ ಹರಿಕಾರ ಸರಳ ಸಜ್ಜನಿಕೆಯ ರಾಜಕಾರಣಿ ಜಂಬ ಕೊಚ್ಚಿಕೊಳ್ಳದ ಧೀಮಂತ ನಾಯಕ. ಪ್ರಚಾರಪ್ರಿಯನಲ್ಲದೆ ಕೆಲಸ ಪ್ರಿಯನಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಹೇಳಿದರು.ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಡಿ ಮತಕ್ಷೇತ್ರಕ್ಕೆ ಪ್ರತಿ ಮನೆ ಮನೆಗೆ ನಲ್ಲಿ ನೀರು ಕೊಡುವುದು, ಕೆರೆ ತುಂಬುವ ಯೋಜನೆ, ರೇವಣಸಿದ್ದೇಶ್ವರ ಏತ ನೀರಾವರಿ, ಹಿರೇಮಣೂನೂರ ಗ್ರಾಮದಿಂದ ಇಂಡಿ ಮುಖಾಂತರ ವಿಜಯಪುರ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ, ಮತಕ್ಷೇತ್ರದ ಜನರಿಗೆ ಅನುಕೂಲವಾಗಲು ಜಿಲ್ಲೆಯಲ್ಲಿ ಮಾಡಿದ ಹತ್ತು ವರ್ಷದ ಅಭಿವೃದ್ಧಿ ಕಾರ್ಯಗಳು ಒಟ್ಟು ೧ ಲಕ್ಷ ಕೋಟಿಗೂ ಅಧಿಕ ಕೇಂದ್ರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ.ಒಂದು ದೇಶವಾಗಲಿ, ಒಂದು ರಾಜ್ಯವಾಗಲಿ ಸಮೃದ್ಧವಾಗಬೇಕಾದರೆ ಸರ್ವತೋಮುಖ ಅಭಿವೃದ್ಧಿಯ ಯೋಜನೆಗಳಿಂದಲೇ ಹೊರತು ಗ್ಯಾರೆಂಟಿ ಇಂದಲ್ಲ, ಗ್ಯಾರೆಂಟಿಯ ಹಣದಿಂದ ಕುಡಿಯಲು ನೀರು ಸಿಗುವುದಿಲ್ಲ, ಸಮಗ್ರ ನೀರಿನ ಯೋಜನೆಗಳಿಂದ ಮಾತ್ರ ಕುಡಿಯಲು ನೀರು ಸಿಗುತ್ತದೆ,…

Read More

ಇಂಡಿ: ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಬಾಳು ಮುಳಜಿ ಮಾತನಾಡಿ. ಲೋಕಸಭಾ ಚುನಾವಣೆ ದೇಶದ ಅಳಿವು ಉಳಿವಿನ ಚುನಾವಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ದೇಶವನ್ನು ಇಡೀ ವಿಶ್ವವೇ ಹಿಂತಿರುಗಿ ನೋಡುವಂತಹ ವಾತಾವರಣ ನಿರ್ಮಿಸಿದ್ದಾರೆ.ಜಾತಿ-ಮಥ-ಪಂಥ ಎನ್ನದೆ ಎಲ್ರೂ ಬಿಜೆಪಿ ಅಭ್ಯರ್ಥಿಗಳಿಗೆ ಮತದಾನ ಮಾಡಿ ದೇಶವನ್ನು ಉತ್ಯುಂಗಕ್ಕೆ ಕೊಂಡೊಯ್ಯಲು ಕೈ ಜೋಡಿಸೋಣ ಎಂದರು.ಈ ಸಂದರ್ಭದಲ್ಲಿ ಬಾಳು ಮುಳಜಿ, ದಾದಾಗೌಡ ಪೋಲಿಸ್‌ಪಾಟೀಲ್, ಶ್ರೀಕಾಂತ ಪಾಸೋಡಿ, ದಾದು ಕೋಣಶಿರಸಗಿ, ಧರ್ಮರಾಜ ಕಲ್ಲೂರ್, ಶಿವರಾಜ ಬಿರಾದಾರ, ಅಶೋಕ್ ಕಲ್ಲೂರ, ಈರಣ್ಣ ಕಾಮಾ, ಸಂತೋಷ್ ಪಾಟೀಲ್, ರಮೇಶ್ ಬಿರಾದಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.

Read More

ರೇವತಗಾಂವ ಗ್ರಾಮದಲ್ಲಿ ದುರ್ಗಾದೇವಿ ದೇವರುಗಳ ಭವ್ಯ ಭೇಟಿ ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಮಂಗಳವಾರದಂದು ದುರ್ಗಾದೇವಿ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.ಗ್ರಾಮದ ಮಾತಂಗ ಓಣೆಯಲ್ಲಿರುವ ದುರ್ಗಾದೇವಿ ಜಾತ್ರೆಯ ನಿಮಿತ್ತ ನಸುಕಿನ ಜಾವ ದುರ್ಗಾದೇವಿಯ ಪುಣ್ಯಸ್ಥಾನವು ಬೀಮಾ ನದಿಯ ನೀರಿನಿಂದ ನೇರವೇರಿಸಿ ವಾಸುದೇವ, ಮುದಕಪ್ಪ ಹಾಗೂ ದುರ್ಗಪ್ಪ ಪೂಜಾರಿಗಳಿಂದ ರುದ್ರಾಬಿಷೇಕ ಪೂಜೆಯು ಜರುಗಿತು. ಭಕ್ತರಿಂದ ದೀರ್ಘದಂಡ ನಮಸ್ಕಾರವನ್ನು ಸಲ್ಲಿಸುವ ಮೂಲಕ ತಮ್ಮ ಹರಿಕೆಗಳನ್ನು ತೀರಿಸಿದರು. ನಂತರ ಜಾತ್ರೆಯಲ್ಲಿ ಸೇರಿದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿತು. ನಂತರ ಗ್ರಾಮದ ಕಲಾವಿದರಿಂದ ಚೌಡಕಿ ಪದಗಳು ಜರುಗಿದವು.ಸಾಯಂಕಾಲ ೫ ಗಂಟೆ ಗ್ರಾಮದ ದುರ್ಗಾದೇವಿ ಹಾಗೂ ತಿಕೋಟದ ದುರ್ಗಾದೇವಿ ಪಲ್ಲಕ್ಕಿಗಳ ಮೆರವಣಿಗೆಯು ವಿವಿಧ ವಾದ್ಯ ವೈಭವಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನೆರದ ಭಕ್ತ ಸಮೂಹ ಮುಂದೆ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಸಡಗರದಿಂದ ಜರುಗಿತು. ಈ ವೇಳೆಯಲ್ಲಿ ಭಕ್ತರು ಭಂಡಾರ, ಬದಾಮ,…

Read More

ವಿಜಯಪುರ: ಬಿಸಿಲಿನ ತಾಪಕ್ಕೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗದಿರಲೆಂದು ಆಯ್ದ ಮತಗಟ್ಟೆ ಕೇಂದ್ರಗಳಲ್ಲಿ ಶೆಡ್ ಅಥವಾ ಪರದೆಯ ನೆರಳಿನ ವ್ಯವಸ್ಥೆ ಹಾಗೂ ನಿರೀಕ್ಷಣಾ ಕೊಠಡಿ (ವೇಟಿಂಗ್ ರೂಮ್) ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಟಿ. ಭೂಬಾಲನ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ವಿಷಯಗಳಾದ ಮಸ್ಟರಿಂಗ, ಡಿ ಮಸ್ಟರಿಂಗ್ ಹಾಗೂ ಮತದಾನ ದಿನದ ಪೂರ್ವಭಾವಿ ಸಿಧ್ಧತೆ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳ ಅನ್ವಯ ಮತಗಟ್ಟೆ ಕೇಂದ್ರಗಳಲ್ಲಿ ಫ್ಯಾನ್, ನೀರು, ನೇರಳು, ಕೂಡಲು ಆಸನಗಳ ವ್ಯವಸ್ಥೆ ಆದ್ಯತೆ ಮೇರೆಗೆ ಕಲ್ಪಿಸುವ ಕಾರ್ಯವಾಗಬೇಕು ಎಂದರು.ಪ್ರತಿ ಮತಗಟ್ಟೆಯಲ್ಲಿ ಕೂಡಾ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ, ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಮತ್ತು ಒಆರ್‌ಎಸ್ ಪಟ್ಟಣ ಇರುವ ವ್ಯವಸ್ಥೆ ಆಗಬೇಕು. ತುರ್ತು ಸನ್ನಿವೇಶದ ಕರೆ ಬಂದ ತಕ್ಷಣ ಅ್ಯಂಬುಲೆನ್ಸ್ ತಲುಪುವಂತಾಗಬೇಕು. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಮತದಾರರಿಗೆ ಗಾಲಿ ಕುರ್ಚಿ ನೀಡುವ…

Read More

ವಿಜಯಪುರ: ವಿದ್ಯುತ್ ದುರಸ್ತಿ ಕಾಮಗಾರಿ ನಿಮಿತ್ಯ ಮೇ ೨ರಂದು ಬೆಳಗ್ಗೆ ೮.೩೦ ರಿಂದ ಮಧ್ಯಾಹ್ನ ೧೧.೩೦ ರ ವರೆಗೂ ೧೧೦ ಕೆವಿ ಸಿಟಿ ವಿಜಯಪುರ ಹಾಗೂ ಜುಮನಾಳ ವಿದ್ಯುತ್ ವಿತರಣ ಕೇಂದ್ರದಿಂದ ಹೊರಡುವ ಎಲ್ಲಾ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲೆಯಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯಗೆ ಸೂಕ್ತ ಮಾರ್ಗೊಪಾಯಗಳನ್ನು ಕಂಡುಕೊಂಡು, ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿರೃದ್ಧಿ ಕೋಶ, ವಿಜಯಪುರ ನಗರ ನೀರು ಸರಬರಾಜು ಮಂಡಳಿ, ಸಣ್ಣ ನೀರಾವರಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಭೂತನಾಳ್ ಕೆರೆಯಿಂದ ಪ್ರತಿದಿನ ೧೯.೦೮ಎಂ ಎಲ್ ನೀರು ಸರಬರಾಜು ಮಾಡುವ ಯೋಜನೆ ಇರುವುದು, ಆದರೆ ಭೂತನಾಳ ಕೆರೆಯಲ್ಲಿ ಈ ಸದ್ಯ ನೀರಿನ ಲಭ್ಯತೆ ಕಡಿಮೆ ಇರುವದರಿಂದ ಲಭ್ಯ ಇರುವ ನೀರನ್ನು ವಿಜಯಪುರ ನಗರದಲ್ಲಿ ಬರುವ ಸ್ಥಳಿಯ ಸಂಸ್ಥೆಯ ೧೪ ವಾರ್ಡ್ಗಳಿಗೆ ವಾರಕ್ಕೊಮ್ಮೆ , ೮ ವಾರ್ಡ್ಗಳಿಗೆ ೩ ಅಥವಾ ೪ದಿನಕ್ಕೊಮ್ಮೆ, ಇನ್ನುಳಿದ ೧೩ ವಾಡ್‌ಗಳಿಗೆ ೫-೬ ದಿನಗಳಿಗೊಮ್ಮೆ ನೀರು ಪೂರೈಸುವ ಕಾರ್ಯ ವಾಗಬೇಕು ಎಂದರು.ಪರ್ಯಾಯವಾಗಿ ವಿಜಯಪುರ ನಗರದ ೩೫ ವಾರ್ಡಗಳಲ್ಲಿ…

Read More