ಮುದ್ದೇಬಿಹಾಳ: ಮನೆಯು ಆದರ್ಶಮಯವಾಗಿದ್ದಲ್ಲಿ ಮಾತ್ರವೇ ಮಗುವಿನ ಕಲಿಕೆ ಉತ್ತಮವಾಗಲು ಸಾಧ್ಯ ಎಂದು ವಿದ್ಯಾ ಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಶಿಶುವಾಟಿಕಾ ಸಹ ಪ್ರಮುಖರಾದ ತಾರಾ ಕಾಳಿಚರಣ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಪರಿಷತ್ ವತಿಯಿಂದ ಆಯೋಜಿಸಿರುವ ಜನನಿ ಸಮಾಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಹಿರಿದಾಗಿದೆ. ಮಗುವಿನ ಕಲಿಕೆಯಲ್ಲಿ ತಾಯಿಯು ಅರ್ಧದಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಆಚಾರ ಸಂಸ್ಕೃತಿ, ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವಲ್ಲಿ ಹೆಣ್ಣಿನಿಂದ ಮಾತ್ರ ಸಾಧ್ಯ. ಸರ್ವ ಶಕ್ತಿ ಸಾಮರ್ಥ್ಯ ಹೆಣ್ಣಿನಲ್ಲಿ ಇರುವುದರಿಂದ ಮಾತ್ರವೇ ಭೂಮಿ, ನೀರು, ವಿದ್ಯೆ, ಶಕ್ತಿ ಇತ್ಯಾದಿಯಲ್ಲಿ ಮಾತೃ ಶಕ್ತಿ ಅಡಗಿದೆಯೆಂದು ಗುರುತಿಸಿಯೇ ಮಾತೆಯೆಂದು ಸಂಬೋಧಿಸಿ ಗೌರವಿಸಿರುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಮಾತೃ ಭಾರತಿ ಸಂಯೋಜನೆಯ ಕುರಿತಾಗಿ ಶಾಲೆಯಲ್ಲಿ ಅನುಕೂಲಕರವಾದ ವಾತಾವರಣ ಮೂಡಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು.
ಮಾತೃ ಭಾರತಿ ಪರಿಷತ್ತಿನ ಅಧ್ಯಕರಾದ ಶ್ರೀದೇವಿ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಮಾತೃ ಭಾರತಿ ಪರಿಷತ್ತಿನ ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಸಾಸನೂರ, ರೇಖಾ ಹುದ್ದಾರ, ಬಸಮ್ಮ ಕೆಂಧೂಳಿ, ಗಿರಿಜಾ ಮುದ್ದೇಬಿಹಾಳ, ಲಾಲಬಿ ಮುಜಾವರ, ಕಾವೇರಿ ಜೋಶಿ, ಅನಿತಾ ಕರಣಿ, ರಶ್ಮಿ ಲಿಂಗದಳ್ಳಿ, ರಾಧಾ ಹಿರೇಮಠ, ಗಾಯತ್ರಿ ಹಡಲಗೇರಿ, ಪರವೀನ ನದಾಫ್, ಶಾಹಿನ ನಾಲತವಾಡ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಕೀರ್ತಿ ತಳಗೇರಿ, ಭಾಗ್ಯ ಸಿದ್ದಪೂರ ಸೇರಿದಂತೆ ಇತರರು ಹಾಜರಿದ್ದರು. ಪ್ರಾಥಮಿಕ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ್ ಸ್ವಾಗತಿಸಿದರು. ಶಾರದಾ ಗಸ್ತಿಗಾರ ಪ್ರಾರ್ಥಿಸಿದರು. ಅನ್ನಪೂರ್ಣ ನಾಗರಾಳ ಪ್ರಾಸ್ತಾವಿಕ ನುಡಿದರು, ರಶ್ಮಿ ತೇಲಂಗಿ ನಿರೂಪಿಸಿದರು. ಲಕ್ಷ್ಮೀ ಪವಾರ ವಂದಿಸಿದರು.
Subscribe to Updates
Get the latest creative news from FooBar about art, design and business.
ಮನೆ ಆದರ್ಶಮಯವಾಗಿದ್ದಲ್ಲಿ ಮಗುವಿನ ಕಲಿಕೆ ಉತ್ತಮವಾಗಲು ಸಾಧ್ಯ
Related Posts
Add A Comment

