Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಎಚ್ಚಾರ್ ಬಾಗವಾನಸಾಮಾಜಿಕ ಚಿಂತಕರು, ಪತ್ರಕರ್ತರುಆಸಾರ ಗಲ್ಲಿಮುದ್ದೇಬಿಹಾಳ – ೫೮೬೨೧೨ಮೊ: 9448406079 ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನೊಂದಣಿ ಇಲಾಖೆಯಲ್ಲಿ ಗುಣಾತ್ಮಕ ರೀತಿಯ ಸುಧಾರಣೆ ತರಲು ಹಿಂದೆ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿ ಆರ್ ಅಶೋಕ ರವರು ನೊಂದಣಿ ಇಲಾಖೆಯ ಸುಧಾರಣಾ ಕಾಯ್ದೆ ಜಾರಿಗೊಳಿಸಿ ಕಾವೇರಿ ೦೨ ತತ್ರಾಂಶ ಜಾರಿಗೊಳಿಸಿದ್ಗರು. ಆದರೆ ಈಗ ಸರ್ಕಾರ ಕಾವೇರಿ ೦೩ ಜಾರಿಗೊಳಿಸಲು ಮುಂದಾಗಿರುವುದು ಪಾರದರ್ಶಕತೆಯ ರೂಪದಲ್ಲಿ ಸ್ಥಿರಾಸ್ತಿ ಖರೀದಿಸುವರಿಗೆ ಅಭದ್ರತೆ ಕಾಡುವಂತೆ ಮಾಡಿದೆ.ಆಧಾರ ಕಾರ್ಡ ಲಿಂಕ್ ಪಡೆದು ಆಸ್ತಿ ಮಾಲಿಕನ ಓಟಿಪಿ ಬಳಸಿ ಧೃಢಿಕರಿಸಿದ ನಂತರವಷ್ಠೆ ಆಸ್ತಿ ನೊಂದಣಿ ಆಗುತ್ತಲಿದೆ. ಇದನ್ನು ಬಿಟ್ಟು ಫೇಸಲೆಸ್ಸ್ ಪೇಪರಲೆಸ್ಸ್ ಕಾಯ್ದೆಗೆ ಮುಂದಾಗಿರುವದು ಭವಿಷ್ಯದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಂತೂ ಖಂಡಿತ ಅಲ್ಲ. ರಾಜ್ಯದಲ್ಲಿ ಇಷ್ಠೆಲ್ಲ ವ್ಯವಸ್ಥೆ ಇರುವಾಗಲು ಅದೆಷ್ಟೋ ಆಸ್ತಿಗಳು ಅಕ್ರಮ ನೊಂದಣಿ ಮಾಡಿರುವ ತಪ್ಪಿಗೆ ಸಬ್ ರಜಿಸ್ಟಾರಗಳು ಅಮಾನತ್ತು ಆಗಿದ್ದಾರೆ. ಅದೆಷ್ಟೋ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆಯ ಹಂದಲ್ಲಿವೆ. ತಂತ್ರಜ್ಞಾನದಿಂದ ಅಕ್ರಮಗಳು ಫೇಕ್ ಖಾತೆಗಳ ಮೂಲಕ ನಡೆಯುತ್ತಲಿರುವದು ಕೂಡಾ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಜ.18 ರಿಂದ ಪ್ರಾರಂಭವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟಗಾರ ಹಾಗೂ ಖರೀದಿಗಾರ ರೈತರಿಗೆ ಪ್ರತಿ ವಹಿವಾಟಿಗೆ ಕೇವಲ ರೂ.5 ಘೋಷಣೆ ಮಾಡುವಂತೆ ಆಗ್ರಹಿಸಿ ರೈತರು ಚಡಚಣ ಎಪಿಎಂಸಿ ಉಪ ಮಾರುಕಟ್ಟೆ ಕಾರ್ಯದರ್ಶೀ ಅವರಿಗೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮನವಿ ಸಲ್ಲಿಸಿದರು.ಮನವಿಯನ್ನು ಕಾರ್ಯದರ್ಶಿ ಐ.ಎಸ್. ಔರಾದಕರ ಪರವಾಗಿ ಚಡಚಣ ಉಪ ಸಮೀತಿಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ ಅವರು ಸ್ವಿಕರಿಸಿ ಮುಂದಿನ ಕ್ರಮಕ್ಕಾಗಿ ಇಂಡಿ ಎಪಿಎಮ್ಸಿ ಅಧಿಕಾರಿಗೆ ಖಳಿಸಿಕೊಡುವದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ತಾಲೂಕಾಧ್ಯಕ್ಷ ವಸಂತ ಭೈರಾಮಡಿ, ಜ.18 ರಿಂದ ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಗೆ ಆಗಮಿಸುವ ರೈತರಿಂದ ಜಾತ್ರಾ ಸಮೀತಿಯವರು ಖರೀದಿದಾರ ರೈತರಿಂದ ಎಪಿಎಮ್ಸಿ ಕಾನೂನು ಮೀರಿ ರೂ 100, ಮಾರಾಟಗಾರರಿಗೆ + ರೂ.100 ವಸೂಲಿ ಮಾಡುತ್ತಿದ್ದಾರೆ. ಈ ಹಣ ರೈತರಿಗೆ ಹೊರೆಯಾಗುತ್ತದೆ. ರೈತರು ಈ ವರ್ಷ ಹಸಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬೆಂಗಳೂರಿನ ಸೂರ್ಯ ಫೌಂಡೇಶನ್-ಸ್ಪಾರ್ಕ್ ಅಕಾಡೆಮಿ(ಆರ್) ನೀಡುವ ಪ್ರತಿಷ್ಠಿತ “ಶಿಕ್ಷಣ ಚೈತನ್ಯ – 2025–26” ಪ್ರಶಸ್ತಿಗೆ ತಾಲೂಕಿನ ಗುಬ್ಬೇವಾಡ ಗ್ರಾಮದ ಆಕ್ಸಫರ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಆಯ್ಕೆಯಾಗಿದೆ.ಈ ವಿಶಿಷ್ಟ ಗೌರವವು ಸಂಸ್ಥೆಯ ಅಧ್ಯಕ್ಷ ಬಾಪೂಗೌಡ ರ ದೂರದೃಷ್ಟಿಯ ನಾಯಕತ್ವ, ಅಚಲ ಸಮರ್ಪಣೆ ಮತ್ತು ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿರಂತರ ಬದ್ಧತೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸ್ಪಾರ್ಕ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಮೇಶ ನವೋದಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭವು 25/01/2026 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: “ದಾಸ ಸಾಹಿತ್ಯಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ ಲೋಕದೆಲ್ಲೆಡೆ ಪುರಂದರ ದಾಸರ ಕೊಡುಗೆ ಅನನ್ಯ ಮತ್ತು ಅಪಾರ” ಎಂದು ಪಂ. ವಿಠ್ಠಲಾಚಾರ್ಯ ಹೇಳಿದರು.ಸಿಂದಗಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿದ್ದ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು. “ಹರಿದಾಸರ ಪರಂಪರೆಯಲ್ಲಿ ಪುರಂದರ ದಾಸರ ಸ್ಥಾನ ಶ್ರೇಷ್ಠ. ಇತರ ದಾಸವರೇಣ್ಯರು ಅವರನ್ನೇ ಕೊಂಡಾಡಿರುವುದೇ ಇದರ ದೃಢವಾದ ಸಾಕ್ಷಿ” ಎಂದು ಹೇಳಿದರು.ಸಾಹಿತ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪುರಂದರ ದಾಸರು ನೀಡಿದ ಕೊಡುಗೆ ಅನನ್ಯ. ‘ಪುರಂದರ ವಿಠ್ಠಲ’ ಎಂಬ ಅಂಕಿತನಾಮದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ, ಸಮಾಜದಲ್ಲಿದ್ದ ಅನೇಕ ಮೌಢ್ಯಗಳನ್ನು ಹೋಗಲಾಡಿಸಿ ಜನಜಾಗೃತಿ ಮೂಡಿಸಿದರು ಎಂದು ಪಂಡಿತರು ವಿವರಿಸಿದರು. “ಅಂತಹ ಮಹಾನ್ ಹರಿದಾಸರ ಕೀರ್ತನೆಗಳನ್ನು ಅಧ್ಯಯನ ಮಾಡುವ ಮೂಲಕ ಜೀವನ ಪಾವನವಾಗುತ್ತದೆ” ಎಂದು ಅವರು ಸಲಹೆ ನೀಡಿದರು.ಮಠದಲ್ಲಿ ಬೆಳಿಗ್ಗೆ ಪೂಜೆ, ಪಂಚಾಮೃತಾಭಿಷೇಕ, ಅಷ್ಟೋತ್ತರ ಸೇವೆ ಹಾಗೂ ಭಜನೆ ಕಾರ್ಯಕ್ರಮಗಳು ಭಕ್ತಿಭಾವಪೂರ್ಣವಾಗಿ ಜರುಗಿದವು. ಮಧ್ಯಾಹ್ನದ ಪ್ರಸಾದ ವಿತರಣೆಯನ್ನು ರವೀಂದ್ರ ಕುಲಕರ್ಣಿ ಕೊರಳ್ಳಿ ಅವರು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ಕೊಲ್ಹಾರ ತಾಲ್ಲೂಕು ಅಧ್ಯಕ್ಷರಾಗಿ ಪಟ್ಟಣದ ಸಚಿನ್ ಈಟಿ, ಉಪಾಧ್ಯಕ್ಷರಾಗಿ ಆನಂದ ಕುದುರಿ ಅವರನ್ನು ನೇಮಕ ಮಾಡಲಾಗಿದೆ.ಸಂಘಟನೆಯ ರಾಜ್ಯಾಧ್ಯಕ್ಷರಾದ ಮತೀನ್ ಕುಮಾರ್ ಅವರ ಸೂಚನೆಯಂತೆ ವಿಜಯಪುರ ಜಿಲ್ಲಾ ಅಧ್ಯಕ್ಷ ಮಾರುತಿ ಕುದರಿ ಅವರು ನೇಮಕಾತಿ ಆದೇಶ ನೀಡಿದ್ದಾರೆ. ನೂತನ ಪದಾಧಿಕಾರಿಗಳು ಸಂಘಟನೆಯ ಗುರಿ–ಉದ್ದೇಶಗಳಿಗೆ ನಿಷ್ಠೆಯಿಂದ ಕೆಲಸ ಮಾಡಬೇಕು. ಶೋಷಿತ ಹಾಗೂ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಧ್ವನಿಯಾಗುವ ಜೊತೆಗೆ, ಯಾವುದೇ ಆಮಿಷಗಳಿಗೆ ಒಳಗಾಗದೆ ಅನ್ಯಾಯದ ವಿರುದ್ಧ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ:. ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ೬ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜ.೧೬ ರಿಂದ ಜ.೨೨ ರವರೆಗೆ ಮುಂಜಾನೆ ೭ ಗಂಟೆಗೆ ನವರಸಪುರದ ಎಲ್ಲ ಬಡಾವಣೆಗಳಲ್ಲಿ ಜಮಖಂಡಿ ಓಲೆಮಠದ ಶ್ರೀ ಆನಂದ ದೇವರು ಇವರಿಂದ (ದುಶ್ಚಟಗಳ ನಿರ್ಮೂಲನೆ) ಸದ್ಭಾವನಾ ಯಾತ್ರೆ ಹಾಗೂ ರುದ್ರಾಕ್ಷಿಧಾರಣ ಕಾರ್ಯಕ್ರಮ ಜರುಗಲಿದೆ.ಪ್ರತಿ ದಿನ ಸಂಜೆ ೬ ಗಂಟೆಗೆ ಜಮಖಂಡಿಯ ಬಸವರಾಜೇಂದ್ರ ಶರಣರು ಇವರಿಂದ “ಬಸವಾದಿ ಶರಣರ ಜೀವನ-ಮೌಲ್ವಿಕ ಸಂದೇಶಗಳು” ಹಾಗೂ ವಿಜಯಪುರದ ಶಾರದಾಮಾತಾ ಆಶ್ರಮದ ಕೃಪಾಮಯಿ ಮಾತೆ ಇವರಿಂದ “ಸಾರ್ಥಕ ಬದುಕಿಗೆ ಅಧ್ಯಾತ್ಮಿಕ ಚಿಂತನೆಗಳು” ವಿಷಯ ಕುರಿತು ಪ್ರವಚನ ನಡೆಯಲಿದೆ.ಈ ಸದ್ಭಾವನಾ ಯಾತ್ರೆ ಮತ್ತು ಪ್ರವಚನದಲ್ಲಿ ನವರಸಪುರದ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು, ಮಕ್ಕಳು ಭಾಗವಹಿಸಲಿದ್ದಾರೆ ಎಂದು ಆಂಜನೇಯ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಚನಾತ್ಮಕ ಸಮಾರಂಭಗಳನ್ನು ಏರ್ಪಡಿಸುವ ಮೂಲಕ ಪುಣ್ಯಸ್ಮರಣೋತ್ಸವದ ಮೌಲ್ಯವನ್ನು ಹೆಚ್ಚಿಸಬೇಕೆನ್ನುವ ಉದ್ದೇಶದಿಂದ ಜ೧೯, ೨೦, ೨೧ ರಂದು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.ಲಿಂ. ಹಾನಗಲ್ಲ ಕುಮಾರಸ್ವಾಮಿಗಳು, ತುಮಕೂರಿನ ಲಿಂ. ಡಾ.ಶಿವಕುಮಾರ ಸ್ವಾಮಿಗಳು, ವಿಜಯಪುರದ ಲಿಂ. ಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಮಡಿಕೇಶ್ವರದ ಲಿಂ. ಚನ್ನಣ್ಣ ದೇಸಾಯಿ ಇವರ ಸ್ಮರಣಾರ್ಥ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇಲ್ಲಿ ಯಾವುದೇ ರಾಜಕೀಯ ಹಾಗೂ ಸ್ವ-ಇಚ್ಛಾಸಕ್ತಿ ಇರುವದಿಲ್ಲ. ಬೇರೆ ಯಾರ ವೈಭವೀಕರಣವೂ ಇರಲ್ಲ. ಈ ಕಾರ್ಯಕ್ರಮಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿರಲಿದ್ದು, ಪ್ರತಿಯೊಬ್ಬರೂ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.ಜಿಲ್ಲಾ ಭಾಜಪಾ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು ಮಾತನಾಡಿ, ತಮ್ಮ ತಂದೆಯವರ ಪುಣ್ಯಸ್ಮರಣೆಯನ್ನು ಕೇವಲ ಒಂದು ತಾಸು ಅಥವಾ ಒಂದು ದಿನಕ್ಕೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನಿವೃತ್ತ ಶಿಕ್ಷಕಿ ಮಹಾದೇವಿ ಕಂಠಿ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಮಹಿಳಾ ಘಟಕದಲ್ಲಿ ವಿದ್ಯಾ ಭಾರತಿ ಸೂಚಿಸಿದ ಪ್ರಕಾರ ಆಯೋಜಿಸಿರುವ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಗಿ ಅವರು ಮಾತನಾಡಿದರು.ಭಗವದ್ಗೀತೆಯ ೧೦ನೇ ಅಧ್ಯಾಯದ ೩೪ನೇ ಶ್ಲೋಕದಲ್ಲಿ ಹೇಳಿರುವಂತೆ ಒಬ್ಬ ಮಹಿಳೆಯಲ್ಲಿ ಕೀರ್ತಿ, ಐಶ್ವರ್ಯ, ವಾಕ್ ಶಕ್ತಿ, ಸ್ಮರಣ ಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ ಎಂಬ ಏಳು ಸದ್ಗುಣಗಳು ಅಡಗಿದ್ದು ಅದನ್ನು ಜಾಗ್ರತಗೊಳಿಸುವ ಕೆಲಸವಾಗ ಬೇಕಾಗಿದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಗಾಧೆಮಾತನ್ನು ನೋಡಿದಾಗ ಸಂಸ್ಕಾರ ಪ್ರವಹಿಸುವಲ್ಲಿ ಮಾತೆಯ ಪಾತ್ರವೆ ಮುಖ್ಯವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀ ಯು ಪ್ರಧಾನವಾಗಿರುವುದನ್ನು ಪುರಾಣದಿಂದ ಹಿಡಿದು ಇತಿಹಾಸದ ಪುಟಪುಟಗಳನ್ನ ತೆಗೆದುನೋಡುತ್ತಾ ಬಂದರೆ ಸಾಕಷ್ಟು ನಿದರ್ಶನಗಳು ದೊರೆಯುತ್ತದೆ. ಅದನ್ನು ನಾವು ತಿಳಿದುಕೊಂಡು ನಮ್ಮ ಮನೆಯ ಮಕ್ಕಳಿಂದ ಹಿಡಿದು ಸಮಾಜ ತಿದ್ದುವ ಕಾರ್ಯ ಮಾಡಬೇಕಾಗಿದೆ ಎಂದರು.ಆಂಗ್ಲ…
ಇಂಡಿ ಬಂಗಾರ ಆಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಆರೋಪ ಉದಯರಶ್ಮಿ ದಿನಪತ್ರಿಕೆ ಇಂಡಿ: ಕಾನೂನನ್ನು ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾಗುತ್ತಿದ್ದಾರೆ, ಸುಖಾ ಸುಮ್ನೆ ಬಂಗಾರ ಅಂಗಡಿಗಳ ಮಾಲೀಕನ ಮೇಲೆ ಸಿಂದಗಿ ಹಾಗೂ ಆಲಮೇಲ ಪೊಲೀಸರು ಹಲ್ಲೆ ನಡೆಸಿ ಯುವಕನ ಹಲ್ಲು ಮುರಿದಿದ್ದಾರೆ. ಮಾಡದ ತಪ್ಪನ್ನು ಮಾಡಿದ್ದೇನೆ ಒಪ್ಪಿಕೋ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಇಂಡಿ ಬಂಗಾರ ಆಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಆರೋಪಿಸಿದರು.ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರು ಮಾಹಿತಿ ನೀಡದೆ ನೋಟಿಸ್ ಜಾರಿಗೊಳಿಸದೆ ತಮ್ಮ ಸಮವಸ್ತ್ರದಲ್ಲಿಯೂ ಬರದೆ ಖಾಸಗಿ ವಾಹನದಲ್ಲಿ ಬಂದು ಒಬ್ಬ ಬಂಗಾರ ಅಂಗಡಿಯ ಮಾಲೀಕನನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಂಬಿಸಿದ್ದಲ್ಲದೆ ತಮಗೆ ಮನಬಂದಂತೆ ಥಳಿಸಿದ್ದಾರೆ. ಕಳ್ಳತನದ ಬಂಗಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರೂ ನೀನು ತೆಗೆದುಕೊಂಡಿಲ್ಲವಾದರೂ ಸಹ ತೆಗೆದುಕೊಂಡಿದ್ದೇನೆ ಎಂದು ಒಪ್ಪಿಕೋ. ಇಲ್ಲವಾದಲ್ಲಿ ನಿನ್ನ ಮೇಲೆ ಪ್ರಕರಣ ದಾಖಲಿಸಿ ಒದ್ದು ಒಳಗೆ ಹಾಕುತ್ತೇವೆ ಎಂದು ಬೆದರಿಕೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ ಶಿರೋಳ ಸೇರಿದಂತೆ ಪ್ರಮುಖರಾದ ವಿಜಯಕುಮಾರ ಗೂಳಿ, ಸದಾಶಿವ ಹಿರೇಮಠ, ಮಾಬೂಬಿ ಬಾಗವಾನ, ನಿರ್ಮಲಾ ರಾಯಗೊಂಡ, ಸವಿತಾ ನಾಲತವಾಡ, ಅಂಬರಿಶ ಬಿರಾದಾರ ಮತ್ತು ಶಿವನಗೌಡ ಪಾಟೀಲ ಇವರನ್ನು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.ಈ ಆಯ್ಕೆ ಸಾರ್ವಜನಿಕ ವಲಯದಲ್ಲಿ ಸಂತಸ ಹಾಗೂ ಪ್ರಶಂಸೆಗೂ ಕಾರಣವಾಗಿದ್ದು, ಆರೋಗ್ಯ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ, ಪರಿಣಾಮಕಾರಿ ಮತ್ತು ಜನಪರವಾಗಿಸಲು ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳ ಲಭ್ಯತೆ ಖಚಿತಪಡಿಸುವುದು, ಆಸ್ಪತ್ರೆಯ ಸ್ವಚ್ಛತೆ, ಶಿಸ್ತು ಮತ್ತು ಮೂಲಸೌಕರ್ಯಗಳ ಮೇಲ್ವಿಚಾರಣೆ, ಔಷಧಿ, ಪರೀಕ್ಷಾ ಸೇವೆ, ವೈದ್ಯರ ಹಾಜರಾತಿ ಸೇರಿದಂತೆ ಸೇವೆಗಳ ಗುಣಮಟ್ಟ ಪರಿಶೀಲನೆ, ಬಡವರಿಗೆ ಸರ್ಕಾರದ ಆರೋಗ್ಯ ಯೋಜನೆಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು, ರೋಗಿಗಳ ದೂರು–ಸಲಹೆಗಳನ್ನು ಸ್ವೀಕರಿಸಿ ಪರಿಹಾರಕ್ಕೆ ಕ್ರಮ…
