ಏಪ್ರೀಲ್ 2ರ ಗುರುವಾರ ಎರಡನೇ ಶ್ರೀಶೈಲ ಎಂದೇ ಪ್ರತೀತವಾದ ಸುಕ್ಷೇತ್ರ ಗೋಲಗೇರಿಯ ಶ್ರೀ ಗೋಲ್ಲಾಳೇಶ್ವರ ಜಾತ್ರೆಯ ನಿಮಿತ್ಯ ಈ ವಿಶೇಷ ಲೇಖನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಲಿಂಗಯ್ಯನ ಊರೆಂದೇ ಎಲ್ಲರಿಗೂ ಚಿರಪರಿತ. ಇದಕ್ಕೆ ಎರಡನೇ ಶ್ರೀಶೈಲ ಎಂತಲೂ ಕರೆಯುವರು. ಕುರಿ ಕಾಯುವುದರ ಜೊತೆಗೆ ಶಿವನ ಮೇಲಿನ ನಿಷ್ಠೆಯಿಂದ ಆತ ಸಾಕ್ಷಾತ್ಕಾರ ಪಡೆದವ.
ಗೋಲಗೇರಿ ಹತ್ತಿರದ
ಡವಳರ ಬಿಲ್ಲುಗ ಮತ್ತು ದುಗ್ಗಳಾದೇವಿ ಪುತ್ರ ಗೋಲ್ಲಾಳ ಶ್ರೀಶೈಲಕ್ಕೆ ತೆರಳುತ್ತಿದ್ದ ಭಕ್ತರಿಗೆ ತನಗೂಂದು ಲಿಂಗ ತರಲು ನಂದಯ್ಯ ಎನ್ನುವನಿಗೆ ಹೇಳುತ್ತಾನೆ. ಇದನ್ನು ಮರೆತು ಬಂದ ನಂದಯ್ಯ ಗೋಲಗೇರಿ ಹತ್ತಿರಕ್ಕೆ ಬರುತ್ತಿದ್ದಂತೆ ಅಲ್ಲೆ ಇದ್ದ ಕುರಿ ಹಿಕ್ಕಿಯೊಂದನ್ನು
ತೆಗೆದುಕೊಂಡು ಗೋಲ್ಲಾಳನಿಗೆ ಅದೇ ಲಿಂಗವೆಂದು ಕೊಡುತ್ತಾನೆ. ಇದನ್ನು ನಂಬಿದ ಗೋಲ್ಲಾಳ ಅದನ್ನು ಗೊಬ್ಬರದ ಗುಂಡಿಯಲ್ಲಿ ಇಟ್ಟು ನಂದಯ್ಯ ಹೇಳಿದಂತೆ ಪೂಜಿಸುತ್ತಾನೆ. ಶಿವ ಈತನ ಭಕ್ತಿಗೆ ಒಲಿದ ಕಾರಣಕ್ಕೆ ಶಿವ-ಗೊಲ್ಲಾಳ ಒಂದೇ ಎನ್ನುವ ಭಾವ ಭಕ್ತರದು.
ಇದೇ ದಿನಾಂಕ 2/04/26 ಗುರುವಾರ ಶ್ರೀ ಗೊಲ್ಲಾಳೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ. ಇಲ್ಲಿನ ರಥೋತ್ಸವ ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಗಡಿ ಬಾಗ ದೊಡ್ಡ ಆಕರ್ಷಣೆ..
ದೇವಸ್ಥಾನ ದರ್ಮದರ್ಶಿಗಳ ನೇತೃತ್ವದಲ್ಲಿ ರಥೋತ್ಸವ ಭವ್ಯವಾಗಿ ಜರಗುವದು. ಗುಂಗಿ ಹುಳಗಳ ರೂಪದಲ್ಲಿ ಬರುವ ದೇವರು ತೇರು ಎಳೆಯಲು ಅನುಮತಿ ನೀಡುತ್ತಾನೆ ಎನ್ನುವ ನಂಬಿಕೆ ಈ ಭಾಗದಲ್ಲಿ ಇದೆ.
ನಾಡಿನ ಅನೇಕ ಶ್ರೀಗಳು ಭಾಗವಹಿಸುವರು. ರಥ ಸಾಗಿ ಮರಳಿ ಜಾಗಕ್ಕೆ ಬರುವರೆಗೂ ಧರ್ಮದರ್ಶಿಗಳು ಊಟ ಮಾಡುವುದಿಲ್ಲ. ಒಂದೊಂದು ಸಲ ತೇರು ಅವತ್ತೆ ವಾಪಸ್ಸು ಬರುವುದಿಲ್ಲ ಅಂದು ತೇರಿನ ಹತ್ತಿರವೇ ಧರ್ಮದರ್ಶಿಗಳು ಮೊಕ್ಕಾಂ ಮಾಡುತ್ತಾರೆ. ಇವರ ಸ್ನಾನ ಪೂಜೆ ಎಲ್ಲಾ ಅಲ್ಲೆ. ರಥದ ಹಗ್ಗ (ಮಿಣಿ) ಧರ್ಮದರ್ಶಿಗಳ ದೇವರ ಮನೆಯ ಜಗುಲಿ ತಲುಪಿದಾಗ ಮಾತ್ರ ತೇರು ಜಾಗಕ್ಕೆ ಬಂದಂತೆ ಇದು ಜಾತ್ಯತೀತ ಪರಂಪರೆಯು ಹೌದು.
ಒಂದು ಪಂಚ ಲೋಹದ ಕಳಸ, ಭೂ ಚಕ್ರ, ಕೊಡೆ, ಕುದುರೆ ಸಿಂಹಗಳಿಂದ ಅಲಂಕೃತ ವಾಗುವ ರಥಕ್ಕೆ ಪ್ರತಿ ವರ್ಷ ಎರಡು ಬ್ಯಾರಲ್ ಕ್ವಿಂಟಲ್ ಒಳ್ಳೆಣ್ಣೆ ಹಚ್ಚಲಾಗುವದು.
ಪ್ರತಿ ವರ್ಷ ರಥೋತ್ಸವ. ದಿನದಂದು ದಿ.ಗೊಲ್ಲಾಳಪ್ಪ ಪಾಟೀಲ ಇಬ್ರಾಹಿಂಪೂರ ಇವರ ಸ್ಮರಣಾರ್ಥ ಇವರ ಮಕ್ಕಳಾದ ಸುಭಾಸಗೌಡ ಪಾಟೀಲರು ಹಾಗೂ ಸಹೋದರರಿಂದ ಪ್ರಸಾದ (ದಾಸೋಹ )ವ್ಯವಸ್ಥೆ ಇರುವದು.
ಈ ವರ್ಷ ಅದ್ದೂರಿಯಾಗಿ ರಥೋತ್ಸವ ನಡೆಯುವುದು. ತಾವೂ ಬನ್ನಿ, ಗೋಲಗೇರಿ ಗೊಲ್ಲಾಳೇಶ್ವರ ಭವ್ಯ ರಥೋತ್ಸವದಲ್ಲಿ ಪಾಲ್ಗೊಳ್ಳಿ..

