Author: editor.udayarashmi@gmail.com

ಇಂಡಿ: ಎಸ್‌ಎಸ್ ಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಕರ್ನಾಟಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಧ್ಯಾರ್ಥಿನಿಯರಾದ ಕುಮಾರಿ ಸೃಜಲಾಗಾಂಧಿ ಶ್ರೀಶೈಲ ರಾಜಮನಿ ೬೨೫ ಕ್ಕೆ ೫೮೬ ಶೇ. (೯೩.೭೬) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಸುಪ್ರಜಲ್‌ಗಾಂದಿ ಶ್ರೀಶೈಲ ರಾಜಮನಿ ೬೨೫ಕ್ಕೆ ೫೬೦ಅಂಕಗಳನ್ನು ಪಡೆದು ಶೇ. (೮೯.೦೬) ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ವಿಧ್ಯಾರ್ಥಿನಿಯರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Read More

ಇಂಡಿ: ೨೦೨೩-೨೪ ನೇ ಸಾಲಿನ ಸಿ.ಬಿ.ಎಸ್.ಸಿ ೧೦ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಜವಾಹರ್ ನವೋದಯ ವಿದ್ಯಾಲಯ ಕಲಬುರ್ಗಿ ೦೧ (ತಾಡತೇಗನೂರ) ಶಾಲೆಯ ವಿದ್ಯಾರ್ಥಿಯಾದ ಇಂಡಿ ನಗರದ ಅರುಣ ಲಕ್ಷ್ಮಣ ಝಳಕಿ ೬೬೧(೯೪.೪೩%) ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಪಾಲಕರು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Read More

ವಿಜಯಪುರ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ೨೦೨೪-೨೫ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕಾಗಿ ವಿಜಯಪುರ ಸರಕಾರಿ ಪಾಲಿಟೇಕ್ನಿಕ್ ಕಾಲೇಜು ದ್ವಿತೀಯ ಹಂತದ ಆಫ್ ಲೈನ್ ಮುಖಾಂತರ ಅರ್ಜಿ ಆವ್ಹಾನಿಸಿದೆ.ಅರ್ಜಿ ಸಲ್ಲಿಸಲು ಮೇ ೨೦ ಕೊನೆಯ ದಿನವಾಗಿದೆ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ವಿಜಯಪುರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸೂಚನಾ ಫಲಕದಲ್ಲಿ ಮೇ ೨೧ ರಂದು ಬೆಳಿಗ್ಗೆ ೧೦:೩೦ರ ನಂತರ ಪ್ರಕಟಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ dtetech.karnataka,gov.in/kartechnical ಅಥವಾ dtek.karnataka.gov.in ವೆಸಬ್ ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಹುಲ್ಲೂರು (ಜೆಟ್ಟಗಿ) ವಿದ್ಯುತ್ ಉಪ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ೧೧೦ ಕೆವಿ ಬಸವನ ಬಾಗೇವಾಡಿ – ಮುದ್ದೇಬಿಹಾಳ ಮಾರ್ಗದ ಗೋಪೂರ ಅಳವಡಿಸುವ ಹಾಗೂ ವಿದ್ಯುತ್ ಎಳೆಯುವ ಕಾಮಗಾರಿ ಸಲುವಾಗಿ ಮೇ. ೧೭ ರಂದು ಬೆಳಗ್ಗೆ ಎಂಟು ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ೧೧೦ ಕೆವಿ ಉಪಕೆಂದ್ರ ಹಿರೇಮುರಾಳ, ೧೦೦ ಕೆವಿ ಕೆ ಎನ್ ಸೋಲಾರ ಮುದ್ದೇಬಿಹಾಳ, ೧೧೦ ಕೆವಿ ಕೋಳೂರು, ೧೧೦ ಕೆವಿ ಬಾಲಾಜಿ ಶುಗರ್ಸ್, ಹಾಗೂ ೧೧೦ ಕೆವಿ ಮುದ್ದೇಬಿಹಾಳ ಉಪ ಕೇಂದ್ರದಿಂದ ಹೊರಹೋಗುವ ೩೩ ಕೆವಿ ಉಪ ಕೇಂದ್ರಗಳ ಮಾರ್ಗದಲ್ಲಿ (ಢವಳಗಿ, ತಂಗಡಗಿ, ನಾಲತವಾಡ) ಮಾರ್ಗಗಳಲ್ಲಿ ಹಾಗೂ ಎಲ್ಲಾ ಉಪ ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ ೧೧ ಕೆವಿ ಮಾರ್ಗಗಳಿಗೆ ನಿರಂತರ ಜ್ಯೋತಿ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು ಹಾಗೂ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.ಆದ ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಬಸವನ ಬಾಗೇವಾಡಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯ…

Read More

ಚಿಮ್ಮಡ: ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ವೈಜ್ಞಾನಿಕ ಶಿಕ್ಷಣ ನೀಡುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದಾಗಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದಲ್ಲಿ ನೀಡುವ ಉದ್ದೇಶದಿಂದಲೇ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದ್ದು ನಮ್ಮ ಮಕ್ಕಳು ಶಿಕ್ಷಣಕ್ಕಾಗಿ ಮಂಗಳೂರು, ಬೆಂಗಳೂರು ಅಲೆಯುವ ಬದಲಾಗಿ ಅಲ್ಲಿನ ವಿದ್ಯಾರ್ಥಿಗಳೇ ಅತೀ ಕಡಿಮೆ ವ್ಯಚ್ಯದಲ್ಲಿ ನಮ್ಮ ಭಾಗಕ್ಕೆ ಬಂದು ಕಲಿಯುವಂತಹ ಶೈಕ್ಷಣಿಕ ವಾತಾವರಣ ಈ ಸಂಸ್ಥೆ ಸೃಷ್ಠಿಸಲಿದೆ ಎಂದರು.ಸಂಸ್ಥೆಯ ಪ್ರಾಚಾರ್ಯ ಫಿಲಿಪ್ ಥಾಮಸ್ ಮಾತನಾಡಿ ಪ್ರತಿಯೊಬ್ಬ ಪಾಲಕರು ತಾವು ಎಷ್ಠೆ ತೊಂದರೆಯಲ್ಲಿದ್ದರು ತಮ್ಮ ಮಕ್ಕಳ ಶಿಕ್ಷಣ, ಭವಿಷ್ಯದ ಕುರಿತು ಯಾವುದೇ ರಾಜಿ ಮಾಡಿಕೊಳ್ಳದೆ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದ್ದು ಅವರ ನಿರೀಕ್ಷೆಗೆ ತಕ್ಕ ಮೌಲ್ಯಯುತ ಶಿಕ್ಷಣ ನೀಡುವ ಧೇಯ ನಮ್ಮ ಸಂಸ್ಥೆ ಹೊಂದಿದೆ…

Read More

ಸಿಂದಗಿ: ಹುಬ್ಬಳ್ಳಿಯ ಅಂಜಲಿ ಅಂಬಿಗೇರಳನ್ನು ಪ್ರೀತಿ ನಿರಾಕರಣೆಯ ನೆಪದಲ್ಲಿ ಹಂತಕ ಗಿರೀಶ ಸಾವಂತ ಚಾಕುವಿನಿಂದ ಇರಿದು ಕೊಲೆಗೈದಿರುವ ಹೇಯ ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ಖಂಡಿಸುತ್ತದೆ. ಹಾಗೂ ಹತ್ಯೆ ಗೈದ ಆರೋಪಿ ಗಿರೀಶ ಸಾವಂತನನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಮೇಶ ಸಾಸಾಬಾಳ ಆಗ್ರಹಿಸಿದ್ದಾರೆ.ಕೆಟರಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಂಜಲಿಗೆ ಪ್ರೀತಿಸುವಂತೆ ಗಿರೀಶ ಪೀಡಿಸುತ್ತಿದ್ದು, ಆಕೆ ಪ್ರೀತಿಯನ್ನು ನಿರಾಕರಿಸಿದ್ದಾಳೆಂದು ಬೆಳಗಿನ ಜಾವ ಅವಳ ಮನೆಗೆ ನುಗ್ಗಿ ಹತ್ಯೆಗೈದಿದ್ದಾನೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾಳ ಕೊಲೆ ಮಾಸುವ ಮುನ್ನವೇ ಅದೇ ಭೂಮಿಯಲ್ಲಿ ಮತ್ತೊಬ್ಬ ಯುವತಿಯ ಹತ್ಯೆ ನಡೆದಿರುವುದು ಅಘಾತಕಾರಿ. ಇಂತಹ ಘಟನೆಗಳು ಯುವತಿಯರಿಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಮರೀಚಿಕೆಯಾಗುತ್ತಿದೆ ಎಂಬುದನ್ನು ತೆರೆದಿಟ್ಟಂತಿದೆ.ರಾಜ್ಯದಲ್ಲಿ ದಿನನಿತ್ಯ ಹೆಣ್ಣು ಮಕ್ಕಳಿಂದ ಹಿಡಿದು ವಯೋವೃದ್ಧ ಮಹಿಳೆಯರವರೆಗೂ ಒಂದಿಲ್ಲೊಂದು ರೀತಿಯ ಹಿಂಸೆ, ದೌರ್ಜನ್ಯದಂತಹ ಘಟನೆಗಳು, ಹತ್ಯೆಗಳು ಅವ್ಯಾಹತವಾಗಿ, ಅನಿಯಂತ್ರಿತವಾಗಿ ನಡೆಯುತ್ತಿವೆ. ದೌರ್ಜನ್ಯ ಎಸಗುವವರಿಗೆ ಕಾನೂನಿನ…

Read More

ಚಡಚಣ: ಡೆಂಗ್ಯೂ ಜ್ಷರವು ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಹರಡುತ್ತದೆ. ಪ್ರಾಥಮಿಕವಾಗಿ ಈಡಿಸ್ ಮತ್ತು ಈಜಿಪ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟಸ್. ಈ ರೋಗವು ಅಧಿಕ ಜ್ವರದಂತಹ ರೋಗಲಕ್ಷಣಗಳೊಂದಿಗೆ ಪ್ರಕಟವಾಗುತ್ತದೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೆಮರಾಜಿಕ್ ಜ್ವರ, ದೀರ್ಘಕಾಲದ ತಲೆನೋವು ಮತ್ತು ಸ್ನಾಯು ಮತ್ತು ಕೀಲು ನೋವುಗಳಿಗೆ ಕಾರಣವಾಗುತ್ತದೆ. ಆರಂಬಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವುದು ಅತ್ಯಗತ್ಯ. ಡೆಂಗ್ಯೂ ಜ್ವರಕ್ಕೆ ಭಯ ಬೇಡ ಮುನ್ನೆಚ್ಚೆರಿಕೆ ಬೇಕು ಎಂದು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಜಾನ್ ಕಟವಟಿಯವರು ಹೇಳಿದರು.ಗುರುವಾರದಂದು ಚಡಚಣ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ವೇಳೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಬಿ.ಲಾಳಸಂಗಿಯವರು ಮಾತನಾಡುತ್ತ. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿವಾರಿಸಿ. ಮನೆ ಮತ್ತು ನೆರೆಹೊರೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಯಾವುದೇ ಪಾತ್ರೆಗಳು, ಬಕೆಟ್‌ಗಳು ಅಥವಾ ಇತರ ವಸ್ತುಗಳನ್ನು ತೆಗೆದುಹಾಕಿ. ನೀರಿನ…

Read More

ವಿಜಯಪುರ: ಅಂಜಲಿ ಅಂಬಿಗೇರ ಅವರ ಹತ್ಯೆಯಾಗಿ ಎರಡು ದಿನಗಳು ಕಳೆದರೂ ಹಂತಕನನ್ನು ಬಂಧಿಸಲು ಪೊಲೀಸ್ ಇಲಾಖೆ ವಿಫಲವಾಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವುದನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಮುಖಂಡ ಗೌತಮ್ ಆರ್. ಚೌಧರಿ ಆರೋಪಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪದೆ ಪದೇ ಇಂತಹ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ರಾಜ್ಯ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳದಿರುವುದೇ ಕಾರಣವಾಗಿದೆ ಎಂದು ಆಪಾದಿಸಿದ್ದಾರೆ.ರಾಜ್ಯ ಸರಕಾರದ ನಿಷ್ಕ್ರೀಯ ನಡೆ ಖಂಡನೀಯವಾಗಿದೆ. ಅಂಜಲಿ ಅಂಬಿಗೇರ ಅವರ ಕುಟುಂಬದ ಆಸರೆಯಾಗಿದ್ದರು. ಅವರ ಹತ್ಯೆಯಿಂದ ಅವರ ಕುಟುಂಬ ಬೀದಿಪಾಲಾಗಿದ್ದು ಈ ಕೂಡಲೇ ರಾಜ್ಯ ಸರಕಾರ ಅವರ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನೊದಗಿಸಿ ಹಂತಕನನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಬಿಜೆಪಿ ಮುಖಂಡ ಡಾ.ಗೌತಮ್.ಆರ್.ಚೌಧರಿಆಗ್ರಹಿಸಿದ್ದಾರೆ.

Read More

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ. ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು.ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು ನೇಣು ಕಂಬಕ್ಕೆ ಕರೆದೊಯ್ಯಲು ಬರಲೇ ಇಲ್ಲ. ಚಾಪೇಕರರು ಜೈಲಿನ ಕೋಣೆಯಲ್ಲಿ ಬ್ರಿಟೀಷ್ ಜೈಲು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಾ ಇದ್ದರು. ಕೊನೆಗೂ ಐದು ನಿಮಿಷ ತಡವಾಗಿ ಜೈಲಧಿಕಾರಿಗಳು ದಾಮೋದರ ಬಳಿಗೆ ಬಂದರು. ಬ್ರಿಟೀಷ್ ಜೈಲು ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ನೋಡಿದಂತಹ ದಾಮೋದರ ಚಾಪೇಕರ್ ಕೋಪಗೊಂಡರು. ಅವರು ಅತ್ಯಂತ ಚಾಣಾಕ್ಷತನದಿಂದ ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಅವರ…

Read More

ಚಡಚಣ: ಪಟ್ಟಣದ ಮಹಾದೇವ ಮಠದಲ್ಲಿ ಇದೆ ರವಿವಾರದಂದು ಬಸವ ಸಂಗಮ ಪ್ರಕಾಶನದಿಂದ ಚಡಚಣ ಮಹಿಳಾ ಸಾಹಿತಿ ಹಾಗೂ ಪತ್ರಕರ್ತೆಯಾದ ವಿದ್ಯಾ ಕಲ್ಯಾಣಶೆಟ್ಟಿ ಅವರ ಕಾವ್ಯಕನ್ನಿಕೆ ಗ್ರಂಥ ಲೋಕಾರ್ಪಣೆಗೊಳ್ಳಲಿದೆ.ಈ ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಪುಸ್ತಕ ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ ಎಂ ಕೋರೆ ಅವರು ಮಾಡಲಿದ್ದಾರೆ.ಶ್ರೀದೇವಿ ಅಕ್ಕನವರು ಜ್ಯೋತಿ ಬೆಳಗಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಜಂಬುನಾಥ ಕಂಚ್ಯಾಣಿ. ಪುಸ್ತಕ ಪರಿಚಯವನ್ನು ಡಾ ಎಂ ಎಸ್ ಮಾಗಣಗೇರಿ ಮಾಡಲಿದ್ದಾರೆ, ಸಾನಿಧ್ಯ ಚಡಚಣ ವಿರಕ್ತಮಠದ ಪೂಜ್ಯರಾದ ಷಡಕ್ಷರಿ ಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ ಸಂಗಮೇಶ ಮೇತ್ರಿ, ಪ್ರೊ ಆರ್ ಪಿ ಬಗಲಿ, ಪ್ರೊ ಎಸ್ ಕೆ ಕುಲಕರ್ಣಿ, ಭೀಮುಗೌಡ ಬಿರಾದಾರ, ಶಂಕರ ಹಾವಿನಾಳ, ರಮೇಶ ಬಿರಾದಾರ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಬಸವ ಸಂಗಮ ಪ್ರಕಾಶನದ ಅಧ್ಯಕ್ಷ ಸಂತೋಷ ಕಲ್ಯಾಣಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More