Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ರೋಣಿಹಾಳ 110 ಕೆವಿ ವಿದ್ಯುತ್ ಮಾರ್ಗಗಳ ಮಾಸಿಕ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಮಾ.29 ರವಿವಾರ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಈ ಅವಧಿಯಲ್ಲಿ ವಿದ್ಯುತ್ ಉಪಕೇಂದ್ರಗಳಿಂದ ಹೊರಹೋಗುವ ಎಲ್ಲಾ 11 ಕೆವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

Read More

ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಕನ್ನಡ ಸಾಹಿತ್ಯ ಸಾರಸ್ವತ ಲೋಕದ ದೈತ್ಯ ಪ್ರತಿಭೆ ದೇಸಿ ಪ್ರಜ್ಞೆಯ ಭಾರತೀಯ ಸಂಸ್ಕೃತಿ ಚಿಂತಕ ನವ್ಯ ಸಾಹಿತ್ಯದ ಪ್ರತಿಪಾದಕ ಪಿ ಲಂಕೇಶ ಕರ್ನಾಟಕದ ಪ್ರಬುದ್ಧ ಪ್ರಾಮಾಣಿಕ ಪತ್ರಕರ್ತರು, ಸಾಹಿತಿ, ಕವಿ, ಲೇಖಕ ಮತ್ತು ಕಾದಂಬರಿಕಾರರು.ತಮ್ಮ ಬರವಣಿಗೆಯ ಮೂಲಕ ಸಮಾಜದಲ್ಲಿ ಸಾಮರಸ್ಯ ಬದಲಾವಣೆ ಕ್ರಾಂತಿಯನ್ನು ತರಬಹುದು ಎಂದು ತೋರಿಸಿ ಕೊಟ್ಟ ಶ್ರೇಷ್ಠ ಕವಿ ವಾಗ್ಮಿ ವಿಮರ್ಶಕ ಮತ್ತು ಚಿಂತಕರು.ಆಂಗ್ಲ ಮಾಧ್ಯಮ ಶಿಕ್ಷಕರಾದ ಬಿ ಎಂ ಶ್ರೀ ಶಂಕರ ಮೊಕಾಶಿ ಪುಣೇಕರ ಶಾಂತಿನಾಥ ದೇಸಾಯಿ ಚಂಪಾ ಅವರಂತೆ ಪಿ ಲಂಕೇಶ ಒಬ್ಬ ಶ್ರೇಷ್ಠ ಇಂಗ್ಲೀಷ್ ಭಾಷೆ ಪ್ರಾಧ್ಯಾಪಕರು. ಯುವ ಜನರ ಬರವಣಿಗೆ ದಿಕ್ಕನ್ನೇ ಬದಲಾಯಿಸಿದ ಕ್ರಾಂತಿಕಾರ ಲೇಖಕ ಸಾಹಿತಿ. ಪಾಳ್ಯದ ಲಂಕೇಶ್, ಅಥವಾ ಪಿ. ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು. ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇದು…

Read More

ವಿಜಯಪುರದಲ್ಲಿ ಎಬಿವ್ಹಿಪಿ ಹಮ್ಮಿಕೊಂಡಿದ್ದ ’ಉಘೇ ವೀರಭೂಮಿ’ ಕಾರ್ಯಕ್ರಮ ವಿಜಯಪುರ: ಸಿನಿಮಾಗಳಲ್ಲಿ ನಟಿಸುವ ನಟ – ನಟಿಯರು ಹೀರೋಗಳಲ್ಲ. ನಿಜವಾದ ಹೀರೋಗಳೆಂದರೆ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಹೋರಾಟಗಾರರು ಹಾಗೂ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು ಎಂದು ವಾಗ್ಮಿ ಬಸವರಾಜ ಹಂಚಲಿ ಹೇಳಿದರು.ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ ಅವರು, ದೇಶದ ಶ್ರೇಷ್ಠತೆ ಮತ್ತು ಪರಂಪರೆ ನಮಗೆಲ್ಲ ಪ್ರೇರಣೆ ಆಗಬೇಕು, ಈ ಮೂರು ಜನ ತರುಣರು ತಮ್ಮ ಚಿಕ್ಕ ವಯಸ್ಸಿನಲ್ಲಿ ಭಾರತ ಮಾತೆಯನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತ ಮಾಡಬೇಕೆಂದು ಕ್ರಾಂತಿಕಾರಿ ಹೋರಾಟವನ್ನು ಮಾಡಿದರು, ತಾವು ಗಲ್ಲಿಗೇರುವ ಸಮಯದಲ್ಲಿ ನಗುತ್ತಾ ಘೋಷಣೆಗಳನ್ನು ಮೊಳಗಿಸುತ್ತಾ ಭಯವಿಲ್ಲದೆ ಗಲ್ಲಿಗೇರಿದ ಮಹಾನ್ ರತ್ನಗಳು ಇವರನ್ನು ಇಂದಿನ ಯುವಕರು ಸ್ಮರಿಸಿಕೊಳ್ಳಬೇಕು. ಇವರು ನಮಗೆ ಪ್ರೇರಣೆ ಆಗಬೇಕು ಎಂದರು.ಎಬಿವಿಪಿಯ ಕೇಂದ್ರೀಯ…

Read More

ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ತೀವ್ರ ಕಿಡಿಕಾರಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉದಯರಶ್ಮಿ ದಿನಪತ್ರಿಕೆ ಕೋಲಾರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಕೊತ್ವಾಲ್‌ ರಾಮಚಂದ್ರ ರೀತಿ ವರ್ತಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಆರೋಪಿಸಿದ್ದಾರೆ.ಕೋಲಾರದಲ್ಲಿ ಶ್ರೀರಾಮ ಸೇನೆ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದರು.ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಅವರ ವರ್ತನೆ ಸರಿಯಿಲ್ಲ ಎಂದು ಆರೋಪಿಸಿದ ಅವರು, “ಅವರ ನಡೆ ಕೊತ್ವಾಲ್ ರಾಮಚಂದ್ರ ಕಾಲವನ್ನು ನೆನಪಿಸುವಂತಿತ್ತು ಎಂದು ಹೇಳಿದ್ದಾರೆ.ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಇಂತಹವರು ಮುಖ್ಯಮಂತ್ರಿ ಆದರೆ ಗತಿಯೇನು? ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಬೇಕೆಂದು ನಮ್ಮವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದು, ಕೇಂದ್ರದವರು ಒಪ್ಪದ ಕಾರಣ ಕಾಂಗ್ರೆಸ್‌ನಲ್ಲೇ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ನನ್ನನ್ನು ಬೆಳೆಸಿದ ಪಕ್ಷವಾಗಿದ್ದು, ಹೀಗಾಗಿ ನಾನೆಂದೂ ಬಿಜೆಪಿಗನಾಗಿದ್ದು, ಯಡಿಯೂರಪ್ಪ ಮಾದರಿಯಲ್ಲಿ ಪಕ್ಷ ತೊರೆಯುವ ಮಾತೇ…

Read More

ಪ್ರೇಮ ಬರಹ ಕೋಟಿ ತರಹ(ಪ್ರಣಯ ಪಕ್ಷಿಗಳ ಮೋಹಕ ಪದಗಳ ಗುಚ್ಛ) ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಗೆಳತಿ ನಿನ್ನ ಹೆಸರು ಕೇಳಿದರೆ ಸಾಕು ಮೈಯಲ್ಲಿರುವ ನರನಾಡಿಗಳೆಲ್ಲ ಮಿಡಿಯುವ ವೀಣೆಯಾಗುತ್ತವೆ. ಮನಸ್ಸು ಬಾನಾಡಿಯಾಗಿ ಬಾನೆತ್ತರಕ್ಕೆ ಚಿಮ್ಮುತ್ತವೆ. ವರ್ಷದ ನಂತರ ನಿನ್ನ ಭೇಟಿಯಾಗುವ ಕ್ಷಣ ಸನಿಹ ಬಂದಂತೆ ಮನದಲ್ಲೇನೋ ಹೇಳಲಾಗದ ಭಾವ ಇದುವರೆಗೂ ಕಾಣದ ಕಂಪನ. ಅಂದ ಚೆಂದದ ಮೈ ಮಾಟಕ್ಕೆ ಕಿರೀಟವಿಟ್ಟಂತೆ ನಿನ್ನ ನಡತೆ. ನಿನಗೆ ಸೋಲದ ಗಂಡು ಇನ್ನೂ ಹುಟ್ಟಿಯೇ ಇಲ್ಲ ಅನಿಸುತ್ತದೆ. ಎಂಥ ಗಂಡೆದೆಯಿರುವವನೂ ನಿನ್ನ ಮುಂದೆ ಮಂಡೆಯೂರಿ ನಿನ್ನ ಪ್ರೀತಿಗಾಗಿ ಅರ್ಜಿ ಗುಜರಾಯಿಸುವನು.ನಿನ್ನ ಮೃದು ಹೃದಯ ತನ್ನದಾಗಿಸಿಕೊಳ್ಳಲು ಹಂಬಲಿಸದೇ ಇರನು. ಪರಿ ಪರಿಯಾಗಿ ಬೇಡಿಕೊಳ್ಳದೇ ಇರನು. ಕವಿಯ ಕಲ್ಪನೆಗೆ ರೂಪ ಕೊಟ್ಟಂತಿರುವ ಅಪರೂಪದ ರೂಪ ನಿನ್ನದು. ಪ್ರಥಮ ನೋಟದಲ್ಲೇ ಯಾರೂ ಕಾಲಿಡದ ನನ್ನ ಹೃದಯದ ಅರಮನೆಯ ಕೀಲಿ ತೆರೆದು ನಿನಗೆ ಪ್ರವೇಶ ನೀಡಿಯಾಗಿದೆ. ಹೊರ ಹೋಗದಂತೆ ಹೃದಯಕ್ಕೆ ದೊಡ್ಡ ಬೀಗವನ್ನೂ ಅಂದೇ ಜಡಿದಾಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಭಾರತೀಯ ಜನತಾ ಪಕ್ಷ ವತಿಯಿಂದ ಪಂಡಿತ್ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಅಂಗವಾಗಿ ಕಾರ್ಯಕರ್ತರಿಗಾಗಿ ಮಾರ್ಚ್ 29ರಿಂದ ಮೂರು ದಿನಗಳ ಕಾಲ ವಿಶೇಷ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಸಿದ್ದರಾಮ ಕಾಖಂಡಕಿ ತಿಳಿಸಿದ್ದಾರೆ.ಸ್ಥಳೀಯ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಶ್ರೀ ಯಲ್ಲಮ್ಮ ದೇವಿ ಶಾಲೆಯಲ್ಲಿ ನಡೆಯಲಿರುವ ಈ ವರ್ಗವನ್ನು ಎರಡು ತಂಡಗಳಲ್ಲಿ ಹಮ್ಮಿಕೊಳ್ಳಲಾಗಿದೆ.ಮೊದಲ ತಂಡದ ಪ್ರಶಿಕ್ಷಣ ವರ್ಗ ಮಾರ್ಚ್ 29ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಬಸವನ ಬಾಗೇವಾಡಿ ಪುರಸಭೆ, ಮುತ್ತಗಿ ಜಿಪಂ, ಗೊಳಸಂಗಿ ಜಿಪಂ, ನಿಡಗುಂದಿ ಪ.ಪಂ ಹಾಗೂ ಆಲಮಟ್ಟಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದರ ಸಮಾರೋಪ ಸಮಾರಂಭ ಮಾರ್ಚ್ 30ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ.ಇನ್ನೂ ಎರಡನೇ ತಂಡದ ವರ್ಗ ಮಾರ್ಚ್ 30ರಂದು ಸಂಜೆ 5 ಗಂಟೆಗೆ ಆರಂಭವಾಗಲಿದ್ದು, ಕೊಲ್ಹಾರ ಪ.ಪಂ, ಮನಗೂಳಿ ಪ.ಪಂ, ಉಕ್ಕಲಿ, ಮುಳವಾಡ ಹಾಗೂ ಕೂಡಗಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ತಂಡದ ಸಮಾರೋಪ ಮಾರ್ಚ್…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮಕ್ಕಳ ಬದುಕಿನಲ್ಲಿ ಪಾಲಕರು ಆಕರ್ಷಣೆಯನ್ನು ಉಂಟು ಮಾಡುವವರಾಗಿರಬೇಕು ವಿಪರ್ಯಾಸವೆಂದರೆ ಇಂದು ಮಕ್ಕಳನ್ನು ಆಕರ್ಷಿಸುತ್ತಿರುವುದು ಮೊಬೈಲ್ ಫೋನುಗಳು.ನಾವು ಚಿಕ್ಕಂದಿನಲ್ಲಿ ಆಯಸ್ಕಾಂತ ಮತ್ತು ಕಾಂತ ಕ್ಷೇತ್ರದ ಕುರಿತು ಹೇಳುವಾಗ ಒಂದು ಹಾಳೆಯ ಮೇಲೆ ಆಯಸ್ಕಾಂತದ ಪುಟ್ಟ ತುಂಡನ್ನು ಇಟ್ಟು ಕಾಗದದ ಮತ್ತೊಂದು ಭಾಗದಲ್ಲಿ ಪುಟ್ಟ ಗುಂಡು ಸೂಜಿಯನ್ನು ಇಲ್ಲವೇ ಪಿನ್ನನ್ನು ಇಟ್ಟು ಆಯಸ್ಕಾಂತವನ್ನು ಸರಿಸುತ್ತಾ ಹೋದಾಗ ಗುಂಡು ಸೂಜಿಯು ಆಯಸ್ಕಾಂತದ ಆಕರ್ಷಣೆಗೆ ಒಳಗಾಗಿ ಸರಿಯುತ್ತದೆ ಎಂಬುದನ್ನು ನಮ್ಮ ಪಠ್ಯದಲ್ಲಿ ಓದುತ್ತಿದ್ದೆವಲ್ಲದೇ ಪ್ರಾಯೋಗಿಕವಾಗಿ ಮಾಡುತ್ತಿದ್ದೆವು ಕೂಡ.ಇಂದಿನ ಕಾಲದಲ್ಲಿ ಅಪ್ಪ-ಅಮ್ಮ ಆಯಸ್ಕಾಂತವಾಗಿಲ್ಲ ಬದಲಾಗಿ ಮೊಬೈಲ್ ಅವರಿಗೆ ಆಕರ್ಷಣೆಯನ್ನು ಉಂಟುಮಾಡುತ್ತಿವೆ. ಶಾಲೆಯಿಂದ ಬರುವ ಮಕ್ಕಳು ತಮ್ಮ ಪಾಲಕರಿಗೆ ಶಾಲೆಯಲ್ಲಿ ನಡೆದ ಎಲ್ಲ ವಿಷಯಗಳನ್ನು ಹೇಳಿ ವಿಚಾರವಿನಿಮಯ ಮಾಡಿ ಕೊಳ್ಳಬೇಕಾದ ಸಮಯದಲ್ಲಿ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿದ್ದಾರೆ ಎಂದರೆ ಪಾಲಕರು ಎಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಕುರಿತು ನಾವು ಯೋಚಿಸಬೇಕಾಗಿದೆ.ಇತ್ತೀಚೆಗೆ ಬಿಜಾಪುರ ಜಿಲ್ಲೆಯ ಒಂದು ಪುಟ್ಟ ತಾಲೂಕಿಗೆ ಕಾರ್ಯಕ್ರಮಕ್ಕೆ ನಾನು ಹೋದಾಗ…

Read More

ಜಮಖಂಡಿ ಭಾಗದಲ್ಲಿ ಮಹಿಳೆಯರಿಂದ ಭರದ ಸಿದ್ಧತೆ | ಶ್ಯಾವಿಗಿ, ಹಪ್ಪಳ, ಸಂಡಿಗೆ ಬಿಸಿಲಿಗೆ ಗರಿಗರಿ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ಬೇಸಿಗೆ ಬಿಸಿಲಿನ ತಾಪ ನಮಗೆ ಸಹಿಸಲಸಾಧ್ಯ. ಆದರೆ ಶ್ಯಾವಿಗಿ, ಹಪ್ಪಳ, ಸಂಡಿಗೆ, ಚಕ್ಕುಲಿ ಇತರೆ ಅಡುಗೆ ಮನೆಯ ಕುರುಕುಲು ಪದಾರ್ಥಗಳ ತಯಾರಿಗೆ ಈ ವಸಂತ ಮಾಸ ಒಳ್ಳೆ ವಾತಾವರಣ..ಹೌದು, ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದ ಹಳ್ಳಿಗರ ಮನೆಗಳ ಅಂಗಳ, ಮಹಡಿ ಮೇಲೆ ಈ ಹಪ್ಪಳ, ಶ್ಯಾವಿಗೆ, ಸಂಡಿಗೆ ಕಂಡು ಬರುತ್ತವೆ. ಇಡೀ ವರ್ಷದ ಊಟಕ್ಕೆ ನಂಚಿಕೆಗೆ ಬೇಕಾಗುವ ಈ ಪದಾರ್ಥ ರೆಡಿ ಮಾಡಿ, ಒಣಗಿಸಿ, ತುಂಬಿಟ್ಟುಕೊಳ್ಳುವ ವಾಡಿಕೆ ಇಲ್ಲಿದೆ.ಬಯಲುಸೀಮೆ ಉತ್ತರ ಕರ್ನಾಟಕ ಭಾಗದ ಮನೆಯ ಮಹಿಳೆಯರು ಹರಟೆ ಹೊಡೆಯುತ್ತಾ, ಜನಪದ ಹಾಡು ಗುನುಗುತ್ತಾ ಇವುಗಳ ತಯಾರಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಸಾಮಾನ್ಯವಾಗಿ ಯುಗಾದಿ ಹಬ್ಬದ ಸುತ್ತಮುತ್ತ ಇಂಥ ಪದಾರ್ಥಗಳು ರೆಡಿಯಾಗುತ್ತವೆ.ಮನೆ ಅಂಗಳದಲ್ಲಿ, ಚಾವಣಿಗಳಲ್ಲಿ ಈ ತಿನಿಸುಗಳು ಬಿಸಿಲಿಗೆ ಒಣಗುತ್ತಿವೆ. ಇವೇನೂ ಒಂದೆರಡು ದಿನಕ್ಕೆ ಆಗುವಷ್ಟು ಅಲ್ಲ. ಇಡಿ ವರ್ಷ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಮುತ್ತೂರ ಗ್ರಾಮದಲ್ಲಿ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಶೇಷ ಶಿಬಿರದ ಅಂಗವಾಗಿ ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಗುರುವಾರ ಯಶಸ್ವಿಯಾಗಿ ನಡೆಯಿತು.ತಾಲೂಕಿನ ತುಂಗಳ ಗ್ರಾಮದ ದಿವಂಗತ ಬಾಲವ್ವ ಪಾಂಡಪ್ಪ ಗಿರಡ್ಡಿ ಅವರ ಸ್ಮರಣಾರ್ಥವಾಗಿ, ಜಮಖಂಡಿಯ ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅವರ ಪ್ರಾಯೋಜಕತ್ವದಲ್ಲಿ ಈ ಶಿಬಿರ ಆಯೋಜಿಸಲಾಯಿತು. ಮುತ್ತೂರ ಗ್ರಾಮದ ಹಿರಿಯರಾದ ಭೀಮಪ್ಪ ಹಿಪ್ಪರಗಿ ಅವರು ಗೋವು ಪೂಜೆ ನೆರವೇರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.ಶಿಬಿರದಲ್ಲಿ ಆಕಳು, ಎಮ್ಮೆ, ಆಡು, ನಾಯಿ ಸೇರಿದಂತೆ ವಿವಿಧ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ, ಚುಚ್ಚು ಮದ್ದು, ಮಾತ್ರೆಗಳು, ಔಷಧಿ ಹಾಗೂ ಪೌಡರ್‌ಗಳನ್ನು ನೀಡಿ ಚಿಕಿತ್ಸೆ ನೀಡಲಾಯಿತು. ಜಾನುವಾರುಗಳ ಮಾಲೀಕರಿಗೆ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.ಜಮಖಂಡಿಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ಎಸ್‌. ನಿಂಬಾಳ, ಡಾ.ಆರ್.ಬಿ.ನಾಗರಳ್ಳಿ, ಮುತ್ತೂರಿನ ಪಶು ಚಿಕಿತ್ಸಾಲಯದ ಹಿರಿಯ…

Read More