Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
(ರಾಜ್ಯ ) ಜಿಲ್ಲೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಮಖಂಡಿ ಭಾಗದಲ್ಲಿ ಮಹಿಳೆಯರಿಂದ ಭರದ ಸಿದ್ಧತೆ | ಶ್ಯಾವಿಗಿ, ಹಪ್ಪಳ, ಸಂಡಿಗೆ ಬಿಸಿಲಿಗೆ ಗರಿಗರಿ

ಉದಯರಶ್ಮಿ ದಿನಪತ್ರಿಕೆ

ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಬೇಸಿಗೆ ಬಿಸಿಲಿನ ತಾಪ ನಮಗೆ ಸಹಿಸಲಸಾಧ್ಯ. ಆದರೆ ಶ್ಯಾವಿಗಿ, ಹಪ್ಪಳ, ಸಂಡಿಗೆ, ಚಕ್ಕುಲಿ ಇತರೆ ಅಡುಗೆ ಮನೆಯ ಕುರುಕುಲು ಪದಾರ್ಥಗಳ ತಯಾರಿಗೆ ಈ ವಸಂತ ಮಾಸ ಒಳ್ಳೆ ವಾತಾವರಣ..
ಹೌದು, ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದ ಹಳ್ಳಿಗರ ಮನೆಗಳ ಅಂಗಳ, ಮಹಡಿ ಮೇಲೆ ಈ ಹಪ್ಪಳ, ಶ್ಯಾವಿಗೆ, ಸಂಡಿಗೆ ಕಂಡು ಬರುತ್ತವೆ. ಇಡೀ ವರ್ಷದ ಊಟಕ್ಕೆ ನಂಚಿಕೆಗೆ ಬೇಕಾಗುವ ಈ ಪದಾರ್ಥ ರೆಡಿ ಮಾಡಿ, ಒಣಗಿಸಿ, ತುಂಬಿಟ್ಟುಕೊಳ್ಳುವ ವಾಡಿಕೆ ಇಲ್ಲಿದೆ.
ಬಯಲುಸೀಮೆ ಉತ್ತರ ಕರ್ನಾಟಕ ಭಾಗದ ಮನೆಯ ಮಹಿಳೆಯರು ಹರಟೆ ಹೊಡೆಯುತ್ತಾ, ಜನಪದ ಹಾಡು ಗುನುಗುತ್ತಾ ಇವುಗಳ ತಯಾರಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಸಾಮಾನ್ಯವಾಗಿ ಯುಗಾದಿ ಹಬ್ಬದ ಸುತ್ತಮುತ್ತ ಇಂಥ ಪದಾರ್ಥಗಳು ರೆಡಿಯಾಗುತ್ತವೆ.
ಮನೆ ಅಂಗಳದಲ್ಲಿ, ಚಾವಣಿಗಳಲ್ಲಿ ಈ ತಿನಿಸುಗಳು ಬಿಸಿಲಿಗೆ ಒಣಗುತ್ತಿವೆ. ಇವೇನೂ ಒಂದೆರಡು ದಿನಕ್ಕೆ ಆಗುವಷ್ಟು ಅಲ್ಲ. ಇಡಿ ವರ್ಷ ಬಳಸಲು ಬೇಕಾಗುವಷ್ಟು ತಯಾರಿಸಿಟ್ಟು ಕೊಳ್ಳುತ್ತಿದ್ದಾರೆ. ಈ ಋತುಮಾನ ಬಿಟ್ಟರೆ ಬೇರೆ ಯಾವ ಮಾಸವೂ ಇದಕ್ಕೆ ಪೂರಕವಲ್ಲ.
ಒಂದು ಹದವಾದ ಬಿಸಿಲಲ್ಲಿ ಒಣಗಿ ಗರಿಯಾಗುವ ಇವುಗಳಿಗೆ ಬೇಸಿಗೆಗಾಲವೇ ಸೂಕ್ತ ಕಾಲ. ಇಡೀ ವರ್ಷ ಎಣ್ಣೆಯ ಬಾಣಲೆಯಲ್ಲಿ ತೇಲಿ ಉಬ್ಬಿ, ಊಟದ ರುಚಿ ಹೆಚ್ಚಿಸುತ್ತವೆ. ಅಕ್ಕಿ, ಉದ್ದು, ಗೋಧಿ ಹಿಟ್ಟಿಗೂ ಈಗ ಬೇಡಿಕೆ ಹೆಚ್ಚಾಗಿದೆ. ಹಸಿ ಸಂಡಿಗೆ, ಶಾವಿಗೆ ಮತ್ತು ಹಪ್ಪಳವನ್ನು ಒತ್ತುವ ಸಾಧನದಿಂದ ತಯಾರಿಸಿ ಅದನ್ನು ಬಿರುಬಿಸಿಲಲ್ಲಿ ಒಣಗಿಸುತ್ತಾರೆ. ‘ಮುಂಜಾನೆಯೇ ಎದ್ದು ಹಿಟ್ಟನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕುದಿಸುತ್ತೇವೆ. ಹದಕ್ಕೆ ಬಂದ ಮೇಲೆ ತೆಗೆದು ಮುದ್ದೆ ಮಾಡಿಕೊಂಡು ಒತ್ತುವ ಯಂತ್ರಕ್ಕೆ ತುಂಬಿ ಶಾವಿಗೆ, ಸಂಡಿಗೆ ಬಿಡಿಸಿಡುತ್ತೇವೆ. ಚೆನ್ನಾಗಿ ಒಣಗಿಸಿ ಡಬ್ಬಗಳಲ್ಲಿ ಎತ್ತಿಡುತ್ತೇವೆ’ ಎನ್ನುತ್ತಾರೆ ಚಿಕ್ಕಪಡಸಲಗಿ ಹಿರಿಯ ಅಜ್ಜಿ ಗಂಗಮ್ಮ.
ಬಿಸಿಲಿಗೆ ಚೆನ್ನಾಗಿ ಒಣಗುವ ಆಹಾರ ಪದಾರ್ಥಗಳು ಬಹಳ ದಿನಗಳವರೆಗೂ ಕೆಡುವುದಿಲ್ಲ. ಸಂಡಿಗೆ, ಹಪ್ಪಳ, ಶ್ಯಾವಿಗೆಗಳನ್ನು ಬೇಸಿಗೆ ದಿನಗಳಲ್ಲೇ ಮಾಡುತ್ತೇವೆ ಎಂದು ಹೇಳುತ್ತಾರೆ ಬೌರಮ್ಮ ಮತ್ತು ಸಾವಿತ್ರಿ.

“ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಪಟ್ಟಣ, ಗ್ರಾಮೀಣ ಮಹಿಳೆಯರು ಇಂಥ ಪದಾರ್ಥ ತಯಾರಿಸಿ ಬಿಸಿಲಲ್ಲಿ ಒಣಗಿಸಿ ತುಂಬಿಟ್ಟು ಕೊಳ್ಳುತ್ತೆವೆ ವರ್ಷದುದ್ದಕ್ಕೂ ಮನೆಯಲ್ಲಿ ಮದುವೆ, ಮುಂಜಿ ನಾಮಕರಣ, ಅತಿಥಿ ಸತ್ಕಾರ, ಹಬ್ಬ ಹರಿದಿನಗಳಲ್ಲಿ ಭೋಜನವನ್ನು ರುಚಿಯಾಗಿಸುತ್ತವೆ.”

– ಮದಿನಾ ಹಳ್ಳಿ ಚಿಕ್ಕಪಡಸಲಗಿ ಗ್ರಾಮಸ್ಥೆ


“ಉಪ್ಪು, ಖಾರ ಹಾಕಿದ ಹಸಿ ಮೆಣಸಿನಕಾಯಿ ಮಜ್ಜಿಗೆಯಲ್ಲಿ ನೆನೆಸಿಟ್ಟ ಬಳಿಕ ಅದನ್ನು ಚೆನ್ನಾಗಿ ಒಣಗಿಸಿ ನಂತರ ಬಳಸಿದರೆ ಅದರ ರುಚಿ ಹೇಳತೀರದು. ಬೇಸಿಗೆ ಕಾಲದಲ್ಲಿ ಇವುಗಳನ್ನು ಒಣಗಿಸಿದರೆ ಇಡೀ ವರ್ಷ ಅವು ಕೆಡುವುದಿಲ್ಲ.”

– ಗಂಗು ಕಂಕಣವಾಡಿ
ಚಿಕ್ಕಪಡಸಲಗಿ ಗ್ರಾಮಸ್ಥೆ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.