ವಿಜಯಪುರ: ಮಹಾರಾಷ್ಟ್ರದ ಪಂಢರಪುರ ಶ್ರೀ ವಿಠ್ಠಲ- ರುಕ್ಮಿಣಿ ದರ್ಶನಕ್ಕೆ ಹೊರಟಿರುವ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದ ಕಾರ್ತಿಕ ಪಾದಯಾತ್ರೆಯ ದಿಂಡಿ ಉತ್ಸವದ ಯಾತ್ರಾರ್ಥಿಗಳ ತಂಡ ಸಚಿವ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪಂಢರಪುರ ಕರ್ನಾಟಕ ವಾಸ್ಕರ ಶಿವೂರಕರ ಸೇವಾ ಮಂಡಳಿಯವರು ತಂದಿದ್ದ ಪಲ್ಲಕ್ಕಿಯನ್ನು ಸಚಿವ ಎಂ. ಬಿ. ಪಾಟೀಲ ಅವರು ಹೆಗಲ ಮೇಲೆ ಹೊತ್ತುಕೊಂಡು ಪಲ್ಲಕ್ಕಿ ಸೇವೆ ಮಾಡಿದರು.
ಈ ವೇಳೆ ಉಪಸ್ಥಿತರಿದ್ದ ಸಮಿತಿಯ ಮುಖ್ಯಸ್ಥ ಪುಂಡಲಿಕ ಮಹಾರಾಜರು ಸಚಿವರಿಗೆ ಇನ್ನೂ ಉನ್ನತ ಸ್ಥಾನ ಸಿಗಲಿ ಎಂದು ಶುಭ ಹಾರೈಸಿದರು.
ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವಾರಕರಿಗಳಿಗೆ ಸಚಿವರು ಶುಭ ಕೋರಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಎ. ಎಸ್. ಪಾಟೀಲ(ಹೊನ್ನುಟಗಿ), ಎಸ್. ಎ. ಬಿರಾದಾರ(ಕನ್ನಾಳ), ಜಗದೀಶ ಪಾಟೀಲ, ಬಸವರಾಜ ಬಾಗೇವಾಡಿ, ಎಂ. ಬಿ. ಬಗಲಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

