ಉದಯರಶ್ಮಿ ದಿನಪತ್ರಿಕೆ
ಚಡಚಣ: ಗುಲಬುರ್ಗಾ ವಿಶ್ವಾವಿದ್ಯಾಲಯ ಕಲಬುರ್ಗಿಯಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಸಭೆಯಲ್ಲಿ ಸ್ಥಳೀಯ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಪಾಲಕ ಮಹಾಂತೇಶ ಕೆ. ಬಿರಾದಾರ ಇವರನ್ನು ವಿಜಯಪುರ ಜಿಲ್ಹಾ ಗ್ರಂಥಾಲಯ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಮಹಾಂತೇಶ ಬಿರಾದಾರ ಅವರ ಗ್ರಂಥಾಲಯ ಸೇವಾನುಭವ, ದತ್ತಾಂಶಗಳ ಸಂಗ್ರಹಣೆ, ಸಂಘಟನೆ, ಸಂರಕ್ಷರಣೆ ಹಾಗೂ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಇವರನ್ನು ವಿಜಯಪುರ ಜಿಲ್ಹಾ ಗ್ರಂಥಾಲಯ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ ) ಬೆಂಗಳೂರು ಅಧ್ಯಕ್ಷ ಡಾ| ಎಸ್.ಎಲ್. ಕಾಡದೇವರಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

