ಆ.೨೨ ರಂದು ಕರ್ನಾಟಕ ಜಾನಪದ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೂತನ ಜವಾಬ್ದಾರಿ ನೀಡಿರುವ ಪರಿಷತ್ತಿನ ರಾಜ್ಯಾಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಹಾಗೂ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಅವರ ವಿಶ್ವಾಸವನ್ನು ಎಂದಿಗೂ ಕುಂದಲು ಬಿಡುವುದಿಲ್ಲ ಎಂದು ಪರಿಷತ್ತಿನ ನೂತನ ತಾಲೂಕು ಅಧ್ಯಕ್ಷ ಎ.ಆರ್.ಮುಲ್ಲಾ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಮ್ಮ ನಾಡಿನ ಸಾಂಪ್ರದಾಯಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಅಧೀನದಲ್ಲಿರುವ ಪರಿಷತ್ತಿನಿಂದ ದೊರೆತಿರುವದು ನನ್ನ ಪುಣ್ಯ. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದರು.
ಪ್ರ.ಕಾರ್ಯದರ್ಶಿಗಳಾಗಿ ಆಯ್ಕೆಯಾದ ಎಲ್.ಎಂ.ಚಲವಾದಿ ಅವರು ಮಾತನಾಡಿ, ಜಾನಪದ ಕಲೆ ಕೇವಲ ಮನರಂಜನೆಯ ಸಾಧನವಲ್ಲ. ಅದು ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವ ನಾಡಿನ ಸಂಸ್ಕೃತಿ, ಜೀವನ ಪದ್ಧತಿ, ಆಚಾರ-ವಿಚಾರ ಹಾಗೂ ಪರಂಪರೆಯ ಪ್ರತಿಬಿಂಬವಾಗಿದೆ. ಇಂತಹ ಅಮೂಲ್ಯ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಪರಿಷತ್ತಿನ ಮೂಲಕ ಮಾಡುತ್ತೇವೆ ಎಂದರು.
ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಸ್.ಕೆ.ಘಾಟಿ ಅವರು ಮಾತನಾಡಿದರು.
ಈ ವೇಳೆ ಸರಸ್ವತಿ ಪೀರಾಪೂರ, ಎಸ್.ವಾಯ್.ವಗ್ಗರ, ರಮೇಶ ಇಂಗಳಗಿ, ಎಂ.ವ್ಹಿ.ಬಿಳೇಭಾವಿ, ಎಸ್.ಆರ್.ಪಾಟೀಲ, ಎಂ.ಪಿ.ವಾಳದವರ ಇದ್ದರು.
ಆ.೨೨ ರಂದು ಪದಗ್ರಹಣ
ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಬೆಂಗಳೂರು ಬೇಕರಿ ಫಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ನೂತನ ಪದಾಧಿಕಾರಿಗಳು
ಅಶೋಕ ತಡಸದ (ಗೌರವಾಧ್ಯಕ್ಷರು), ಎ.ಆರ್.ಮುಲ್ಲಾ (ಅಧ್ಯಕ್ಷರು), ಪ್ರಕಾಶ ನರಗುಂದ (ಉಪಾಧ್ಯಕ್ಷರು), ಎಸ್.ಬಿ.ಕಂಚಾಣಿ (ಕಾರ್ಯಾಧ್ಯಕ್ಷರು), ಎಸ್.ಕೆ.ಘಾಟಿ (ಜಂಟಿ ಕಾರ್ಯದರ್ಶಿಗಳು), ಎಲ್.ಎಂ.ಚಲವಾದಿ (ಪ್ರಧಾನ ಕಾರ್ಯದರ್ಶಿಗಳು), ಎಸ್.ವಾಯ್.ವಗ್ಗರ (ಖಜಾಂಚಿ), ಎಂ.ಎನ್.ಮಾಗಿ (ಸಂಘಟನಾ ಕಾರ್ಯದರ್ಶಿ), ಸರಸ್ವತಿ ಪೀರಾಪೂರ (ಸಂಚಾಲಕಿ), ಚೇತನ ಶಿವಶಿಂಪಿ (ಕಾನೂನು ಸಲಹೆಗಾರರು), ಹುಸೇನ ಮುಲ್ಲಾ (ಪತ್ರಿಕಾ ಸಲಹೆಗಾರರು), ಸದಸ್ಯರುಗಳಾಗಿ ಚಂದ್ರಶೇಖರ ಕಲಾಲ, ರಮೇಶ ಇಂಗಳಗಿ, ಪರಶುರಾಮ ಚೌಡಕೇರ, ಎಂ.ವ್ಹಿ.ಬಿಳೇಭಾವಿ, ಎಸ್.ಆರ್.ಪಾಟೀಲ, ರೂಪರಾಣಿ ಪಟೆಗಾರ, ನರಸಮ್ಮ ಗುಬಚಿ.

