ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ವಿಜಯಪೂರ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ವಿಜಯಪೂರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಕಚೇರಿಗೆ ಬೃಹತ್ ಪ್ರತಿಭಟನೆ ಮುಖಾಂತರ ತೆರಳಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಲ್ಲಿ ೨೧ ದಿನಗಳ ವರೆಗೂ ಸತತ ಕೆಲಸಕೊಡಬೇಕೆಂದು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಕೃಷಿ ಕೂಲಿ ಕಾರ್ಮಿಕ ಸಂಘದ ಮುಖಂಡರಾದ ರಮೇಶ್ ತಳವಾರ ಮಾತನಾಡಿ, ಹೆಚ್ಚು ಕೆಲಸದ ಬೇಡಿಕೆಗಾಗಿ ಪಂಚಾಯತಿ ಹಾಗೂ ತಾಲೂಕಾ ಪಂಚಾಯತ ಕಾರ್ಯಲಯಕ್ಕೆ ಕೃಷಿ ಕೂಲಿ ಕಾರ್ಮಿಕರು ಈ ಹಿಂದೆ ಅಲೆದಾಡಿದರೂ ಹೆಚ್ಚು ಕೆಲಸ ಕೊಡಲಿಲ್ಲ. ಆದ್ದರಿಂದ ಈ ವರ್ಷ ಹೆಚ್ಚು ಕೆಲಸ ಒದಗಿಸಬೇಕು ಎಂದು ಲಿಖಿತ ಉತ್ತರ ಒದಗಿಸಬೇಕು ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ದಾವಲಸಾಬ್ ನಧಾಫ ಮಾತನಾಡಿ, ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಿಗೆ ೨೦೦೧ ೨೬ಮನೆ ೬ ಅರ್ಜಿ ಸಲ್ಲಿಸಿದ್ದು, ಕೆಲಸ ಕೊಡದೆ ಕೃತಕ ಜಿಪಿಎಸ್ ಮಾಡುವವರಿಗೆ ಕೆಲಸ ಒದಗಿಸಿದಾರೆ. ಬಡ ಕೂಲಿ ಕಾರ್ಮಿಕರಿಗೆ ಅವಕಾಶ ಕೊಡಬೇಕೆಂದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಿಗೇರ, ಜಿಲ್ಲಾ ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ ಮಳಸಿದ್ದ ನಾಯ್ಕೋಡಿ, ಹುಲುಗಪ್ಪ ಚಲವಾದಿ, ಭೀಮರಾಯ ಪೂಜಾರಿ, ಸುರೇಖಾ ರಜಪೂತ್, ಶಿವುಬಾಯಿ ಗರಸಂಗಿ, ಭೀಮಸಿ ಪವಾರ, ಬಾಬು ರಾಠೋಡ, ಶಾಂತಪ್ಪ ಹೊಸಮನಿ, ಲಾಲಸಾಬ ಚಳಗಿ, ಬಸವರಾಜ ಇಟಗಿ, ಸಲೀಂ ವಕರಾಣಿ, ಸಿದ್ದು ಸಿಂದಗಿ ಮತ್ತಿತರರು ಉಪಸ್ಥಿತರಿದ್ದರು.

