Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹಿಂದೂ ಸಮ್ಮೇಳನ ನಿಮಿತ್ಯ ಬ್ರಹತ್ ಶೋಬಾಯಾತ್ರೆ‌

ಭೀಮಾಶಂಕರ ಕಾರ್ಖಾನೆಗೆಕಬ್ಬು ಪರಿಶೀಲನಾ ಸಮಿತಿ ಭೇಟಿ

ಆದರ್ಶ ವಿದ್ಯಾಲಯ :ಪ್ರವೇಶ ಪರೀಕ್ಷೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆ
(ರಾಜ್ಯ ) ಜಿಲ್ಲೆ

ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ದೇವರಹಿಪ್ಪರಗಿ: ಭಾರತೀಯ ಅಂಚೆ ಇಲಾಖೆ ಇಂದು ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ‌. ಜನತೆ ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ‌ಎಂದು ವಿಜಯಪುರ ಜಿಲ್ಲೆಯ ಅಂಚೆ ಅಧೀಕ್ಷಕ‌ ಮಹಾಂತೇಶ ತೊಗರಿ ಹೇಳಿದರು.
ತಾಲೂಕೀನ ಬೊಮ್ಮನಜೋಗಿ ‌ಗ್ರಾಮದ ಹನುಮಾನ ಮಂದಿರದಲ್ಲಿ ಅಂಚೆ ಜನಸಂರ್ಪಕ ಅಭಿಯಾನದಲ್ಲಿ ಅವರು ಮಾತನಾಡಿದರು.
ಅಂಚೆ ಇಲಾಖೆ ಹಲವು ವರ್ಷಗಳಿಂದ ಕೇವಲ ಸಂವಹನ ಹಾಗೂ ಪತ್ರವ್ಯವಹಾರಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಇಂದು ಬ್ಯಾಂಕುಗಳಂತೆ ಕೆಲಸ ಮಾಡುತಿದ್ದು ಇಲಾಖೆಯಡಿ ದೊರೆಯುವ ಪಿ ಎಲ್ ಐ ಹಾಗೂ‌ ಆರ್‌ ಪಿ ಎಲ್ ಐ, ಅಪಘಾತ ವಿಮೆ, ಆರ್‌ ಡಿ, ಸುಕನ್ಯ ಯೋಜನೆ, ಪಿ ಪಿ ಎಫ್, ಉಳಿತಾಯ‌ ಖಾತೆ‌ ಸಹಿತ‌ ಇರುವ‌ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು‌ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಂಚೆ ಉಪ‌ಅಧಿಕ್ಷಕರಾದ ಬಿ.ಎಸ.ದಾಸರ್‌ ಅವರು, ಬಡವರ ಹಾಗೂ‌ ಕೂಲಿ ಕಾರ್ಮಿಕರ ಅವಶ್ಯಕತೆಗಳು ಅರಿತುಕೊಂಡ ಅಂಚೆ ಇಲಾಖೆಯು ಜನರ ವಯಸ್ಸಿನ ಅನುಗುಣವಾಗಿ ಹಲವಾರು ಸೇವೆಗಳಾದ ಬ್ಯಾಂಕ್ ಸೇವೆ, ಆನ್ ಲೈನ್ ಮೊಬೈಲ್ ಬ್ಯಾಂಕಿಂಗ್, ಸಣ್ಣ ಉಳಿತಾಯ, ಹಾಗೂ ಮತ್ತು ರೈತರಿಗೆ ಪ್ರಧಾನಮಂತ್ರಿ ಜೀವ ವಿಮಾ ಯೋಜನೆಗಳ ಮೂಲಕ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳುವ ಮೂಲಕ ಮನೆ ಬಾಗಿಲಿಗೆ ಅಂಚೆ ಸೇವೆಗಳು ನಮ್ಮ ಇಲಾಖೆ ತರುತ್ತಿದೆ ಎಂದರು.
ಗ್ರಾಮದ ಮುಖಂಡರಾದ ರಾಜಶೇಖರ ಕೊಣಸಿರಗಿ ಮಾತನಾಡಿ, ಅಂಚೆ ಇಲಾಖೆಯು ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ ಜನಸ್ನೇಹಿ‌ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತದೆ. ಸಿಬ್ಬಂದಿ‌ ಸಹ ಅಷ್ಟೇ ವಿನಯತೆಯಿಂದ ಸಹಕಾರ‌‌ ಸೇವೆ ನೀಡುತ್ತಾರೆ ಎಂದರು.
ಐಪಿಪಿಬಿ ಜಿಲ್ಲಾ ವ್ಯವಸ್ಥಾಪಕರಾದ ವಿಶ್ವನಾಥ ಸರ್, ಗ್ರಾಮ ಪಂಚಾಯತ ಸದಸ್ಯ ಬಸವರಾಜ ಕಡಕೋಳ, ರಾಮನಗೌಡ ಪಾಟೀಲ, ಬಸವರಾಜ ನಂದಗೇರಿ, ಅಂಚೆ ಮೇಲ್ವಿಚಾರಕರಾದ ಬಸವರಾಜ ‌ಇವಣಗಿ, ಅಮರೇಶ ಕಲಶೇಟ್ಟಿ, ಮನೋಹರ ಪೋಳ, ಹಾಗೂ ದೇವರಹಿಪ್ಪರಗಿ ಮತ್ತು‌ ಶಿವಣಗಿ ಅಂಚೆ ಸಿಬ್ಬಂದಿಯಾದ ನಬಿರಸೂಲ ಗಡಗಲಾವ್, ಪ್ರಬು ಬಿಸನಾಳ, ರಾಮನಗೌಡ‌ ಬಿರಾದಾರ, ಪ್ರವೀಣ ಕುಲಕರ್ಣಿ, ರಂಜೀತ ತಳಕೇರಿ, ಎಲ್ ಎಚ್ ನಧಾಫ, ಪ್ರವೀಣ ಮಾಳೆಗಾರ, ಅಂಕುಶ ಯಾಧವ, ಭಾಗ್ಯ‌ ಪುರವಂತಮಠ, ಸುನೀತಾ ನಾಟಿಕಾರ, ಲಕ್ಷ್ಮೀ ಪೂಜಾರಿ, ಸುನಂದಾ ಬಿರಾದಾರ, ಸಂಗ್ರಾಮ‌ಸಿಂಗ್ ಹಜೇರಿ ಹಾಗೂ ಗ್ರಾಮಸ್ಥರು ‌ಇದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹಿಂದೂ ಸಮ್ಮೇಳನ ನಿಮಿತ್ಯ ಬ್ರಹತ್ ಶೋಬಾಯಾತ್ರೆ‌

ಭೀಮಾಶಂಕರ ಕಾರ್ಖಾನೆಗೆಕಬ್ಬು ಪರಿಶೀಲನಾ ಸಮಿತಿ ಭೇಟಿ

ಆದರ್ಶ ವಿದ್ಯಾಲಯ :ಪ್ರವೇಶ ಪರೀಕ್ಷೆ

ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹಿಂದೂ ಸಮ್ಮೇಳನ ನಿಮಿತ್ಯ ಬ್ರಹತ್ ಶೋಬಾಯಾತ್ರೆ‌
    In (ರಾಜ್ಯ ) ಜಿಲ್ಲೆ
  • ಭೀಮಾಶಂಕರ ಕಾರ್ಖಾನೆಗೆಕಬ್ಬು ಪರಿಶೀಲನಾ ಸಮಿತಿ ಭೇಟಿ
    In (ರಾಜ್ಯ ) ಜಿಲ್ಲೆ
  • ಆದರ್ಶ ವಿದ್ಯಾಲಯ :ಪ್ರವೇಶ ಪರೀಕ್ಷೆ
    In (ರಾಜ್ಯ ) ಜಿಲ್ಲೆ
  • ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಫೆ.೧ ಕ್ಕೆ ನೂತನ ಶಿಲಾಮಠ ಭೂಮಿ ಪೂಜಾ ಸಮಾರಂಭ
    In (ರಾಜ್ಯ ) ಜಿಲ್ಲೆ
  • ಸಂಗೀತ-ಮನಸ್ಸು ಪುಳಕಿತಗೊಳಿಸುವ ಸಾಧನ :ಸುಮಾ
    In (ರಾಜ್ಯ ) ಜಿಲ್ಲೆ
  • ಕಣಿಯನಹುಂಡಿಯಲ್ಲಿ ಚಿರತೆಯ ಬಿಂದಾಸ್ ಓಡಾಟ
    In (ರಾಜ್ಯ ) ಜಿಲ್ಲೆ
  • ವಾಲಿಬಾಲ್: ಕರ್ನಾಟಕ ರಾಜ್ಯ ಪೊಲೀಸ್ ತಂಡಕ್ಕೆ ಭಗೀರಥ ಕಪ್
    In (ರಾಜ್ಯ ) ಜಿಲ್ಲೆ
  • ಆಕಸ್ಮಿಕ ಬೆಂಕಿಗೆ ರಸಗೊಬ್ಬರ ಗೋದಾಮು ಭಸ್ಮ :ಅಪಾರ ನಷ್ಟ
    In (ರಾಜ್ಯ ) ಜಿಲ್ಲೆ
  • ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.