Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹಾಲುಮತ ಇತಿಹಾಸವು ಮನುಕುಲದ ಇತಿಹಾಸವಾಗಿದೆ :ಹಳ್ಳಿಕೇರಿ

ರಾಜ್ಯಪಾಲರ ನಡೆಗೆ ಸಚಿವ ಶಿವಾನಂದ ಪಾಟೀಲ ಅಸಮಾಧಾನ

ಖೇಡಗಿ ಸಂಸ್ಥೆಯಿಂದ ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸ :ಪ್ರೊ.ಕತ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಲಮಟ್ಟಿ ಉ.ಕ.ಪ್ರವಾಸಿಗರ ಆಕರ್ಷಣೆ :ಸಚಿವ ಶಿವಾನಂದ
(ರಾಜ್ಯ ) ಜಿಲ್ಲೆ

ಆಲಮಟ್ಟಿ ಉ.ಕ.ಪ್ರವಾಸಿಗರ ಆಕರ್ಷಣೆ :ಸಚಿವ ಶಿವಾನಂದ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ ಶಾಸ್ತ್ರೀ ಸಾಗರದಲ್ಲಿ ಬೋಟಿಂಗ್ ಗೆ ಚಾಲನೆ | ಮಹಾರಾಷ್ಟ್ರ, ಆಂಧ್ರ ಪ್ರವಾಸಿಗರ ಆಕರ್ಷಣೆ

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಿಂದ ನೀರಾವರಿಗೆ ಆದ್ಯತೆ ನೀಡುವ ಜೊತೆಗೆ ಪ್ರವಾಸಿಗರ ಆಕರ್ಷಣೆಯಾಗುವಂತೆ ಬೋಟಿಂಗ್ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಮಾಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿಗೆ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು‌
ಶನಿವಾರ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಪರಿಸರದಲ್ಲಿ ಸಿಲ್ವರ್ ಲೇಕ್ ನಲ್ಲಿ ಬೋಟಿಂಗ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಕ್ ಗಾರ್ಡನ್, ಸೈನ್ಸ್‌ ಗಾರ್ಡನ್ ಸೇರಿದಂತೆ ಹಲವು ಉದ್ಯಾನವನಗಳು ಶೈಕ್ಷಣಿಕ ಅಧ್ಯಯನ ಪ್ರವಾಸಿ ಯೋಗ್ಯತಾಣಗಳಾಗಿ, ಜನಮನ ಗೆದ್ದಿವೆ. ಇದಕ್ಕೆ ಇದೀಗ ಬೋಟಿಂಗ್ ಸೇವೆ ಮರು ಆರಂಭದ ಮೂಲಕ ಆಲಮಟ್ಟಿ ಪ್ರವಾಸಿ ತಾಣದ ವೈಭವ ಹೆಚ್ಚಿಸಿದೆ ಎಂದರು‌
ರಾಜ್ಯದ ಮೈಸೂರು ಭಾಗದ ಕೆಆರ್‍ಎಸ್ ನಂತರದ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣವಾದ ಆಲಮಟ್ಟಿ ಸಿಲ್ವರ ಲೇಕ್‍ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಚಲಾನೆ ನೀಡಲಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಈಗಾಗಲೇ ಸರ್ಕಾರ ಈಗಾಗಲೇ ಪಕ್ಷಿಧಾಮ ಘೋಷಿಸಿದೆ, ಇದೀಗ ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲನಿಗಮದ ವತಿಯಿಂದ ಆಲಮಟ್ಟಿ ರಾಕ್ ಉದ್ಯಾನವನದಲ್ಲಿರುವ ಸಿಲ್ವರ್ ಲೇಕ್‍ನಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಲಾಗಿದೆ‌.
ಆಲಮಟ್ಟಿ ಶಾಸ್ತ್ರಿ ಜಲಾನಯ ವೀಕ್ಷಣೆಗೆ ಕರ್ನಾಟಕ, ಮಾಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿ ಪ್ರತಿ ವರ್ಷ ಸುಮಾರು 8 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ಕೃಷ್ಣಾ ಭಾಗ್ಯ ಜಲ ನಿಗಮದಿಂದ ಆಲಮಟ್ಟಿ ಜಲಾಶಯದ ಕೆಳಭಾಗದಲ್ಲಿ ವಿಶ್ವ ವಿಖ್ಯಾತ ವರ್ಣ ರಂಜಿತ ಸಂಗೀತ ಕಾರಂಜಿಗಳು ಪ್ರವಾಸಿಗರ ಮನರಂಜನಾ ತಾಣಗಳಾಗಿ ಆಕರ್ಷಣೆ ಪಡೆದಿವೆ. ಇಲ್ಲಿನ ಉದ್ಯಾನವನಗಳಲ್ಲಿ ಪ್ರಮುಖವಾಗಿ ಜಲಾಶಯದ ಬಲ ಭಾಗದಲ್ಲಿ ರಾಕ್ ಉದ್ಯಾನವನ ಹಾಗೂ 77 ಎಕರೆ ಉದ್ಯಾನವನ ಎಂಬ ಎರಡು ಪ್ರಮುಖ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಎಡ ಭಾಗದಲ್ಲಿ ಲವಕುಶ ಉದ್ಯಾನವನ ಹಾಗೂ ಕೃಷ್ಣ ಉದ್ಯಾನವನ ಎಂಬ ಎರಡು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಆಲಮಟ್ಟಿ ಅಣೆಕಟ್ಟಿಗೆ ಬರುವ ಮುಖ್ಯ ರಸ್ತೆಯ ಪಕ್ಕದಲ್ಲಿ ಮೊದಲು ಕಲ್ಲುಗಳ ರಾಶಿ ಬಿದ್ದಿದ್ದ ಹಳೆಯ ತಾಣವಿತ್ತು. ಆ ಜಾಗದಲ್ಲಿ ಒಂದು ಕೃತಕ ಕೆರೆ-ಸರೋವರವನ್ನು ನಿರ್ಮಿಸಲು ನಿರ್ಧರಿಸಿ 2003-04 ರಲ್ಲಿ ಕೆಲಸ ಪೂರ್ಣಗೊಳಿಸಲಾಯಿತು. ಈ ಸರೋವರವು 10 ಅಡಿ ಆಳವಿದ್ದು, ಸರೋವರದ ಮಧ್ಯದಲ್ಲಿ ಜಪಾನಿ ಮಾದರಿಯ ‘ಗೇಜೆಬೊ’ (gಚಿzebo) ನಿರ್ಮಿಸಲಾಗಿದೆ. ಸುತ್ತಲೂ ಆಕರ್ಷಕ ತಡೆಗೋಡೆ ಮತ್ತು ಪಥಗಳನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಕೆರೆ/ಸರೋವರದ ದಂಡೆಯ ಮೇಲೆ 5 ಜಪಾನಿ ಮಾದರಿಯ ಗೇಜೆಬೊಗಳಿವೆ. ಸರೋವರಕ್ಕೆ ಅಣೆಕಟ್ಟಿನಿಂದ ಗುರುತ್ವಾಕರ್ಷಣೆಯ ಮೂಲಕ ಪೈಪ್ ಲೈನ್ ಮೂಲಕ ನೀರು ಪೂರೈಸಲಾಗುತ್ತದೆ. ಈ ಸರೋವರವು ಕನ್ನಡಿಯಂತೆ ಸುತ್ತಮುತ್ತಲಿನ ಪ್ರಕೃತಿಯನ್ನು ಪ್ರತಿಬಿಂಬಿಸುವುದರಿಂದ ಇದಕ್ಕೆ “ಸಿಲ್ವರ್ ಲೇಕ್” ಎಂದು ಹೆಸರಿಡಲಾಗಿದೆ. ಈ ಕಾರಣದಿಂದ ಈ ಕೆರೆಯಲ್ಲಿ ದೋಣಿ ವಿಹಾರ, ಜಲ ಕ್ರೀಡೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದರು.
ಇದಲ್ಲದೇ ಜಲಾನಯ ಪರಿಸರದಲ್ಲಿ ಮೀನುಗಾರಿಕೆ ಇಲಾಖೆಯಿಂದ ಬಿತ್ತನೆ ಮೀನುಮರಿ ಉತ್ಪಾದನೆ ಕೇಂದ್ರ, ಮೀನುಗಾರಿಕೆ ಕಾಲೇಜು ಆರಂಭಿಸುವುದಕ್ಕಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಘೋಷಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಆರ್ ಪಾಟೀಲ್ ಕೆಬಿಜೆಎನ್‍ಎಲ್ ಅಧೀಕ್ಷಕ ಅಭಿಯಂತರರಾದ ಬಸವರಾಜ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹಾಲುಮತ ಇತಿಹಾಸವು ಮನುಕುಲದ ಇತಿಹಾಸವಾಗಿದೆ :ಹಳ್ಳಿಕೇರಿ

ರಾಜ್ಯಪಾಲರ ನಡೆಗೆ ಸಚಿವ ಶಿವಾನಂದ ಪಾಟೀಲ ಅಸಮಾಧಾನ

ಖೇಡಗಿ ಸಂಸ್ಥೆಯಿಂದ ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸ :ಪ್ರೊ.ಕತ್ತಿ

ದೇಹ–ಮನಸ್ಸಿನ ಸದೃಢತೆಗೆ ಕ್ರೀಡಾಭ್ಯಾಸ ಅಗತ್ಯ :ಬಿರಾದಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹಾಲುಮತ ಇತಿಹಾಸವು ಮನುಕುಲದ ಇತಿಹಾಸವಾಗಿದೆ :ಹಳ್ಳಿಕೇರಿ
    In (ರಾಜ್ಯ ) ಜಿಲ್ಲೆ
  • ರಾಜ್ಯಪಾಲರ ನಡೆಗೆ ಸಚಿವ ಶಿವಾನಂದ ಪಾಟೀಲ ಅಸಮಾಧಾನ
    In (ರಾಜ್ಯ ) ಜಿಲ್ಲೆ
  • ಖೇಡಗಿ ಸಂಸ್ಥೆಯಿಂದ ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸ :ಪ್ರೊ.ಕತ್ತಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉ.ಕ.ಪ್ರವಾಸಿಗರ ಆಕರ್ಷಣೆ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ದೇಹ–ಮನಸ್ಸಿನ ಸದೃಢತೆಗೆ ಕ್ರೀಡಾಭ್ಯಾಸ ಅಗತ್ಯ :ಬಿರಾದಾರ
    In (ರಾಜ್ಯ ) ಜಿಲ್ಲೆ
  • ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಕೈ ಜೋಡಿಸಿ :ನಾರಾಯಣ ಶಾಸ್ತ್ರಿ
    In (ರಾಜ್ಯ ) ಜಿಲ್ಲೆ
  • ತಾವರಖೇಡದಲ್ಲಿ ಮಂಗ ಸಾವು; ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ
    In (ರಾಜ್ಯ ) ಜಿಲ್ಲೆ
  • ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಪಕ್ಷಪಾತ ಆರೋಪ
    In (ರಾಜ್ಯ ) ಜಿಲ್ಲೆ
  • ಅವಧಿ ಮುಗಿವ ಗ್ರಾಪಂಗಳಿಗೆ ಈಗಿದ್ದ ಆಡಳಿತ ಸಮಿತಿಯೇ ಮರುನೇಮಕವಾಗಲಿ
    In (ರಾಜ್ಯ ) ಜಿಲ್ಲೆ
  • ಭಾರತೀಯ ಸಂಸ್ಕೃತಿ-ಸಂಸ್ಕಾರ ಉಳಿಸಿ-ಬೆಳೆಸಿ :ಮಾಯಾದೇವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.