ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ರಸ್ತೆ ಸಂಚಾರಿ ನಿಯಮವನ್ನು ಪಾಲಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು ಇವುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಮುಖ್ಯವಾಗಿ ವಾಹನಗಳನ್ನು ಚಲಾಯಿಸುವಾಗ ಯಾವುದೇ ಕಾರಣಕ್ಕೂ ಮೊಬೈಲ್ನಲ್ಲಿ ಮಾತನಾಡಬಾರದು, ಅಪ್ರಾಪ್ತ ವಯಸ್ಸಿನವರು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಲು ಮುಂದಾಗಬಾರದು ವಾಹನಗಳನ್ನು ಅಪ್ರಾಪ್ತರಿಗೆ ನೀಡುವದು ಕೂಡಾ ತಪ್ಪು ಎಂದು ಸಿಂದಗಿಯ ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ ಹೇಳಿದರು.
ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಬಸವೇಶ್ವರ ಪೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಪೋಲಿಸ್, ಶಿಕ್ಷಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಸ್ತೆ ಸುರಕ್ಷತಾ ಸಪ್ತಾಹ-೨೦೨೬ ಅಭಿಯಾನ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ್ವಿ ಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಲಘು ವಾಹನ ಚಾಲಕರು ಶೀಟ್ ಬೆಲ್ಟ್ಗಳನ್ನು ಧರಿಸಿ ವಾಹನ ಚಲಾಯಿಸಬೇಕು ಇದರಿಂದ ಬಹುತೇಕ ಅಪಘಾತಗಳನ್ನು ತಡೆಗಟ್ಟಬಹುದು ಈ ಕುರಿತು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಸಹ ವಿಧ್ಯಾರ್ಥಿಗಳಲ್ಲಿ ಇದರ ಕುರಿತಾಗಿ ಅರಿವನ್ನು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ನ್ಯಾಯವಾದಿ ಶಮಾಪಟೇಲ ಕಾಚೂರ, ಬಿ ಸಿ ಪಾಟೀಲ, ಪೋಲಿಸ್ ಇಲಾಖೆಯ ಪಿ ಕೆ ನಾಗರಾಳ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವಂತಪ್ಪ ಚನಗೊಂಡ ವಿಧ್ಯಾರ್ಥಿಗಳಿಗೆ ರಸ್ತೆ ನಿಯಮಗಳ ಕುರಿತು ಹಾಗೂ ಸಾರ್ವಜನಿಕರು ಪಾಲಿಸಬೇಕಾದ ಕಾಯ್ದೆ, ಕಾನೂನುಗಳ ಕುರಿತಾಗಿ ತಿಳುವಳಿಕೆ ನೀಡಿದರು.
ಬಸವೇಶ್ವರ ಪ್ರೌಢಶಾಲೆಯ ಮುಖ್ಯಗುರುಗಳಾದ ಜಗದೀಶ ಗುಮಶೆಟ್ಟಿ ಅಧ್ಯಕ್ಷತೆವಹಿಸಿದ್ದರು, ಪ್ರೌಡಶಾಲೆಯ ವಿಧ್ಯಾರ್ಥಿಗಳು ಹಾಡಿದ ರಸ್ತೆ ನಿಯಮ ಪಾಲನೆಯ ಹಾಡು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ದೇವಿಂದ್ರ ಗುಮಶೆಟ್ಟಿ, ಬಸವರಾಜ್ ಕುಂಬಾರ, ಶರಣಮ್ಮ ಬಿರಾದಾರ, ರವಿಕುಮಾರ ಗುಮಶೆಟ್ಟಿ, ಎಸ್ ಪಿ ರಾಣಗಟ್ಟಿ, ನಿಂಗನಗೌಡ ಗುಂಡಕನಾಳ, ಸುಧಾ ಭಜಂತ್ರಿ, ತಬ್ಸುಮ್ ದುಂಡಸಿ, ರವಿಕುಮಾರ ಗುಮಶೆಟ್ಟಿ, ಕೀರ್ತನಾ ಹೂಗಾರ, ನವೀನ ಆಲಗೂರ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

