ಮೃತ ವ್ಯಕ್ತಿ ಹುಚ್ಚಪ್ಪ ಡೋಣೂರ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಕ್ರಮಕ್ಕೆ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ವೈಷ್ಣವಿ ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕೆತ್ಸೆಗೆಂದು ಬಂದಿರುವ ಹುಚ್ಚಪ್ಪ ಡೋಣುರ (೪೯) ಎಂಬ ವ್ಯಕ್ತಿಯನ್ನು ಚಿಕಿತ್ಸೆ ನೀಡುವುದಾಗಿ ಹೇಳಿ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ಥಳಿಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ನಡೆದಿದೆ.
ಸಿಂದಗಿ: ಪಟ್ಟಣದ ವೈಷ್ಣವಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹುಚ್ಚಪ್ಪ ಡೋಣೂರ ಸಾವು ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರವಾಗಿರೋ ವೈಷ್ಣವಿ ಆಸ್ಪತ್ರೆಯಲ್ಲಿ ಡಿಸೆಂಬರ್ನಲ್ಲಿ ದಾಖಲಾಗಿದ್ದ ಹುಚ್ಚಪ್ಪನ ಮೇಲೆ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ತೀವ್ರ ಹಲ್ಲೆ ಮಾಡಿ ಹೊಡೆದಿದ್ದಾರೆಂದು ಆರೋಪ ಕಳೆದ ನಾಲ್ಕು ದಿನಗಳ ಹಿಂದೆಯೇ ಕೇಂದ್ರದ ವಿರುದ್ದ ಹುಚ್ಚಪ್ಪನ ಕುಟುಂದವರು ಆರೋಪಿಸಿದ್ದರು ಎನ್ನಲಾಗಿದೆ.
ಈ ಹಿನ್ನಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಕಾನ್ಸಸ್ಟೇಬಲ್ ಆಗಿರುವ ಸಿದ್ದು ಮುರುಡಿ ಪತ್ನಿ ಒಡೆತನದಲ್ಲಿರೋ ಕೇಂದ್ರ ವ್ಯಸನ ಮುಕ್ತ ಕೇಂದ್ರದಲ್ಲಿ ದಾಖಲಾದ ಬಳಿಕ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಿರಲಿಲ್ಲಾ. ಇದರಿಂದ ಭಯಗೊಂಡ ಹುಚ್ಚಪ್ಪ ಕುಟುಂಬಸ್ಥರು ನಾಲ್ಕು ದಿನಗಳ ಹಿಂದೆ ಆತನನ್ನು ಬಿಡುಗಡೆ (ಡಿಸ್ಚ್ಯಾರ್ಜ್) ಮಾಡಿಕೊಂಡು ಹೋಗಿದ್ದರು. ಮನೆಯಲ್ಲಿ ಹೋಗಿ ನೋಡಿದಾಗ ಹುಚ್ಚಪ್ಪನ ಕಾಲು, ಬೆನ್ನು, ತೊಡೆ ಮತ್ತು ಸೊಂಟದ ಕೆಳ ಭಾಗದಲ್ಲಿ ಗಾಯಗಳಾಗಿದ್ದವು. ಹಲ್ಲೆ ಮಾಡಿರೋ ಗುರುತು ಕಂಡು ಕೇಂದ್ರದವರನ್ನು ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಿಲ್ಲವೆಂದು ವ್ಯಸನ ಮುಕ್ತ ಕೇಂದ್ರದವರು ಕುಟುಂಬದವರಿಗೆ ಮಾಹಿತಿ ನೀಡಲು ನಿರಾಕರಣೆ ಮಾಡಿದ್ದಾರೆ ಎಂದು ತಿಳಸಿದ್ದಾರೆ.
ಬಳಿಕ ಕುಟುಂಬಸ್ಥರು ಸಿಂದಗಿಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಹುಚ್ಚಪ್ಪ ಮೃತ ಪಟ್ಟಿರುತ್ತಾರೆ. ಮರಣದ ನಂತರ ಹುಚ್ಚಪ್ಪನ ಶವವನ್ನು ಕುಟುಂಬದ ಸದಸ್ಯರು ವ್ಯಸನ ಮುಕ್ತ ಕೇಂದ್ರದ ಬಳಿ ಇಟ್ಟು ಪ್ರತಿಭಟಸಿ ವ್ಯಸನ ಮುಕ್ತ ಕೇಂದ್ರದ ಮಾಲೀಕರು ಮತ್ತು ಸಿಬ್ಬಂದಿಗಳೇ ಹುಚ್ಚಪ್ಪನ ಸಾವಿಗೆ ಕಾರಣವೆಂದು ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಸಿಂದಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಪಿಎಸ್ಐ ಆರೀಫ್ ಮುಶಾಪುರಿ ಭೇಟಿ ನೀಡಿ ಮೃತನ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

