ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಚಿಮ್ಮಲಗಿ ಭಾಗ-೧ ಎ ಗ್ರಾಮದ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ದೇವಸ್ಥಾನದ ಜಾತ್ರೆ ಶುಕ್ರವಾರ ಅದ್ಧೂರಿಯಿಂದ ಜರುಗಿತು.
ಬೆಳಿಗ್ಗೆಯಿಂದಲೇ ಅಂಬಾಭವಾನಿಗೆ ವಿಶೇಷ ಪೂಜೆ, ಅಭಿಷೇಕ ಜರುಗಿದವು.
ಬೆಳಿಗ್ಗೆ ೯ ಕ್ಕೆ ಆರಂಭಗೊಂಡ ದೇವಿಯ ಪಲ್ಲಕ್ಕಿ ಉತ್ಸವ ಕೃಷ್ಣಾ ನದಿಗೆ ತೆರಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಜರುಗಿದ ಮೆರವಣಿಗೆಯಲ್ಲಿ ಕುಂಭ ಹೊತ್ತ ೧೦೧ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು. ಗದಗ ಜಿಲ್ಲೆ ಕೊಣ್ಣೂರಿನ ಚಂದ್ರಮುಖಿ ಮಹಿಳಾ ಡೊಳ್ಳು ಕುಣಿತದ ನಿನಾದ ಗಮನಸೆಳೆಯಿತು. ಆ ಹಲಗೆ, ಡೊಳ್ಳು ಕಂಪಿನ ರಾಗತಾಳಕ್ಕೆ ಹೆಜ್ಜೆ ಗೆಜ್ಜೆ ಬಳೆಗಳ ಗಲ್ಲಗಲ್ಲ ಸಪ್ಪಳದ ಕಂಪನವೂ ಪರಿಮಳಿಸಿತ್ತು. ತಲೆ ಮೇಲೆ ಕುಂಭ ಹೊತ್ತು ಜಯಘೋಷದ ಸದ್ದು ಮೊಳಗಿಸಿ ಭಕ್ತಿಯ ಉನ್ಮಾದದ ಸೆಲೆಯಲ್ಲಿ ಲೀನರಾಗಿದ್ದರು.
ಜಯಪ್ರಕಾಶಾಚಾರ್ಯ ಚಿಮ್ಮಲಗಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ನಿರಂತರ “ಮಹಾಲಕ್ಷ್ಮಿ ಯಾಗ” ದೇವಸ್ಥಾನದ ಆವರಣದಲ್ಲಿ ಜರುಗಿತು.
ಕಾರ್ಯಕ್ರಮ:
ನಂತರ ನಡೆದ ಸನ್ಮಾನ, ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ರಾಜೇಶ ದೇವಗಿರಿ, ರಾಮು ಜಗತಾಪ, ಸಿ.ಎಸ್. ಉಪ್ಪಾರ, ಸಂಗಣ್ಣ ಶೇಖಣ್ಣವರ, ಇಂಡಿಯ ಉಮೇಶ ಕೋಳೇಕರ, ರಾಘವೇಂದ್ರ ಕುಲಕರ್ಣಿ ಮತ್ತೀತರು ಮಾತನಾಡಿ, ಚಿಮ್ಮಲಗಿ ಗ್ರಾಮದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಭಾವಸಾರ ಕ್ಷತ್ರೀಯ ಸಮಾಜದವರು ಸರ್ವ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿ ಪ್ರತಿವರ್ಷ ಅದ್ಧೂರಿ ಜಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಯ ಎಂದರು.
ಪಂಢರಪುರದ ಯಶವಂತ ಬಾಪು ಬೋಧಲೆ ಮಹಾರಾಜರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಖಂಡರಾದ ಮಹಾವೀರ ಕೋಳೇಕರ, ನಾಗನಾಥ ಹಂಚಾಟೆ, ಸುಭಾಸ ಬಳಮಕರ, ಎಂ.ಆರ್. ಕಮತಗಿ, ಜಿ.ಎಸ್. ಯಂಡಿಗೇರಿ, ಪಿ ಎಲ್ ಕುಲಕರ್ಣಿ, ಲಾಲಸಾಬ್ ಗಡ್ಡಿ, ಕಾಳಪ್ಪ ಬಡಿಗೇರ, ಬಾಬು ಓಂಕಾರೆಪ್ಪಗೋಳ, ಎಚ್.ಎಫ್. ಕಟ್ಟಿಮನಿ, ರಾಘವೇಂಧ್ರ ಕುಲಕರ್ಣಿ, ಮಾಸೂಬಾ ಕಟ್ಟಿಮನಿ, ಶಿವಾಜಿ ಕಟ್ಟಿಮನಿ, ಏಕನಾಥ ಮಹೇಂದ್ರಕರ, ದೋಂಡಿಬಾ ಕರ್ಣೆ, ಪಾಂಡು ಪತಂಗೆ, ಶಂಕರ ರಾಠೋಡ, ಸಮಾಜದ ಅಧ್ಯಕ್ಷ ನಾಗೇಶ ಮಹೇಂದ್ರಕರ, ತುಕಾರಾಮ, ಸಂತೋಷ, ರವಿ, ಶಶಿಕಲಾ ಮಹೇಂದ್ರಕರ, ಲಕ್ಷ್ಮೀಬಾಯಿ ಬಳಮಕರ, ಕೃಷ್ಣಾಜಿ ಬೋಂಬಲೇಕರ, ದಶರಥ, ಸಿದ್ದು ಮಹೇಂದ್ರಕರ ಮತ್ತೀತರರು ಇದ್ದರು.
ಮಧ್ಯಾಹ್ನ ಬಂದ ಸಕಲ ಭಕ್ತಾದಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು

