ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬ ಮಾತಿನಲ್ಲಿ ಸತ್ಯವಿದೆ ಎಂದು ಕೇದಾರಪೀಠದ ಜಗದ್ಗುರು ಭೀಮಾಶಂಕರಲಿಂಗ ಭಗವತ್ಪಾದರು ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗೆ ಮೂಲ ಕಾರಣವೇ ನಮ್ಮ ಜನ್ಮಭೂಮಿ. ಭಾರತೀಯ ಪರಂಪರೆಯಲ್ಲಿ ಪಂಚ ಪೀಠಗಳು ಹಾಗೂ ಶಂಕರಾಚಾರ್ಯರಿಂದ ಸ್ಥಾಪಿತವಾದ ನಾಲ್ಕು ಮಠಗಳಿಗೆ ವಿಶೇಷ ಸ್ಥಾನಮಾನಗಳಿವೆ ಎಂದು ಧರ್ಮ, ಪೀಠ, ಮಠಗಳ ಕುರಿತು ವ್ಯಾಖ್ಯಾನಿಸಿ, ಜೀವನದಲ್ಲಿ ಮಾತನಾಡುವುದಕ್ಕಿಂತ ಕಾರ್ಯ ಮಾಡುವುದೇ ಮುಖ್ಯ ಎಂದರು.
ಹಂಪಿಸಾವಿರದೇವರಮಠದ ವಾಮದೇವಶ್ರೀಗಳು ಮಾತನಾಡಿ, ಪುಣ್ಯ ಅಧ್ಯಯನದಿಂದ ಬರಲಾರದು, ಇದು ಮಹಾತ್ಮರ ದರ್ಶನದಿಂದ ಬರಬಲ್ಲದು. ಪಂಚ ತತ್ವಗಳ ಆಧಾರದ ಮೇಲೆ ಹುಟ್ಟಿದ ಪೀಠಗಳು ಮಾನವ ಕಲ್ಯಾಣ ಬಯಸುತ್ತವೆ. ಆಧ್ಯಾತ್ಮೀಕ ವಿಚಾರಗಳನ್ನು ಅರಿತು ನಾವು ಅಂತರಂಗದಿಂದ ಬದಲಾಗಬೇಕು ಎಂದರು.
ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರಶ್ರೀ ಹಾಗೂ ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರಶ್ರೀ ಮಾತನಾಡಿದರು.
ಧರ್ಮಸಭೆಗೆ ಆರಂಭಕ್ಕೂ ಮುನ್ನ ಕೇದಾರ ಜಗದ್ಗರುಗಳನ್ನು ಮೆರವಣಿಗೆ ಕುಂಭ ಕಳಶ ಹೊತ್ತ ಮುತೈದೆಯರೊಂದಿಗೆ ಪಂಚಾಚಾರ್ಯ ಕಲ್ಯಾಣಮಂಟಪದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪುನಃ ಪಂಚಾಚಾರ್ಯ ಕಲ್ಯಾಣ ತಲುಪಿತು. ನಂತರ ಕೇದಾರಪೀಠದ ಸಾಧಕರಿಂದ ವೇದಘೋಷಗಳೊಂದಿಗೆ ಸಭೆ ಆರಂಭಗೊಂಡಿತು.
ಆಹಿರಸಂಗದ ಮಲ್ಲಿಕಾರ್ಜುನಶ್ರೀ, ಅವೋಗೇಶ್ವರ ಧಾಮದಶ್ರೀ, ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುಮಠ, ಮಾಜಿಶಾಸಕ ಅಶೋಕ ಶಾಬಾದಿ, ಬಸನಗೌಡ ಪಾಟೀಲ(ಯಡಿಯಾಪುರ), ಶರಣಗೌಡ ಲಿಂಗದಳ್ಳಿ(ಚಬನೂರ), ಬಸಯ್ಯ ಹಿರೇಮಠ (ಪುರಾಣಿಕ), ಎಂ.ಆರ್.ಶಿರಸಂಗಿಮಠ, ಸಿ.ಕೆ.ಕುದರಿ, ಶಾಂತಯ್ಯ ಜಡಿಮಠ, ಆನಂದ ಪರದೇಶಿಮಠ, ಸೋಮು ಹಿರೇಮಠ, ಆನಂದ ಜಡಿಮಠ, ಕಾಶೀನಾಥ ಹಿರೇಮಠ, ಶ್ರೀಶೈಲ ಕಬ್ಬಿನ, ಸಿದ್ದು ಆನಂದಿ, ಬಂಡೆಪ್ಪಗೌಡ ದಿಂಡವಾರ, ಸೋಮು ದೇವೂರ, ಬಿ.ಎಸ್. ತೆಗನೂರ(ಶಾಬಾದಿ), ಶಿವಪ್ಪ ವಸ್ತçದ, ಸಾಹೇಬಗೌಡ ಮುಳಸಾವಳಗಿ ಇದ್ದರು.

