ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಗುರುತಿಸಿರುವ ಜಿಲ್ಲೆಯ ಬುಡಕಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೋಂ ಸ್ಟೇ ನಿರ್ಮಿಸಲು ಹಾಗೂ ನವೀಕರಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಕೇರಿ, ಅಸ್ಕಿ ಗ್ರಾಪಂ ವ್ಯಾಪ್ತಿಯ ಅಸ್ಕಿ, ಸಾಸನೂರ ಗ್ರಾಪಂ ವ್ಯಾಪ್ತಿಯ ಸೋಮನಾಳ, ಕೊಣ್ಣೂರ ಗ್ರಾಪಂನ ಕೊಣ್ಣೂರ ಹಾಗೂ ಪಡೇಕನೂರ ಗ್ರಾಮಗಳನ್ನು, ಬಾವೂರ ಗ್ರಾಪಂ ವ್ಯಾಪ್ತಿಯ ವನಹಳ್ಳಿ, ತುಂಬಗಿ ಗ್ರಾಪಂನ ತುಂಬಗಿ ಹಾಗೂ ಹೊಸಳ್ಳಿ ಗ್ರಾಮವನ್ನು, ಭಂಟನೂರ ಗ್ರಾಪಂ ವ್ಯಾಪ್ತಿಯ ಭಂಟನೂರು ಗ್ರಾಮವನ್ನು, ಹಿರೂರ ಗ್ರಾಪಂನ ತಮದಡ್ಡಿ ಗ್ರಾಮವನ್ನು, ಮಿಣಜಗಿ ಗ್ರಾಪಂ ಮಿಣಜಗಿಯ ಗ್ರಾಮವನ್ನು, ಕೊಡಗಾನೂರ ಗ್ರಾಪಂ ವ್ಯಾಪ್ತಿಯ ಕೊಡಗಾನೂರ, ಕಾರಗನೂರ, ಬೇಳೂರು ಹಾಗೂ ನಾವದಗಿ ಗ್ರಾಮವನ್ನು, ಬ.ಸಾಲವಾಡಗಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಲವಾಡಗಿ ಹಾಗೂ ಗುಂಡಕನಾಳ ಗ್ರಾಮವನ್ನು, ಮೂಕಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೂರು ಗ್ರಾಮಗಳನ್ನು ಗುರುತಿಸಲಾಗಿದ್ದು, ಡೆವಲಪ್ಮೆಂಟ್ ಆಫ್ ಹೋಮ್ ಸ್ಟೇಸ್ ಇನ್ ಟ್ರೈಬಲ್ ಏರಿಯಾಸ್ ಯೋಜನೆಯ ಅನುಷ್ಠಾನಗೊಳಿಸಲಾಗುತ್ತಿದೆ.
ಹೋಂಸ್ಟೇ ನಿರ್ಮಿಸಲು ೫ ಲಕ್ಷ ರೂ.ಗಳು ಹಾಗೂ ನವೀಕರಿಸಲು ೩ ಲಕ್ಷ ರೂ.ಗಳ ಸಹಾಯಧನ ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಬುಡಕಟ್ಟು ಸಮುದಾಯವಿರುವ ಗ್ರಾಮಗಳಲ್ಲಿ ಆತಿಥ್ಯ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವುದಾಗಿದೆ.
ಅರ್ಹ ಬುಡಕಟ್ಟು ಜನಾಂಗದವರು ಅರ್ಜಿ ನಮೂನೆಯನ್ನು ಜಿಲ್ಲೆಯ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ ೧೪ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:೦೮೩೫೨-೨೫೦೩೫೯ ಅನ್ನು ಸಂಪರ್ಕಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
