ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟದ ವತಿಯಿಂದ ಅಗಸ್ಟ ೧ರಂದು ಒಳ ಮೀಸಲಾತಿಗಾಗಿ ಹೋರಾಟ ಮಾಡಲು ನಗರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಾದಿಗರ ಸಂಘಟಣೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ಹಾಗೂ ಜೆ.ಸಿ ಮಾಧುಸ್ವಾಮಿ ವರದಿಯಂತೆ ಪರಿಗಣಿಸಲು ಅಗಷ್ಟ ೧೫ ರ ಒಳಗೆ ಪರೀಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೋಳಿಸಬೇಕು ಇಲ್ಲದಿದ್ದರೆ ರಾಜ್ಯವ್ಯಾಪ್ತಿ ಗಂಭೀರ ಸ್ವರೂಪದ ಹೊರಾಟ ನಡೆಸಲಾಗುವುದು. ರಾಜ್ಯದಲ್ಲಿ ಪರೀಶಿಷ್ಟ ಜಾತಿಗೆ ಇರುವ ಶೇ%೧೫ ರಷ್ಟು ಮೀಸಲಾತಿಯಲ್ಲಿ ಮಾದರ, ಸಮಗಾರ, ಡೋರ, ಮಚಗಾರ, ಸಮುದಾಯದವರಿಗೆ ಶೇ%೬ ರಷ್ಟು ಒಳ ಮೀಸಲಾತಿ ನೀಡುವಂತೆ ಆಯೋಗ ಶಿಫಾರಸು ಮಾಡಿದೆ, ಆದರೆ ಸದ್ಯದ ಸರ್ಕಾರದಲ್ಲಿ ಇರುವು ಕೇಲವರು ಒಳಮೀಸಲಾತಿ ಜಾರಿಯಾಗಲು ಅಡಿಪಡಿಸುತ್ತಿದ್ದಾರೆ. ಹಿಂತವರ ಮಾತಿಗೆ ಮುಖ್ಯಮಂತ್ರಿಗಳು ಕಿವಿ ಕೊಡಬಾರದು. ಒಳ ಮೀಸಲಾತಿಗಾಗಿ ಸುಮಾರು ೪೦ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅಗಸ್ಟ ೧೫ ರ ಒಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಅಗಸ್ಟ ೧ ರಂದು ರಾಜ್ಯವ್ಯಾಪ್ತಿ ಸಾಂಕೇತಿಕ ಹೋರಾಟ ನಡೆಸಲಾಗುವುದು. ಅಗಸ್ಟ ೧೧ ರಿಂದ ಹೋರಾಟ ಉಗ್ರ ರೂಪಕ್ಕೆ ತಾಳಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಎಸ್. ಲೋಟಗೇರಿ (ವಕೀಲರು), ಭೀಮು ಮೇಲಿನಮನಿ, ಸುರೇಶ ಗಚ್ಚಿನಮನಿ, ಪ್ರಧಾನಿ ಮೂಲಮನಿ, ಮದನಕುಮಾರ ನಾಗರದಿನ್ನಿ, ಸದಾನಂದ ಗುನ್ನಾಪುರ, ಪ್ರಭಾಕರ ಕೂಚಬಾಳ (ವಕೀಲರು), ಎಮ್.ಆರ್. ದೊಡ್ಡಮನಿ, ಅಯ್ಯಪ್ಪ ದೊಡ್ಡಮನಿ, ಬಾಲಚಂದ್ರ ಹುಲ್ಲೂರ, ವಿಠ್ಠಲ ನಡುವಿನಕೇರಿ, ಬಾಳಪ್ಪ ಗೂಗಿಹಾಳ, ಕಿರಣ ಆಸಂಗಿ, ವೆಂಕಟೇಶ ರತ್ನಾಕರ, ಮಲ್ಲು ಶೇಷಗಿರಿ, ದೇವೆಂದ್ರ ಹಡಲಗಿ, ಶಿವು ಬಡಿಗೇರ, ಸುನೀಲ ಸಂದ್ರಿಮನಿ, ಶಿವಾನಂದ ತಿಕೋಟಕರ, ಪರಸು ಗುಣದಾಳ, ಅಮೀನಪ್ಪ ರೊಣಿಹಾಳ, ಮತ್ತಿತರರು ಉಪಸ್ಥಿತರಿದ್ದರು.

