ಲೇಖನ
– ಮಲಿಕ್ ಎಲ್ ಜಮಾದಾರ
ಉಪನ್ಯಾಸಕರು
ವಿಜಯಪುರ
ಮೊ:9743129744
ಉದಯರಶ್ಮಿ ದಿನಪತ್ರಿಕೆ
ಜಗತ್ತಿನ ಅತ್ಯಂತ ಶ್ರೇಷ್ಟ ಗೆಳೆಯ ಎಂದರೆ ಅದು "ಪುಸ್ತಕ" ಕಥೆಗಳು ನಮ್ಮ ಬದುಕಿನ ಸ್ಪೂರ್ತಿದಾಯಕ ಅಸ್ತ್ರ ,ಹಲವು ಉಪದೇಶ ,ಸಂದೇಶ ಭರಿತಾದವುಗಳು ನಮಗೆ ಉತ್ಸಾಹದ ಜೊತೆಗೆ ಉದಯೋನ್ಮುಖ ಉತ್ತಮ ಸಮಾಜಕ್ಕೆ ಒಂದು ಒಳ್ಳೆಯ ಮಾರ್ಗದ ದಾರದೀಪವೆಂದು, ಸಾಹಿತ್ಯದ ಜೊತೆಗೆ ಭಾಷಾಜ್ಞಾನವನ್ನು ಕಲ್ಪಸಿಕೊಡುವ ಒಂದು ಪ್ರಮುಖ ಮಾರ್ಗದರ್ಶಕವೆಂದು ಹೇಳಬಹುದು.
ಮೈಲುಗಲ್ಲುಗಳು ಎಂಬ ಶಿರ್ಶಿಕೆಯಂತೆ ನಮ್ಮ ಬದುಕಿನ ಪ್ರತಿಯೊಂದು ಕ್ಷಣದಲ್ಲಿಯೂ ದುಃಖ, ಸಂತೋಷ, ಸ್ವಲ್ಪ ಬೇಸರ ಹೀಗೆ ಹಲವು ಘಟನೆಗಳು ನಾವು ಒಂದೊಂದಾಗಿ ಈ ಕಥೆಗಳು ಓದುತ್ತಾ ಹೋದಂತೆಲ್ಲಾ ನಮ್ಮ ಬದುಕಿನ ಕೆಲವು ಘಟನೆಗಳು ನಮ್ಮೆದುರಾಗಿವೆ. ಈ ಕಥಾ ಸಂಕಲನದಲ್ಲಿ ದೈನಂದಿನ ಬದುಕಿನ ಚಿತ್ರಣ ಯತಾರ್ಥವಾಗಿ ವಿಬಿನ್ನ ಪಾತ್ರಗಳ ಮೂಲಕ ನಮ್ಮ ಉದಯೋನ್ಮುಖಿ ಬದುಕಿಗೆ ಒಂದು ದಾರಿದೀಪವೆಂದು ಬಿಂಬಿಸುವ ಕಾರ್ಯ ಲೇಖಕರು ಮಾಡಿದ್ದಾರೆ. ಇದರಿಂದ ನಾವು ಕಲಿಯುವುದು ಅಪಾರವಾದದ್ದು ನಿಜಕ್ಕೂ ಒಂದು ಅತ್ಯತ್ಭುತವಾದ ಉತ್ತಮ ಸಾಹಿತ್ಯ ಮತ್ತು ಉತ್ತಮ ಕಥೆಗಳಾಧಾರಿತ ಕಥಾ ಸಂಕಲನವಾಗಿದೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರು ರಮೇಶ ಪೂಖರಿಯಾಲ ನಿಶಂಖ ರವರ "ಮೀ¯ ಕೇ ಪತ್ಥರ" ಎಂಬ ಹಿಂದಿ ಕಥಾ ಸಂಕಲನವು ನನ್ನ ನೆಚ್ಚಿನ ಗುರುಗಳಾದ ಡಾ.ಎಸ್ ಟಿ ಮೇರವಾಡೆ ಗುರುಗಳು "ಮೈಲುಗಲ್ಲುಗಳು" ಎಂಬ ಶಿರ್ಷಿಕೆಯಡಿ ಒಟ್ಟು ೧೧ ಕಥೆಗಳ ಭಾಷಾಂತರಿಸಿದ ಸಂಕಲನ ಇದಾಗಿದ್ದು ಈ ಕಥಾ ಸಂಕಲನವನ್ನು ಕನ್ನಡದಲ್ಲಿ ಅನುವಾದಿಸಿ ತಮ್ಮದೇ ಆದ ಶೈಲಿಯಲ್ಲಿ ಅಚ್ಚುಕಟ್ಟಾದ ವ್ಯಾಕರಣಬದ್ದವಾಗಿ ಸರಳವಾಗಿ ಆರ್ಥೈಸುವ ಹಾಗೆ ಈ ಕಥಾ ಸಂಕಲವನ್ನು ಕನ್ನಡಕ್ಕೆ ಭಾಷಾಂತರಿಸುವ ಮೂಲಕ ಕನ್ನಡದ ಅಭಿಮಾನವನ್ನು ನಮ್ಮೆಲ್ಲರಲ್ಲಿ ಇಮ್ಮಡಿಗೊಳಿಸುವ ಜೊತೆಗೆ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವುದು, ಅಲ್ಲದೆ ಓದುಗರಿಗೆ ಸಾಹಿತ್ಯದ ರುಚಿಯನ್ನು ಉಣಬಡಿಸಿಸುವುದರ ಜೊತೆಗೆ ಜ್ಞಾನದಾಹವನ್ನು ತೀರಿಸುವಲ್ಲಿ ಈ ಒಂದು ಕಥಾ ಸಂಕಲನವು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
ಈ ಒಂದು ಕಥಾ ಸಂಕಲನದಲ್ಲಿ ನಿಶಂಖ ರವರು ತಾವು ಕಂಡ ವ್ಯಕ್ತಿತ್ವ, ಸಮಾಜ, ವಾತಾವರಣ ಕಷ್ಟಕ್ಕೆ ಕಾರ್ಪಣ್ಯಗಳು ಒಂದು ಕಥಾರೂಪಕ್ಕಿಳಿಸಿ ನಮಗೆ ಕಥೆಗಳ ಮೂಲಕ ಜೀವನದ ಯತಾರ್ಥ ಸ್ಥಿತಿಗತಿಗಳ ಬಗ್ಗೆ ಬಹಳ ಸುಂದರವಾಗಿ ಬಿಚ್ಚಿಟ್ಟಿದ್ದಾರೆ. ಪ್ರಾಯಶ್ಚಿತ ಎಂಬುದು ಮುಕೇಶನ ಕನಸಲ್ಲಿಯೂ ಕೂಡ ವಿಚಾರಿಸಿರಲಿಲ್ಲ ಅಂತಹ ಪ್ರಾಯಶ್ಚಿತವನ್ನು ಕಂಡುಕೊಂಡ ಮಹಾನ್ ಯಾರು ಇದನ್ನು ವಿಚಾರ ಮಾಡುವಂತೆ ಒತ್ತಾಯ ಮಾಡುವ ಬಡತನ ಆದರೆ ಸಂಸ್ಕಾರಗಿಂತಲೂ ಶ್ರೀಮಂತ ಶಶಾಂಕ ಕೊನೆಯಾಕೇ ...? ಎಂಬ ಯಕ್ಷ ಪ್ರಶ್ನೆ ತೆಗೆದುಕೊಂಡು ನಿಂತ ಮುಗ್ದ ಬಾಲೆ ಬೆಂಕಿ. ಈ ಎಲ್ಲ ಪಾತ್ರಗಳಿಂದ ಈ ಒಂದು ರಚನಾತ್ಮಕವಾಗಿ ಭೂಮಿಕೆಯಲ್ಲಿ ಸಮಾಜಕ್ಕೆ ಕಲಿಯುವ, ಸಂದೇಶ ಮತ್ತು ಸಂಸ್ಕಾರ ಕೊಡುವ ಈ ಅತ್ಯಧ್ಭುತ ಕಥಾ ಸಂಕಲನದಿಂದ ಸಾದ್ಯ ಎಂದು ಹೇಳಬಹುದು. ಜೊತೆಗೆ ಭಯ ಸಂಪತ್ತು ನೋವು ಆಶಯ ದೊಡ್ಡ ಕಲಿಕೆ ಇಂತಹ ಕಥೆಗಳ ಆಧಾರಿತ ಪುಸ್ತಕವಾಗಿದ್ದು ಲೇಖಕರು ಇದರ ಮುಖಾಂತರ ಸಮಾಜದ ಮುಖವನ್ನು ತೋರಿಸುವ ಪ್ರಯತ್ನ ಇದರಲ್ಲಿದೆ.
ಈ ಒಂದು ಕಥಾ ಸಂಕಲನದಲ್ಲಿ ವಿಶೇಷವಾಗಿ ಆನಂದ ಸಾಯುವುದಿಲ್ಲ ಎಂಬುದು ಅತ್ಯಂತ ಮನಮುಟ್ಟುವಂತಿದೆ ಮತ್ತು ಸರ್ಮಿಳಾ ಎಂಬ ಯುವತಿಯ ಮೇಲಿನ ಅನ್ಯಾಯವು ಯಾವ ರೀತಿ ಬಲಿ ತೆಗೆದುಕೊಳ್ಳುವುದನ್ನು ಅತ್ಯಂತ ಭಾವನಾತ್ಮಕವಾಗಿ ಲೇಖಕರು ಬಿಚ್ಚಿಟ್ಟಿದ್ದಾರೆ.. ಪ್ರತಿಯೊಬ್ಬರು ಓದಲೇ ಬೇಕಾದಂತಹ ಒಂದು ಅತ್ಯದ್ಭುತ ಕಥಾ ಸಂಕಲನವು ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಸ್ಪೂರ್ತಿಯಾಗಬಲ್ಲದು. ಡಾ.ಎಸ್.ಟಿ ಮೇರವಾಡೆ ಗುರುಗಳು ಇಂತಹ ಇನ್ನು ಹಲವಾರು ಪುಸ್ತಕಗಳು ರಚನೆ ಮತ್ತು ಕನ್ನಡಕ್ಕೆ ಅನುವಾದ ಮಾಡಿ ಸಾಹಿತ್ಯಾಸಕ್ತರ ಜ್ಞಾನ ದಾಹ ಮತ್ತು ಮನ ತಣಿಸುವಲ್ಲಿ ಕಾರ್ಯಪ್ರವೃತ್ತರಾಗಲಿ ಎಂದು ಆಶಿಸುವೆ.
ಅನುವಾದಕರು
ಡಾ.ಎಸ್.ಟಿ ಮೇರವಾಡೆ
ಪ್ರಾಚಾರ್ಯರು, ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವಿಜಯಪುರ

– ಮಲಿಕ್ ಎಲ್ ಜಮಾದಾರ
ಉಪನ್ಯಾಸಕರು
ವಿಜಯಪುರ
ಮೊ:9743129744