ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಎ. ಬಿ. ಜತ್ತಿ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು.
ಚುನಾವಣೆ ನಿಮಿತ್ಯ ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಕುರಿತು ಪ್ರಾಚಾರ್ಯ ಕವಿತಾ ಹೊಸಟ್ಟಿ ಮಾತನಾಡಿ, ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತ ಚಲಾಯಿಸು ಹಕ್ಕು ಪ್ರಜೆಗಳಿಗೆ ಮಾತ್ರ ಇರುವದು. ಮುಂದಿನ ದಿನಗಳಲ್ಲಿ ಇಂದಿನ ಯುವಕರು ನಾಳಿನ ನಾರಿಕರಾಗುವರು. ಬದ್ರಬುನಾದಿ ರಾಷ್ಟ್ರದ ನಿರ್ಮಾಣಕ್ಕೆ ಯುವಕರ ಪಾತ್ರ ಮುಖ್ಯವಾಗಿದೆ. ಚುನಾವಣೆ ಹೇಗೆ ನಡೆಯುತ್ತದೆ ಎಂಬುದನ್ನು ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಇದರಿಂದ ಮೂಡುತ್ತದೆ ಎಂದರು.
ಬಿ. ಎಲ್. ನಾಟೀಕಾರ, ಎಂ. ಕೆ. ತುಂಗಳ ಮಾತನಾಡಿ ಮತದಾನದ ನಮ್ಮ ಹಕ್ಕು, ಈ ಹಕ್ಕನ್ನು ಯಾರು ಕಸಿದುಕೋಳ್ಳುವದಿಲ್ಲ. ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು, ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

