ಕುಡಿಯುವ ನೀರಿನ ಸಮಸ್ಯೆ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಾಗಾವಿ ಬಿಕೆ ಗ್ರಾಪಂ ವ್ಯಾಪ್ತಿಯ ಗೊರವಗುಂಡಗಿ ಗ್ರಾಮದ ಬಗ್ಗೆ, ರಾಂಪುರ ಪಿಎ ಗ್ರಾಪಂ ವ್ಯಾಪ್ತಿಯ ರಾಂಪುರ ಮತ್ತು ಗಣಿಹಾರ ಗ್ರಾಮಗಳ ವರದಿ ನೀಡಬೇಕು, ಗುಬ್ಬೆವಾಡ ಗ್ರಾಪಂ ವ್ಯಾಪ್ತಿಯ ಬೋರಗಿ ಮತ್ತು ಪುರದಾಳ ಗ್ರಾಮಗಳಲ್ಲಿ ೨ ಬೋರವೆಲ್ಬೇಕು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ್ಗಳಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಕ್ಷಣ ವರದಿ ನೀಡಲು ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಅದೇ ರೀತಿ ಚಾಂದಕವಟೆ ಪಂಚಾಯತ್ ವ್ಯಾಪ್ತಿಯ ಕೆರೆಯಲ್ಲಿ ಟಿಸಿ ಬದಲಿಸಬೇಕು. ಸುರಗಿಹಳ್ಳಿ ಗ್ರಾಮದಲ್ಲಿ ಪದೇ ಪದೇ ಟಿಸಿ ಸುಡುತ್ತಿದೆ ಪಿಡಿಓ ಮಾಹಿತಿ ನೀಡಿಬೇಕು ಎಂದರು.
ಬ್ಯಾಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡಬಾಳ, ಮನ್ನಾಪುರ, ಅಂತರಗಂಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುತ್ತದೆ, ಹಿಕ್ಕನಗುತ್ತಿ, ಯರಗಾಲ್ ಬಿಕೆ, ಕೊಕಟನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವದಿಲ್ಲ ಎಂದು ಪಿಡಿಓ ಅವರು ತಿಳಿಸಿದರು. ಗೋಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಸಾಬಾಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಒಂದು ಬೋರವೆಲ್ ಯಂಕಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಂಕAಚಿ ಮತ್ತು ಖೈನೂರ ಗ್ರಾಮದ ಎಸ್ಸಿ ಕಾಲೋನಿ ಯಲ್ಲಿ ಬೋರವೆಲ್, ಮರಗಮ್ಮ ಗುಡಿ ಹತ್ತಿರ, ಜಟ್ಟೆಪ್ಪ ನಗರಗಳಲ್ಲಿ ಬೋರವೆಲ್. ಚಟ್ಟರಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಂಪುರ ಗ್ರಾಮಕ್ಕೆ ಒಂದು ಬೋರವೆಲ್, ಕನ್ನೊಳ್ಳಿ ಒಂದು ಬೋರವೆಲ್, ಹಂದಿಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಂಡದಲ್ಲಿ ಒಂದು ಬೋರವೆಲ್ ಬೇಕು ಎಂದು ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾನ್ಯ ಶಾಸಕರು ಇವರ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ, ಶಿವಾನಂದ ಕೊಟರಗಸ್ತಿ, ತಾಲೂಕು ಕೆಡಿಪಿ ಸದಸ್ಯರಾದ ಸುರೇಶ ಚೌಧರಿ, ಅಯ್ಯಪ್ಪ ಕಟ್ಟಿಮನಿ, ಮಹಾನಂದಾ ¨ಮ್ಮಣ್ಣಿ ಸೇರಿದಂತೆ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪತ್ರಕರ್ತರಿಗೆ ಪ್ರವೇಶವಿಲ್ಲ!
ಸಾಮಾನ್ಯವಾಗಿ ಸಾರ್ವಜನಿಕ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನರ ಹಿತಾಸಕ್ತಿಗೆ ಸಂಬಂಧಿಸಿದ ಸಭೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು. ಆದರೆ ಸಿಂಧಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆ ಸಂದರ್ಭದಲ್ಲಿ ಪತ್ರಕರ್ತರಿಗೆ ಹೊರಗಿಟ್ಟು ಸಭೆ ಮಾಡಲಾಗಿದೆ.

