Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮತದಾರರ ಮನ ಮುಟ್ಟುತ್ತಿರುವ ಆಪ್ ನ ಮುರಿಗೆಪ್ಪಗೌಡರು
(ರಾಜ್ಯ ) ಜಿಲ್ಲೆ

ಮತದಾರರ ಮನ ಮುಟ್ಟುತ್ತಿರುವ ಆಪ್ ನ ಮುರಿಗೆಪ್ಪಗೌಡರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸರಳತೆಯ ಪ್ರಚಾರ | ಅಭಿವೃದ್ಧಿಯ ಮಂತ್ರ | ದುಂದುವೆಚ್ಚಕ್ಕೆ ಕಡಿವಾಣ

ಸಿಂದಗಿ: ಕರ್ಕಶವಾಗಿ ಒದುರುವ ಮೈಕುಗಳಿಲ್ಲ. ಜೈಕಾರ ಹಾಕುತ್ತ ಚೀರುವ ಯುವಕರಿಲ್ಲ. ಧೂಳೆಬ್ಬಿಸಿ ಆರ್ಭಟಿಸಿ ಬರುವ ಬೆಂಗಾವಲಿನ ವಾಹನಗಳಿಲ್ಲ. ಹೆಂಡ-ಹಣ ಹಂಚುವುದು ಮೊದಲೇ ಇಲ್ಲ. ದಾಬಾದಲ್ಲಿ ಊಟಾ ಮಾಡಿಸುವುದಿಲ್ಲ. ಯಾರಿಗೂ ತೇಜೋವಧೆ ಮಾಡುವುದಿಲ್ಲ. ಆರೋಪ-ಪ್ರತ್ಯಾರೋಪಕ್ಕೆ ಅವಕಾಶವಿಲ್ಲ. ಅಭಿವೃದ್ಧಿಯೇ ಮೂಲ ಮಂತ್ರವೆನ್ನುವ ಉರುಗೋಲು ಹಿಡಿದು ಸದ್ದಿಲ್ಲದೆ ನಡೆಯುತ್ತಿದೆ ಇಲ್ಲೊಂದು ಚುನಾವಣಾ ಪ್ರಚಾರ!.

ಹೌದು, ಈ ಮೇಲೆ ಹೇಳಿರುವುದು ಅಕ್ಷರಶಃ ಸತ್ಯ. ಸಿಂದಗಿ ವಿಧಾನಸಭೆ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಹೊರತುಪಡಿಸಿ ಎಲ್ಲ ಪಕ್ಷಗಳು ತುರುಸಿನ ಪ್ರಚಾರ ಕೈಗೊಂಡಿವೆ. ಆದರೆ, ಆಪ್ ಪಕ್ಷದ ಅಭ್ಯರ್ಥಿಯಾಗಿರುವ ಹಿರಿಯ ಜನಸೇವಕ ಮುರಿಗೆಪ್ಪಗೌಡ ರದ್ದೇವಾಡಗಿ ಅವರು ತಮ್ಮ ರಾಜಕೀಯದ ಅನುಭವ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪ್ರಚಾರ ಕೈಗೊಂಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಯಾವ ರೀತಿ ನಡೆಸಬೇಕು ಎಂದು ಎದುರಾಳಿಗಳಿಗೆ ತೋರ್ಪಡಿಸುತ್ತಿದ್ದಾರೆ.

ಮತಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಮುರಿಗೆಪ್ಪಗೌಡರ ಜೊತೆ ಅವರ ವಯೋಸಮಾನರಾದ ಗೆಳೆಯರ ಬಳಗ ಹಾಗೂ ಆಪ್ ಪಕ್ಷದ ಕಾರ್ಯಕರ್ತರ ತಂಡವು ಮತದಾರರ ಮನೆ ಮನೆಗೆ ತೆರಳಿ ಮನ ಮುಟ್ಟುವ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ತಮಗೆ ಮತ ನೀಡಿದರೆ ಅಭಿವೃದ್ಧಿಯ ಪರ್ವ ಸೃಷ್ಟಿಸುವುದಾಗಿ ವಿವರಿಸುತ್ತಿದ್ದಾರೆ. ಬದಲಾವಣೆ ಬಯಸಿ ನೋಡಿ ದೆಹಲಿ ಮಾದರಿಯಲ್ಲಿ ಕ್ಷೇತ್ರದಾದ್ಯಂತ ಇರುವ ಸರಕಾರಿ ಶಾಲೆಗಳ ಉನ್ನತ್ತೀಕರಿಸಿ ಬಡವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುವುದೆಂದು ಮನದಟ್ಟು ಮಾಡುತ್ತಿದ್ದಾರೆ.

ಕ್ಷೇತ್ರದ ಹಳ್ಳಿಗಳ ಸಂಪರ್ಕ ರಸ್ತೆಗಳ ಸುಧಾರಣೆ. ಕೆರೆಗಳ ಅಭಿವೃದ್ಧಿ. ಎಲ್ಲ ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ರಸಗೊಬ್ಬರಗಳು, ಸಲಕರಣೆಗಳ ಪೂರೈಕೆ. ಅವಘಡಗಳಿಂದ ಸಾವನಪ್ಪುವ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು. ಜಾತಿ-ಧರ್ಮವೆನ್ನದೇ ಎಲ್ಲ ಸಮುದಾಯಗಳಿಗೆ ಸರಕಾರದ ಸೌಲತ್ತು ಒದಗಿಸುವುದು. ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವೀಕಲರಿಗೆ ಮಾಶಾಸನ ಕೊಡಿಸುವುದು ಸೇರಿದಂತೆ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಹಾಗೂ ಪ್ರತಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಕಂಕಣಬದ್ಧರಾಗಿದ್ದೇನೆ ಎಂದು ಮುರಿಗೇಪ್ಪಗೌಡರು ತಣ್ಣಗೆ ಮತದಾರ ಪ್ರಭುಗಳ ಮನ ಮುಟ್ಟುತ್ತಿದ್ದಾರೆ.

ಒಟ್ಟಾರೆ ಈಗಿನ ರಾಜಕೀಯ ಸನ್ನಿವೇಶದಲ್ಲಿ ಚುನಾವಣೆಗಳು ಎಂಬುದು ಅಬ್ಬರದ ರೋಡ್ ಶೋ, ಬೃಹತ್ ಬಹಿರಂಗ ಸಮಾವೇಶಗಳು, ಅವುಗಳನ್ನು ಯಶಸ್ವಿ ಮಾಡುವುದಕ್ಕೆ ಜನರನ್ನು ದುಡ್ಡು ಕೊಟ್ಟು ಕರೆಯಿಸಿಕೊಳ್ಳುವುದು. ಮೇಲಾಗಿ ಸ್ಟಾರ್ ಪ್ರಚಾರಕರನ್ನು ಹಾಗೂ ಆಯಾ ಪಕ್ಷದಲ್ಲಿರುವ ಜಾತಿವಾರು ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ.

ಇದೆಲ್ಲದಕ್ಕೂ ತದ್ವಿರುದ್ಧವಾಗಿ ಹಾಗೂ ನಿಜವಾಗಿ ಪ್ರಜಾಪ್ರಭುತ್ವದ ಪೂಜಕರಾಗಿ ಯಾವುದೇ ಅಬ್ಬವಿರಲ್ಲದೇ ಸರಳವಾಗಿ ಮತದಾರರ ಮನ ಗೆಲ್ಲುವಲ್ಲಿ ನಿರತರಾಗಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮುರಿಗೆಪ್ಪಗೌಡರ ಕಾರ್ಯ ಶ್ಲಾಘನಾರ್ಹ.

AAP sindagi udaya rashmi
Share. Facebook Twitter Pinterest Email Telegram WhatsApp
  • Website

Related Posts

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ

ಹಿಟ್ಟಿನಹಳ್ಳಿಯಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಸಚಿವರು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ
    In ಭಾವರಶ್ಮಿ
  • ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ
    In (ರಾಜ್ಯ ) ಜಿಲ್ಲೆ
  • ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ
    In (ರಾಜ್ಯ ) ಜಿಲ್ಲೆ
  • ಹಿಟ್ಟಿನಹಳ್ಳಿಯಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಸಚಿವರು
    In (ರಾಜ್ಯ ) ಜಿಲ್ಲೆ
  • ಸಮರ್ಪಕ ನೀರು, ಶುಚಿತ್ವ, ತೆರಿಗೆ ವಸೂಲಿಗೆ ಪ್ರಗತಿ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರು ಈ ದೇಶದ ಆಸ್ತಿ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆ :ಪಿಎಸೈ ಶ್ರೀಕಾಂತ
    In (ರಾಜ್ಯ ) ಜಿಲ್ಲೆ
  • ಲಿಂಗಾಯತ ಧರ್ಮ ಮಾನ್ಯತೆ ಬೇಡಿಕೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ತೋರಿದ ಬಿಎಲ್‌ಡಿಇ ವಿವಿ
    In (ರಾಜ್ಯ ) ಜಿಲ್ಲೆ
  • ಪದವಿ ಪಡೆದರೆ ಸಾಲದು, ಸಾಧಿಸುವ ಛಲ ಇರಲಿ :ನಿರಾಣಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.