ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಮಾಜ ಸಂಘಟನೆ ಮಾಡುವದು ಜನರ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಂಡು ಸಾಗುವದು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದ ತೆರಪಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ನಂತರ ಕೊಲ್ಹಾರದ ಅವರ ಅಭಿಮಾನಿಗಳು ಹಾಗೂ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ನಾಡಿನ ಜನರು ಮೆಚ್ಚುವಂತಹ ಜನಪರವಾದ ಕೊರ್ತೀ ಕೊಲ್ಹಾರ ಸೇತುವೆ ನಿರ್ಮಾಣ, ಕೂಡಗಿ ಎನ್ ಟಿಪಿಸಿ ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಜಾರಿಗೆ ತಂದಿರುವದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಸಮಾಜದಲ್ಲಿ ಯುವಜನತೆ ಪರಿಶ್ರಮದಿಂದ ತಾವು ಮಾಡುವ ಕಾಯಕದಲ್ಲಿ ನಿರತರಾದಾಗ ಯಶಸ್ವಿ ಹೆಜ್ಜೆಯತ್ತ ದಾಪುಗಾಲು ಹಾಕಲು ಸಾದ್ಯವಾಗುತ್ತದೆ ಎಂದರು.
ಜೇನು ಹುಳಗಳು ಗೂಡು ಕಟ್ಟಿ ಸಿಹಿಯನ್ನು ಕೊಡುವಂತೆ ಬದುಕಿನಲ್ಲಿ ನಾವುಗಳು ಕೂಡಾ ಕಹಿ ನೆನಪು ಮರೆತು ಸರ್ವ ಜನರಲ್ಲಿ ಸಿಹಿಯಾದ ಸವಿರುಚಿಯ ಸವಿಯನ್ನು ನೀಡೋಣ ಎಂದರು.
ಪಟ್ಟಣದಲ್ಲಿ ಆದಿಬಣಜಿಗ ಸಮಾಜ ಜಾನಪದ ಕಲಾ ಬಳಗ, ಪಟ್ಟಣ ಅಭಿವ್ರದ್ದಿ ಹಿತಚಿಂತಕರ ವೇದಿಕೆ, ಬಸವೇಶ್ವರ ಸಹಕಾರಿ ಬ್ಯಾಂಕ ಆಡಳಿತ ಮಂಡಳಿ, ಬೀರೇಶ್ವರ ಬ್ಯಾಂಕನ ಸಿಬ್ಬಂದಿ ಹಾಗೂ ಬೆಳ್ಳುಬ್ಬಿ ಕುಟುಂಬದವರು ಜೊಲ್ಲೆ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಸಾಹೇಬ ಜೊಲ್ಲೆ, ಸಂಗಪ್ಪ ಯ ಗಣಿ, ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ, ರಾಚಣ್ಣ ಕೊಟ್ಟಗಿ, ಈರಯ್ಯ ಮಠಪತಿ, ದುಂಡಪ್ಪ ಕೊಠಾರಿ, ಚಂದ್ರಶೇಖರಯ್ಯ ಗಣಕುಮಾರ, ಮಲ್ಲಪ್ಪ ಈ ಗಣಿ, ಶ್ರೀಮತಿ ಗಿರಿಜಾಬಾಯಿ ಡಂಗಿ, ಪಾರ್ವತಿ ಗಣಿ, ರಾಜು ಕ ರೂಗಿ, ಪರಿಮಳಾ ರೂಗಿ ಕೊಲ್ಹಾರ ಪಟ್ಟಣದ ಆದಿಬಣಜಿಗ ಯುವ ಸಮೂಹದವರು ಪಾಲ್ಗೊಡಿದ್ದರು.

