ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲಿಚ್ಚಿಸುವ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ತಾಲೂಕು ವ್ಯಾಪ್ತಿಯ ಆಸಕ್ತ ಕವಿಗಳು ೨೦ ಸಾಲುಗಳಿಗೆ ಮೀರದ ತಮ್ಮ ಕವಿತೆಗಳನ್ನು ಜ.೨೬ ರ ಒಳಗಾಗಿ ಆಯ್ಕೆ ಸಮಿತಿಗೆ ಖುದ್ದಾಗಿ ಅಥವಾ ವಾಟ್ಸ್ಅಪ್ ಮೂಲಕ ಕಳಿಸಿಕೊಡಲು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಾಟ್ಸ್ಅಪ್ ಸಂಖ್ಯೆಗಳು – ೯೬೬೩೩೧೬೧೧೦ ಮತ್ತು ೭೨೫೯೦೫೧೫೯೨
