ಅಫಜಲಪುರದಲ್ಲಿ ಬಣಜಿಗ ಮಹಿಳಾ ಘಟಕದಿಂದ ಸಂಕ್ರಾಂತಿ ಸಂಭ್ರಮ ಆಚರಣೆ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಬಣಜಿಗ ಸಮೂದಯವು ಪುರಾತನ ಕಾಲದಿಂದಲೂ ಕಾಯಕ ಜೀವಿಗಳಾಗಿ ಜೀವನ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ಇತರೆ ಸಮೂದಾಯದವರೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ತಾಲೂಕು ಮಹಿಳಾ ಘಟಕದ ವತಿಯಿಂದ ನಡೆದ ಸಾಂಸ್ಕೃತಿಕ ಮತ್ತು ಜಾನಪದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ವೀರಶೈವ ಸಮಾಜದ ಒಳಪಂಗಡಗಳಲ್ಲಿ ಬಣಜಿಗ ಸಮೂದಾಯ ಒಂದು, ಎಲ್ಲ ಸಮೂದಾಯದವರು ಸಮಾಜದ ಏಳಿಗೆಗಾಗಿ ಒಗ್ಗೂಡುವ ಮೂಲಕ ಒಳ ಪಂಗಡಗಳ ಗುರಿ ಉದ್ದೇಶ ಒಂದೆ ಆಗಿರಲಿವೆ ಎಂದ ಅವರು ಸಮಾಜ ಪ್ರತಿಯೋಬ್ಬರು ಮುನ್ನಲೆಗೆ ಬರಬೇಕಾದರೆ ಪ್ರತಿಯೊಬ್ಬರು ಕಾಯಕ ಜೀವಿಗಳಾಗಬೇಕು. ಮಹಿಳಾ ಸಂಘ ರಚನೆ ಮಾಡುವ ಮೂಲಕ ಮಹಿಳೆರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಸಮಾಜದ ಮುಖಂಡರು ಮಾಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದ ಅವರು ಸಮಾಜದ ಪ್ರತಿಯೊಬ್ಬರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ಸೀಮಾ ದಾಮಾ, ಸಾವಿತ್ರಿ ರೋಡಗಿ ಮಾತನಾಡಿ ಬಣಜಿಗ ಸಮೂದಾಯದಲ್ಲಿ ಈ ಹಿಂದೆ ಸಾಕಷ್ಟು ಪವಾಡ ಪುರುಷರು ಬಾಳಿ ಹೆಸರು ಮಾಡಿದ್ದಾರೆ. ಶರಣ ಶರಣೆಯರು ಸಮಾಜ ಒರೆ ಕೋರೆ ತಿದ್ದುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ರಾಜಕಾರಣದಲ್ಲಿ ಪ್ರಮುಖ ಹುದ್ದೆಯಲ್ಲಿದ್ದು ಜನಪರ ಆಡಳಿತ ನೀಡಿದ್ದಾರೆ. ಇವರೇಲ್ಲರನ್ನು ಆದರ್ಶವಾಗಿಟ್ಟುಕೊಂಡು ನಾವೀಗ ಸಮಾಜ ಸಂಘಟಿಸುವ ಕೆಲಸ ಮಾಡಬೇಕಿದೆ ಎಂದರು.
ಪ್ರಮುಖರಾದ ಜ್ಞಾನೇಶ್ವರಿ ಪಾಟೀಲ, ಬಿ.ಕೆ ಪುಷ್ಪಾ ಮಾತನಾಡಿದರು.
ಮಹಿಳಾ ಪಿಎಸ್ಐ ಭಾರತಿ ಗುಣಾರಿ ಮಾತನಾಡಿ ಸಮಾಜದ ಬಹಿಳಾ ಸಂಘಟನೆಯವರು ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಿ ವೈಧ್ಯಕೀಯ ಕ್ಷೇತ್ರ ಸೇವೆ ಸಲ್ಲಿಸುತ್ತಿರುವ ಸಾಧಕಿಯರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇನ್ನೂ ಸಮಾಜದಲ್ಲಿರುವ ಅನೇಕ ಪ್ರತಿಭಾವಂತ ಬಡ ಮಕ್ಕಳನ್ನು ಗುರುತಿಸಿ ಅವರನ್ನು ಕೂಡಾ ಸ್ವಾಭಿಮಾನಿ ಬದುಕಿಗೆ ಕಾರಣವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶ್ರೀ ಉಪ್ಪಿನ ವಹಿಸಿದ್ದರು. ಇದೇ ಸಮಯದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಪಲ್ಲವಿ ಗುಣಾರಿ, ಡಾ.ಶ್ವೇತಾ ಪತಾಟೆ, ಡಾ.ಶೃತಿ ನೂಲಾ ಇವರನ್ನು ಸನ್ಮಾನಿಸಲಾಯಿತು. ನಂತರ ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಲಕಮ್ಮ ದಾಮಾ, ರೇಖಾ ಮಸಳಿ, ಲಕ್ಷ್ಮಿ ಗುಣಾರಿ, ಆರತಿ ಗುಣಾರಿ, ಬಸಮ್ಮ ಮಸಳಿ, ಮಹಾದೇವಿ ಗುಣಾರಿ, ಆರತಿ ಜೋಗೂರ, ಅನ್ನಪೂರ್ಣ ಗುಣಾರಿ, ಸ್ಪೂರ್ತಿ ಜೇವರ್ಗಿ ಚೆನ್ನಮ್ಮ ಜೇವರ್ಗಿ ದೇವಿಕಾ ಶೆಟ್ಟಿ, ಮುಖಂಡರಾದ ಬಸಣ್ಣ ಗುಣಾರಿ ಹಾಗೂ ಮುರಗೇಂದ್ರ ಮಸಳಿ ಸೇರಿದಂತೆ ಅನೇಕರು ಇದ್ದರು.

