ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ದೊಡ್ಡ ಸಂಘಟನೆ, ಜನ ಪ್ರತಿನಿಧಿಗಿಂತ ಹೆಚ್ಚಿನ ಜವಾಬ್ದಾರಿ ಸರಕಾರಿ ನೌಕರರ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಘಟಕ ಇಂಡಿ ಮತ್ತು ಸರಕಾರಿ ನೌಕರರ ಸಹಕಾರಿ ಬ್ಯಾಂಕ ಇವರ ಸಹಯೋಗದಲ್ಲಿ ನಡೆದ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೂ ಹಾಗೂ ನಿರ್ದೇಶಕರಿಗೂ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜನರಿಗೆ ಸರಕಾರಿ ನೌಕರರ ಮೇಲೆ ವಿಶ್ವಾಸ ನಂಬಿಕೆ ಇದೆ. ವಿಶ್ವಾಸಾರ್ಹತೆಗೆ ಧಕ್ಕೆ ಬರದಂತೆ ಕೆಲಸ ಮಾಡಿ ಎಂದರು.
ಸರಕಾರಿ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಬಸವರಾಜ ರಾಹೂರ ಮಾತನಾಡಿ, ನೂತನ ಪದಾಧಿಕಾರಿಗಳು ನೌಕರರ ಹಿತ ಕಾಯುವ ಕೆಲಸವನ್ನು ನಿಭಾಯಿಸಬೇಕು, ಒಗ್ಗಟ್ಟು ಇದ್ದಾಗ ನಮ್ಮ ರಕ್ಷಣೆ ನಮ್ಮಿಂದಲೇ ಸಾದ್ಯವಿದೆ. ಸದಸ್ಯರು ಸಂಘಕ್ಕೆ ಶಕ್ತಿ ಯಾಗಬೇಕು ಎಂದರು.
ಅದ್ಯಕ್ಷರು ಜೆಒಸಿಸಿ ಬ್ಯಾಂಕ ಆನಂದಗೌಡ ಬಿರಾದಾರ, ಕಾಂತು ಇಂಡಿ, ಅರ್ಜುನ ಲಮಾಣಿ, ಅಧ್ಯಕ್ಷರು ಇಂಡಿ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಟಿ.ಪಾಟೀಲ, ರವಿ ಗಿಣ್ಣಿ,ಜಯರಾಮ ಚವ್ಹಾಣ, ಜಟ್ಟೆಪ್ಪ ಮಾದರ ಮಾತನಾಡಿದರು.
ವೇದಿಕೆಯ ಮೇಲೆ ಅಲ್ಲಾಭಕ್ಷ ವಾಲಿಕಾರ, ಬಿ.ಎ.ಇನಾಮದಾರ, ಪಿ.ಜಿ.ಕಲ್ಮನಿ, ಬಿ.ಎಂ.ವಠಾರ, ವಿ.ಪಿ.ಅರವತ್ತು, ಪ್ರಕಾಶ ಐರೋಡಗಿ, ಎಂ.ಸಿ.ಗಿರಣಿವಡ್ಡರ , ಗೀತಾ ಹತ್ತಿ, ಪುಷ್ಪಾ ಗಚ್ಚಿನಮಠ ಮತ್ತಿತರಿದ್ದರು.
ಇದೇ ವೇಳೆ ಜೆಒಸಿಸಿ ಬ್ಯಾಂಕಿಗೆ ಆಯ್ಕೆಯಾದ ಮತ್ತು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

